ETV Bharat / bharat

ಕೋವಿಡ್ ನಿಯಮ ಅನುಸರಿಸದಿದ್ದರೆ ಮತ್ತೆ ಲಾಕ್​​ಡೌನ್​: ಮಹಾ ಸಿಎಂ ಎಚ್ಚರಿಕೆ

author img

By

Published : Feb 22, 2021, 1:33 PM IST

ಇಂದು ಮಹಾರಾಷ್ಟ್ರದಲ್ಲಿ 7 ಸಾವಿರ ಕೋವಿಡ್​ ಕೇಸ್​ಗಳು ದಾಖಲಾಗಿವೆ. ಇದು ಹೀಗೆ ಮುಂದುವರಿದರೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನ ಕೈಗೊಳ್ಳಬೇಕಾಗುತ್ತದೆ. ​​ ​ಹಾಗಾಗಿ ಯಾರ್ಯಾರು ಮಾಸ್ಕ್​ ಹಾಕದೇ, ದೂರವನ್ನ ಅಲಕ್ಷಿಸುತ್ತಿದ್ದೀರೋ ಅವರೆಲ್ಲ ನಿಯಮಗಳನ್ನ ಅನುಸರಿಸಿ ಎಂದು ಮಹಾರಾಷ್ಟ್ರ ಸಿಎಂ ಉದ್ದವ್​ ಠಾಕ್ರೆ ಮನವಿ ಮಾಡಿದ್ದಾರೆ.

Maharashtra CM
ಮಹಾರಾಷ್ಟ್ರ ಸಿಎಂ ಉದ್ದವ್​ ಠಾಕ್ರೆ

ಮುಂಬೈ: ಮಹಾರಾಷ್ಟ್ರದಲ್ಲಿ ನಿತ್ಯವೂ ಕೊರೊನಾ ಪೀಡಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಕಟ್ಟುನಿಟ್ಟಿನ ಕೋವಿಡ್​ ನಿಯಮಗಳನ್ನು ಜಾರಿಗೊಳಿಸಿದೆ. ಒಂದೊಮ್ಮೆ ಈ ನಿಯಮಗಳನ್ನ ರಾಜ್ಯದ ಜನತೆ ಅನುಸರಣೆ ಮಾಡದಿದ್ದರೆ ಮುಂದಿನ 8 ದಿನಗಳಲ್ಲಿ ಲಾಕ್​ಡೌನ್​ ಜಾರಿ ಮಾಡುವುದು ಅನಿವಾರ್ಯ ಎಂದು ಮಹಾರಾಷ್ಟ್ರ ಸಿಎಂ ಉದ್ದವ್​ ಠಾಕ್ರೆ ಹೇಳಿದ್ದಾರೆ.

ಈ ಸಂಬಂಧ ವಿಡಿಯೋ ಮೂಲಕ ರಾಜ್ಯವನ್ನು ಉದ್ದೇಶಿಸಿ ಮಾತನಾಡಿರುವ ಅವರು, ನಿಮಗೆ ಲಾಕ್​ಡೌನ್​ ಬೇಕಾ ಎಂದು ಪ್ರಶ್ನಿಸಿರುವ ಅವರು, ಈ ಸಂಬಂಧ ಇನ್ನು ಎಂಟು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇಂದು ಮಹಾರಾಷ್ಟ್ರದಲ್ಲಿ 7 ಸಾವಿರ ಕೋವಿಡ್​ ಕೇಸ್​ಗಳು ದಾಖಲಾಗಿವೆ. ಇದು ಹೀಗೆ ಮುಂದುವರಿದರೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನ ಕೈಗೊಳ್ಳಬೇಕಾಗುತ್ತದೆ. ಹಾಗಾಗಿ ಯಾರ್ಯಾರು ಮಾಸ್ಕ್​ ಹಾಕದೇ, ದೂರವನ್ನ ಅಲಕ್ಷಿಸುತ್ತಿದ್ದೀರೋ ಅವರೆಲ್ಲ ನಿಯಮಗಳನ್ನ ಅನುಸರಿಸಿ ಎಂದು ಮನವಿ ಮಾಡಿದ್ದಾರೆ.

ಇದೇ ವೇಳೆ ಮೈ ಫ್ಯಾಮಿಲಿ ಮೈ ರೆಸ್ಪಾನ್ಸಿಬಿಲಿಟಿ (ನನ್ನ ಕುಟುಂಬ ನನ್ನ ಜವಾಬ್ದಾರಿ) ಐ ಆ್ಯಮ್​ ರೆಸ್ಪಾನ್ಸಿಬಲ್ ​(ನಾನೇ ಜವಾಬ್ದಾರ) ಎಂಬ ಘೋಷಣೆಯನ್ನು ಅವರು ಮಹಾ ಜನತೆ ಎದುರು ಮಾಡಿದ್ದಾರೆ. ಹೀಗಾಗಿ ನಾನೇ ಜವಾಬ್ದಾರ (ಮೀಚ್​ ಜವಾಬ್ದಾರ್​) ಎಂಬುದನ್ನು ಎಲ್ಲರೂ ಸ್ವತಃ ಅರ್ಥ ಮಾಡಿಕೊಂಡು ಕೋವಿಡ್​ ತೊಲಗಿಸಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ.

ಇದೇ ವೇಳೆ ಮನವಿ ಮಾಡಿರುವ ಸಿಎಂ ಠಾಕ್ರೆ, ನಾಳೆಯಿಂದ ರಾಜಕೀಯ ರ್ಯಾಲಿಗಳು, ಜಾಥಾಗಳು ಹಾಗೂ ಜನರು ಸೇರುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಓದಿ: ನಾಗ್ಪುರದಲ್ಲಿ ಕೊರೊನಾ ಭೀತಿ: ಮಾ.7 ರವರೆಗೆ ಶಾಲಾ ಕಾಲೇಜು ಬಂದ್​

ಮುಂಬೈ: ಮಹಾರಾಷ್ಟ್ರದಲ್ಲಿ ನಿತ್ಯವೂ ಕೊರೊನಾ ಪೀಡಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಕಟ್ಟುನಿಟ್ಟಿನ ಕೋವಿಡ್​ ನಿಯಮಗಳನ್ನು ಜಾರಿಗೊಳಿಸಿದೆ. ಒಂದೊಮ್ಮೆ ಈ ನಿಯಮಗಳನ್ನ ರಾಜ್ಯದ ಜನತೆ ಅನುಸರಣೆ ಮಾಡದಿದ್ದರೆ ಮುಂದಿನ 8 ದಿನಗಳಲ್ಲಿ ಲಾಕ್​ಡೌನ್​ ಜಾರಿ ಮಾಡುವುದು ಅನಿವಾರ್ಯ ಎಂದು ಮಹಾರಾಷ್ಟ್ರ ಸಿಎಂ ಉದ್ದವ್​ ಠಾಕ್ರೆ ಹೇಳಿದ್ದಾರೆ.

ಈ ಸಂಬಂಧ ವಿಡಿಯೋ ಮೂಲಕ ರಾಜ್ಯವನ್ನು ಉದ್ದೇಶಿಸಿ ಮಾತನಾಡಿರುವ ಅವರು, ನಿಮಗೆ ಲಾಕ್​ಡೌನ್​ ಬೇಕಾ ಎಂದು ಪ್ರಶ್ನಿಸಿರುವ ಅವರು, ಈ ಸಂಬಂಧ ಇನ್ನು ಎಂಟು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇಂದು ಮಹಾರಾಷ್ಟ್ರದಲ್ಲಿ 7 ಸಾವಿರ ಕೋವಿಡ್​ ಕೇಸ್​ಗಳು ದಾಖಲಾಗಿವೆ. ಇದು ಹೀಗೆ ಮುಂದುವರಿದರೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನ ಕೈಗೊಳ್ಳಬೇಕಾಗುತ್ತದೆ. ಹಾಗಾಗಿ ಯಾರ್ಯಾರು ಮಾಸ್ಕ್​ ಹಾಕದೇ, ದೂರವನ್ನ ಅಲಕ್ಷಿಸುತ್ತಿದ್ದೀರೋ ಅವರೆಲ್ಲ ನಿಯಮಗಳನ್ನ ಅನುಸರಿಸಿ ಎಂದು ಮನವಿ ಮಾಡಿದ್ದಾರೆ.

ಇದೇ ವೇಳೆ ಮೈ ಫ್ಯಾಮಿಲಿ ಮೈ ರೆಸ್ಪಾನ್ಸಿಬಿಲಿಟಿ (ನನ್ನ ಕುಟುಂಬ ನನ್ನ ಜವಾಬ್ದಾರಿ) ಐ ಆ್ಯಮ್​ ರೆಸ್ಪಾನ್ಸಿಬಲ್ ​(ನಾನೇ ಜವಾಬ್ದಾರ) ಎಂಬ ಘೋಷಣೆಯನ್ನು ಅವರು ಮಹಾ ಜನತೆ ಎದುರು ಮಾಡಿದ್ದಾರೆ. ಹೀಗಾಗಿ ನಾನೇ ಜವಾಬ್ದಾರ (ಮೀಚ್​ ಜವಾಬ್ದಾರ್​) ಎಂಬುದನ್ನು ಎಲ್ಲರೂ ಸ್ವತಃ ಅರ್ಥ ಮಾಡಿಕೊಂಡು ಕೋವಿಡ್​ ತೊಲಗಿಸಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ.

ಇದೇ ವೇಳೆ ಮನವಿ ಮಾಡಿರುವ ಸಿಎಂ ಠಾಕ್ರೆ, ನಾಳೆಯಿಂದ ರಾಜಕೀಯ ರ್ಯಾಲಿಗಳು, ಜಾಥಾಗಳು ಹಾಗೂ ಜನರು ಸೇರುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಓದಿ: ನಾಗ್ಪುರದಲ್ಲಿ ಕೊರೊನಾ ಭೀತಿ: ಮಾ.7 ರವರೆಗೆ ಶಾಲಾ ಕಾಲೇಜು ಬಂದ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.