ETV Bharat / bharat

ಕೆಲ ಉತ್ಪನ್ನಗಳ ಮೇಲೆ ಸೆಸ್ ಏರಿಕೆಯಿಂದ ಗ್ರಾಹಕರಿಗೆ ಹೊರೆಯಾಗಲ್ಲ: ನಿರ್ಮಲಾ ಸೀತಾರಾಮನ್​​

author img

By

Published : Feb 1, 2021, 4:44 PM IST

Updated : Feb 1, 2021, 4:53 PM IST

ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒಲವು ತೋರಲಾಗಿದ್ದು, ಇಲ್ಲಿಯೂ ಆರೋಗ್ಯ ವಲಯದ ನಿರ್ವಹಣೆಗಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಜೆಟ್​ನಲ್ಲಿ ಮೂಲಸೌಕರ್ಯ ಹೊರತುಪಡಿಸಿದರೆ ಹೆಚ್ಚು ಆರೋಗ್ಯ ಕ್ಷೇತ್ರಕ್ಕೆ ಅನುದಾನ ಮೀಸಲಿಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Nirmala Sitharaman
ನಿರ್ಮಲಾ ಸೀತಾರಾಮನ್​​

ನವದೆಹಲಿ: ಕೊರೊನಾ ನಂತರದಲ್ಲಿ ಆರ್ಥಿಕತೆಗೆ ಪ್ರಚೋದನೆ ನೀಡುವ ಸಲುವಾಗಿ ಬಜೆಟ್​ ಅನ್ನು ಮಂಡಿಸಲಾಗಿದೆ. ಸರಿಯಾದ ಸಮಯದಲ್ಲಿ ಸರಿಯಾದ ದಿಕ್ಕಿನಲ್ಲಿ ನಾವು ಖರ್ಚು ಮಾಡಲಾಗುತ್ತದೆ. ಬಜೆಟ್​ ಮೂಲಕ ಅಗತ್ಯ ಬೇಡಿಕೆ ಈಡೇರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

2021ರ ಕೇಂದ್ರ ಹಣಕಾಸು ಬಜೆಟ್ ಮಂಡನೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈಗ ಮಂಡನೆ ಮಾಡಿರುವ ಬಜೆಟ್​​ನಲ್ಲಿ ಎರಡು ಲಕ್ಷಣಗಳಿವೆ. ರಸ್ತೆಗಳ ನಿರ್ಮಾಣ, ವಿದ್ಯುತ್​ ಉತ್ಪಾದನೆ, ಬಂದರು ಮತ್ತು ಸೇತುವೆಗಳ ನಿರ್ಮಾಣ ಮಾತ್ರವಲ್ಲದೇ ಮುಂತಾದ ಮೂಲಸೌಕರ್ಯಗಳ ಅಭಿವೃದ್ಧಿಗೆ ಅತಿ ದೊಡ್ಡಮಟ್ಟದ ಖರ್ಚು ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ಇದಾದ ನಂತರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒಲವು ತೋರಲಾಗಿದ್ದು, ಇಲ್ಲಿಯೂ ಆರೋಗ್ಯ ವಲಯದ ನಿರ್ವಹಣೆಗಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಜೆಟ್​ನಲ್ಲಿ ಮೂಲಸೌಕರ್ಯ ಹೊರತುಪಡಿಸಿದರೆ ಹೆಚ್ಚು ಆರೋಗ್ಯ ಕ್ಷೇತ್ರಕ್ಕೆ ಅನುದಾನ ಮೀಸಲಿಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಬಜೆಟ್ ಬಸವಳಿದ​ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಸಂಜೀವಿನಿ : ಯಡಿಯೂರಪ್ಪ

ಫೆಬ್ರವರಿ 2020ರಲ್ಲಿ ಶೇಕಡಾ 3.5ರಿಂದ ಪ್ರಾರಂಭವಾದ ನಮ್ಮ ಹಣಕಾಸಿನ ಕೊರತೆಯು ಜಿಡಿಪಿಯ ಶೇಕಡಾ 9.5ಕ್ಕೆ ಏರಿದೆ. ಅಂದರೆ, ನಾವು ಹೆಚ್ಚು ವೆಚ್ಚ ಮಾಡುತ್ತಿದ್ದೇವೆ ಎಂಬುದನ್ನು ಇದು ಸೂಚಿಸುತ್ತದೆ. ಇದೇ ವೇಳೆ ಕೊರೊನಾ ನಿರ್ವಹಣೆಗೆ ಸ್ಪಷ್ಟ ಮಾರ್ಗಸೂಚಿ ನೀಡಿದ್ದೇವೆ ಎಂದು ಈ ವೇಳೆ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದ ಪ್ರಕಾರ ವೆಚ್ಚ ಮತ್ತು ಆದಾಯದ ಮಾಹಿತಿ ಈಗ ಪಾರದರ್ಶಕವಾಗಿವೆ ಮತ್ತು ಮುಕ್ತವಾಗಿವೆ ಎಂದಿರುವ ನಿರ್ಮಲಾ ಸೀತಾರಾಮನ್ ಕೃಷಿ ಕಾಯ್ದೆಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದು, ಕೃಷಿ ಸಚಿವರು ಹಾಗೂ ರೈತರ ನಡುವೆ ಮಾತುಕತೆಗಳು ಮುಂದುವರೆಯಲಿವೆ ಎಂದಿದ್ದಾರೆ.

ಕೆಲವೊಂದು ಉತ್ಪನ್ನಗಳ ಮೇಲೆ ಕೃಷಿ ಸೆಸ್​ ಅನ್ನು ಬಜೆಟ್​ನಲ್ಲಿ ಏರಿಸಲಾಗಿದ್ದು, ಈ ಸೆಸ್​ನಿಂದ ಗ್ರಾಹಕರಿಗೆ ಹೊರೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ನವದೆಹಲಿ: ಕೊರೊನಾ ನಂತರದಲ್ಲಿ ಆರ್ಥಿಕತೆಗೆ ಪ್ರಚೋದನೆ ನೀಡುವ ಸಲುವಾಗಿ ಬಜೆಟ್​ ಅನ್ನು ಮಂಡಿಸಲಾಗಿದೆ. ಸರಿಯಾದ ಸಮಯದಲ್ಲಿ ಸರಿಯಾದ ದಿಕ್ಕಿನಲ್ಲಿ ನಾವು ಖರ್ಚು ಮಾಡಲಾಗುತ್ತದೆ. ಬಜೆಟ್​ ಮೂಲಕ ಅಗತ್ಯ ಬೇಡಿಕೆ ಈಡೇರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

2021ರ ಕೇಂದ್ರ ಹಣಕಾಸು ಬಜೆಟ್ ಮಂಡನೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈಗ ಮಂಡನೆ ಮಾಡಿರುವ ಬಜೆಟ್​​ನಲ್ಲಿ ಎರಡು ಲಕ್ಷಣಗಳಿವೆ. ರಸ್ತೆಗಳ ನಿರ್ಮಾಣ, ವಿದ್ಯುತ್​ ಉತ್ಪಾದನೆ, ಬಂದರು ಮತ್ತು ಸೇತುವೆಗಳ ನಿರ್ಮಾಣ ಮಾತ್ರವಲ್ಲದೇ ಮುಂತಾದ ಮೂಲಸೌಕರ್ಯಗಳ ಅಭಿವೃದ್ಧಿಗೆ ಅತಿ ದೊಡ್ಡಮಟ್ಟದ ಖರ್ಚು ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ಇದಾದ ನಂತರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒಲವು ತೋರಲಾಗಿದ್ದು, ಇಲ್ಲಿಯೂ ಆರೋಗ್ಯ ವಲಯದ ನಿರ್ವಹಣೆಗಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಜೆಟ್​ನಲ್ಲಿ ಮೂಲಸೌಕರ್ಯ ಹೊರತುಪಡಿಸಿದರೆ ಹೆಚ್ಚು ಆರೋಗ್ಯ ಕ್ಷೇತ್ರಕ್ಕೆ ಅನುದಾನ ಮೀಸಲಿಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಬಜೆಟ್ ಬಸವಳಿದ​ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಸಂಜೀವಿನಿ : ಯಡಿಯೂರಪ್ಪ

ಫೆಬ್ರವರಿ 2020ರಲ್ಲಿ ಶೇಕಡಾ 3.5ರಿಂದ ಪ್ರಾರಂಭವಾದ ನಮ್ಮ ಹಣಕಾಸಿನ ಕೊರತೆಯು ಜಿಡಿಪಿಯ ಶೇಕಡಾ 9.5ಕ್ಕೆ ಏರಿದೆ. ಅಂದರೆ, ನಾವು ಹೆಚ್ಚು ವೆಚ್ಚ ಮಾಡುತ್ತಿದ್ದೇವೆ ಎಂಬುದನ್ನು ಇದು ಸೂಚಿಸುತ್ತದೆ. ಇದೇ ವೇಳೆ ಕೊರೊನಾ ನಿರ್ವಹಣೆಗೆ ಸ್ಪಷ್ಟ ಮಾರ್ಗಸೂಚಿ ನೀಡಿದ್ದೇವೆ ಎಂದು ಈ ವೇಳೆ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದ ಪ್ರಕಾರ ವೆಚ್ಚ ಮತ್ತು ಆದಾಯದ ಮಾಹಿತಿ ಈಗ ಪಾರದರ್ಶಕವಾಗಿವೆ ಮತ್ತು ಮುಕ್ತವಾಗಿವೆ ಎಂದಿರುವ ನಿರ್ಮಲಾ ಸೀತಾರಾಮನ್ ಕೃಷಿ ಕಾಯ್ದೆಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದು, ಕೃಷಿ ಸಚಿವರು ಹಾಗೂ ರೈತರ ನಡುವೆ ಮಾತುಕತೆಗಳು ಮುಂದುವರೆಯಲಿವೆ ಎಂದಿದ್ದಾರೆ.

ಕೆಲವೊಂದು ಉತ್ಪನ್ನಗಳ ಮೇಲೆ ಕೃಷಿ ಸೆಸ್​ ಅನ್ನು ಬಜೆಟ್​ನಲ್ಲಿ ಏರಿಸಲಾಗಿದ್ದು, ಈ ಸೆಸ್​ನಿಂದ ಗ್ರಾಹಕರಿಗೆ ಹೊರೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

Last Updated : Feb 1, 2021, 4:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.