ನಾಗ್ಪುರ( ಮಹಾರಾಷ್ಟ್ರ): ಇಲ್ಲಿನ ಮಹಾರಾಜಬಾಗ್ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಶುರುವಾಗಿದೆ. ಚಿರತೆ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಅರಣ್ಯ ಅಧಿಕಾರಿಗಳು ಚಿರತೆ ಸೆರೆಗಾಗಿ ಬೋನ್ ಇರಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇನ್ನು ಈ ಚಿರತೆ ನಾಗ್ಪುರದ ಗಾಯತ್ರಿ ನಗರ ಎನ್ಟಿಪಿಐ ವಸತಿ ಪ್ರದೇಶದಲ್ಲಿ ಕಂಡು ಬಂದಿತ್ತು. ಈ ಬಳಿಕ ಮಹಾರಾಜ್ಬಾಗ್ ಪ್ರದೇಶದ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲದೆ, ಕೃಷಿ ಇಲಾಖೆಯ ಕಚೇರಿಯ ಬಳಿ ಚಿರತೆ ಬೇಟೆಯಾಡಿ ಹಂದಿಯನ್ನು ತಿಂದು ಹಾಕಿದೆ.
ಸದ್ಯ ಇಲಾಖೆ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದು, ಈ ಪ್ರದೇಶದಲ್ಲಿ ಬಲೆಗಳನ್ನು ಹಾಕಲಾಗಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.