ETV Bharat / bharat

ಜಿ 20 ಪ್ರತಿನಿಧಿಗಳಿಗಾಗಿ ಲೇಸರ್​ ಸೌಂಡ್​ ಅಂಡ್​ ಲೈಟ್​ ಕಾರ್ಯಕ್ರಮ; ಆಗ್ರಾ ಕೋಟೆಯ ಮೇಲ್ಛಾವಣಿಯಲ್ಲಿ ಬಿರುಕು

author img

By

Published : Feb 14, 2023, 12:26 PM IST

ಲೇಸರ್​ ಶೋನಲ್ಲಿ ಮಿತಿ ಮೀರಿದ ಸದ್ದು ಮತ್ತು ಬೆಳಕಿನ ಬಳಕೆಯಿಂದ ಮೇಲ್ಛಾವಣಿಯಿಂದ ಬಿರುಕು ಕಾಣಿಸಿಕೊಂಡಿದೆ. ಈ ಸಂಬಂಧ ಪುರತಾತ್ವ ಇಲಾಖೆ ತನಿಖೆಗೆ ಮುಂದಾಗಿದೆ.

ಜಿ 20 ಪ್ರತಿನಿಧಿಗಳಿಗಾಗಿ ಲೇಸರ್​ ಸೌಂಡ್​ ಅಂಡ್​ ಲೈಟ್​ ಕಾರ್ಯಕ್ರಮ; ಆಗ್ರಾ ಕೋಟೆಯ ಮೇಲ್ಚಾವಣಿಯಲ್ಲಿ ಬಿರುಕು
ಜಿ 20 ಪ್ರತಿನಿಧಿಗಳಿಗಾಗಿ ಲೇಸರ್​ ಸೌಂಡ್​ ಅಂಡ್​ ಲೈಟ್​ ಕಾರ್ಯಕ್ರಮ; ಆಗ್ರಾ ಕೋಟೆಯ ಮೇಲ್ಚಾವಣಿಯಲ್ಲಿ ಬಿರುಕು

ಆಗ್ರಾ(ಉತ್ತರ ಪ್ರದೇಶ): ಭಾರತದ ಅತಿಥ್ಯದಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯ ಪ್ರತಿನಿಧಿಗಳಿಗಾಗಿ ವಿಶೇಷ ಲೇಸರ್​ ಸೌಂಡ್​ ಅಂಡ್​ ಲೈಟ್​ ಶೋವನ್ನು ಹಮ್ಮಿಕೊಳ್ಳಲಾಗಿತ್ತು. ಐತಿಹಾಸಿಕ ಆಗ್ರಾ ಕೋಟೆ ದಿವಾನ್​-ಇ-ಆಮ್​ನಲ್ಲಿ ಈ ವಿಶೇಷ ಕಾರ್ಯವನ್ನು ನಡೆಸಲಾಯಿತು. ಇನ್ನು, ಈ ಕಾರ್ಯಕ್ರಮ ನಡೆಸಿದ ಹಿನ್ನೆಲೆ ಪ್ರಾಜೆಕ್ಷನ್​ ಮ್ಯಾಪಿಂಗ್​ ಮತ್ತು ಸಂಗೀತ ಕಾರ್ಯಕ್ರಮದಿಂದಾಗಿ ದಿವಾನ್​- ಇ- ಆಮ್​ ಕೋಟೆಯ ಮೇಲ್ಛಾವಣಿ ಹಾನಿಗೊಂಡಿರುವುದು ಪ್ರಾಥಮಿಕ ಫಲಿತಾಂಶದಲ್ಲಿ ತಿಳಿದು ಬಂದಿದೆ.

ಯುನೆಸ್ಕೋ ಮಾರ್ಗದರ್ಶನದ ಅನುಸಾರ, ಪಾರಂಪರಿಕ ಸ್ಥಳಗಳಲ್ಲಿ ಧ್ವನಿ ಮಿತಿ 40 ಡೆಸಿಬಲ್‌ ಇರಬೇಕು. ಈ ಮಾರ್ಗದರ್ಶನವನ್ನು ಮೀರಿ ಕಾರ್ಯಕ್ರಮಗದಲ್ಲಿ ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಡೆಸಿಬಲ್ಸ್​(ಶಬ್ದದ) ಮಟ್ಟ ಹೆಚ್ಚಾಗಿರುವುದು ಕೋಟೆಯ ಮೇಲ್ಛಾವಣಿಯಲ್ಲಿ ಬಿರುಕು ಬಿಡಲು ಕಾರಣವಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ.

ಮೂಲಗಳ ಪ್ರಕಾರ, ಕೋಟೆಯ ಮೇಲ್ಛಾವಣಿಯಲ್ಲಿ 2 ರಿಂದ 6ಎಂಎಂ ಹಾನಿ ಕಂಡು ಬಂದಿದೆ. ಬಿರುಕು ಕಂಡು ಬಂದ ಜಾಗದಲ್ಲಿ ಪ್ಲಾಸ್ಟರ್​ಗಳ ತೇಪೆಯನ್ನು ಹಾಕಲಾಗಿದೆ. ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು, ಈ ಬಿರುಕು ಕಂಡು ಬರುತ್ತಿದ್ದಂತೆ ಎಚ್ಚೆತ್ತಿದ್ದು, ಕೋಟೆ ಸುತ್ತ ಹಾನಿಗೊಂಡ ಪ್ರದೇಶಗಳನ್ನು ಬಂದ್​ ಮಾಡಲಾಗಿದೆ. ಈ ಪ್ರದೇಶದ ಸುತ್ತ ಪ್ರವಾಸಿಗರು ಹೋಗದಂತೆ ಬ್ಯಾರಿಕೇಡ್​ಗಳನ್ನು ಹಾಕಲಾಗಿದೆ ಎಂದು ತಿಳಿದುಬಂದಿದೆ.

ಭಾರತೀಯ ಪುರಾತತ್ವ ಇಲಾಖೆ ಆರ್ಕಲಾಜಿಸ್ಟ್​ ರಾಜ್​ ಕುಮಾರ್​ ಪಟೇಲ್​ ಈ ಕುರಿತು ಮಾತನಾಡಿ, ಕೋಟೆಯ ಪರಿಶೀಲನೆ ವೇಳೆ ಹಾನಿಗೊಂಡಿರುವ ಬಗ್ಗೆ ತಿಳಿದು ಬಂದಿದೆ. ಜಿ 20 ಪ್ರತಿನಿಧಿಗಳಿಗಾಗಿ ಫೆ. 11ರಂದು ದಿವನ್​-ಇ-ಆಮ್​ ಕೋಟೆಯ ಆವರಣದಲ್ಲಿ ಲೇಸರ್​ ಸೌಂಡ್​ ಮತ್ತು ಲೈಟ್​ ಶೋವನ್ನು ಆಯೋಜಿಸಲಾಗಿತ್ತು. ಇದೀಗ ಈ ಹಾನಿಯೂ ಕಾರ್ಯಕ್ರಮದ ಬಳಿಕ ಕಂಡು ಬಂದಿದ್ಯಾ, ಅಥವಾ ಕಾರ್ಯಕ್ರಮಕ್ಕೆ ಮುಂಚೆಯೇ ಮೇಲ್ಛಾವಣಿಗಳಲ್ಲಿ ಬಿರುಕು ಇತ್ತಾ ಎಂಬುದರ ಪತ್ತೆಗೆ ಕಾರ್ಯ ನಡೆಸಲಾಗಿದೆ ಎಂದರು.

ಆಗ್ರಾ ಕೋಟೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಫೆ. 10ರಂದು ರಿಹರ್ಸಲ್​ ಅನ್ನು ಕೂಡ ನಡೆಸಲಾಗಿತ್ತು. ರಿಹರ್ಸಲ್​ ವೇಳೆ ಹೆಚ್ಚಿನ ಧ್ವನಿಮಟ್ಟವನ್ನು ಬಳಕೆ ಮಾಡಲಾಗಿದೆ. ಈ ಹಿನ್ನಲೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ರಿಹರ್ಸಲ್​ಅನ್ನು ಮಧ್ಯಾಹ್ನ 12 ರಿಂದ 4 ಗಂಟೆ ಅವಧಿಯಲ್ಲಿ ಮಾಡಲಾಗಿದ್ದು, ಹೆಚ್ಚಿನ ಧ್ವನಿ ಮಟ್ಟ ಬಳಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಕ್ನೋದಲ್ಲಿ ಜಿ20 ಶೃಂಗಸಭೆಯ ಅಂಗವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮೊದಲ ಡಿಇಡಬ್ಲ್ಯೂಜಿ ಸಭೆಯನ್ನು ಆಯೋಜಿಸಿತ್ತು. ಈ ಸಭೆಯಲ್ಲಿ ಜಿ 20 ಸದಸ್ಯರು ಒಂಬತ್ತು ಅತಿಥಿ ದೇಶಗಳ ಪ್ರತಿನಿಧಿಗಳು ಮತ್ತು ಐದು ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಒಳಗೊಂಡಿರುತ್ತಾರೆ.

70 ವಿದೇಶಿ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದು, ಹಲವಾರು ಸಭೆ ಮತ್ತು ಸೆಮಿನಾರ್‌ ನಡೆಸಿದ್ದಾರೆ. ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆ ಸೇರಿದಂತೆ ಹಲವು ವಿಚಾರಗಳ ಚರ್ಚೆ ನಡೆಸಲಾಗಿದೆ. ಈ ಕಾರ್ಯಾಗಾರದಲ್ಲಿ ಕೇಂದ್ರದ ಡಿಜಿಟಲ್ ಇಂಡಿಯಾ ಅಭಿಯಾನವು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹೇಗೆ ದೇಶದಲ್ಲಿ ಪರಿವರ್ತನ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂಬುದರ ಕುರಿತು ಚರ್ಚಿಸಲಾಯಿತು.

ಇದನ್ನೂ ಓದಿ: ಶಿಕ್ಷಕರ ಅದಲು ಬದಲಿ ಆಟ.. ತಾಯಿಯ ಬದಲಿಗೆ ಮಗ.. ಸಹೋದರನ ಬದಲಿಗೆ ಸಹೋದರಿ ಕೆಲಸ!

ಆಗ್ರಾ(ಉತ್ತರ ಪ್ರದೇಶ): ಭಾರತದ ಅತಿಥ್ಯದಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯ ಪ್ರತಿನಿಧಿಗಳಿಗಾಗಿ ವಿಶೇಷ ಲೇಸರ್​ ಸೌಂಡ್​ ಅಂಡ್​ ಲೈಟ್​ ಶೋವನ್ನು ಹಮ್ಮಿಕೊಳ್ಳಲಾಗಿತ್ತು. ಐತಿಹಾಸಿಕ ಆಗ್ರಾ ಕೋಟೆ ದಿವಾನ್​-ಇ-ಆಮ್​ನಲ್ಲಿ ಈ ವಿಶೇಷ ಕಾರ್ಯವನ್ನು ನಡೆಸಲಾಯಿತು. ಇನ್ನು, ಈ ಕಾರ್ಯಕ್ರಮ ನಡೆಸಿದ ಹಿನ್ನೆಲೆ ಪ್ರಾಜೆಕ್ಷನ್​ ಮ್ಯಾಪಿಂಗ್​ ಮತ್ತು ಸಂಗೀತ ಕಾರ್ಯಕ್ರಮದಿಂದಾಗಿ ದಿವಾನ್​- ಇ- ಆಮ್​ ಕೋಟೆಯ ಮೇಲ್ಛಾವಣಿ ಹಾನಿಗೊಂಡಿರುವುದು ಪ್ರಾಥಮಿಕ ಫಲಿತಾಂಶದಲ್ಲಿ ತಿಳಿದು ಬಂದಿದೆ.

ಯುನೆಸ್ಕೋ ಮಾರ್ಗದರ್ಶನದ ಅನುಸಾರ, ಪಾರಂಪರಿಕ ಸ್ಥಳಗಳಲ್ಲಿ ಧ್ವನಿ ಮಿತಿ 40 ಡೆಸಿಬಲ್‌ ಇರಬೇಕು. ಈ ಮಾರ್ಗದರ್ಶನವನ್ನು ಮೀರಿ ಕಾರ್ಯಕ್ರಮಗದಲ್ಲಿ ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಡೆಸಿಬಲ್ಸ್​(ಶಬ್ದದ) ಮಟ್ಟ ಹೆಚ್ಚಾಗಿರುವುದು ಕೋಟೆಯ ಮೇಲ್ಛಾವಣಿಯಲ್ಲಿ ಬಿರುಕು ಬಿಡಲು ಕಾರಣವಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ.

ಮೂಲಗಳ ಪ್ರಕಾರ, ಕೋಟೆಯ ಮೇಲ್ಛಾವಣಿಯಲ್ಲಿ 2 ರಿಂದ 6ಎಂಎಂ ಹಾನಿ ಕಂಡು ಬಂದಿದೆ. ಬಿರುಕು ಕಂಡು ಬಂದ ಜಾಗದಲ್ಲಿ ಪ್ಲಾಸ್ಟರ್​ಗಳ ತೇಪೆಯನ್ನು ಹಾಕಲಾಗಿದೆ. ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು, ಈ ಬಿರುಕು ಕಂಡು ಬರುತ್ತಿದ್ದಂತೆ ಎಚ್ಚೆತ್ತಿದ್ದು, ಕೋಟೆ ಸುತ್ತ ಹಾನಿಗೊಂಡ ಪ್ರದೇಶಗಳನ್ನು ಬಂದ್​ ಮಾಡಲಾಗಿದೆ. ಈ ಪ್ರದೇಶದ ಸುತ್ತ ಪ್ರವಾಸಿಗರು ಹೋಗದಂತೆ ಬ್ಯಾರಿಕೇಡ್​ಗಳನ್ನು ಹಾಕಲಾಗಿದೆ ಎಂದು ತಿಳಿದುಬಂದಿದೆ.

ಭಾರತೀಯ ಪುರಾತತ್ವ ಇಲಾಖೆ ಆರ್ಕಲಾಜಿಸ್ಟ್​ ರಾಜ್​ ಕುಮಾರ್​ ಪಟೇಲ್​ ಈ ಕುರಿತು ಮಾತನಾಡಿ, ಕೋಟೆಯ ಪರಿಶೀಲನೆ ವೇಳೆ ಹಾನಿಗೊಂಡಿರುವ ಬಗ್ಗೆ ತಿಳಿದು ಬಂದಿದೆ. ಜಿ 20 ಪ್ರತಿನಿಧಿಗಳಿಗಾಗಿ ಫೆ. 11ರಂದು ದಿವನ್​-ಇ-ಆಮ್​ ಕೋಟೆಯ ಆವರಣದಲ್ಲಿ ಲೇಸರ್​ ಸೌಂಡ್​ ಮತ್ತು ಲೈಟ್​ ಶೋವನ್ನು ಆಯೋಜಿಸಲಾಗಿತ್ತು. ಇದೀಗ ಈ ಹಾನಿಯೂ ಕಾರ್ಯಕ್ರಮದ ಬಳಿಕ ಕಂಡು ಬಂದಿದ್ಯಾ, ಅಥವಾ ಕಾರ್ಯಕ್ರಮಕ್ಕೆ ಮುಂಚೆಯೇ ಮೇಲ್ಛಾವಣಿಗಳಲ್ಲಿ ಬಿರುಕು ಇತ್ತಾ ಎಂಬುದರ ಪತ್ತೆಗೆ ಕಾರ್ಯ ನಡೆಸಲಾಗಿದೆ ಎಂದರು.

ಆಗ್ರಾ ಕೋಟೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಫೆ. 10ರಂದು ರಿಹರ್ಸಲ್​ ಅನ್ನು ಕೂಡ ನಡೆಸಲಾಗಿತ್ತು. ರಿಹರ್ಸಲ್​ ವೇಳೆ ಹೆಚ್ಚಿನ ಧ್ವನಿಮಟ್ಟವನ್ನು ಬಳಕೆ ಮಾಡಲಾಗಿದೆ. ಈ ಹಿನ್ನಲೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ರಿಹರ್ಸಲ್​ಅನ್ನು ಮಧ್ಯಾಹ್ನ 12 ರಿಂದ 4 ಗಂಟೆ ಅವಧಿಯಲ್ಲಿ ಮಾಡಲಾಗಿದ್ದು, ಹೆಚ್ಚಿನ ಧ್ವನಿ ಮಟ್ಟ ಬಳಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಕ್ನೋದಲ್ಲಿ ಜಿ20 ಶೃಂಗಸಭೆಯ ಅಂಗವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮೊದಲ ಡಿಇಡಬ್ಲ್ಯೂಜಿ ಸಭೆಯನ್ನು ಆಯೋಜಿಸಿತ್ತು. ಈ ಸಭೆಯಲ್ಲಿ ಜಿ 20 ಸದಸ್ಯರು ಒಂಬತ್ತು ಅತಿಥಿ ದೇಶಗಳ ಪ್ರತಿನಿಧಿಗಳು ಮತ್ತು ಐದು ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಒಳಗೊಂಡಿರುತ್ತಾರೆ.

70 ವಿದೇಶಿ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದು, ಹಲವಾರು ಸಭೆ ಮತ್ತು ಸೆಮಿನಾರ್‌ ನಡೆಸಿದ್ದಾರೆ. ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆ ಸೇರಿದಂತೆ ಹಲವು ವಿಚಾರಗಳ ಚರ್ಚೆ ನಡೆಸಲಾಗಿದೆ. ಈ ಕಾರ್ಯಾಗಾರದಲ್ಲಿ ಕೇಂದ್ರದ ಡಿಜಿಟಲ್ ಇಂಡಿಯಾ ಅಭಿಯಾನವು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹೇಗೆ ದೇಶದಲ್ಲಿ ಪರಿವರ್ತನ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂಬುದರ ಕುರಿತು ಚರ್ಚಿಸಲಾಯಿತು.

ಇದನ್ನೂ ಓದಿ: ಶಿಕ್ಷಕರ ಅದಲು ಬದಲಿ ಆಟ.. ತಾಯಿಯ ಬದಲಿಗೆ ಮಗ.. ಸಹೋದರನ ಬದಲಿಗೆ ಸಹೋದರಿ ಕೆಲಸ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.