ETV Bharat / bharat

ವಿದ್ಯಾರ್ಥಿನಿಯನ್ನು ವೇದಿಕೆ ಮೇಲೆ ಕರೆದಿದ್ದಕ್ಕೆ ಮುಸ್ಲಿಂ ವಿದ್ವಾಂಸರ ಅಸಮಾಧಾನ!

author img

By

Published : May 12, 2022, 7:48 AM IST

ಮುಸ್ಲಿಂ ವಿದ್ವಾಂಸರ ಸಂಘಟನೆಯಾದ 'ಸಮಸ್ತ ಕೇರಳ ಜೆಇಎಂ-ಇಯ್ಯತುಲ್ ಉಲಮಾ'ದ ಮುಖಂಡರೊಬ್ಬರು ವಿದ್ಯಾರ್ಥಿನಿಯನ್ನು ವೇದಿಕೆ ಮೇಲೆ ಕರೆದ ಕಾರಣಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Kerala Muslim scholar angry on event organisers for inviting girl on stage
ವಿದ್ಯಾರ್ಥಿನಿಯನ್ನು ವೇದಿಕೆ ಮೇಲೆ ಕರೆದಿದ್ದಕ್ಕೆ ಮುಸ್ಲಿಂ ವಿದ್ವಾಂಸರ ಅಸಮಾಧಾನ

ಮಲಪ್ಪುರಂ(ಕೇರಳ): ಬಾಲಕಿಯನ್ನು ವೇದಿಕೆಗೆ ಆಹ್ವಾನಿಸಿದ್ದಕ್ಕಾಗಿ ಮುಸ್ಲಿಂ ವಿದ್ವಾಂಸರೊಬ್ಬರು ಕಾರ್ಯಕ್ರಮ ಆಯೋಜಕರಿಗೆ ಛೀಮಾರಿ ಹಾಕಿರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. ವೈರಲ್ಲಾದ ವಿಡಿಯೋ ಕ್ಲಿಪ್‌ನಲ್ಲಿ, ಮುಸ್ಲಿಂ ವಿದ್ವಾಂಸರ ಸಂಘಟನೆಯಾದ 'ಸಮಸ್ತ ಕೇರಳ ಜೆಇಎಂ-ಇಯ್ಯತುಲ್ ಉಲಮಾ'ದ ಹಿರಿಯ ಕಾರ್ಯನಿರ್ವಾಹಕರಾದ ಎಂ.ಟಿ.ಅಬ್ದುಲ್ಲಾ ಮುಸಲಿಯಾರ್ ಎಂಬುವವರು ಕಾರ್ಯಕ್ರಮ ಸಂಘಟಕರ ವಿರುದ್ಧ ಕೋಪಗೊಂಡಿರುವುದು ಗೊತ್ತಾಗುತ್ತದೆ.

ಮಲಪ್ಪುರಂ ಜಿಲ್ಲೆಯಲ್ಲಿ ಮದರಸಾ ಕಟ್ಟಡ ಉದ್ಘಾಟನೆ ಮಾಡುವ ಸಮಾರಂಭದಲ್ಲಿ ಹಲವು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿತ್ತು. ಈ ವೇಳೆ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಸನ್ಮಾನಿಸಲು ವೇದಿಕೆ ಮೇಲೆ ಕರೆಯಲಾಗಿತ್ತು. ಬಾಲಕಿಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನಾಯಕ ಪಾಣಕ್ಕಾಡ್ ಸೈಯದ್ ಅಬ್ಬಾಸ್ ಅಲಿ ಶಿಹಾಬ್ ತಂಗಲ್ ಅವರು ಸ್ಮರಣಿಕೆಯನ್ನು ಹಸ್ತಾಂತರಿಸಿದರು. ಇದಕ್ಕೆ ಎಂ.ಟಿ.ಅಬ್ದುಲ್ಲಾ ಮುಸಲಿಯಾರ್ ಸಿಡಿಮಿಡಿಗೊಂಡಿದ್ದಾರೆ.

ಬಾಲಕಿಯನ್ನು ವೇದಿಕೆಗೆ ಆಹ್ವಾನಿಸಿದ್ದು ಏಕೆ?, 10ನೇ ತರಗತಿಯ ಬಾಲಕಿಯನ್ನು ವೇದಿಕೆಗೆ ಕರೆದಿದ್ದು ಯಾರು? ಎಂದು ಪ್ರಶ್ನಿಸಿರುವ ಎಂ.ಟಿ.ಅಬ್ದುಲ್ಲಾ ಮುಸಲಿಯಾರ್ ಇನ್ನೊಮ್ಮೆ ಬಾಲಕಿಯರನ್ನು ವೇದಿಕೆ ಮೇಲೆ ಕರೆಯಬೇಡಿ. ಪ್ರಶಸ್ತಿ ಪಡೆಯಲು ಆಕೆಯ ಪೋಷಕರನ್ನು ಕರೆಯಿರಿ. ನಾವು ಇಲ್ಲಿ ಕುಳಿತಿರುವಾಗ ಇಂಥ ಕೆಲಸಗಳನ್ನು ಮಾಡಬೇಡಿ. ಇದು ಫೋಟೋಗಳಲ್ಲಿ, ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ತಂಗಲ್ ಅವರು ಪಕ್ಕದಲ್ಲಿ ನಿಂತಿದ್ದಾಗ ಎಂ.ಟಿ.ಅಬ್ದುಲ್ಲಾ ಮುಸಲಿಯಾರ್ ಕಾರ್ಯಕ್ರಮ ಸಂಘಟಕರ ವಿರುದ್ಧ ಕಿಡಿ ಕಾರಿದರು. ವಿಡಿಯೋದಲ್ಲಿ ಬಾಲಕಿಯ ಹೆಸರನ್ನು ವೇದಿಕೆ ಮೇಲೆ ಬರಲು ಘೋಷಿಸಿದ ವ್ಯಕ್ತಿ ಕ್ಷಮೆಯಾಚಿಸುತ್ತಿರುವುದು ಕಂಡುಬಂದಿದೆ.

  • #Kerala: a senior leader of #Samastha , a muslim scholarly body gets angry for calling a class 10 girl student on stage. He asked who called the Studnet to the stage , the parent should have been called. This happened when studnets were felicitated. pic.twitter.com/w3oq3T04zW

    — Neethu Reghukumar (@Neethureghu) May 10, 2022 " class="align-text-top noRightClick twitterSection" data=" ">

ಘಟನೆಯ ಕುರಿತು ಫೇಸ್​ಬುಕ್​ನಲ್ಲಿ ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ವಿದ್ಯಾರ್ಥಿ ಫೆಡರೇಶನ್ (ಎಂಎಸ್‌ಎಫ್) ಮಾಜಿ ರಾಷ್ಟ್ರೀಯ ಉಪಾಧ್ಯಕ್ಷೆ ಫಾತಿಮಾ ತಹಿಲಿಯಾ, ಬಾಲಕಿಯನ್ನು ವೇದಿಕೆಯಿಂದ ಕೆಳಗಿಳಿಸಿ, ಅವಮಾನಿಸುವುದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಪ್ರತಿಭೆಯುಳ್ಳ ಹೆಣ್ಣುಮಕ್ಕಳನ್ನು ಧರ್ಮಕ್ಕೆ ಸಮೀಪದಲ್ಲಿಟ್ಟು ಪ್ರೋತ್ಸಾಹಿಸಬೇಕಿದೆ. ಆಗ ಮಾತ್ರ ಅವರ ಸಾಮರ್ಥ್ಯವನ್ನು ಸಮಾಜ ಮತ್ತು ಧರ್ಮದ ಒಳಿತಿಗಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಈ ರೀತಿ ಅವಮಾನಕ್ಕೆ ಒಳಗಾದವರು ಧರ್ಮ ಮತ್ತು ಧಾರ್ಮಿಕ ಮುಖಂಡರನ್ನು ಮುಂದೊಂದು ದಿನ ದ್ವೇಷಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ವಿದ್ಯಾರ್ಥಿ ಫೆಡರೇಶನ್​ ರಾಜ್ಯಾಧ್ಯಕ್ಷ ಪಿ.ಕೆ.ನವಾಜ್ ಅಬ್ದುಲ್ಲಾ ಮುಸಲಿಯಾರ್ ಅವರ ಬೆಂಬಲಕ್ಕೆ ನಿಂತಿದ್ದು, ಮುಸಲಿಯಾರ್ ಅವರ ವಿರುದ್ಧ ಕೋಮುವಾದಿ ಶಕ್ತಿಗಳು ದಾಳಿ ಮಾಡುತ್ತಿವೆ. ಇಂಥ ವಿಚಾರಗಳು ಇಸ್ಲಾಮೋಫೋಬಿಕ್ ಸೋಗಿನಲ್ಲಿದ್ದು, ಕೆಲವು ಕೋಮುವಾದಿಗಳು ಮುಸಲಿಯಾರ್ ವಿರುದ್ಧ ಘನತೆಗೆ ಧಕ್ಕೆ ಉಂಟುಮಾಡಲು ಮುಂದಾಗಿದ್ದಾರೆ ಎಂದಿದ್ದಾರೆ. ಸಿನಿ ನಟ ಹರೀಶ್ ಪೆರಾಡಿ ಘಟನೆಯನ್ನು ಟೀಕಿಸಿದ್ದು, ಎಲ್‌ಡಿಎಫ್ ಮತ್ತು ಯುಡಿಎಫ್ ಪಕ್ಷಗಳು ಈ ಘಟನೆಯನ್ನು ಖಂಡಿಸುತ್ತವೆಯೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕುದುರೆ ಏರಿ ಬಂದ ವಧು.. ಕ್ಲೀನ್​ ಬೌಲ್ಡ್​ ಆದ ವರ!.. ವಿಡಿಯೋ!

ಮಲಪ್ಪುರಂ(ಕೇರಳ): ಬಾಲಕಿಯನ್ನು ವೇದಿಕೆಗೆ ಆಹ್ವಾನಿಸಿದ್ದಕ್ಕಾಗಿ ಮುಸ್ಲಿಂ ವಿದ್ವಾಂಸರೊಬ್ಬರು ಕಾರ್ಯಕ್ರಮ ಆಯೋಜಕರಿಗೆ ಛೀಮಾರಿ ಹಾಕಿರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. ವೈರಲ್ಲಾದ ವಿಡಿಯೋ ಕ್ಲಿಪ್‌ನಲ್ಲಿ, ಮುಸ್ಲಿಂ ವಿದ್ವಾಂಸರ ಸಂಘಟನೆಯಾದ 'ಸಮಸ್ತ ಕೇರಳ ಜೆಇಎಂ-ಇಯ್ಯತುಲ್ ಉಲಮಾ'ದ ಹಿರಿಯ ಕಾರ್ಯನಿರ್ವಾಹಕರಾದ ಎಂ.ಟಿ.ಅಬ್ದುಲ್ಲಾ ಮುಸಲಿಯಾರ್ ಎಂಬುವವರು ಕಾರ್ಯಕ್ರಮ ಸಂಘಟಕರ ವಿರುದ್ಧ ಕೋಪಗೊಂಡಿರುವುದು ಗೊತ್ತಾಗುತ್ತದೆ.

ಮಲಪ್ಪುರಂ ಜಿಲ್ಲೆಯಲ್ಲಿ ಮದರಸಾ ಕಟ್ಟಡ ಉದ್ಘಾಟನೆ ಮಾಡುವ ಸಮಾರಂಭದಲ್ಲಿ ಹಲವು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿತ್ತು. ಈ ವೇಳೆ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಸನ್ಮಾನಿಸಲು ವೇದಿಕೆ ಮೇಲೆ ಕರೆಯಲಾಗಿತ್ತು. ಬಾಲಕಿಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನಾಯಕ ಪಾಣಕ್ಕಾಡ್ ಸೈಯದ್ ಅಬ್ಬಾಸ್ ಅಲಿ ಶಿಹಾಬ್ ತಂಗಲ್ ಅವರು ಸ್ಮರಣಿಕೆಯನ್ನು ಹಸ್ತಾಂತರಿಸಿದರು. ಇದಕ್ಕೆ ಎಂ.ಟಿ.ಅಬ್ದುಲ್ಲಾ ಮುಸಲಿಯಾರ್ ಸಿಡಿಮಿಡಿಗೊಂಡಿದ್ದಾರೆ.

ಬಾಲಕಿಯನ್ನು ವೇದಿಕೆಗೆ ಆಹ್ವಾನಿಸಿದ್ದು ಏಕೆ?, 10ನೇ ತರಗತಿಯ ಬಾಲಕಿಯನ್ನು ವೇದಿಕೆಗೆ ಕರೆದಿದ್ದು ಯಾರು? ಎಂದು ಪ್ರಶ್ನಿಸಿರುವ ಎಂ.ಟಿ.ಅಬ್ದುಲ್ಲಾ ಮುಸಲಿಯಾರ್ ಇನ್ನೊಮ್ಮೆ ಬಾಲಕಿಯರನ್ನು ವೇದಿಕೆ ಮೇಲೆ ಕರೆಯಬೇಡಿ. ಪ್ರಶಸ್ತಿ ಪಡೆಯಲು ಆಕೆಯ ಪೋಷಕರನ್ನು ಕರೆಯಿರಿ. ನಾವು ಇಲ್ಲಿ ಕುಳಿತಿರುವಾಗ ಇಂಥ ಕೆಲಸಗಳನ್ನು ಮಾಡಬೇಡಿ. ಇದು ಫೋಟೋಗಳಲ್ಲಿ, ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ತಂಗಲ್ ಅವರು ಪಕ್ಕದಲ್ಲಿ ನಿಂತಿದ್ದಾಗ ಎಂ.ಟಿ.ಅಬ್ದುಲ್ಲಾ ಮುಸಲಿಯಾರ್ ಕಾರ್ಯಕ್ರಮ ಸಂಘಟಕರ ವಿರುದ್ಧ ಕಿಡಿ ಕಾರಿದರು. ವಿಡಿಯೋದಲ್ಲಿ ಬಾಲಕಿಯ ಹೆಸರನ್ನು ವೇದಿಕೆ ಮೇಲೆ ಬರಲು ಘೋಷಿಸಿದ ವ್ಯಕ್ತಿ ಕ್ಷಮೆಯಾಚಿಸುತ್ತಿರುವುದು ಕಂಡುಬಂದಿದೆ.

  • #Kerala: a senior leader of #Samastha , a muslim scholarly body gets angry for calling a class 10 girl student on stage. He asked who called the Studnet to the stage , the parent should have been called. This happened when studnets were felicitated. pic.twitter.com/w3oq3T04zW

    — Neethu Reghukumar (@Neethureghu) May 10, 2022 " class="align-text-top noRightClick twitterSection" data=" ">

ಘಟನೆಯ ಕುರಿತು ಫೇಸ್​ಬುಕ್​ನಲ್ಲಿ ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ವಿದ್ಯಾರ್ಥಿ ಫೆಡರೇಶನ್ (ಎಂಎಸ್‌ಎಫ್) ಮಾಜಿ ರಾಷ್ಟ್ರೀಯ ಉಪಾಧ್ಯಕ್ಷೆ ಫಾತಿಮಾ ತಹಿಲಿಯಾ, ಬಾಲಕಿಯನ್ನು ವೇದಿಕೆಯಿಂದ ಕೆಳಗಿಳಿಸಿ, ಅವಮಾನಿಸುವುದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಪ್ರತಿಭೆಯುಳ್ಳ ಹೆಣ್ಣುಮಕ್ಕಳನ್ನು ಧರ್ಮಕ್ಕೆ ಸಮೀಪದಲ್ಲಿಟ್ಟು ಪ್ರೋತ್ಸಾಹಿಸಬೇಕಿದೆ. ಆಗ ಮಾತ್ರ ಅವರ ಸಾಮರ್ಥ್ಯವನ್ನು ಸಮಾಜ ಮತ್ತು ಧರ್ಮದ ಒಳಿತಿಗಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಈ ರೀತಿ ಅವಮಾನಕ್ಕೆ ಒಳಗಾದವರು ಧರ್ಮ ಮತ್ತು ಧಾರ್ಮಿಕ ಮುಖಂಡರನ್ನು ಮುಂದೊಂದು ದಿನ ದ್ವೇಷಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ವಿದ್ಯಾರ್ಥಿ ಫೆಡರೇಶನ್​ ರಾಜ್ಯಾಧ್ಯಕ್ಷ ಪಿ.ಕೆ.ನವಾಜ್ ಅಬ್ದುಲ್ಲಾ ಮುಸಲಿಯಾರ್ ಅವರ ಬೆಂಬಲಕ್ಕೆ ನಿಂತಿದ್ದು, ಮುಸಲಿಯಾರ್ ಅವರ ವಿರುದ್ಧ ಕೋಮುವಾದಿ ಶಕ್ತಿಗಳು ದಾಳಿ ಮಾಡುತ್ತಿವೆ. ಇಂಥ ವಿಚಾರಗಳು ಇಸ್ಲಾಮೋಫೋಬಿಕ್ ಸೋಗಿನಲ್ಲಿದ್ದು, ಕೆಲವು ಕೋಮುವಾದಿಗಳು ಮುಸಲಿಯಾರ್ ವಿರುದ್ಧ ಘನತೆಗೆ ಧಕ್ಕೆ ಉಂಟುಮಾಡಲು ಮುಂದಾಗಿದ್ದಾರೆ ಎಂದಿದ್ದಾರೆ. ಸಿನಿ ನಟ ಹರೀಶ್ ಪೆರಾಡಿ ಘಟನೆಯನ್ನು ಟೀಕಿಸಿದ್ದು, ಎಲ್‌ಡಿಎಫ್ ಮತ್ತು ಯುಡಿಎಫ್ ಪಕ್ಷಗಳು ಈ ಘಟನೆಯನ್ನು ಖಂಡಿಸುತ್ತವೆಯೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕುದುರೆ ಏರಿ ಬಂದ ವಧು.. ಕ್ಲೀನ್​ ಬೌಲ್ಡ್​ ಆದ ವರ!.. ವಿಡಿಯೋ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.