ETV Bharat / bharat

ನಾನು ಭಯೋತ್ಪಾದಕನಲ್ಲ, ಭ್ರಷ್ಟನೂ ಅಲ್ಲ, ಜನರ ಪ್ರೀತಿಪಾತ್ರನು: ಸಿಎಂ ಕೇಜ್ರಿವಾಲ್

author img

By

Published : Nov 9, 2022, 10:52 AM IST

ದೆಹಲಿ ಮುನ್ಸಿಪಲ್​ ಚುನಾವಣೆ (ಎಂಸಿಡಿ) ಮತ್ತು ಗುಜರಾತ್​​ ಚುನಾವಣೆಯಲ್ಲಿ ಬಿಜೆಪಿ ಎದುರು ನೇರ ಹಣಾಹಣಿಗೆ ಇಳಿದಿರುವ ಕೇಜ್ರಿವಾಲ್​ ಅವರ ಆಮ್​ ಆದ್ಮಿ ಪಕ್ಷ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದು, ಅತ್ಯಂತ ಭ್ರಷ್ಟ ಪಕ್ಷ ಎಂದು ಬಿಜೆಪಿ ನಾಯಕರು ಹೀಗಳೆದಿದ್ದಾರೆ.

ನನ್ನ ಮೇಲೆ ಇರುವ ಪ್ರೀತಿ ಕಂಡು ಬಿಜೆಪಿ ತೊಂದರೆ ನೀಡುತ್ತಿದೆ; ಸಿಎಂ ಕೇಜ್ರಿವಾಲ್​​
kejriwal says he is the darling of people thats why bjp troubling him

ನವದೆಹಲಿ: ನಾನು ಜನತೆಯ ಅಚ್ಚುಮೆಚ್ಚಿನ ಮಗ. ನನ್ನ ಮೇಲೆ ಜನರು ತೋರುತ್ತಿರುವ ಪ್ರೀತಿಯನ್ನು ಸಹಿಸದೆ ಬಿಜೆಪಿ ನನಗೆ ತೊಂದರೆ ನೀಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಆರೋಪಿಸಿದ್ದಾರೆ.

ದೆಹಲಿ ಮುನ್ಸಿಪಲ್​ ಚುನಾವಣೆ (ಎಂಸಿಡಿ) ಮತ್ತು ಗುಜರಾತ್​​ ಚುನಾವಣೆಯಲ್ಲಿ ಬಿಜೆಪಿ ಎದುರು ನೇರ ಹಣಾಹಣಿಗೆ ಇಳಿದಿರುವ ಕೇಜ್ರಿವಾಲ್​ ಅವರ ಆಮ್​ ಆದ್ಮಿ ಪಕ್ಷ, ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಮತ್ತು ಅತ್ಯಂತ ಭ್ರಷ್ಟ ಪಕ್ಷ ಎಂದು ಬಿಜೆಪಿ ನಾಯಕರು ಹೀಗಳೆದಿದ್ದಾರೆ.

ಪಂಜಾಬ್​ ಚುನಾವಣೆಗೆ ಮುನ್ನ ಅರವಿಂದ್​ ಕೇಜ್ರಿವಾಲ್​ ಅವರನ್ನು ಭಯೋತ್ಪಾದಕ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಗೃಹ ಸಚಿವ ಅಮಿತ್​ ಶಾ ಕೂಡ ಈ ಸಂಬಂಧ ತನಿಖೆಗೆ ಆಗ್ರಹಿಸಿದ್ದರು. ಆದರೆ ಏನಾಯಿತು ಈಗ? ಗುಜರಾತ್​ ಚುನಾವಣೆ ಮತ್ತು ಎಂಸಿಡಿ ಚುನಾವಣೆಗೆ ಮುನ್ನ ಅವರು ಕೇಜ್ರಿವಾಲ್​ ಭ್ರಷ್ಟ ಎನ್ನುತ್ತಿದ್ದಾರೆ. ಕೇಜ್ರಿವಾಲ್​ ಭ್ರಷ್ಟ ಅಥವಾ ಭಯೋತ್ಪಾದಕ ಎಂದರೆ ಬಂಧಿಸಬೇಕು ಅಲ್ಲವೇ ಎಂದು ಟ್ವೀಟ್​ ಮೂಲಕ ದೆಹಲಿ ಸಿಎಂ ಪ್ರಶ್ನಿಸಿದ್ದಾರೆ.

ಕೇಜ್ರಿವಾಲ್​ ಭಯೋತ್ಪಾದಕನೂ ಅಲ್ಲ, ಭ್ರಷ್ಟನೂ ಅಲ್ಲ. ಅವನು ಜನರ ಪ್ರೀತಿಗೆ ಪಾತ್ರನಾದವನು. ಅದು ಬಿಜೆಪಿಗೆ ದೊಡ್ಡ ಸಮಸ್ಯೆ ಆಗುತ್ತಿದೆ ಎಂದಿದ್ದಾರೆ ದೆಹಲಿ ಸಿಎಂ.

ದೆಹಲಿ ಮುನ್ಸಿಪಲ್​ ಚುನಾವಣೆ ಮುಂದಿನ ತಿಂಗಳು ಅಂದರೆ, ಡಿಸೆಂಬರ್​ 4 ರಂದು ನಡೆಯಲಿದೆ. 7ರಂದು ಮತ ಏಣಿಕೆ ನಡೆಯಲಿದೆ.

2007ರಿಂದ ದೆಹಲಿಯ ಮುನ್ಸಿಪಲ್​ ಅಧಿಕಾರವನ್ನು ಬಿಜೆಪಿ ನಡೆಸುತ್ತಿದ್ದು, ಕಾಂಗ್ರೆಸ್​ ಮತ್ತು ಎಎಪಿ ಈಗ ಎದುರಾಳಿಯಾಗಿವೆ. 2017ರಲ್ಲಿ 270 ವಾರ್ಡ್​ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 181 ಸ್ಥಾನ ಪಡೆದಿದ್ದು, ಇಬ್ಬರು ಅಭ್ಯರ್ಥಿಗಳ ಸಾವಿನಿಂದಾಗಿ ಎರಡು ಸ್ಥಾನಗಳಿಗೆ ಚುನಾವಣೆ ನಡೆದಿರಲಿಲ್ಲ. ಈ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನ ಹಾಗೂ ಕಾಂಗ್ರೆಸ್​​ 27 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದವು. ಈ ವರ್ಷದ ಆರಂಭದಲ್ಲಿ ಕೇಂದ್ರ ದೆಹಲಿಯ ಮೂರು ಮುನ್ಸಿಪಲ್​ ಕಾರ್ಪೋರೇಷನ್​ ಅನ್ನು ಎಂಸಿಡಿ ಅಡಿ ತಂದು ಈ ವಾರ್ಡ್​​ಗಳ ಸ್ಥಾನವನ್ನು 272ರಿಂದ 250ಕ್ಕೆ ಇಳಿಸಿತ್ತು.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ ಅರವಿಂದ್ ಕೇಜ್ರಿವಾಲ್

ನವದೆಹಲಿ: ನಾನು ಜನತೆಯ ಅಚ್ಚುಮೆಚ್ಚಿನ ಮಗ. ನನ್ನ ಮೇಲೆ ಜನರು ತೋರುತ್ತಿರುವ ಪ್ರೀತಿಯನ್ನು ಸಹಿಸದೆ ಬಿಜೆಪಿ ನನಗೆ ತೊಂದರೆ ನೀಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಆರೋಪಿಸಿದ್ದಾರೆ.

ದೆಹಲಿ ಮುನ್ಸಿಪಲ್​ ಚುನಾವಣೆ (ಎಂಸಿಡಿ) ಮತ್ತು ಗುಜರಾತ್​​ ಚುನಾವಣೆಯಲ್ಲಿ ಬಿಜೆಪಿ ಎದುರು ನೇರ ಹಣಾಹಣಿಗೆ ಇಳಿದಿರುವ ಕೇಜ್ರಿವಾಲ್​ ಅವರ ಆಮ್​ ಆದ್ಮಿ ಪಕ್ಷ, ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಮತ್ತು ಅತ್ಯಂತ ಭ್ರಷ್ಟ ಪಕ್ಷ ಎಂದು ಬಿಜೆಪಿ ನಾಯಕರು ಹೀಗಳೆದಿದ್ದಾರೆ.

ಪಂಜಾಬ್​ ಚುನಾವಣೆಗೆ ಮುನ್ನ ಅರವಿಂದ್​ ಕೇಜ್ರಿವಾಲ್​ ಅವರನ್ನು ಭಯೋತ್ಪಾದಕ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಗೃಹ ಸಚಿವ ಅಮಿತ್​ ಶಾ ಕೂಡ ಈ ಸಂಬಂಧ ತನಿಖೆಗೆ ಆಗ್ರಹಿಸಿದ್ದರು. ಆದರೆ ಏನಾಯಿತು ಈಗ? ಗುಜರಾತ್​ ಚುನಾವಣೆ ಮತ್ತು ಎಂಸಿಡಿ ಚುನಾವಣೆಗೆ ಮುನ್ನ ಅವರು ಕೇಜ್ರಿವಾಲ್​ ಭ್ರಷ್ಟ ಎನ್ನುತ್ತಿದ್ದಾರೆ. ಕೇಜ್ರಿವಾಲ್​ ಭ್ರಷ್ಟ ಅಥವಾ ಭಯೋತ್ಪಾದಕ ಎಂದರೆ ಬಂಧಿಸಬೇಕು ಅಲ್ಲವೇ ಎಂದು ಟ್ವೀಟ್​ ಮೂಲಕ ದೆಹಲಿ ಸಿಎಂ ಪ್ರಶ್ನಿಸಿದ್ದಾರೆ.

ಕೇಜ್ರಿವಾಲ್​ ಭಯೋತ್ಪಾದಕನೂ ಅಲ್ಲ, ಭ್ರಷ್ಟನೂ ಅಲ್ಲ. ಅವನು ಜನರ ಪ್ರೀತಿಗೆ ಪಾತ್ರನಾದವನು. ಅದು ಬಿಜೆಪಿಗೆ ದೊಡ್ಡ ಸಮಸ್ಯೆ ಆಗುತ್ತಿದೆ ಎಂದಿದ್ದಾರೆ ದೆಹಲಿ ಸಿಎಂ.

ದೆಹಲಿ ಮುನ್ಸಿಪಲ್​ ಚುನಾವಣೆ ಮುಂದಿನ ತಿಂಗಳು ಅಂದರೆ, ಡಿಸೆಂಬರ್​ 4 ರಂದು ನಡೆಯಲಿದೆ. 7ರಂದು ಮತ ಏಣಿಕೆ ನಡೆಯಲಿದೆ.

2007ರಿಂದ ದೆಹಲಿಯ ಮುನ್ಸಿಪಲ್​ ಅಧಿಕಾರವನ್ನು ಬಿಜೆಪಿ ನಡೆಸುತ್ತಿದ್ದು, ಕಾಂಗ್ರೆಸ್​ ಮತ್ತು ಎಎಪಿ ಈಗ ಎದುರಾಳಿಯಾಗಿವೆ. 2017ರಲ್ಲಿ 270 ವಾರ್ಡ್​ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 181 ಸ್ಥಾನ ಪಡೆದಿದ್ದು, ಇಬ್ಬರು ಅಭ್ಯರ್ಥಿಗಳ ಸಾವಿನಿಂದಾಗಿ ಎರಡು ಸ್ಥಾನಗಳಿಗೆ ಚುನಾವಣೆ ನಡೆದಿರಲಿಲ್ಲ. ಈ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನ ಹಾಗೂ ಕಾಂಗ್ರೆಸ್​​ 27 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದವು. ಈ ವರ್ಷದ ಆರಂಭದಲ್ಲಿ ಕೇಂದ್ರ ದೆಹಲಿಯ ಮೂರು ಮುನ್ಸಿಪಲ್​ ಕಾರ್ಪೋರೇಷನ್​ ಅನ್ನು ಎಂಸಿಡಿ ಅಡಿ ತಂದು ಈ ವಾರ್ಡ್​​ಗಳ ಸ್ಥಾನವನ್ನು 272ರಿಂದ 250ಕ್ಕೆ ಇಳಿಸಿತ್ತು.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ ಅರವಿಂದ್ ಕೇಜ್ರಿವಾಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.