ETV Bharat / bharat

ಚಳಿಗೆ ನಡುಗುತ್ತಿರುವ ದೆಹಲಿ; ಹಿಮಪಾತದ ನಿರೀಕ್ಷೆಯಲ್ಲಿ ಕಾಶ್ಮೀರ

author img

By ETV Bharat Karnataka Team

Published : Jan 4, 2024, 11:45 AM IST

ಕಣಿವೆಗಳು ಭಾರೀ ಚಳಿಯಿಂದಾಗಿ ಹೆಪ್ಪುಗಟ್ಟಿದ್ದು, ನೀರಿಗಾಗಿ ಜನರು ತೊಂದರೆ ಪಡುವಂತೆ ಆಗಿದೆ.

Kashmiris little hope of snowfall in sight
Kashmiris little hope of snowfall in sight

ನವದೆಹಲಿ: ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಮುಂದುವರೆದಿದ್ದು, ದೆಹಲಿಯಲ್ಲಿ ತಾಪಮಾನ 7 ಡಿಗ್ರಿಗೆ ಕುಸಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ದೆಹಲಿಯಲ್ಲಿ ಸಾಮಾನ್ಯ ತಾಪಮಾನ 7.7 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದ್ದು, ಸಾಧಾರಣ ಮಂಜು ಕವಿದ ವಾತಾವರಣ ಕಂಡು ಬಂದಿದೆ. ಗುರುವಾರ ಬೆಳಗ್ಗೆ ನಗರದಲ್ಲಿ ಗೋಚರತೆ ಪ್ರಮಾಣ 500 ಮೀಟರ್​ ಆಗಿದೆ.

ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್​ ಆಗಿರಲಿದೆ ಎಂದು ಐಎಂಡಿ ಅಂದಾಜಿಸಿದೆ. ಮಂಜು ಕವಿದ ವಾತಾವರಣ ಹಿನ್ನಲೆ 26 ರೈಲುಗಳು ಆಗಮನದ ಸಮಯದಲ್ಲಿ ವ್ಯತ್ಯಯ ಕಂಡು ಬಂದಿದೆ. ದೆಹಲಿ ಹೊರತಾಗಿ ಉತ್ತರ ಭಾರತದ ಬಹುತೇಕ ಕಡೆ ಚಳಿ ಮತ್ತು ಮಂಜು ಕವಿತ ಹವಾಮಾನ ಹಿನ್ನಲೆ ಈ ವಿಳಂಬ ಆಗಿದೆ. ಇನ್ನು ಅತಿ ಹೆಚ್ಚಿನ ವಿಳಂಬ ಸಮಯ ಎಂದರೆ ಆರು ಗಂಟೆ ಆಗಿದೆ ಎಂದು ವರದಿ ತಿಳಿಸಿದೆ. ಇನ್ನು ಚಳಿ ಹಿನ್ನಲೆ ದೆಹಲಿಯ ವಾಯುಗುಣಮಟ್ಟ ಕೂಡ ಕುಸಿತ ಕಂಡಿದೆ.

ಕಾಶ್ಮೀರದಲ್ಲಿ ಹಿಮಪಾತ:

ಕಣಿವೆ ರಾಜ್ಯದಲ್ಲಿ ಚಳಿ ತೀವ್ರತೆ ಹೆಚ್ಚಿದ್ದು, ಗುರುವಾರ ಹಿಮಪಾತದ ಭರವಸೆ ನೀಡಿದೆ. ಇನ್ನು ಮುಂದಿನ 10 ದಿನಗಳ ಕಾಲ ಕಾಶ್ಮೀರದಲ್ಲಿ ಯಾವುದೇ ಹಿಮಪಾತವಾಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಿಲ್ಲೈ ಕಾಲನ್​​ನಲ್ಲಿ ಸಾಕಷ್ಟ ಪ್ರಮಾಣ ಹಿಮಪಾತ ಕಂಡು ಬಂದಿಲ್ಲ. ಇದೆ ರೀತಿ ಪರಿಸ್ಥಿತಿ ಕಂಡು ಬಂದರೆ ಇದರಿಂದ ವಿಪತ್ತು ಎದುರಿಸಬೇಕಾಗುತ್ತದೆ ಎಂದು ಶಬೀರ್​ ಅಹ್ಮದ್​ ಭಟ್​​ ತಿಳಿಸಿದ್ದಾರೆ.

ಕಣಿವೆಗಳು ಭಾರೀ ಚಳಿಯಿಂದಾಗಿ ಹೆಪ್ಪುಗಟ್ಟಿದ್ದು, ನೀರಿಗಾಗಿ ಜನರು ತೊಂದರೆ ಪಡುವಂತೆ ಆಗಿದೆ. ನೀರಿನ ಸರಬರಾಜು ಪೈಪ್​ಗಳು ಕೂಡ ಹೆಪ್ಪುಗಟ್ಟುತ್ತಿರುವ ಹಿನ್ನಲೆ ಕುಡಿಯುವ ನೀರಿನ ಬೇಡಿಕೆ ಹೆಚ್ಚಿದೆ. ಶ್ರೀನಗರದಲ್ಲಿ ಗುರುವಾರ ಸಾಮಾನ್ಯ ತಾಪಮಾನ ಮೈನಸ್​ 3.8 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ. ಗುಲ್ಮರ್ಗ್​ ಮತ್ತು ಪಗಲ್ಗಮ್​ನಲ್ಲಿ ಕ್ರಮವಾಗಿ 4.2 ಮತ್ತು 5.1 ಡ್ರಿಗ್ರಿ ಸೆಲ್ಸಿಯಸ್​ ದಾಖಲಾಗಿದೆ.

ಲಡಾಕ್​ ಪ್ರದೇಶದಲ್ಲಿ ಲೇ ನಗರದಲ್ಲಿ ಮೈನಸರ್​ 14.1, ಕಾರ್ಗಿಲ್​ನಲ್ಲಿ ಮೈನಸರ್​ 14.3, ಡ್ರಾಸ್​ನಲ್ಲಿ ಮೈನಸ್​​ 12.1 ಡಿಗ್ರಿ ಸೆಲ್ಸಿಯಸ್​ ತಾಪಮಾನ ರಾತ್ರಿ ಸಮಯದಲ್ಲಿ ದಾಖಲಾಗಿದೆ.

ಕಣಿವೆ ರಾಜ್ಯದಲ್ಲಿ ಚಳಿಗಾಲ ಎಂದು ಕರೆಯಲ್ಪಡುವ ಚಿಲ್ಲೈ ಕಲಾನ್ 40 ದಿನಗಳ ದೀರ್ಘಾವಧಿಯ ಚಳಿಗಾಲ ಆಗಿದೆ. ಇದು ಚಳಿಯು ಡಿಸೆಂಬರ್ 21 ರಂದು ಪ್ರಾರಂಭವಾಗಿ ಜನವರಿ 30 ರಂದು ಕೊನೆಗೊಳ್ಳುತ್ತದೆ. (ಐಎಎನ್​ಎಸ್​)

ಇದನ್ನೂ ಓದಿ: 2024ರಲ್ಲಿ ಎಷ್ಟು ಗ್ರಹಣಗಳು ನಡೆಯುತ್ತೆ, ಭಾರತದಲ್ಲಿ ಗೋಚರಿಸುವ ವಿಸ್ಮಯಗಳೆಷ್ಟು?

ನವದೆಹಲಿ: ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಮುಂದುವರೆದಿದ್ದು, ದೆಹಲಿಯಲ್ಲಿ ತಾಪಮಾನ 7 ಡಿಗ್ರಿಗೆ ಕುಸಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ದೆಹಲಿಯಲ್ಲಿ ಸಾಮಾನ್ಯ ತಾಪಮಾನ 7.7 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದ್ದು, ಸಾಧಾರಣ ಮಂಜು ಕವಿದ ವಾತಾವರಣ ಕಂಡು ಬಂದಿದೆ. ಗುರುವಾರ ಬೆಳಗ್ಗೆ ನಗರದಲ್ಲಿ ಗೋಚರತೆ ಪ್ರಮಾಣ 500 ಮೀಟರ್​ ಆಗಿದೆ.

ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್​ ಆಗಿರಲಿದೆ ಎಂದು ಐಎಂಡಿ ಅಂದಾಜಿಸಿದೆ. ಮಂಜು ಕವಿದ ವಾತಾವರಣ ಹಿನ್ನಲೆ 26 ರೈಲುಗಳು ಆಗಮನದ ಸಮಯದಲ್ಲಿ ವ್ಯತ್ಯಯ ಕಂಡು ಬಂದಿದೆ. ದೆಹಲಿ ಹೊರತಾಗಿ ಉತ್ತರ ಭಾರತದ ಬಹುತೇಕ ಕಡೆ ಚಳಿ ಮತ್ತು ಮಂಜು ಕವಿತ ಹವಾಮಾನ ಹಿನ್ನಲೆ ಈ ವಿಳಂಬ ಆಗಿದೆ. ಇನ್ನು ಅತಿ ಹೆಚ್ಚಿನ ವಿಳಂಬ ಸಮಯ ಎಂದರೆ ಆರು ಗಂಟೆ ಆಗಿದೆ ಎಂದು ವರದಿ ತಿಳಿಸಿದೆ. ಇನ್ನು ಚಳಿ ಹಿನ್ನಲೆ ದೆಹಲಿಯ ವಾಯುಗುಣಮಟ್ಟ ಕೂಡ ಕುಸಿತ ಕಂಡಿದೆ.

ಕಾಶ್ಮೀರದಲ್ಲಿ ಹಿಮಪಾತ:

ಕಣಿವೆ ರಾಜ್ಯದಲ್ಲಿ ಚಳಿ ತೀವ್ರತೆ ಹೆಚ್ಚಿದ್ದು, ಗುರುವಾರ ಹಿಮಪಾತದ ಭರವಸೆ ನೀಡಿದೆ. ಇನ್ನು ಮುಂದಿನ 10 ದಿನಗಳ ಕಾಲ ಕಾಶ್ಮೀರದಲ್ಲಿ ಯಾವುದೇ ಹಿಮಪಾತವಾಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಿಲ್ಲೈ ಕಾಲನ್​​ನಲ್ಲಿ ಸಾಕಷ್ಟ ಪ್ರಮಾಣ ಹಿಮಪಾತ ಕಂಡು ಬಂದಿಲ್ಲ. ಇದೆ ರೀತಿ ಪರಿಸ್ಥಿತಿ ಕಂಡು ಬಂದರೆ ಇದರಿಂದ ವಿಪತ್ತು ಎದುರಿಸಬೇಕಾಗುತ್ತದೆ ಎಂದು ಶಬೀರ್​ ಅಹ್ಮದ್​ ಭಟ್​​ ತಿಳಿಸಿದ್ದಾರೆ.

ಕಣಿವೆಗಳು ಭಾರೀ ಚಳಿಯಿಂದಾಗಿ ಹೆಪ್ಪುಗಟ್ಟಿದ್ದು, ನೀರಿಗಾಗಿ ಜನರು ತೊಂದರೆ ಪಡುವಂತೆ ಆಗಿದೆ. ನೀರಿನ ಸರಬರಾಜು ಪೈಪ್​ಗಳು ಕೂಡ ಹೆಪ್ಪುಗಟ್ಟುತ್ತಿರುವ ಹಿನ್ನಲೆ ಕುಡಿಯುವ ನೀರಿನ ಬೇಡಿಕೆ ಹೆಚ್ಚಿದೆ. ಶ್ರೀನಗರದಲ್ಲಿ ಗುರುವಾರ ಸಾಮಾನ್ಯ ತಾಪಮಾನ ಮೈನಸ್​ 3.8 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ. ಗುಲ್ಮರ್ಗ್​ ಮತ್ತು ಪಗಲ್ಗಮ್​ನಲ್ಲಿ ಕ್ರಮವಾಗಿ 4.2 ಮತ್ತು 5.1 ಡ್ರಿಗ್ರಿ ಸೆಲ್ಸಿಯಸ್​ ದಾಖಲಾಗಿದೆ.

ಲಡಾಕ್​ ಪ್ರದೇಶದಲ್ಲಿ ಲೇ ನಗರದಲ್ಲಿ ಮೈನಸರ್​ 14.1, ಕಾರ್ಗಿಲ್​ನಲ್ಲಿ ಮೈನಸರ್​ 14.3, ಡ್ರಾಸ್​ನಲ್ಲಿ ಮೈನಸ್​​ 12.1 ಡಿಗ್ರಿ ಸೆಲ್ಸಿಯಸ್​ ತಾಪಮಾನ ರಾತ್ರಿ ಸಮಯದಲ್ಲಿ ದಾಖಲಾಗಿದೆ.

ಕಣಿವೆ ರಾಜ್ಯದಲ್ಲಿ ಚಳಿಗಾಲ ಎಂದು ಕರೆಯಲ್ಪಡುವ ಚಿಲ್ಲೈ ಕಲಾನ್ 40 ದಿನಗಳ ದೀರ್ಘಾವಧಿಯ ಚಳಿಗಾಲ ಆಗಿದೆ. ಇದು ಚಳಿಯು ಡಿಸೆಂಬರ್ 21 ರಂದು ಪ್ರಾರಂಭವಾಗಿ ಜನವರಿ 30 ರಂದು ಕೊನೆಗೊಳ್ಳುತ್ತದೆ. (ಐಎಎನ್​ಎಸ್​)

ಇದನ್ನೂ ಓದಿ: 2024ರಲ್ಲಿ ಎಷ್ಟು ಗ್ರಹಣಗಳು ನಡೆಯುತ್ತೆ, ಭಾರತದಲ್ಲಿ ಗೋಚರಿಸುವ ವಿಸ್ಮಯಗಳೆಷ್ಟು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.