ETV Bharat / bharat

ಇದು ಕಾಂಗರೂ ಕೋರ್ಟ್ ನಿರ್ಧಾರ, ದೊಡ್ಡ ಜನಾದೇಶದೊಂದಿಗೆ ಮತ್ತೆ ಲೋಕಸಭೆಗೆ ಬರುವೆ: ಮಹುವಾ ಮೊಯಿತ್ರಾ

author img

By PTI

Published : Nov 10, 2023, 8:26 AM IST

Mahua Moitra says Kangaroo court decision: ಪ್ರಶ್ನೆ ಕೇಳಲು ಹಣ ಪಡೆದ ಗಂಭೀರ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ ಎದುರಾಗಿದೆ. ಅವರನ್ನು ಲೋಕಸಭೆಯಿಂದ ಉಚ್ಚಾಟಿಸಬೇಕು ಎಂದು ಲೋಕಸಭೆಯ ನೀತಿ ಸಮಿತಿ ಶಿಫಾರಸು ಮಾಡಿದೆ. ಈ ಶಿಫಾರಸಿನ ವಿರುದ್ಧ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Kangaroo court decision  will be back in LS with greater margin  Mahua Moitra  Mahua Moitra case  ಇದೊಂದು ಕಾಂಗೂರು ಕೋರ್ಟ್ ನಿರ್ಧಾರ  ಮುಂದಿನ ಲೋಕಸಭೆಯಲ್ಲಿ ದೊಡ್ಡ ಜನಾದೇಶದೊಂದಿಗೆ ಬರುತ್ತೇನೆ  ಮಹುವಾ ಮೊಯಿತ್ರಾ  ಪ್ರಶ್ನೆ ಕೇಳಲು ಹಣ ಪಡೆದ ಆರೋಪ  ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ  ಶಿಪಾರಸು ವಿರುದ್ಧ ಅವರು ಕಿಡಿ  ಸದನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಆರೋಪ  ಲೋಕಸಭೆ ಸದಸ್ಯತ್ವ ರದ್ದಾಗುವ ಸಾಧ್ಯತೆ  ಟಿಎಂಸಿ ಹಿರಿಯ ನಾಯಕಿ ಮಹುವಾ ಮೊಯಿತ್ರಾ
ಇದೊಂದು ಕಾಂಗೂರು ಕೋರ್ಟ್ ನಿರ್ಧಾರ

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಸದನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಲೋಕಸಭೆ ಸದಸ್ಯತ್ವ ರದ್ದಾಗುವ ಸಾಧ್ಯತೆ ಇದೆ. ಸಂಸದೀಯ ನೈತಿಕ ಸಮಿತಿಯು ಮೊಯಿತ್ರಾ ಅವರನ್ನು ಲೋಕಸಭೆ ಸದಸ್ಯತ್ವದಿಂದ ಉಚ್ಛಾಟಿಸಲು ಶಿಫಾರಸು ಮಾಡಿದೆ. ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ಅಧ್ಯಕ್ಷತೆಯ ಸಮಿತಿಯು ಗುರುವಾರ ಉಚ್ಚಾಟಿಸುವಂತೆ ಸೂಚಿಸುವ ವರದಿ ಅಂಗೀಕರಿಸಿತು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಹುವಾ ಮೊಯಿತ್ರಾ, ಇದು ಕಾಂಗರೂ ಕೋರ್ಟ್‌ನ ಪೂರ್ವಯೋಜಿತ ನಿರ್ಣಯ. ಈ ನಿರ್ಣಯ ಭಾರತೀಯ ಸಂಸದೀಯ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಸೂಚಿಸುತ್ತದೆ. ಪ್ರಸಕ್ತ ಲೋಕಸಭೆಯಲ್ಲಿ ಅವರು ನನ್ನನ್ನು ಹೊರಹಾಕಿದರೂ ಮುಂದಿನ ಲೋಕಸಭೆಯಲ್ಲಿ ದೊಡ್ಡ ಜನಾದೇಶದೊಂದಿಗೆ ಬಂದೇ ಬರುತ್ತೇನೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೊಯಿತ್ರಾ ಅವರು ನೈತಿಕ ಸಮಿತಿಯ ಕಾರ್ಯವಿಧಾನಗಳನ್ನು ಕಾಂಗರೂ ನ್ಯಾಯಾಲಯಕ್ಕೆ ಹೋಲಿಸಿದ್ದಾರೆ. "ಮೊದಲ ದಿನದಿಂದ ಇದು ಕಾಂಗರೂ ನ್ಯಾಯಾಲಯವೇ ಆಗಿತ್ತು. ಯಾವುದೇ ಸಾಕ್ಷ್ಯವಿಲ್ಲ. ಅವರು ನನ್ನನ್ನು ವಿಚಾರಣೆಗೆ ಕರೆದರು. ಅದು ಪೂರ್ಣಗೊಂಡಿಲ್ಲ. ಏಕೆಂದರೆ ಅಧ್ಯಕ್ಷರು ನನ್ನನ್ನು ಪ್ರಶ್ನಿಸಲು ಇತರರಿಗೆ ಅವಕಾಶ ನೀಡಲಿಲ್ಲ" ಎಂದು ಆರೋಪಿಸಿದ್ದಾರೆ.

ಮುಖ್ಯ ದೂರುದಾರರನ್ನು ಕ್ರಾಸ್-ಎಕ್ಸಾಮಿನ್ ಮಾಡಬೇಕೆಂಬ ತನ್ನ ಬೇಡಿಕೆಯನ್ನು ಮೊಯಿತ್ರಾ ಒತ್ತಿ ಹೇಳಿದರು. "ಮುಖ್ಯ ದೂರುದಾರ, ಆಪಾದಿತ ಲಂಚ ನೀಡುವವರನ್ನು ಯಾವುದೇ ಕ್ರಾಸ್-ಎಕ್ಸಾಮಿನ್ ಮಾಡಲಿಲ್ಲ. ಮುಖ್ಯ ದೂರುದಾರರನ್ನು ಕ್ರಾಸ್-ಎಕ್ಸಾಮಿನ್ ಮಾಡಲು ನನಗೆ ಅನುಮತಿಸಲಾಗಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಸಾಕ್ಷ್ಯವೂ ಇಲ್ಲ. ಇಂದಿನವರೆಗೂ ನೀಡಿದ ನಗದು ಅಥವಾ ಉಡುಗೊರೆಗಳು, ಲಾಗಿನ್ ಐಡಿ ಮತ್ತು ಪಾಸ್‌ವರ್ಡ್​ ಹಂಚಿಕೊಂಡಿದ್ದಾರೆ ಎಂದು ಹೇಳುವುದು ಸಮಸ್ಯೆಯಲ್ಲ. ಏಕೆಂದರೆ ಪ್ರತಿಯೊಬ್ಬ ಸಂಸದರು ಅದನ್ನು 10 ಜನರೊಂದಿಗೆ ಹಂಚಿಕೊಳ್ಳುತ್ತಾರೆ ಮತ್ತು ಇದಕ್ಕೆ ಯಾವುದೇ NIC ನಿಯಮಗಳಿಲ್ಲ. ಅನೈತಿಕ ಅಥವಾ ಕಾನೂನುಬಾಹಿರವಾಗಿ ನಾನು ಏನೂ ಮಾಡಿಲ್ಲ" ಎಂದು ಹೇಳಿದರು.

ನಿಜಕ್ಕೂ ಇದು 'ಪ್ರಶ್ನೆ ಕೇಳಲು ಹಣ ಪಡೆದ' ಆರೋಪ ಗಂಭೀರ ವಿಷಯವಾಗಿದ್ದರೆ, ಅದು ಸವಲತ್ತು ಉಲ್ಲಂಘನೆಯ ಸಮಸ್ಯೆಯಾಗಿದೆ. ವಿಶೇಷಾಧಿಕಾರ ಸಮಿತಿಗೆ ಹೋಗಬೇಕಿತ್ತು. ನೈತಿಕ ಸಮಿತಿಯ ಆದೇಶ ಅನೈತಿಕ ನಡವಳಿಕೆಯನ್ನು ಪರಿಶೀಲಿಸುವುದಾಗಿದೆ ಎಂದು ಅವರು ತಿಳಿಸಿದರು.

ಇದು ಕೇವಲ ಶಿಫಾರಸು, ಸದ್ಯಕ್ಕೆ ಏನೂ ಆಗಿಲ್ಲ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳಲಿ ಎಂದು ಸೂಚಿಸಿದ್ದಾರೆ. ಇದರಿಂದ ನಿಜವಾಗಿಯೂ ನನಗೆ ಏನನ್ನೂ ಮಾಡಲಾಗದು. ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಹಾಸ್ಯವನ್ನು ಬಿಜೆಪಿ ಇಡೀ ದೇಶಕ್ಕೆ ತೋರಿಸಿದೆ. ಮೊದಲು ಅವರು ನನ್ನನ್ನು ಹೊರಹಾಕಲಿ. ನಂತರ ಮುಂದಿನ ಕ್ರಮಗಳನ್ನು ಪ್ರಕಟಿಸುತ್ತೇನೆ ಎಂದು ಮೊಯಿತ್ರಾ ಬಿಜೆಪಿ ವಿರುದ್ಧ ಗರಂ ಆದರು.

ಇದನ್ನೂ ಓದಿ: ಇಡಿಗೆ 6000 ಪುಟಗಳ ಪ್ರತಿಕ್ರಿಯೆ ಸಲ್ಲಿಸಿದ ಅಭಿಷೇಕ್​ ಬ್ಯಾನರ್ಜಿ: ಸಂಸದೆ ಮೊಯಿತ್ರಾಗೆ ಬೆಂಬಲ

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಸದನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಲೋಕಸಭೆ ಸದಸ್ಯತ್ವ ರದ್ದಾಗುವ ಸಾಧ್ಯತೆ ಇದೆ. ಸಂಸದೀಯ ನೈತಿಕ ಸಮಿತಿಯು ಮೊಯಿತ್ರಾ ಅವರನ್ನು ಲೋಕಸಭೆ ಸದಸ್ಯತ್ವದಿಂದ ಉಚ್ಛಾಟಿಸಲು ಶಿಫಾರಸು ಮಾಡಿದೆ. ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ಅಧ್ಯಕ್ಷತೆಯ ಸಮಿತಿಯು ಗುರುವಾರ ಉಚ್ಚಾಟಿಸುವಂತೆ ಸೂಚಿಸುವ ವರದಿ ಅಂಗೀಕರಿಸಿತು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಹುವಾ ಮೊಯಿತ್ರಾ, ಇದು ಕಾಂಗರೂ ಕೋರ್ಟ್‌ನ ಪೂರ್ವಯೋಜಿತ ನಿರ್ಣಯ. ಈ ನಿರ್ಣಯ ಭಾರತೀಯ ಸಂಸದೀಯ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಸೂಚಿಸುತ್ತದೆ. ಪ್ರಸಕ್ತ ಲೋಕಸಭೆಯಲ್ಲಿ ಅವರು ನನ್ನನ್ನು ಹೊರಹಾಕಿದರೂ ಮುಂದಿನ ಲೋಕಸಭೆಯಲ್ಲಿ ದೊಡ್ಡ ಜನಾದೇಶದೊಂದಿಗೆ ಬಂದೇ ಬರುತ್ತೇನೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೊಯಿತ್ರಾ ಅವರು ನೈತಿಕ ಸಮಿತಿಯ ಕಾರ್ಯವಿಧಾನಗಳನ್ನು ಕಾಂಗರೂ ನ್ಯಾಯಾಲಯಕ್ಕೆ ಹೋಲಿಸಿದ್ದಾರೆ. "ಮೊದಲ ದಿನದಿಂದ ಇದು ಕಾಂಗರೂ ನ್ಯಾಯಾಲಯವೇ ಆಗಿತ್ತು. ಯಾವುದೇ ಸಾಕ್ಷ್ಯವಿಲ್ಲ. ಅವರು ನನ್ನನ್ನು ವಿಚಾರಣೆಗೆ ಕರೆದರು. ಅದು ಪೂರ್ಣಗೊಂಡಿಲ್ಲ. ಏಕೆಂದರೆ ಅಧ್ಯಕ್ಷರು ನನ್ನನ್ನು ಪ್ರಶ್ನಿಸಲು ಇತರರಿಗೆ ಅವಕಾಶ ನೀಡಲಿಲ್ಲ" ಎಂದು ಆರೋಪಿಸಿದ್ದಾರೆ.

ಮುಖ್ಯ ದೂರುದಾರರನ್ನು ಕ್ರಾಸ್-ಎಕ್ಸಾಮಿನ್ ಮಾಡಬೇಕೆಂಬ ತನ್ನ ಬೇಡಿಕೆಯನ್ನು ಮೊಯಿತ್ರಾ ಒತ್ತಿ ಹೇಳಿದರು. "ಮುಖ್ಯ ದೂರುದಾರ, ಆಪಾದಿತ ಲಂಚ ನೀಡುವವರನ್ನು ಯಾವುದೇ ಕ್ರಾಸ್-ಎಕ್ಸಾಮಿನ್ ಮಾಡಲಿಲ್ಲ. ಮುಖ್ಯ ದೂರುದಾರರನ್ನು ಕ್ರಾಸ್-ಎಕ್ಸಾಮಿನ್ ಮಾಡಲು ನನಗೆ ಅನುಮತಿಸಲಾಗಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಸಾಕ್ಷ್ಯವೂ ಇಲ್ಲ. ಇಂದಿನವರೆಗೂ ನೀಡಿದ ನಗದು ಅಥವಾ ಉಡುಗೊರೆಗಳು, ಲಾಗಿನ್ ಐಡಿ ಮತ್ತು ಪಾಸ್‌ವರ್ಡ್​ ಹಂಚಿಕೊಂಡಿದ್ದಾರೆ ಎಂದು ಹೇಳುವುದು ಸಮಸ್ಯೆಯಲ್ಲ. ಏಕೆಂದರೆ ಪ್ರತಿಯೊಬ್ಬ ಸಂಸದರು ಅದನ್ನು 10 ಜನರೊಂದಿಗೆ ಹಂಚಿಕೊಳ್ಳುತ್ತಾರೆ ಮತ್ತು ಇದಕ್ಕೆ ಯಾವುದೇ NIC ನಿಯಮಗಳಿಲ್ಲ. ಅನೈತಿಕ ಅಥವಾ ಕಾನೂನುಬಾಹಿರವಾಗಿ ನಾನು ಏನೂ ಮಾಡಿಲ್ಲ" ಎಂದು ಹೇಳಿದರು.

ನಿಜಕ್ಕೂ ಇದು 'ಪ್ರಶ್ನೆ ಕೇಳಲು ಹಣ ಪಡೆದ' ಆರೋಪ ಗಂಭೀರ ವಿಷಯವಾಗಿದ್ದರೆ, ಅದು ಸವಲತ್ತು ಉಲ್ಲಂಘನೆಯ ಸಮಸ್ಯೆಯಾಗಿದೆ. ವಿಶೇಷಾಧಿಕಾರ ಸಮಿತಿಗೆ ಹೋಗಬೇಕಿತ್ತು. ನೈತಿಕ ಸಮಿತಿಯ ಆದೇಶ ಅನೈತಿಕ ನಡವಳಿಕೆಯನ್ನು ಪರಿಶೀಲಿಸುವುದಾಗಿದೆ ಎಂದು ಅವರು ತಿಳಿಸಿದರು.

ಇದು ಕೇವಲ ಶಿಫಾರಸು, ಸದ್ಯಕ್ಕೆ ಏನೂ ಆಗಿಲ್ಲ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳಲಿ ಎಂದು ಸೂಚಿಸಿದ್ದಾರೆ. ಇದರಿಂದ ನಿಜವಾಗಿಯೂ ನನಗೆ ಏನನ್ನೂ ಮಾಡಲಾಗದು. ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಹಾಸ್ಯವನ್ನು ಬಿಜೆಪಿ ಇಡೀ ದೇಶಕ್ಕೆ ತೋರಿಸಿದೆ. ಮೊದಲು ಅವರು ನನ್ನನ್ನು ಹೊರಹಾಕಲಿ. ನಂತರ ಮುಂದಿನ ಕ್ರಮಗಳನ್ನು ಪ್ರಕಟಿಸುತ್ತೇನೆ ಎಂದು ಮೊಯಿತ್ರಾ ಬಿಜೆಪಿ ವಿರುದ್ಧ ಗರಂ ಆದರು.

ಇದನ್ನೂ ಓದಿ: ಇಡಿಗೆ 6000 ಪುಟಗಳ ಪ್ರತಿಕ್ರಿಯೆ ಸಲ್ಲಿಸಿದ ಅಭಿಷೇಕ್​ ಬ್ಯಾನರ್ಜಿ: ಸಂಸದೆ ಮೊಯಿತ್ರಾಗೆ ಬೆಂಬಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.