ETV Bharat / bharat

ಸಿಖ್​ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷೆ: ಕಂಗನಾ ವಿರುದ್ಧ ಎಫ್ಐಆರ್ ದಾಖಲು

author img

By

Published : Nov 23, 2021, 8:18 PM IST

ಸಿಖ್ ಸಮುದಾಯದ ವಿರುದ್ಧ ವಿವಾದಾತ್ಮಕ ಭಾಷೆ ಬಳಕೆ ಮಾಡಿರುವ ಆರೋಪದ ಮೇಲೆ ಕಾಂಟ್ರವರ್ಸಿಯಲ್ ಕ್ವೀನ್ ಕಂಗನಾ ರಣಾವತ್​ ವಿರುದ್ಧ ಎಫ್​ಐಆರ್ ದಾಖಲಾಗಿದೆ.

Kangana
Kangana

ಮುಂಬೈ: ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆ ಮೂಲಕ ಕಳೆದ ಕೆಲ ತಿಂಗಳಿಂದ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್​​ ವಿರುದ್ಧ ಇದೀಗ ಎಫ್​​ಐಆರ್​ ದಾಖಲಾಗಿದೆ. ಸಿಖ್​ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷೆ ಬಳಕೆ ಮಾಡಿದ್ದಕ್ಕಾಗಿ ಮುಂಬೈನಲ್ಲಿ ಎಫ್​ಐಆರ್ ದಾಖಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸ್​ ಅಧಿಕಾರಿ, ದೆಹಲಿ ಸಿಖ್​ ಗುರುದ್ವಾರ ಆಡಳಿತ ಮಂಡಳಿ ಉಪನಗರ ಖಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್​ 295ಎ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

  • FIR registered against actor Kangana Ranaut in Mumbai for allegedly portraying the farmers' protest as Khalistani movement and calling them 'Khalistanis' on social media pic.twitter.com/qjuBmsPzYX

    — ANI (@ANI) November 23, 2021 " class="align-text-top noRightClick twitterSection" data=" ">

ಕಂಗನಾ ರಣಾವತ್​​​ ರೈತರ ಪ್ರತಿಭಟನೆಯನ್ನ ಉದ್ದೇಶಪೂರ್ವಕವಾಗಿ ಖಾಲಿಸ್ತಾನ ಆಂದೋಲನಕ್ಕೆ ಹೋಲಿಕೆ ಮಾಡಿದ್ದು, ಸಿಖ್​ ಸಮುದಾಯವನ್ನ ಖಾಲಿಸ್ತಾನ ಉಗ್ರರು ಎಂದು ಕರೆದಿದ್ದರು. ಈ ವೇಳೆ 1984ರ ಸಿಖ್​ ವಿರೋಧಿ ದಂಗೆಯ ಬಗ್ಗೆ ಕೂಡ ಅವರು ಉಲ್ಲೇಖ ಮಾಡಿ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ: 'ಇಂದಿರಾಗಾಂಧಿ ಖಲಿಸ್ತಾನಿಗಳನ್ನು ಸೊಳ್ಳೆಗಳಂತೆ ಬಡಿದು ಹಾಕಿದರು': ಕಂಗನಾ ವಿರುದ್ಧ ದೂರು ದಾಖಲು

ಇದಕ್ಕೆ ಸಂಬಂಧಿಸಿದಂತೆ ಗುರುದ್ವಾರ ಮ್ಯಾನೇಜ್​ಮೆಂಟ್​ ಮಂಡಳಿ ಸದಸ್ಯ ಹಾಗೂ ಉದ್ಯಮಿ ಅಮರ್​ಜೀತ್​​ ಸಿಂಗ್​​ ಪ್ರಕರಣ ದಾಖಲು ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಮಾಡಿದ್ದಾರೆ. ಸಿಖ್​​ ಸಮುದಾಯದ ವಿರುದ್ಧ ವಿವಾದಿತ ಹೇಳಿಕೆ ನೀಡುತ್ತಿದ್ದಂತೆ ಕಂಗನಾ​​ ಅವರ ಮುಂಬೈ ನಿವಾಸಕ್ಕೆ ಬಿಗಿ ಪೊಲೀಸ್​ ಬಂದೋಬಸ್ತ್​ ನೀಡಲಾಗಿತ್ತು. ಇದರ ಬೆನ್ನಲ್ಲೇ ಅವರ ವಿರುದ್ಧ ದೂರು ದಾಖಲಾಗಿದೆ.

ಮುಂಬೈ: ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆ ಮೂಲಕ ಕಳೆದ ಕೆಲ ತಿಂಗಳಿಂದ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್​​ ವಿರುದ್ಧ ಇದೀಗ ಎಫ್​​ಐಆರ್​ ದಾಖಲಾಗಿದೆ. ಸಿಖ್​ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷೆ ಬಳಕೆ ಮಾಡಿದ್ದಕ್ಕಾಗಿ ಮುಂಬೈನಲ್ಲಿ ಎಫ್​ಐಆರ್ ದಾಖಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸ್​ ಅಧಿಕಾರಿ, ದೆಹಲಿ ಸಿಖ್​ ಗುರುದ್ವಾರ ಆಡಳಿತ ಮಂಡಳಿ ಉಪನಗರ ಖಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್​ 295ಎ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

  • FIR registered against actor Kangana Ranaut in Mumbai for allegedly portraying the farmers' protest as Khalistani movement and calling them 'Khalistanis' on social media pic.twitter.com/qjuBmsPzYX

    — ANI (@ANI) November 23, 2021 " class="align-text-top noRightClick twitterSection" data=" ">

ಕಂಗನಾ ರಣಾವತ್​​​ ರೈತರ ಪ್ರತಿಭಟನೆಯನ್ನ ಉದ್ದೇಶಪೂರ್ವಕವಾಗಿ ಖಾಲಿಸ್ತಾನ ಆಂದೋಲನಕ್ಕೆ ಹೋಲಿಕೆ ಮಾಡಿದ್ದು, ಸಿಖ್​ ಸಮುದಾಯವನ್ನ ಖಾಲಿಸ್ತಾನ ಉಗ್ರರು ಎಂದು ಕರೆದಿದ್ದರು. ಈ ವೇಳೆ 1984ರ ಸಿಖ್​ ವಿರೋಧಿ ದಂಗೆಯ ಬಗ್ಗೆ ಕೂಡ ಅವರು ಉಲ್ಲೇಖ ಮಾಡಿ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ: 'ಇಂದಿರಾಗಾಂಧಿ ಖಲಿಸ್ತಾನಿಗಳನ್ನು ಸೊಳ್ಳೆಗಳಂತೆ ಬಡಿದು ಹಾಕಿದರು': ಕಂಗನಾ ವಿರುದ್ಧ ದೂರು ದಾಖಲು

ಇದಕ್ಕೆ ಸಂಬಂಧಿಸಿದಂತೆ ಗುರುದ್ವಾರ ಮ್ಯಾನೇಜ್​ಮೆಂಟ್​ ಮಂಡಳಿ ಸದಸ್ಯ ಹಾಗೂ ಉದ್ಯಮಿ ಅಮರ್​ಜೀತ್​​ ಸಿಂಗ್​​ ಪ್ರಕರಣ ದಾಖಲು ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಮಾಡಿದ್ದಾರೆ. ಸಿಖ್​​ ಸಮುದಾಯದ ವಿರುದ್ಧ ವಿವಾದಿತ ಹೇಳಿಕೆ ನೀಡುತ್ತಿದ್ದಂತೆ ಕಂಗನಾ​​ ಅವರ ಮುಂಬೈ ನಿವಾಸಕ್ಕೆ ಬಿಗಿ ಪೊಲೀಸ್​ ಬಂದೋಬಸ್ತ್​ ನೀಡಲಾಗಿತ್ತು. ಇದರ ಬೆನ್ನಲ್ಲೇ ಅವರ ವಿರುದ್ಧ ದೂರು ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.