ETV Bharat / bharat

ಸಚಿವರಾಗ್ತಿದ್ದಂತೆ ಸಿಂಧಿಯಾ FB ಅಕೌಂಟ್‌ಗೆ ಕನ್ನ ಹಾಕಿದ ಹ್ಯಾಕರ್ಸ್‌: ಕಾಂಗ್ರೆಸ್​​ನ ಹಳೇ ವಿಡಿಯೋ ಅಪ್​ಲೋಡ್​ - ಸಿಂಧಿಯಾ ಫೇಸ್​ಬುಕ್ ಖಾತೆ

ನೂತನ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿರುವ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಫೇಸ್​ಬುಕ್ ಖಾತೆ ಹ್ಯಾಕ್ ಮಾಡಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

Jyotiraditya scindia
Jyotiraditya scindia
author img

By

Published : Jul 8, 2021, 9:26 PM IST

ನವದೆಹಲಿ: ಕೇಂದ್ರ ವಿಮಾನಯಾನ ಖಾತೆ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಫೇಸ್​ಬುಕ್​​ ಅಕೌಂಟ್​ ಹ್ಯಾಕ್ ಆಗಿದೆ. ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ.

ಅವರ ಫೇಸ್​ಬುಕ್​​ ಅಕೌಂಟ್​ ಹ್ಯಾಕ್​ ಮಾಡಿರುವ ದುಷ್ಕರ್ಮಿಗಳು ಅದರಲ್ಲಿ ಕಾಂಗ್ರೆಸ್​ನ ಹಳೇ ವಿಡಿಯೋ ಹಾಕಿದ್ದಾರೆ. ಇದರ ಬಗ್ಗೆ ಸಿಂಧಿಯಾ ಅವರ ಸೋಶಿಯಲ್ ಮೀಡಿಯಾಗೆ ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಂಡು ಹಳೇ ವಿಡಿಯೋ ಡಿಲೀಟ್​ ಮಾಡಿದ್ದಾರೆ. ಜತೆಗೆ ಪೇಜ್​​ ರಿಕವರಿ ಮಾಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗ್ವಾಲಿಯರ್​ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, ನಿನ್ನೆ ತಡರಾತ್ರಿ 12:14ಕ್ಕೆ ಫೇಸ್​ಬುಕ್ ಖಾತೆ ಹ್ಯಾಕ್​ ಮಾಡಲಾಗಿದ್ದು, ಅವರು ಈ ಹಿಂದೆ ಕಾಂಗ್ರೆಸ್​ ಪಕ್ಷದಲ್ಲಿದ್ದ ಸಮಯದಲ್ಲಿನ ಕೆಲವೊಂದು ವಿಡಿಯೋ ಶೇರ್ ಮಾಡಿದ್ದಾರೆ.

ಇದನ್ನೂ ಓದಿರಿ: Tokyo Olympics ಈ ಬಾರಿ ಪ್ರೇಕ್ಷಕರಿಲ್ಲದೆ ನಡೆಯಲಿದೆ ಜಾಗತಿಕ ಕ್ರೀಡೋತ್ಸವ

2020 ರ ಮಾರ್ಚ್​ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಸಿಂಧಿಯಾ ಬಿಜೆಪಿ ಸೇರಿದ್ದ ಬೆನ್ನಲ್ಲೇ ಮಧ್ಯಪ್ರದೇಶ ಕಾಂಗ್ರೆಸ್ ನ 22 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಪತನಗೊಳ್ಳುವಂತೆ ಮಾಡಿದ್ದರು. ಇದೀಗ ಅವರಿಗೆ ಕೇಂದ್ರದಲ್ಲಿ ಮಹತ್ವದ ಸಚಿವ ಸ್ಥಾನ ನೀಡಲಾಗಿದೆ.

ನವದೆಹಲಿ: ಕೇಂದ್ರ ವಿಮಾನಯಾನ ಖಾತೆ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಫೇಸ್​ಬುಕ್​​ ಅಕೌಂಟ್​ ಹ್ಯಾಕ್ ಆಗಿದೆ. ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ.

ಅವರ ಫೇಸ್​ಬುಕ್​​ ಅಕೌಂಟ್​ ಹ್ಯಾಕ್​ ಮಾಡಿರುವ ದುಷ್ಕರ್ಮಿಗಳು ಅದರಲ್ಲಿ ಕಾಂಗ್ರೆಸ್​ನ ಹಳೇ ವಿಡಿಯೋ ಹಾಕಿದ್ದಾರೆ. ಇದರ ಬಗ್ಗೆ ಸಿಂಧಿಯಾ ಅವರ ಸೋಶಿಯಲ್ ಮೀಡಿಯಾಗೆ ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಂಡು ಹಳೇ ವಿಡಿಯೋ ಡಿಲೀಟ್​ ಮಾಡಿದ್ದಾರೆ. ಜತೆಗೆ ಪೇಜ್​​ ರಿಕವರಿ ಮಾಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗ್ವಾಲಿಯರ್​ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, ನಿನ್ನೆ ತಡರಾತ್ರಿ 12:14ಕ್ಕೆ ಫೇಸ್​ಬುಕ್ ಖಾತೆ ಹ್ಯಾಕ್​ ಮಾಡಲಾಗಿದ್ದು, ಅವರು ಈ ಹಿಂದೆ ಕಾಂಗ್ರೆಸ್​ ಪಕ್ಷದಲ್ಲಿದ್ದ ಸಮಯದಲ್ಲಿನ ಕೆಲವೊಂದು ವಿಡಿಯೋ ಶೇರ್ ಮಾಡಿದ್ದಾರೆ.

ಇದನ್ನೂ ಓದಿರಿ: Tokyo Olympics ಈ ಬಾರಿ ಪ್ರೇಕ್ಷಕರಿಲ್ಲದೆ ನಡೆಯಲಿದೆ ಜಾಗತಿಕ ಕ್ರೀಡೋತ್ಸವ

2020 ರ ಮಾರ್ಚ್​ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಸಿಂಧಿಯಾ ಬಿಜೆಪಿ ಸೇರಿದ್ದ ಬೆನ್ನಲ್ಲೇ ಮಧ್ಯಪ್ರದೇಶ ಕಾಂಗ್ರೆಸ್ ನ 22 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಪತನಗೊಳ್ಳುವಂತೆ ಮಾಡಿದ್ದರು. ಇದೀಗ ಅವರಿಗೆ ಕೇಂದ್ರದಲ್ಲಿ ಮಹತ್ವದ ಸಚಿವ ಸ್ಥಾನ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.