ETV Bharat / bharat

ಜಮ್ಮು ಕಾಶ್ಮೀರದಲ್ಲಿ ನಿಗೂಢ ಸ್ಫೋಟ: ಇಬ್ಬರು ಯೋಧರು ಹುತಾತ್ಮ

author img

By

Published : Oct 31, 2021, 12:32 PM IST

ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿಯಿರುವ ನೌಶೇರಾ ಸೆಕ್ಟರ್​ನಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಲೆಫ್ಟಿನೆಂಟ್ ಸೇರಿದಂತೆ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

J&K: Army officer among two killed in mysterious blast along LoC
ಜಮ್ಮು ಕಾಶ್ಮೀರದಲ್ಲಿ ನಿಗೂಢ ಸ್ಫೋಟ: ಇಬ್ಬರು ಯೋಧರು ಹುತಾತ್ಮ

ನೌಶೇರಾ(ಜಮ್ಮು ಕಾಶ್ಮೀರ): ಗಡಿ ನಿಯಂತ್ರಣ ರೇಖೆ (ಎಲ್​ಒಸಿ) ಬಳಿ ಆದ ನಿಗೂಢ ಸ್ಫೋಟದಲ್ಲಿ ಭದ್ರತಾ ಪಡೆಯ ಇಬ್ಬರು ಹುತಾತ್ಮರಾಗಿದ್ದಾರೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಓರ್ವ ಯೋಧನಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್​ನಲ್ಲಿ ಘಟನೆ ಸಂಭವಿಸಿದ್ದು, ಲೆಫ್ಟಿನೆಂಟ್ ರಿಶಿ ಕುಮಾರ್ ಮತ್ತು ಸಿಪಾಯಿ ಮಂಜಿತ್ ಹುತಾತ್ಮರಾಗಿದ್ದಾರೆ. ನೌಶೇರಾದ ಲಾಮ್ ಸೆಕ್ಟರ್​ನಲ್ಲಿ ಗಸ್ತು ತಿರುಗುತ್ತಿರಬೇಕಾದರೆ ಸ್ಫೋಟ ಸಂಭವಿಸಿದೆ.

ಅಕ್ಟೋಬರ್ 30ರಂದು ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದು, ಓರ್ವನಿಗೆ ಗಾಯವಾಗಿದೆ. ಹುತಾತ್ಮರಾದ ಲೆ. ರಿಶಿ ಕುಮಾರ್ ಮತ್ತು ಸಿಪಾಯಿ ಮಂಜಿತ್​ ಧೈರ್ಯಶಾಲಿಗಳಾಗಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದರು.

ಲೆ.ರಿಶಿ ಕುಮಾರ್ ಬಿಹಾರದ ಬೆಗುಸರಾಯ್ ನಿವಾಸಿಯಾಗಿದ್ದು, ಸಿಪಾಯಿ ಮಂಜಿತ್​ ಸಿಂಗ್ ಪಂಜಾಬ್​ನ ಭಟಿಂಡಾ ಬಳಿಯ ಸಿರ್ವೆವಾಲಾ ನಿವಾಸಿಯಾಗಿದ್ದಾರೆ. ಈ ಘಟನೆ ಸಂಭವಿಸಿದ ಸ್ಥಳವನ್ನು ಸುತ್ತುವರಿಯಲಾಗಿದೆ ಎಂದು ಸೇನೆ ಹೇಳಿದೆ.

ಇದಕ್ಕೂ ಮುನ್ನ ಅಕ್ಟೋಬರ್ 11ರಂದು ರಜೌರಿಯ ಡಿಕೆಜಿ ಪ್ರದೇಶದಲ್ಲಿ ಭಯೋತ್ಪಾದನಾ ಕಾರ್ಯಾಚರಣೆಯಲ್ಲಿ ಜೂನಿಯರ್ ಕಮೀಷನ್ಡ್​ ಆಫೀಸರ್ (ಜೆಸಿಒ) ಸೇರಿದಂತೆ ಐವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು.

ಇದನ್ನೂ ಓದಿ:'ಕಂಬನಿದುಂಬಿ ಹೋದೆಯಾ ದೂರ..' ಯುವರತ್ನನಿಗೆ ಯಕ್ಷಗಾಯನ ನಮನ

ನೌಶೇರಾ(ಜಮ್ಮು ಕಾಶ್ಮೀರ): ಗಡಿ ನಿಯಂತ್ರಣ ರೇಖೆ (ಎಲ್​ಒಸಿ) ಬಳಿ ಆದ ನಿಗೂಢ ಸ್ಫೋಟದಲ್ಲಿ ಭದ್ರತಾ ಪಡೆಯ ಇಬ್ಬರು ಹುತಾತ್ಮರಾಗಿದ್ದಾರೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಓರ್ವ ಯೋಧನಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್​ನಲ್ಲಿ ಘಟನೆ ಸಂಭವಿಸಿದ್ದು, ಲೆಫ್ಟಿನೆಂಟ್ ರಿಶಿ ಕುಮಾರ್ ಮತ್ತು ಸಿಪಾಯಿ ಮಂಜಿತ್ ಹುತಾತ್ಮರಾಗಿದ್ದಾರೆ. ನೌಶೇರಾದ ಲಾಮ್ ಸೆಕ್ಟರ್​ನಲ್ಲಿ ಗಸ್ತು ತಿರುಗುತ್ತಿರಬೇಕಾದರೆ ಸ್ಫೋಟ ಸಂಭವಿಸಿದೆ.

ಅಕ್ಟೋಬರ್ 30ರಂದು ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದು, ಓರ್ವನಿಗೆ ಗಾಯವಾಗಿದೆ. ಹುತಾತ್ಮರಾದ ಲೆ. ರಿಶಿ ಕುಮಾರ್ ಮತ್ತು ಸಿಪಾಯಿ ಮಂಜಿತ್​ ಧೈರ್ಯಶಾಲಿಗಳಾಗಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದರು.

ಲೆ.ರಿಶಿ ಕುಮಾರ್ ಬಿಹಾರದ ಬೆಗುಸರಾಯ್ ನಿವಾಸಿಯಾಗಿದ್ದು, ಸಿಪಾಯಿ ಮಂಜಿತ್​ ಸಿಂಗ್ ಪಂಜಾಬ್​ನ ಭಟಿಂಡಾ ಬಳಿಯ ಸಿರ್ವೆವಾಲಾ ನಿವಾಸಿಯಾಗಿದ್ದಾರೆ. ಈ ಘಟನೆ ಸಂಭವಿಸಿದ ಸ್ಥಳವನ್ನು ಸುತ್ತುವರಿಯಲಾಗಿದೆ ಎಂದು ಸೇನೆ ಹೇಳಿದೆ.

ಇದಕ್ಕೂ ಮುನ್ನ ಅಕ್ಟೋಬರ್ 11ರಂದು ರಜೌರಿಯ ಡಿಕೆಜಿ ಪ್ರದೇಶದಲ್ಲಿ ಭಯೋತ್ಪಾದನಾ ಕಾರ್ಯಾಚರಣೆಯಲ್ಲಿ ಜೂನಿಯರ್ ಕಮೀಷನ್ಡ್​ ಆಫೀಸರ್ (ಜೆಸಿಒ) ಸೇರಿದಂತೆ ಐವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು.

ಇದನ್ನೂ ಓದಿ:'ಕಂಬನಿದುಂಬಿ ಹೋದೆಯಾ ದೂರ..' ಯುವರತ್ನನಿಗೆ ಯಕ್ಷಗಾಯನ ನಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.