ETV Bharat / bharat

ವಿವಾಹಿತ ಮಹಿಳೆಯ ಪ್ರೀತಿಸಿ ಹತ್ಯೆ; ಕುಟುಂಬದವರಿಂದ ಲವ್‌ ಜಿಹಾದ್‌ ಆರೋಪ - etv bharat kannada

ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಕೊಲೆಯ ಹಿಂದಿನ ಕಾರಣ ತಿಳಿಯಲಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

murder
ಕೊಲೆ
author img

By

Published : Jan 16, 2023, 11:43 AM IST

ರಾಮಗಢ(ಜಾರ್ಖಂಡ್): ಜಾರ್ಖಂಡ್​ನ ರಾಮಗಢ ಜಿಲ್ಲೆಯಲ್ಲಿ ವಿವಾಹಿತ ಮಹಿಳೆಯನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಮಮತಾದೇವಿ ಎಂದು ಗುರುತಿಸಲಾಗಿದೆ. ಜನವರಿ 14 ರಂದು ಮಮತಾದೇವಿ ತನ್ನ ಸಹೋದರಿ ಜಯಾ ಮತ್ತು ಭಾವ ನಿಖಿಲ್​ ಕುಶ್ವಾಹಾ ಅವರೊಂದಿಗೆ ದೆಹಲಿಯಿಂದ ರಾಮಗಢಕ್ಕೆ ಬಂದಿದ್ದರು. ಅದೇ ದಿನ ಮಮತಾ ಪ್ರಿಯಕರ ಅರ್ಮಾನ್​ ಖಾನ್​ ಅಲಿಯಾಸ್​ ರಾಕಿ ಕೂಡ ಬಂದಿದ್ದು, ಬಾಡಿಗೆ ಮನೆಯೊಂದರಲ್ಲಿ ತಂಗಿದ್ದ.

ನಿನ್ನೆ ಸಂಜೆ ಜಯಾ ಮತ್ತು ನಿಖಿಲ್​ ದಿನಸಿ ಖರೀದಿಸಲೆಂದು ಮಾರುಕಟ್ಟೆಗೆ ತೆರಳಿದ್ದರು. ಮನೆಗೆ ಹಿಂದಿರುಗಿದಾಗ ಮಮತಾ ದೇಹದಲ್ಲಿ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಸಾಧ್ಯವಾಗದ ಕಾರಣ ಆಕೆಯನ್ನು ರಾಮಗಢದ ಸದರ್​ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಾಗಲೇ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಲವ್​ ಜಿಹಾದ್​?: ಹಜಾರಿಬಾಗ್​ ನಿವಾಸಿ ಅರ್ಮಾನ್ ಖಾನ್​ ಅಲಿಯಾಸ್​ ರಾಕಿ ನನ್ನ ತಂಗಿಯನ್ನು ಪ್ರೀತಿಯಲ್ಲಿ ಬೀಳಿಸಿದ್ದ. ಆತನೇ ಕೊಲೆ ಮಾಡಿರುವುದಾಗಿ ಮಮತಾದೇವಿ ಸಹೋದರಿ ಜಯಾ ಹೇಳಿದ್ದಾರೆ. ಅಲ್ಲದೇ, ಇದು ಲವ್​ ಜಿಹಾದ್​ ಪ್ರಕರಣವೆಂದು ಆರೋಪಿಸಿದ್ದಾರೆ. 'ನನ್ನ ತಂಗಿ ಮಮತಾ ಆಕೆಯ ಪತಿಯೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದಳು. ಆದರೆ ಕಳೆದ 1 ವರ್ಷದಿಂದ ರಾಕಿ ಎಂಬ ಹೆಸರು ಹೇಳಿಕೊಂಡು ಅರ್ಮಾನ್​​ ನನ್ನ ತಂಗಿಯ ಜೊತೆ ಸಂಬಂಧ ಇಟ್ಟುಕೊಂಡಿದ್ದ. ನಿರಂತರವಾಗಿ ಅವರಿಬ್ಬರು ಫೋನಿನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಕೂಡ ಶುರುವಾಗಿತ್ತು. ಇದನ್ನೇ ಅಸ್ತ್ರವಾಗಿಟ್ಟುಕೊಂಡ ಅರ್ಮಾನ್​ ತನ್ನ ಬಳಿಗೆ ಬರುವಂತೆ ಪದೇ ಪದೇ ಮಮತಾಳಿಗೆ ಹೇಳುತ್ತಿದ್ದ. ಅಲ್ಲದೇ ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದ. ಈಗ ಆತನೇ ನನ್ನ ತಂಗಿಯನ್ನು ಕೊಂದು ಪರಾರಿಯಾಗಿದ್ದಾನೆ' ಎಂದು ಹೇಳಿದ್ದಾರೆ.

ಪೊಲೀಸರ ಪ್ರತಿಕ್ರಿಯೆ: ಮಮತಾ ಅವರ ಕಣ್ಣಿನ ಬಳಿ ಚೂಪಾದ ವಸ್ತುವಿನಿಂದ ಪೆಟ್ಟು ಬಿದ್ದಿದ್ದು, ಇದರಿಂದ ಆಕೆ ಸಾವನ್ನಪ್ಪಿರುವುದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ. ಶವವನ್ನು ಈಗಾಗಲೇ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಕೊಲೆಗೆ ನಿಜ ಕಾರಣ ತಿಳಿಯಲಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮೃತಳ ಮನೆಯವರ ಹೇಳಿಕೆಯಂತೆ ಅರ್ಮಾನ್​ ಖಾನ್​ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ರೈಲ್ವೆಯಲ್ಲಿ ಖಾಸಗಿ ಗುತ್ತಿಗೆದಾರರಿಗೆ ಲಾಭ ಮಾಡಲು ಲಂಚ: ಹಿರಿಯ ಅಧಿಕಾರಿ, ಹವಾಲಾ ಆಪರೇಟರ್​​ ಸೇರಿ 7 ಜನರ ಸೆರೆ

ರಾಮಗಢ(ಜಾರ್ಖಂಡ್): ಜಾರ್ಖಂಡ್​ನ ರಾಮಗಢ ಜಿಲ್ಲೆಯಲ್ಲಿ ವಿವಾಹಿತ ಮಹಿಳೆಯನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಮಮತಾದೇವಿ ಎಂದು ಗುರುತಿಸಲಾಗಿದೆ. ಜನವರಿ 14 ರಂದು ಮಮತಾದೇವಿ ತನ್ನ ಸಹೋದರಿ ಜಯಾ ಮತ್ತು ಭಾವ ನಿಖಿಲ್​ ಕುಶ್ವಾಹಾ ಅವರೊಂದಿಗೆ ದೆಹಲಿಯಿಂದ ರಾಮಗಢಕ್ಕೆ ಬಂದಿದ್ದರು. ಅದೇ ದಿನ ಮಮತಾ ಪ್ರಿಯಕರ ಅರ್ಮಾನ್​ ಖಾನ್​ ಅಲಿಯಾಸ್​ ರಾಕಿ ಕೂಡ ಬಂದಿದ್ದು, ಬಾಡಿಗೆ ಮನೆಯೊಂದರಲ್ಲಿ ತಂಗಿದ್ದ.

ನಿನ್ನೆ ಸಂಜೆ ಜಯಾ ಮತ್ತು ನಿಖಿಲ್​ ದಿನಸಿ ಖರೀದಿಸಲೆಂದು ಮಾರುಕಟ್ಟೆಗೆ ತೆರಳಿದ್ದರು. ಮನೆಗೆ ಹಿಂದಿರುಗಿದಾಗ ಮಮತಾ ದೇಹದಲ್ಲಿ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಸಾಧ್ಯವಾಗದ ಕಾರಣ ಆಕೆಯನ್ನು ರಾಮಗಢದ ಸದರ್​ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಾಗಲೇ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಲವ್​ ಜಿಹಾದ್​?: ಹಜಾರಿಬಾಗ್​ ನಿವಾಸಿ ಅರ್ಮಾನ್ ಖಾನ್​ ಅಲಿಯಾಸ್​ ರಾಕಿ ನನ್ನ ತಂಗಿಯನ್ನು ಪ್ರೀತಿಯಲ್ಲಿ ಬೀಳಿಸಿದ್ದ. ಆತನೇ ಕೊಲೆ ಮಾಡಿರುವುದಾಗಿ ಮಮತಾದೇವಿ ಸಹೋದರಿ ಜಯಾ ಹೇಳಿದ್ದಾರೆ. ಅಲ್ಲದೇ, ಇದು ಲವ್​ ಜಿಹಾದ್​ ಪ್ರಕರಣವೆಂದು ಆರೋಪಿಸಿದ್ದಾರೆ. 'ನನ್ನ ತಂಗಿ ಮಮತಾ ಆಕೆಯ ಪತಿಯೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದಳು. ಆದರೆ ಕಳೆದ 1 ವರ್ಷದಿಂದ ರಾಕಿ ಎಂಬ ಹೆಸರು ಹೇಳಿಕೊಂಡು ಅರ್ಮಾನ್​​ ನನ್ನ ತಂಗಿಯ ಜೊತೆ ಸಂಬಂಧ ಇಟ್ಟುಕೊಂಡಿದ್ದ. ನಿರಂತರವಾಗಿ ಅವರಿಬ್ಬರು ಫೋನಿನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಕೂಡ ಶುರುವಾಗಿತ್ತು. ಇದನ್ನೇ ಅಸ್ತ್ರವಾಗಿಟ್ಟುಕೊಂಡ ಅರ್ಮಾನ್​ ತನ್ನ ಬಳಿಗೆ ಬರುವಂತೆ ಪದೇ ಪದೇ ಮಮತಾಳಿಗೆ ಹೇಳುತ್ತಿದ್ದ. ಅಲ್ಲದೇ ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದ. ಈಗ ಆತನೇ ನನ್ನ ತಂಗಿಯನ್ನು ಕೊಂದು ಪರಾರಿಯಾಗಿದ್ದಾನೆ' ಎಂದು ಹೇಳಿದ್ದಾರೆ.

ಪೊಲೀಸರ ಪ್ರತಿಕ್ರಿಯೆ: ಮಮತಾ ಅವರ ಕಣ್ಣಿನ ಬಳಿ ಚೂಪಾದ ವಸ್ತುವಿನಿಂದ ಪೆಟ್ಟು ಬಿದ್ದಿದ್ದು, ಇದರಿಂದ ಆಕೆ ಸಾವನ್ನಪ್ಪಿರುವುದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ. ಶವವನ್ನು ಈಗಾಗಲೇ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಕೊಲೆಗೆ ನಿಜ ಕಾರಣ ತಿಳಿಯಲಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮೃತಳ ಮನೆಯವರ ಹೇಳಿಕೆಯಂತೆ ಅರ್ಮಾನ್​ ಖಾನ್​ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ರೈಲ್ವೆಯಲ್ಲಿ ಖಾಸಗಿ ಗುತ್ತಿಗೆದಾರರಿಗೆ ಲಾಭ ಮಾಡಲು ಲಂಚ: ಹಿರಿಯ ಅಧಿಕಾರಿ, ಹವಾಲಾ ಆಪರೇಟರ್​​ ಸೇರಿ 7 ಜನರ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.