ETV Bharat / bharat

ಪುಲ್ವಾಮದಲ್ಲಿ ಬಿಜೆಪಿ ಮುಖಂಡನನ್ನು ಹತ್ಯೆಗೈದ ಉಗ್ರರು

author img

By

Published : Jun 3, 2021, 4:00 AM IST

ರಾಕೇಶ್ ಪಂಡಿತ ಎಂಬ ಬಿಜೆಪಿ ಕೌನ್ಸಿಲರ್​ ತಮ್ಮ ಮನೆಯಲ್ಲಿದ್ದಾಗಲೇ ಬುಧವಾರ ಸಂಜೆ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಈ ದಾಳಿಯಲ್ಲಿ ಮಹಿಳೆಯೊಬ್ಬರೂ ಗಾಯಗೊಂಡಿದ್ದಾರೆ. ಮಹಿಳೆಯನ್ನು ಪಂಡಿತ್​ರ ಸ್ನೇಹಿತನ ಮಗಳೆಂದು ತಿಳಿದುಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪುಲ್ವಾಮದಲ್ಲಿ ಬಿಜೆಪಿ ಮುಖಂಡನನ್ನು ಗುಂಡಿಟ್ಟಿ ಕೊಂದ ಉಗ್ರರು
ಪುಲ್ವಾಮದಲ್ಲಿ ಬಿಜೆಪಿ ಮುಖಂಡನನ್ನು ಗುಂಡಿಟ್ಟಿ ಕೊಂದ ಉಗ್ರರು

ಶ್ರೀನಗರ: ಜಮ್ಮು- ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಉಗ್ರರು ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬುಧವಾರ ನಡೆದಿದೆ..

ರಾಕೇಶ್ ಪಂಡಿತ ಎಂಬ ಬಿಜೆಪಿ ಕೌನ್ಸಿಲರ್​ ತಮ್ಮ ಮನೆಯಲ್ಲಿದ್ದಾಗಲೇ ಬುಧವಾರ ಸಂಜೆ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಈ ದಾಳಿಯಲ್ಲಿ ಮಹಿಳೆಯೊಬ್ಬರೂ ಗಾಯಗೊಂಡಿದ್ದಾರೆ. ಮಹಿಳೆಯನ್ನು ಪಂಡಿತ್​ರ ಸ್ನೇಹಿತನ ಮಗಳೆಂದು ತಿಳಿದುಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

" ರಾತ್ರಿ 10 ರ ಸುಮಾರಿಗೆ, ಸ್ಥಳೀಯ ಬಿಜೆಪಿ ಮುಖಂಡ ರಾಕೇಶ್ ಪಂಡಿತ್ ಮೇಲೆ ಟ್ರಾಲ್​ನಲ್ಲಿರುವ ಅವರ ಮನೆಯ ಹೊರಗಡೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ಸಮಯದಲ್ಲಿ ಪಂಡಿತ್​ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಪುಲ್ವಾಮಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ" ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪಂಡಿತ್ ಹತ್ಯೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಪಂಡಿತ್ ಟ್ರಾಲ್​ನ ಮುನ್ಸಿಪಲ್ ಕೌನ್ಸಿಲರ್​ ಆಗಿದ್ದರು. ಅಲ್ಲದೆ ಅವರು ಕಾಶ್ಮೀರಿ ಪಂಡಿತರ ಏಕೈಕ ನಾಯಕರಾಗಿದ್ದರು. ಕಳೆದ ವಾರ ಅವರ ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ಅವರು ಟ್ರಾಲ್​ಗೆ ಆಗಮಿಸಿದ್ದರು ಎಂದು ಬಿಜೆಪಿ ವಕ್ತಾರ ಮಂಜೂರ್​ ಭಟ್​ ಹೇಳಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಮತ್ತು ಸಿಆರ್‌ಪಿಎಫ್ ಪಡೆ ಧಾವಿಸಿ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದೆ. ಮೂವರು ಉಗ್ರರು ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇದನ್ನು ಒದಿ:ಸಾಗರ್ ಧಂಕರ್ ಹತ್ಯೆ ಕೇಸ್​: ಸುಶೀಲ್ ಕುಮಾರ್& ಸಹಚರನಿಗೆ 14 ದಿನ ನ್ಯಾಯಾಂಗ ಬಂಧನ

ಶ್ರೀನಗರ: ಜಮ್ಮು- ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಉಗ್ರರು ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬುಧವಾರ ನಡೆದಿದೆ..

ರಾಕೇಶ್ ಪಂಡಿತ ಎಂಬ ಬಿಜೆಪಿ ಕೌನ್ಸಿಲರ್​ ತಮ್ಮ ಮನೆಯಲ್ಲಿದ್ದಾಗಲೇ ಬುಧವಾರ ಸಂಜೆ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಈ ದಾಳಿಯಲ್ಲಿ ಮಹಿಳೆಯೊಬ್ಬರೂ ಗಾಯಗೊಂಡಿದ್ದಾರೆ. ಮಹಿಳೆಯನ್ನು ಪಂಡಿತ್​ರ ಸ್ನೇಹಿತನ ಮಗಳೆಂದು ತಿಳಿದುಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

" ರಾತ್ರಿ 10 ರ ಸುಮಾರಿಗೆ, ಸ್ಥಳೀಯ ಬಿಜೆಪಿ ಮುಖಂಡ ರಾಕೇಶ್ ಪಂಡಿತ್ ಮೇಲೆ ಟ್ರಾಲ್​ನಲ್ಲಿರುವ ಅವರ ಮನೆಯ ಹೊರಗಡೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ಸಮಯದಲ್ಲಿ ಪಂಡಿತ್​ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಪುಲ್ವಾಮಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ" ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪಂಡಿತ್ ಹತ್ಯೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಪಂಡಿತ್ ಟ್ರಾಲ್​ನ ಮುನ್ಸಿಪಲ್ ಕೌನ್ಸಿಲರ್​ ಆಗಿದ್ದರು. ಅಲ್ಲದೆ ಅವರು ಕಾಶ್ಮೀರಿ ಪಂಡಿತರ ಏಕೈಕ ನಾಯಕರಾಗಿದ್ದರು. ಕಳೆದ ವಾರ ಅವರ ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ಅವರು ಟ್ರಾಲ್​ಗೆ ಆಗಮಿಸಿದ್ದರು ಎಂದು ಬಿಜೆಪಿ ವಕ್ತಾರ ಮಂಜೂರ್​ ಭಟ್​ ಹೇಳಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಮತ್ತು ಸಿಆರ್‌ಪಿಎಫ್ ಪಡೆ ಧಾವಿಸಿ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದೆ. ಮೂವರು ಉಗ್ರರು ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇದನ್ನು ಒದಿ:ಸಾಗರ್ ಧಂಕರ್ ಹತ್ಯೆ ಕೇಸ್​: ಸುಶೀಲ್ ಕುಮಾರ್& ಸಹಚರನಿಗೆ 14 ದಿನ ನ್ಯಾಯಾಂಗ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.