ETV Bharat / bharat

ಉಕ್ರೇನ್​ನಿಂದ​ ಹಂಗೇರಿ ದೇಶಕ್ಕೆ ತಲುಪಲು ವಿದ್ಯಾರ್ಥಿಗಳಿಗೆ ಸೂಚನೆ: 'ಆಪರೇಷನ್ ಗಂಗಾ' ಕೊನೆ ಹಂತ? - ಭಾರತೀಯ ರಾಯಭಾರಿ ಕಚೇರಿ

ಈ ಬಗ್ಗೆ ಹಂಗೇರಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಭಾನುವಾರ ಮಧ್ಯಾಹ್ನ ಎರಡು ಸರಣಿ ಟ್ವೀಟ್‌ಗಳನ್ನು ಮಾಡಿದೆ. ಬುಡಾಪೆಸ್ಟ್‌ನಲ್ಲಿರುವ ಹಂಗೇರಿಯಾ ಸಿಟಿ ಸೆಂಟರ್‌ಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 12ರೊಳಗೆ ಬಂದು ತಲುಪುವಂತೆ ಉಕ್ರೇನ್​​ನಲ್ಲಿರುವ ವಿದ್ಯಾರ್ಥಿಗಳಿಗೆ ಸೂಚಿಸಿತ್ತು.

ಯುದ್ಧ ಪೀಡಿತ ಉಕ್ರೇನ್‌
ಯುದ್ಧ ಪೀಡಿತ ಉಕ್ರೇನ್‌
author img

By

Published : Mar 6, 2022, 7:19 PM IST

ಹೊಸದಿಲ್ಲಿ: ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಭಾರತವು ಕೊನೆಯ ಹಂತದ ಕಾರ್ಯಾಚರಣೆ ನಡೆಸುತ್ತಿದ್ದು, ಹಂಗೇರಿ ದೇಶದ ಬುಡಾಪೆಸ್ಟ್‌ಗೆ ಬಂದು ತಲುಪುವಂತೆ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಉಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರಿರುವ ಕಾರಣ ಉಕ್ರೇನ್​ ನಲುಗಿ ಹೋಗಿದೆ. ಇಲ್ಲಿ ನೆಲೆಸಿರುವ ಭಾರತದ ವಿದ್ಯಾರ್ಥಿಗಳನ್ನು ತವರಿಗೆ ಕರೆತರಲು ಕೇಂದ್ರ ಸರ್ಕಾರ 'ಆಪರೇಷನ್ ಗಂಗಾ' ಶುರುಮಾಡಿದೆ. ಈಗ ಕಾರ್ಯಾಚರಣೆಯು ಕೊನೆಯ ಹಂತಕ್ಕೆ ಬಂದಿದೆ. ಈ ಬಗ್ಗೆ ಹಂಗೇರಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾನುವಾರ ಮಧ್ಯಾಹ್ನ ಎರಡು ಸರಣಿ ಟ್ವೀಟ್‌ಗಳನ್ನು ಮಾಡಿದೆ. ಬುಡಾಪೆಸ್ಟ್‌ನಲ್ಲಿರುವ ಹಂಗೇರಿಯಾ ಸಿಟಿ ಸೆಂಟರ್‌ಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 12ರೊಳಗೆ ಬಂದು ತಲುಪುವಂತೆ ಉಕ್ರೇನ್​​ನಲ್ಲಿರುವ ವಿದ್ಯಾರ್ಥಿಗಳಿಗೆ ಸೂಚಿಸಿತ್ತು.

ಯುದ್ಧ ಪೀಡಿತ ಉಕ್ರೇನ್‌
indian

ಪ್ರಮುಖ ಪ್ರಕಟಣೆ ಹೆಸರಲ್ಲಿ ಭಾರತೀಯ ರಾಯಭಾರ ಕಚೇರಿ ಟ್ವೀಟ್​ ಮಾಡಿ, ಆಪರೇಷನ್ ಗಂಗಾ ವಿಮಾನಗಳ ಹಾರಾಟದ ಕೊನೆಯ ಹಂತ ಪ್ರಾರಂಭಿಸುತ್ತದೆ. ರಾಯಭಾರ ಕಚೇರಿಯಿಂದ ವ್ಯವಸ್ಥೆ ಮಾಡಿರುವುದನ್ನು ಹೊರತುಪಡಿಸಿ ಉಳಿದ ಕಡೆ ಇರುವ ಎಲ್ಲ ವಿದ್ಯಾರ್ಥಿಗಳು @Hungariacitycentre, Rakoczi Ut 90, Budapestಗೆ 10ರಿಂದ ಮಧ್ಯಾಹ್ನ 12ರೊಳಗೆ ತಲುಪಲು ಮನವಿ ಮಾಡಲಾಗಿದೆ ಎಂದು ತಿಳಿಸಿದೆ.

  • Important Announcement: Embassy of India begins its last leg of Operation Ganga flights today. All those students staying in their OWN accommodation ( other than arranged by Embassy) are requested to reach @Hungariacitycentre , Rakoczi Ut 90, Budapest between 10 am-12 pm

    — Indian Embassy in Hungary (@IndiaInHungary) March 6, 2022 " class="align-text-top noRightClick twitterSection" data=" ">

ಇದನ್ನೂ ಓದಿ: ರಷ್ಯಾ-ಉಕ್ರೇನ್​ ಯುದ್ಧ: ಸಂಧಾನಕ್ಕೆ ಇಸ್ರೇಲ್​ ಪ್ರಯತ್ನ

ಮತ್ತೊಂದು ಟ್ವೀಟ್‌ನಲ್ಲಿ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳಿಗಾಗಿ ವಿವರವಾದ ಗೂಗಲ್ ಫಾರ್ಮ್ ಭರ್ತಿ ಮಾಡಬೇಕೆಂದು ಸೂಚಿಸಲಾಗಿದೆ. ಇದರ ಜತೆಗೆ ಗೂಗಲ್ ಫಾರ್ಮ್ ಲಿಂಕ್ ಅನ್ನೂ ಪೋಸ್ಟ್ ಮಾಡಲಾಗಿದೆ. 'ಉಕ್ರೇನ್‌ನಲ್ಲಿ ಇನ್ನೂ ಉಳಿದಿರುವ ಎಲ್ಲಾ ಭಾರತೀಯ ಪ್ರಜೆಗಳು ಲಗತ್ತಿಸಲಾದ ಗೂಗಲ್ ಫಾರ್ಮ್‌ನಲ್ಲಿರುವ ವಿವರಗಳನ್ನು ತುರ್ತಾಗಿ ತುಂಬಬೇಕು. ಎಲ್ಲರೂ ಸುರಕ್ಷಿತ ಮತ್ತು ಧೈರ್ಯವಾಗಿರಿ ಎಂದು ಎರಡನೇ ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಸಿಲುಕಿದ್ದ ಬಹುತೇಕ ಎಲ್ಲಾ ಭಾರತೀಯರು ಸ್ಥಳಾಂತರವಾಗಿ ಅದನ್ನು ತೊರೆದಿದ್ದಾರೆ. ಸುಮಿಯಲ್ಲಿ ಸಂಘರ್ಷ ಇನ್ನೂ ನಡೆಯುತ್ತಿರುವುದರಿಂದ ಅಲ್ಲಿಂದ ನಾಗರಿಕರ ಸ್ಥಳಾಂತರಿಸುವುದು ಸವಾಲಾಗಿದೆ. ಈ ಬಗ್ಗೆ ಹೆಚ್ಚಿನ ಗಮನ ಕೊಡಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶನಿವಾರ ಹೇಳಿತ್ತು.

ಹೊಸದಿಲ್ಲಿ: ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಭಾರತವು ಕೊನೆಯ ಹಂತದ ಕಾರ್ಯಾಚರಣೆ ನಡೆಸುತ್ತಿದ್ದು, ಹಂಗೇರಿ ದೇಶದ ಬುಡಾಪೆಸ್ಟ್‌ಗೆ ಬಂದು ತಲುಪುವಂತೆ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಉಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರಿರುವ ಕಾರಣ ಉಕ್ರೇನ್​ ನಲುಗಿ ಹೋಗಿದೆ. ಇಲ್ಲಿ ನೆಲೆಸಿರುವ ಭಾರತದ ವಿದ್ಯಾರ್ಥಿಗಳನ್ನು ತವರಿಗೆ ಕರೆತರಲು ಕೇಂದ್ರ ಸರ್ಕಾರ 'ಆಪರೇಷನ್ ಗಂಗಾ' ಶುರುಮಾಡಿದೆ. ಈಗ ಕಾರ್ಯಾಚರಣೆಯು ಕೊನೆಯ ಹಂತಕ್ಕೆ ಬಂದಿದೆ. ಈ ಬಗ್ಗೆ ಹಂಗೇರಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾನುವಾರ ಮಧ್ಯಾಹ್ನ ಎರಡು ಸರಣಿ ಟ್ವೀಟ್‌ಗಳನ್ನು ಮಾಡಿದೆ. ಬುಡಾಪೆಸ್ಟ್‌ನಲ್ಲಿರುವ ಹಂಗೇರಿಯಾ ಸಿಟಿ ಸೆಂಟರ್‌ಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 12ರೊಳಗೆ ಬಂದು ತಲುಪುವಂತೆ ಉಕ್ರೇನ್​​ನಲ್ಲಿರುವ ವಿದ್ಯಾರ್ಥಿಗಳಿಗೆ ಸೂಚಿಸಿತ್ತು.

ಯುದ್ಧ ಪೀಡಿತ ಉಕ್ರೇನ್‌
indian

ಪ್ರಮುಖ ಪ್ರಕಟಣೆ ಹೆಸರಲ್ಲಿ ಭಾರತೀಯ ರಾಯಭಾರ ಕಚೇರಿ ಟ್ವೀಟ್​ ಮಾಡಿ, ಆಪರೇಷನ್ ಗಂಗಾ ವಿಮಾನಗಳ ಹಾರಾಟದ ಕೊನೆಯ ಹಂತ ಪ್ರಾರಂಭಿಸುತ್ತದೆ. ರಾಯಭಾರ ಕಚೇರಿಯಿಂದ ವ್ಯವಸ್ಥೆ ಮಾಡಿರುವುದನ್ನು ಹೊರತುಪಡಿಸಿ ಉಳಿದ ಕಡೆ ಇರುವ ಎಲ್ಲ ವಿದ್ಯಾರ್ಥಿಗಳು @Hungariacitycentre, Rakoczi Ut 90, Budapestಗೆ 10ರಿಂದ ಮಧ್ಯಾಹ್ನ 12ರೊಳಗೆ ತಲುಪಲು ಮನವಿ ಮಾಡಲಾಗಿದೆ ಎಂದು ತಿಳಿಸಿದೆ.

  • Important Announcement: Embassy of India begins its last leg of Operation Ganga flights today. All those students staying in their OWN accommodation ( other than arranged by Embassy) are requested to reach @Hungariacitycentre , Rakoczi Ut 90, Budapest between 10 am-12 pm

    — Indian Embassy in Hungary (@IndiaInHungary) March 6, 2022 " class="align-text-top noRightClick twitterSection" data=" ">

ಇದನ್ನೂ ಓದಿ: ರಷ್ಯಾ-ಉಕ್ರೇನ್​ ಯುದ್ಧ: ಸಂಧಾನಕ್ಕೆ ಇಸ್ರೇಲ್​ ಪ್ರಯತ್ನ

ಮತ್ತೊಂದು ಟ್ವೀಟ್‌ನಲ್ಲಿ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳಿಗಾಗಿ ವಿವರವಾದ ಗೂಗಲ್ ಫಾರ್ಮ್ ಭರ್ತಿ ಮಾಡಬೇಕೆಂದು ಸೂಚಿಸಲಾಗಿದೆ. ಇದರ ಜತೆಗೆ ಗೂಗಲ್ ಫಾರ್ಮ್ ಲಿಂಕ್ ಅನ್ನೂ ಪೋಸ್ಟ್ ಮಾಡಲಾಗಿದೆ. 'ಉಕ್ರೇನ್‌ನಲ್ಲಿ ಇನ್ನೂ ಉಳಿದಿರುವ ಎಲ್ಲಾ ಭಾರತೀಯ ಪ್ರಜೆಗಳು ಲಗತ್ತಿಸಲಾದ ಗೂಗಲ್ ಫಾರ್ಮ್‌ನಲ್ಲಿರುವ ವಿವರಗಳನ್ನು ತುರ್ತಾಗಿ ತುಂಬಬೇಕು. ಎಲ್ಲರೂ ಸುರಕ್ಷಿತ ಮತ್ತು ಧೈರ್ಯವಾಗಿರಿ ಎಂದು ಎರಡನೇ ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಸಿಲುಕಿದ್ದ ಬಹುತೇಕ ಎಲ್ಲಾ ಭಾರತೀಯರು ಸ್ಥಳಾಂತರವಾಗಿ ಅದನ್ನು ತೊರೆದಿದ್ದಾರೆ. ಸುಮಿಯಲ್ಲಿ ಸಂಘರ್ಷ ಇನ್ನೂ ನಡೆಯುತ್ತಿರುವುದರಿಂದ ಅಲ್ಲಿಂದ ನಾಗರಿಕರ ಸ್ಥಳಾಂತರಿಸುವುದು ಸವಾಲಾಗಿದೆ. ಈ ಬಗ್ಗೆ ಹೆಚ್ಚಿನ ಗಮನ ಕೊಡಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶನಿವಾರ ಹೇಳಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.