ETV Bharat / bharat

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪನಾ ದಿನ: ಅತ್ಯಂತ ಹಳೆಯ ಪಕ್ಷಕ್ಕೆ 138ನೇ ವಾರ್ಷಿಕೋತ್ಸವ

author img

By ETV Bharat Karnataka Team

Published : Dec 28, 2023, 11:00 AM IST

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಡಿಸೆಂಬರ್ 28 ರಂದು ತನ್ನ 138ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ.

Indian National Congress Foundation Day
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪನಾ ದಿನ: ರಾಷ್ಟ್ರದ ಅತ್ಯಂತ ಹಳೆಯ ಪಕ್ಷದ 138ನೇ ವಾರ್ಷಿಕೋತ್ಸವ

ಹೈದರಾಬಾದ್: 1885ರಲ್ಲಿ ಸ್ಥಾಪನೆಯಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ (INC) ಭಾರತದ ರಾಜಕೀಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ಗಳಿಸಿದೆ. ಭಾರತೀಯ ವಿದ್ಯಾವಂತ ನಾಗರಿಕ ಮತ್ತು ರಾಜಕೀಯ ಸಂವಾದಕ್ಕೆ ಪೂರಕವಾದ ವೇದಿಕೆಗೆ ಅಡಿಪಾಯ ಹಾಕಿದವರು ನಿವೃತ್ತ ಬ್ರಿಟಿಷ್ ಇಂಡಿಯನ್ ಸಿವಿಲ್ ಸರ್ವಿಸ್ ಅಧಿಕಾರಿ ಅಲನ್ ಆಕ್ಟೇವಿಯನ್ ಹ್ಯೂಮ್. ದೇಶದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಹಳೆಯ ಪಕ್ಷವಾಗಿರುವ ಕಾಂಗ್ರೆಸ್ ಇಂದು​ (ಡಿಸೆಂಬರ್ 28, 2023) 138ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ.

ಕಾಂಗ್ರೆಸ್​ ನೀತಿ ಮತ್ತು ರಚನೆ: ಶ್ರೇಣಿಕೃತ ರಚನೆಯಿಂದ ನಡೆಸಲ್ಪಡುವ ಐಎನ್​ಸಿ, ರಾಜ್ಯಗಳಾದ್ಯಂತ ಪ್ರತಿನಿಧಿಗಳು ಭಾಗವಹಿಸುವ ರಾಷ್ಟ್ರೀಯ ಸಮ್ಮೇಳನವನ್ನು ವಾರ್ಷಿಕವಾಗಿ ಕರೆಯಲಾಗುತ್ತಿತ್ತು. ಪಕ್ಷದ ಅಧ್ಯಕ್ಷರು ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪದಾಧಿಕಾರಿಗಳನ್ನು ಆಯ್ಕೆ ಮಾಡುವಲ್ಲಿ ಈ ಸಮ್ಮೇಳನವು ನಿರ್ಣಾಯಕ ಪಾತ್ರವನ್ನು ವಹಿಸುತ್ತಿತ್ತು.

ಪ್ರಧಾನವಾಗಿ ಪಕ್ಷದ ಅಧ್ಯಕ್ಷರಿಂದ ನೇಮಕಗೊಂಡ 20 ಸದಸ್ಯರನ್ನು ಒಳಗೊಂಡಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (CWC) ಮಹತ್ವದ ಅಧಿಕಾರವನ್ನು ಹೊಂದಿರುತ್ತಿತ್ತು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸುವಾಗ ಯುವ ಮತ್ತು ಮಹಿಳಾ ಗುಂಪುಗಳನ್ನು ಒಳಗೊಳ್ಳುವ ಮೂಲಕ ಪಕ್ಷವು ತನ್ನನ್ನು ಸಮಿತಿಗಳು ಮತ್ತು ವಿಭಾಗಗಳಾಗಿ ಮತ್ತಷ್ಟು ಸಂಘಟಿಸುತ್ತಿತ್ತು.

1990ರ ದಶಕದ ಮಧ್ಯಭಾಗದಲ್ಲಿ ಸುಮಾರು 40 ಮಿಲಿಯನ್ ಸದಸ್ಯತ್ವವು 21ನೇ ಶತಮಾನದ ಆರಂಭದಲ್ಲಿ 20 ಮಿಲಿಯನ್‌ಗಿಂತಲೂ ಕಡಿಮೆಯಾಗಿದೆ. ಕಾಂಗ್ರೆಸ್ ಪಕ್ಷವು ಭಾರತೀಯ ರಾಜಕೀಯದಲ್ಲಿ ಪ್ರಮುಖ ಸ್ಥಾನವನ್ನು ಉಳಿಸಿಕೊಂಡಿದೆ.

ಇತಿಹಾಸ: ಕಾಂಗ್ರೆಸ್ ಪಕ್ಷವು ಆರಂಭದಲ್ಲಿ ಮಿಶ್ರ ಆರ್ಥಿಕತೆಯ ಚೌಕಟ್ಟಿನೊಳಗೆ ಸಮಾಜವಾದಿ ಆರ್ಥಿಕ ನೀತಿಗಳನ್ನು ಹೊಂದಿತ್ತು. 1990ರ ದಶಕದಲ್ಲಿ ಪಕ್ಷವು ಖಾಸಗೀಕರಣ ಮತ್ತು ಆರ್ಥಿಕ ಅನಿಯಂತ್ರಣ ಸೇರಿದಂತೆ ಮಾರುಕಟ್ಟೆ ಸುಧಾರಣೆಗಳ ಮಧ್ಯೆ ಗಮನಾರ್ಹ ಬದಲಾವಣೆಯಾಗಿದೆ. ಜಾತಿಯನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸುವ ಜಾತ್ಯತೀತ ನೀತಿಗಳಿಗೆ ತಮ್ಮ ಬದ್ಧತೆಯ ಬಗ್ಗೆ ಪಕ್ಷವು ಯಾವಾಗಲೂ ಹೆಮ್ಮೆಪಡುತ್ತದೆ.

ಜಾಗತಿಕ ಶೀತಲ ಸಮರದ ಸಮಯದಲ್ಲಿ, ಕಾಂಗ್ರೆಸ್ ಪಕ್ಷವು ಪಾಶ್ಚಿಮಾತ್ಯ ಮತ್ತು ಕಮ್ಯುನಿಸ್ಟ್ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಕೇಂದ್ರೀಕರಿಸುವ ಅಲಿಪ್ತತೆಯ ವಿದೇಶಾಂಗ ನೀತಿಯನ್ನು ಮುನ್ನಡೆಸಿತು. ಆದ್ರೆ, ಪಾಕಿಸ್ತಾನಕ್ಕೆ ಅಮೆರಿಕದ ಬೆಂಬಲದಿಂದಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರವು, ನಂತರ 1971ರಲ್ಲಿ ಸೋವಿಯತ್ ಒಕ್ಕೂಟದೊಂದಿಗೆ ಸ್ನೇಹ ಒಪ್ಪಂದವನ್ನು ರಚಿಸಿತು.

ಐಎನ್​ಸಿ ರಚನೆ: 1885ರಲ್ಲಿ ಐಎನ್​ಸಿ ರಚನೆಯು ಆರಂಭದಲ್ಲಿ ದೇಶದ ಆಡಳಿತದಲ್ಲಿ ಹೆಚ್ಚಿನ ಭಾರತೀಯರನ್ನು ಒಳಗೊಳ್ಳುವ ಗುರಿಯನ್ನು ಹೊಂದಿತ್ತು. ದಾದಾಭಾಯಿ ನೌರೋಜಿ ಮತ್ತು ಉಮೇಶ್ ಚಂದ್ರ ಬ್ಯಾನರ್ಜಿಯಂತಹ ಪ್ರಮುಖ ವ್ಯಕ್ತಿಗಳು ಸೇರಿದಂತೆ ವಿವಿಧ ಭಾರತೀಯ ಪ್ರಾಂತ್ಯಗಳಿಂದ 72 ಪ್ರತಿನಿಧಿಗಳೊಂದಿಗೆ ಪಕ್ಷವು ಪ್ರಾರಂಭವಾಯಿತು. ಐಎನ್​ಸಿ 1905 ರ ಹೊತ್ತಿಗೆ ಸಾಂವಿಧಾನಿಕ ವಿಧಾನಗಳನ್ನು ಪ್ರತಿಪಾದಿಸುವ ಮಧ್ಯಮ ಸಂಘಟನೆಯಿಂದ ತೀವ್ರಗಾಮಿ ಶಕ್ತಿಯಾಗಿ ವಿಕಸನಗೊಂಡಿತು. 1905 ರ ಬಂಗಾಳದ ವಿಭಜನೆಯು ಒಂದು ಮಹತ್ವದ ತಿರುವು ನೀಡಿತು. ಐಎನ್​ಸಿಯನ್ನು ಸಾಮೂಹಿಕ ಚಳವಳಿ ಮುಖ್ಯವೇದಿಕೆಯಾಗಿ ಹೊರಹೊಮ್ಮಿತು.

ಮಹಾತ್ಮ ಗಾಂಧಿ: 1915ರಲ್ಲಿ ಮಹಾತ್ಮ ಗಾಂಧಿಯವರ ಆಗಮನವು ಕಾಂಗ್ರೆಸ್ ಅನ್ನು ಮತ್ತಷ್ಟು ಉತ್ತೇಜಿಸಿತು. ಸ್ವಾತಂತ್ರ್ಯ ಹೋರಾಟಕ್ಕೆ 'ಸತ್ಯಾಗ್ರಹ' ಮತ್ತು ನಾಗರಿಕ ಅಸಹಕಾರದಂತಹ ಚಳವಳಿಗಳನ್ನು ಪರಿಚಯಿಸಿತು. ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಸುಭಾಷ್ ಚಂದ್ರ ಬೋಸ್ ಅವರಂತಹ ನಾಯಕರು ಹೊರಹೊಮ್ಮುವುದರೊಂದಿಗೆ ಮಹಾತ್ಮ ಗಾಂಧಿಯವರ ನಾಯಕತ್ವವು ಗಣ್ಯರು ಮತ್ತು ಜನಸಾಮಾನ್ಯರಿಂದ ಬೆಂಬಲವನ್ನು ಪಡೆಯಿತು. 1907ರಲ್ಲಿ ಸೂರತ್ ಅಧಿವೇಶನದಲ್ಲಿ ಪಕ್ಷದಲ್ಲಿ ವಿಭಜನೆಯ ಹೊರತಾಗಿಯೂ, ಭಾರತೀಯ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕಾಂಗ್ರೆಸ್ ಪ್ರಬಲ ರಾಜಕೀಯ ಶಕ್ತಿಯಾಯಿತು. ಮುಹಮ್ಮದ್ ಅಲಿ ಜಿನ್ನಾ ಕೂಡ ಪಕ್ಷದ ಸದಸ್ಯರಾಗಿದ್ದರು. ಅವರು 1913ರಲ್ಲಿ ಮುಸ್ಲಿಂ ಲೀಗ್‌ಗೆ ಸೇರಿದರೂ, ಅವರು 1920 ರವರೆಗೆ ಕಾಂಗ್ರೆಸ್ ಸದಸ್ಯರಾಗಿ ಮುಂದುವರೆದಿದ್ದರು.

ಸ್ವಾತಂತ್ರ್ಯಾ ನಂತರ: ಕಾಂಗ್ರೆಸ್ ಪಕ್ಷವು ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿವಿ ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಸೇರಿದಂತೆ ಪ್ರಮುಖ ನಾಯಕರನ್ನು ನಿರ್ಮಿಸಿತು. ಇಂದಿರಾ ಗಾಂಧಿಯವರ ಮಗ ರಾಜೀವ್ ಗಾಂಧಿ ಅಧಿಕಾರ ವಹಿಸಿಕೊಂಡರು. ಮತ್ತು 1984-89 ರವರೆಗೆ ಭಾರತದ ಅತ್ಯಂತ ಕಿರಿಯ ಪ್ರಧಾನಿಯಾದರು. 1987ರ ಮಧ್ಯದಲ್ಲಿ, ಬೋಫೋರ್ಸ್ ಹಗರಣವು ಅವರ ಇಮೇಜ್ ಅನ್ನು ಹಾನಿಗೊಳಿಸಿತು. 1989 ರ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ದೊಡ್ಡ ಸೋಲಿಗೆ ಕಾರಣವಾಯಿತು. 1991ರಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್​ಟಿಟಿಇ) ಆತ್ಮಹತ್ಯಾ ಬಾಂಬರ್ ನಿಂದ ಹತ್ಯೆಗೀಡಾದರು.

ರಾಜೀವ್ ಗಾಂಧಿಯವರ ಪತ್ನಿ ಸೋನಿಯಾ ಗಾಂಧಿ ಅವರು 1998 ರಿಂದ 2017 ರವರೆಗೆ ಕಾಂಗ್ರೆಸ್​ ಪಕ್ಷದ ಸುದೀರ್ಘ ಸೇವೆ ಸಲ್ಲಿಸಿದ ಅಧ್ಯಕ್ಷರಾದರು. ರಾಜೀವ್ ಮತ್ತು ಸೋನಿಯಾ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿ ಅವರು ಡಿಸೆಂಬರ್ 2017 ರಿಂದ ಜುಲೈ 2019 ರವರೆಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಪ್ರಸ್ತುತ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಈ ಸ್ಥಾನವನ್ನು ಅಲಂಕರಿಸಿದ ಮೊದಲ ದಲಿತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2023 ರಲ್ಲಿ ಕಾಂಗ್ರೆಸ್: ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಅಲೆಯಿಂದಾಗಿ 2014ರ ನಂತರ ಭಾರತದಲ್ಲಿ ಹಳೆಯ ಪಕ್ಷ ತನ್ನ ಪ್ರಭಾವವನ್ನು ಕಳೆದುಕೊಂಡಿದೆ. ಪ್ರಸ್ತುತ ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ಎಂಬ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ದೇಶಕ್ಕೆ ಆರು ಪ್ರಧಾನಿಗಳನ್ನು ನೀಡಿದ ಪಕ್ಷವು ಭಾರತದ ನೆಲದಲ್ಲಿ ತನ್ನ ಪ್ರಭಾವವನ್ನು ಮರಳಿ ಪಡೆಯಲು ಶ್ರಮಿಸಬೇಕಿದೆ.

ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ಮಮತಾ ಹೋಗಲ್ಲ- ಟಿಎಂಸಿ; ನನ್ನನ್ನು ಆಹ್ವಾನಿಸಿಲ್ಲ-ಪವಾರ್

ಹೈದರಾಬಾದ್: 1885ರಲ್ಲಿ ಸ್ಥಾಪನೆಯಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ (INC) ಭಾರತದ ರಾಜಕೀಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ಗಳಿಸಿದೆ. ಭಾರತೀಯ ವಿದ್ಯಾವಂತ ನಾಗರಿಕ ಮತ್ತು ರಾಜಕೀಯ ಸಂವಾದಕ್ಕೆ ಪೂರಕವಾದ ವೇದಿಕೆಗೆ ಅಡಿಪಾಯ ಹಾಕಿದವರು ನಿವೃತ್ತ ಬ್ರಿಟಿಷ್ ಇಂಡಿಯನ್ ಸಿವಿಲ್ ಸರ್ವಿಸ್ ಅಧಿಕಾರಿ ಅಲನ್ ಆಕ್ಟೇವಿಯನ್ ಹ್ಯೂಮ್. ದೇಶದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಹಳೆಯ ಪಕ್ಷವಾಗಿರುವ ಕಾಂಗ್ರೆಸ್ ಇಂದು​ (ಡಿಸೆಂಬರ್ 28, 2023) 138ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ.

ಕಾಂಗ್ರೆಸ್​ ನೀತಿ ಮತ್ತು ರಚನೆ: ಶ್ರೇಣಿಕೃತ ರಚನೆಯಿಂದ ನಡೆಸಲ್ಪಡುವ ಐಎನ್​ಸಿ, ರಾಜ್ಯಗಳಾದ್ಯಂತ ಪ್ರತಿನಿಧಿಗಳು ಭಾಗವಹಿಸುವ ರಾಷ್ಟ್ರೀಯ ಸಮ್ಮೇಳನವನ್ನು ವಾರ್ಷಿಕವಾಗಿ ಕರೆಯಲಾಗುತ್ತಿತ್ತು. ಪಕ್ಷದ ಅಧ್ಯಕ್ಷರು ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪದಾಧಿಕಾರಿಗಳನ್ನು ಆಯ್ಕೆ ಮಾಡುವಲ್ಲಿ ಈ ಸಮ್ಮೇಳನವು ನಿರ್ಣಾಯಕ ಪಾತ್ರವನ್ನು ವಹಿಸುತ್ತಿತ್ತು.

ಪ್ರಧಾನವಾಗಿ ಪಕ್ಷದ ಅಧ್ಯಕ್ಷರಿಂದ ನೇಮಕಗೊಂಡ 20 ಸದಸ್ಯರನ್ನು ಒಳಗೊಂಡಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (CWC) ಮಹತ್ವದ ಅಧಿಕಾರವನ್ನು ಹೊಂದಿರುತ್ತಿತ್ತು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸುವಾಗ ಯುವ ಮತ್ತು ಮಹಿಳಾ ಗುಂಪುಗಳನ್ನು ಒಳಗೊಳ್ಳುವ ಮೂಲಕ ಪಕ್ಷವು ತನ್ನನ್ನು ಸಮಿತಿಗಳು ಮತ್ತು ವಿಭಾಗಗಳಾಗಿ ಮತ್ತಷ್ಟು ಸಂಘಟಿಸುತ್ತಿತ್ತು.

1990ರ ದಶಕದ ಮಧ್ಯಭಾಗದಲ್ಲಿ ಸುಮಾರು 40 ಮಿಲಿಯನ್ ಸದಸ್ಯತ್ವವು 21ನೇ ಶತಮಾನದ ಆರಂಭದಲ್ಲಿ 20 ಮಿಲಿಯನ್‌ಗಿಂತಲೂ ಕಡಿಮೆಯಾಗಿದೆ. ಕಾಂಗ್ರೆಸ್ ಪಕ್ಷವು ಭಾರತೀಯ ರಾಜಕೀಯದಲ್ಲಿ ಪ್ರಮುಖ ಸ್ಥಾನವನ್ನು ಉಳಿಸಿಕೊಂಡಿದೆ.

ಇತಿಹಾಸ: ಕಾಂಗ್ರೆಸ್ ಪಕ್ಷವು ಆರಂಭದಲ್ಲಿ ಮಿಶ್ರ ಆರ್ಥಿಕತೆಯ ಚೌಕಟ್ಟಿನೊಳಗೆ ಸಮಾಜವಾದಿ ಆರ್ಥಿಕ ನೀತಿಗಳನ್ನು ಹೊಂದಿತ್ತು. 1990ರ ದಶಕದಲ್ಲಿ ಪಕ್ಷವು ಖಾಸಗೀಕರಣ ಮತ್ತು ಆರ್ಥಿಕ ಅನಿಯಂತ್ರಣ ಸೇರಿದಂತೆ ಮಾರುಕಟ್ಟೆ ಸುಧಾರಣೆಗಳ ಮಧ್ಯೆ ಗಮನಾರ್ಹ ಬದಲಾವಣೆಯಾಗಿದೆ. ಜಾತಿಯನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸುವ ಜಾತ್ಯತೀತ ನೀತಿಗಳಿಗೆ ತಮ್ಮ ಬದ್ಧತೆಯ ಬಗ್ಗೆ ಪಕ್ಷವು ಯಾವಾಗಲೂ ಹೆಮ್ಮೆಪಡುತ್ತದೆ.

ಜಾಗತಿಕ ಶೀತಲ ಸಮರದ ಸಮಯದಲ್ಲಿ, ಕಾಂಗ್ರೆಸ್ ಪಕ್ಷವು ಪಾಶ್ಚಿಮಾತ್ಯ ಮತ್ತು ಕಮ್ಯುನಿಸ್ಟ್ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಕೇಂದ್ರೀಕರಿಸುವ ಅಲಿಪ್ತತೆಯ ವಿದೇಶಾಂಗ ನೀತಿಯನ್ನು ಮುನ್ನಡೆಸಿತು. ಆದ್ರೆ, ಪಾಕಿಸ್ತಾನಕ್ಕೆ ಅಮೆರಿಕದ ಬೆಂಬಲದಿಂದಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರವು, ನಂತರ 1971ರಲ್ಲಿ ಸೋವಿಯತ್ ಒಕ್ಕೂಟದೊಂದಿಗೆ ಸ್ನೇಹ ಒಪ್ಪಂದವನ್ನು ರಚಿಸಿತು.

ಐಎನ್​ಸಿ ರಚನೆ: 1885ರಲ್ಲಿ ಐಎನ್​ಸಿ ರಚನೆಯು ಆರಂಭದಲ್ಲಿ ದೇಶದ ಆಡಳಿತದಲ್ಲಿ ಹೆಚ್ಚಿನ ಭಾರತೀಯರನ್ನು ಒಳಗೊಳ್ಳುವ ಗುರಿಯನ್ನು ಹೊಂದಿತ್ತು. ದಾದಾಭಾಯಿ ನೌರೋಜಿ ಮತ್ತು ಉಮೇಶ್ ಚಂದ್ರ ಬ್ಯಾನರ್ಜಿಯಂತಹ ಪ್ರಮುಖ ವ್ಯಕ್ತಿಗಳು ಸೇರಿದಂತೆ ವಿವಿಧ ಭಾರತೀಯ ಪ್ರಾಂತ್ಯಗಳಿಂದ 72 ಪ್ರತಿನಿಧಿಗಳೊಂದಿಗೆ ಪಕ್ಷವು ಪ್ರಾರಂಭವಾಯಿತು. ಐಎನ್​ಸಿ 1905 ರ ಹೊತ್ತಿಗೆ ಸಾಂವಿಧಾನಿಕ ವಿಧಾನಗಳನ್ನು ಪ್ರತಿಪಾದಿಸುವ ಮಧ್ಯಮ ಸಂಘಟನೆಯಿಂದ ತೀವ್ರಗಾಮಿ ಶಕ್ತಿಯಾಗಿ ವಿಕಸನಗೊಂಡಿತು. 1905 ರ ಬಂಗಾಳದ ವಿಭಜನೆಯು ಒಂದು ಮಹತ್ವದ ತಿರುವು ನೀಡಿತು. ಐಎನ್​ಸಿಯನ್ನು ಸಾಮೂಹಿಕ ಚಳವಳಿ ಮುಖ್ಯವೇದಿಕೆಯಾಗಿ ಹೊರಹೊಮ್ಮಿತು.

ಮಹಾತ್ಮ ಗಾಂಧಿ: 1915ರಲ್ಲಿ ಮಹಾತ್ಮ ಗಾಂಧಿಯವರ ಆಗಮನವು ಕಾಂಗ್ರೆಸ್ ಅನ್ನು ಮತ್ತಷ್ಟು ಉತ್ತೇಜಿಸಿತು. ಸ್ವಾತಂತ್ರ್ಯ ಹೋರಾಟಕ್ಕೆ 'ಸತ್ಯಾಗ್ರಹ' ಮತ್ತು ನಾಗರಿಕ ಅಸಹಕಾರದಂತಹ ಚಳವಳಿಗಳನ್ನು ಪರಿಚಯಿಸಿತು. ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಸುಭಾಷ್ ಚಂದ್ರ ಬೋಸ್ ಅವರಂತಹ ನಾಯಕರು ಹೊರಹೊಮ್ಮುವುದರೊಂದಿಗೆ ಮಹಾತ್ಮ ಗಾಂಧಿಯವರ ನಾಯಕತ್ವವು ಗಣ್ಯರು ಮತ್ತು ಜನಸಾಮಾನ್ಯರಿಂದ ಬೆಂಬಲವನ್ನು ಪಡೆಯಿತು. 1907ರಲ್ಲಿ ಸೂರತ್ ಅಧಿವೇಶನದಲ್ಲಿ ಪಕ್ಷದಲ್ಲಿ ವಿಭಜನೆಯ ಹೊರತಾಗಿಯೂ, ಭಾರತೀಯ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕಾಂಗ್ರೆಸ್ ಪ್ರಬಲ ರಾಜಕೀಯ ಶಕ್ತಿಯಾಯಿತು. ಮುಹಮ್ಮದ್ ಅಲಿ ಜಿನ್ನಾ ಕೂಡ ಪಕ್ಷದ ಸದಸ್ಯರಾಗಿದ್ದರು. ಅವರು 1913ರಲ್ಲಿ ಮುಸ್ಲಿಂ ಲೀಗ್‌ಗೆ ಸೇರಿದರೂ, ಅವರು 1920 ರವರೆಗೆ ಕಾಂಗ್ರೆಸ್ ಸದಸ್ಯರಾಗಿ ಮುಂದುವರೆದಿದ್ದರು.

ಸ್ವಾತಂತ್ರ್ಯಾ ನಂತರ: ಕಾಂಗ್ರೆಸ್ ಪಕ್ಷವು ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿವಿ ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಸೇರಿದಂತೆ ಪ್ರಮುಖ ನಾಯಕರನ್ನು ನಿರ್ಮಿಸಿತು. ಇಂದಿರಾ ಗಾಂಧಿಯವರ ಮಗ ರಾಜೀವ್ ಗಾಂಧಿ ಅಧಿಕಾರ ವಹಿಸಿಕೊಂಡರು. ಮತ್ತು 1984-89 ರವರೆಗೆ ಭಾರತದ ಅತ್ಯಂತ ಕಿರಿಯ ಪ್ರಧಾನಿಯಾದರು. 1987ರ ಮಧ್ಯದಲ್ಲಿ, ಬೋಫೋರ್ಸ್ ಹಗರಣವು ಅವರ ಇಮೇಜ್ ಅನ್ನು ಹಾನಿಗೊಳಿಸಿತು. 1989 ರ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ದೊಡ್ಡ ಸೋಲಿಗೆ ಕಾರಣವಾಯಿತು. 1991ರಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್​ಟಿಟಿಇ) ಆತ್ಮಹತ್ಯಾ ಬಾಂಬರ್ ನಿಂದ ಹತ್ಯೆಗೀಡಾದರು.

ರಾಜೀವ್ ಗಾಂಧಿಯವರ ಪತ್ನಿ ಸೋನಿಯಾ ಗಾಂಧಿ ಅವರು 1998 ರಿಂದ 2017 ರವರೆಗೆ ಕಾಂಗ್ರೆಸ್​ ಪಕ್ಷದ ಸುದೀರ್ಘ ಸೇವೆ ಸಲ್ಲಿಸಿದ ಅಧ್ಯಕ್ಷರಾದರು. ರಾಜೀವ್ ಮತ್ತು ಸೋನಿಯಾ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿ ಅವರು ಡಿಸೆಂಬರ್ 2017 ರಿಂದ ಜುಲೈ 2019 ರವರೆಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಪ್ರಸ್ತುತ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಈ ಸ್ಥಾನವನ್ನು ಅಲಂಕರಿಸಿದ ಮೊದಲ ದಲಿತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2023 ರಲ್ಲಿ ಕಾಂಗ್ರೆಸ್: ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಅಲೆಯಿಂದಾಗಿ 2014ರ ನಂತರ ಭಾರತದಲ್ಲಿ ಹಳೆಯ ಪಕ್ಷ ತನ್ನ ಪ್ರಭಾವವನ್ನು ಕಳೆದುಕೊಂಡಿದೆ. ಪ್ರಸ್ತುತ ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ಎಂಬ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ದೇಶಕ್ಕೆ ಆರು ಪ್ರಧಾನಿಗಳನ್ನು ನೀಡಿದ ಪಕ್ಷವು ಭಾರತದ ನೆಲದಲ್ಲಿ ತನ್ನ ಪ್ರಭಾವವನ್ನು ಮರಳಿ ಪಡೆಯಲು ಶ್ರಮಿಸಬೇಕಿದೆ.

ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ಮಮತಾ ಹೋಗಲ್ಲ- ಟಿಎಂಸಿ; ನನ್ನನ್ನು ಆಹ್ವಾನಿಸಿಲ್ಲ-ಪವಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.