ETV Bharat / bharat

ಇವಿಎಂಗಳ ಬಗ್ಗೆ ಧ್ವನಿ ಎತ್ತಿದ I.N.D.I.A ಕೂಟ.. ನಿರ್ಣಯ ಅಂಗೀಕಾರ.. ಚುನಾವಣಾ ಆಯೋಗಕ್ಕೆ ಸಲ್ಲಿಕೆ!

author img

By ETV Bharat Karnataka Team

Published : Dec 20, 2023, 6:49 AM IST

ಇವಿಎಂಗಳ ಬಗ್ಗೆ ಪ್ರತಿಪಕ್ಷಗಳು ಮತ್ತೊಮ್ಮೆ ಅಪಸ್ವರ ಎತ್ತಿವೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಇದೀಗ ಇಂಡಿಯಾ ಒಕ್ಕೂಟದ ಬಗ್ಗೆ ಈ ಸಭೆಯಲ್ಲಿ ಚರ್ಚೆಯಾಗಿದೆ. ಅಷ್ಟೇ ಅಲ್ಲ ಇಂಡಿಯಾ ಒಕ್ಕೂಟ ನಿರ್ಣಯವೊಂದನ್ನು ಅಂಗೀಕರಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ.

Etv BharatINDIA resolution raises question on EVMs
Etv Bharatಇವಿಎಂಗಳ ಬಗ್ಗೆ ಧ್ವನಿ ಎತ್ತಿದ I.N.D.I.A ಕೂಟ

ನವದೆಹಲಿ: ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಕಾರ್ಯನಿರ್ವಹಣೆ ಮತ್ತು ಸಮಗ್ರತೆಯ ಬಗ್ಗೆ ಇಂಡಿಯಾ ಕೂಟದ ನಾಯಕರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಈ ಬಗ್ಗೆ ನಿರ್ಣಯವೊಂದನ್ನು ಅಂಗೀಕರಿಸಿದೆ. ಇವಿಎಂನಲ್ಲಿ ಬಿದ್ದಿರುವ ಮತಗಳು ಮತ್ತು ವಿವಿಪ್ಯಾಟ್​​​​​​​​​​ ಎಣಿಕೆ ಸರಿಹೊಂದುವಂತೆ ನೋಡಿಕೊಳ್ಳಬೇಕು ಮತ್ತು ಮತದಾರ ತಾನು ಹಾಕಿರುವ ಮತದಾನ ಖಚಿತಪಡಿಸಿಕೊಳ್ಳಲು ವಿವಿ ಪ್ಯಾಟ್​ ರಸೀದಿ, ಪ್ರತ್ಯೇಕ ಬಾಕ್ಸ್​ನಲ್ಲಿ ಬೀಳುವಂತೆ ವ್ಯವಸ್ಥೆ ಮಾಡಬೇಕು ಎಂದು ಇಂಡಿಯಾ ಒಕ್ಕೂಟದ ನಾಯಕರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ಅವನು ಅಥವಾ ಅವಳ ಆಯ್ಕೆಯನ್ನು ಪರಿಶೀಲಿಸಿದ ನಂತರ ಅದನ್ನು ಪ್ರತ್ಯೇಕ ಮತ ಪೆಟ್ಟಿಗೆಯಲ್ಲಿ ಇರಿಸಬೇಕು. ಅವನು ಅಥವಾ ಅವಳು ತಾನು ಹಾಕಿದ ಮತ ಸರಿಯಾಗಿದೆ ಎಂದು ಖಚಿತ ಪಡಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದು ಇಂಡಿಯಾ ಒಕ್ಕೂಟದ ನಾಯಕರು ಆಗ್ರಹಿಸಿದ್ದಾರೆ.

ಇಂಡಿಯಾ ಒಕ್ಕೂಟದ ಪಾಲುದಾರ ಪಕ್ಷಗಳ ನಾಯಕರು ಈ ಬಗ್ಗೆ ನಿರ್ಣಯವೊಂದನ್ನು ಅಂಗೀಕರಿಸಿದ್ದು, ಇವಿಎಂಗಳ ವಿನ್ಯಾಸ ಮತ್ತು ಕಾರ್ಯಾಚರಣೆಯ ಕುರಿತು ಹಲವಾರು ನಿರ್ದಿಷ್ಟ ಪ್ರಶ್ನೆಗಳೊಂದಿಗೆ ವಿವರವಾದ ಜ್ಞಾಪಕ ಪತ್ರವನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ.ಮತಯಂತ್ರಗಳ ಬಗ್ಗೆ ಮತ್ತೆ ಇಂಡಿಯಾ ಒಕ್ಕೂಟದ ಪಕ್ಷಗಳು ದನಿ ಎತ್ತಿವೆ. ಈ ಬಗ್ಗೆ ಹಲವು ಅನುಮಾನಗಳನ್ನೂ ಕೂಡಾ ವ್ಯಕ್ತಪಡಿಸಿವೆ. ಇವಿಎಂಗಳ ಕಾರ್ಯನಿರ್ವಹಣೆ ಹಾಗೂ ಸಮಗ್ರತೆಯ ಬಗ್ಗೆ ಹಲವು ಅನುಮಾನಗಳಿವೆ ಎಂದು ಪ್ರತಿಪಕ್ಷಗಳ ನಾಯಕರು ಹೇಳಿದ್ದಾರೆ.

ಇಂಡಿಯಾ ಒಕ್ಕೂಟದ ನಾಯಕರು, ಇದೇ ಅನೇಕ ತಜ್ಞರು ಮತ್ತು ವೃತ್ತಿಪರರು ಸಹ ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ನಿರ್ಣಯದಲ್ಲಿ ಹೇಳಿದ್ದಾರೆ. ’’ನಮ್ಮ ಸಲಹೆ ಸರಳವಾಗಿದೆ. ಬಾಕ್ಸ್‌ನಲ್ಲಿ ಬೀಳುವ VVPAT ಸ್ಲಿಪ್ ಬದಲಿಗೆ ಅದನ್ನು ಮತದಾರರಿಗೆ ಹಸ್ತಾಂತರಿಸಬೇಕು. ಅವರು ತಮ್ಮ ಆಯ್ಕೆಯನ್ನು ಪರಿಶೀಲಿಸಿದ ನಂತರ ಅದನ್ನು ಪ್ರತ್ಯೇಕ ಮತ ಪೆಟ್ಟಿಗೆಯಲ್ಲಿ ಇರಿಸುವಂತಾಗಬೇಕು. VVPAT ಸ್ಲಿಪ್‌ಗಳನ್ನು ನೂರಕ್ಕೆ ನೂರಷ್ಟನ್ನೂ ಎಣಿಕೆ ಮಾಡಬೇಕು ಎಂದು ಅದು ನಿರ್ಣಯದಲ್ಲಿ ಒತ್ತಾಯಿಸಿದೆ.

ಹೀಗೆ ಮಾಡುವುದರಿಂದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಲ್ಲಿ ಜನರ ಸಂಪೂರ್ಣ ವಿಶ್ವಾಸವನ್ನು ಪುನಃಸ್ಥಾಪಿಸುತ್ತದೆ ಎಂದು ಇಂಡಿಯಾ ಒಕ್ಕೂಟ ಕೈಗೊಂಡ ನಿರ್ಣಯದಲ್ಲಿ ಹೇಳಲಾಗಿದೆ. ಪ್ರತಿಪಕ್ಷಗಳು ಹಲವು ಸಂದರ್ಭಗಳಲ್ಲಿ ಇವಿಎಂಗಳನ್ನು ಪ್ರಶ್ನಿಸಿದ್ದವು ಮತ್ತು ಬ್ಯಾಲೆಟ್ ಪೇಪರ್‌ ಮೂಲಕವೇ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದ್ದವು. ಈ ವಿಚಾರ ಸುಪ್ರೀಂಕೋರ್ಟ್​ ಅಂಗಳವನ್ನು ತಲುಪಿದೆ. ಚುನಾವಣಾ ಆಯೋಗ ಮಾತ್ರ ಇವಿಎಂ ಕಾರ್ಯನಿರ್ವಹಣೆ ಸರಿಯಾಗಿದೆ ಎಂದು ಹೇಳುತ್ತಲೇ ಬಂದಿದೆ. ಈ ಬಗ್ಗೆ ಯಾವುದೇ ಪಕ್ಷ ಅಗತ್ಯ ದಾಖಲೆಗಳೊಂದಿಗೆ ಸಾಬೀತು ಮಾಡುವಂತೆಯೂ ಬಹಿರಂಗ ಆಹ್ವಾನವನ್ನೂ ನೀಡಿದೆ.

ಇದನ್ನು ಓದಿ:ಲೋಕಸಭೆ ಚುನಾವಣೆ: ಕರ್ನಾಟಕ, ತೆಲಂಗಾಣದಲ್ಲಿ 'ಬಲ' ಹೆಚ್ಚಿಸಿಕೊಳ್ಳಲು ಕಾಂಗ್ರೆಸ್​ ಕಾರ್ಯತಂತ್ರ

ನವದೆಹಲಿ: ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಕಾರ್ಯನಿರ್ವಹಣೆ ಮತ್ತು ಸಮಗ್ರತೆಯ ಬಗ್ಗೆ ಇಂಡಿಯಾ ಕೂಟದ ನಾಯಕರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಈ ಬಗ್ಗೆ ನಿರ್ಣಯವೊಂದನ್ನು ಅಂಗೀಕರಿಸಿದೆ. ಇವಿಎಂನಲ್ಲಿ ಬಿದ್ದಿರುವ ಮತಗಳು ಮತ್ತು ವಿವಿಪ್ಯಾಟ್​​​​​​​​​​ ಎಣಿಕೆ ಸರಿಹೊಂದುವಂತೆ ನೋಡಿಕೊಳ್ಳಬೇಕು ಮತ್ತು ಮತದಾರ ತಾನು ಹಾಕಿರುವ ಮತದಾನ ಖಚಿತಪಡಿಸಿಕೊಳ್ಳಲು ವಿವಿ ಪ್ಯಾಟ್​ ರಸೀದಿ, ಪ್ರತ್ಯೇಕ ಬಾಕ್ಸ್​ನಲ್ಲಿ ಬೀಳುವಂತೆ ವ್ಯವಸ್ಥೆ ಮಾಡಬೇಕು ಎಂದು ಇಂಡಿಯಾ ಒಕ್ಕೂಟದ ನಾಯಕರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ಅವನು ಅಥವಾ ಅವಳ ಆಯ್ಕೆಯನ್ನು ಪರಿಶೀಲಿಸಿದ ನಂತರ ಅದನ್ನು ಪ್ರತ್ಯೇಕ ಮತ ಪೆಟ್ಟಿಗೆಯಲ್ಲಿ ಇರಿಸಬೇಕು. ಅವನು ಅಥವಾ ಅವಳು ತಾನು ಹಾಕಿದ ಮತ ಸರಿಯಾಗಿದೆ ಎಂದು ಖಚಿತ ಪಡಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದು ಇಂಡಿಯಾ ಒಕ್ಕೂಟದ ನಾಯಕರು ಆಗ್ರಹಿಸಿದ್ದಾರೆ.

ಇಂಡಿಯಾ ಒಕ್ಕೂಟದ ಪಾಲುದಾರ ಪಕ್ಷಗಳ ನಾಯಕರು ಈ ಬಗ್ಗೆ ನಿರ್ಣಯವೊಂದನ್ನು ಅಂಗೀಕರಿಸಿದ್ದು, ಇವಿಎಂಗಳ ವಿನ್ಯಾಸ ಮತ್ತು ಕಾರ್ಯಾಚರಣೆಯ ಕುರಿತು ಹಲವಾರು ನಿರ್ದಿಷ್ಟ ಪ್ರಶ್ನೆಗಳೊಂದಿಗೆ ವಿವರವಾದ ಜ್ಞಾಪಕ ಪತ್ರವನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ.ಮತಯಂತ್ರಗಳ ಬಗ್ಗೆ ಮತ್ತೆ ಇಂಡಿಯಾ ಒಕ್ಕೂಟದ ಪಕ್ಷಗಳು ದನಿ ಎತ್ತಿವೆ. ಈ ಬಗ್ಗೆ ಹಲವು ಅನುಮಾನಗಳನ್ನೂ ಕೂಡಾ ವ್ಯಕ್ತಪಡಿಸಿವೆ. ಇವಿಎಂಗಳ ಕಾರ್ಯನಿರ್ವಹಣೆ ಹಾಗೂ ಸಮಗ್ರತೆಯ ಬಗ್ಗೆ ಹಲವು ಅನುಮಾನಗಳಿವೆ ಎಂದು ಪ್ರತಿಪಕ್ಷಗಳ ನಾಯಕರು ಹೇಳಿದ್ದಾರೆ.

ಇಂಡಿಯಾ ಒಕ್ಕೂಟದ ನಾಯಕರು, ಇದೇ ಅನೇಕ ತಜ್ಞರು ಮತ್ತು ವೃತ್ತಿಪರರು ಸಹ ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ನಿರ್ಣಯದಲ್ಲಿ ಹೇಳಿದ್ದಾರೆ. ’’ನಮ್ಮ ಸಲಹೆ ಸರಳವಾಗಿದೆ. ಬಾಕ್ಸ್‌ನಲ್ಲಿ ಬೀಳುವ VVPAT ಸ್ಲಿಪ್ ಬದಲಿಗೆ ಅದನ್ನು ಮತದಾರರಿಗೆ ಹಸ್ತಾಂತರಿಸಬೇಕು. ಅವರು ತಮ್ಮ ಆಯ್ಕೆಯನ್ನು ಪರಿಶೀಲಿಸಿದ ನಂತರ ಅದನ್ನು ಪ್ರತ್ಯೇಕ ಮತ ಪೆಟ್ಟಿಗೆಯಲ್ಲಿ ಇರಿಸುವಂತಾಗಬೇಕು. VVPAT ಸ್ಲಿಪ್‌ಗಳನ್ನು ನೂರಕ್ಕೆ ನೂರಷ್ಟನ್ನೂ ಎಣಿಕೆ ಮಾಡಬೇಕು ಎಂದು ಅದು ನಿರ್ಣಯದಲ್ಲಿ ಒತ್ತಾಯಿಸಿದೆ.

ಹೀಗೆ ಮಾಡುವುದರಿಂದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಲ್ಲಿ ಜನರ ಸಂಪೂರ್ಣ ವಿಶ್ವಾಸವನ್ನು ಪುನಃಸ್ಥಾಪಿಸುತ್ತದೆ ಎಂದು ಇಂಡಿಯಾ ಒಕ್ಕೂಟ ಕೈಗೊಂಡ ನಿರ್ಣಯದಲ್ಲಿ ಹೇಳಲಾಗಿದೆ. ಪ್ರತಿಪಕ್ಷಗಳು ಹಲವು ಸಂದರ್ಭಗಳಲ್ಲಿ ಇವಿಎಂಗಳನ್ನು ಪ್ರಶ್ನಿಸಿದ್ದವು ಮತ್ತು ಬ್ಯಾಲೆಟ್ ಪೇಪರ್‌ ಮೂಲಕವೇ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದ್ದವು. ಈ ವಿಚಾರ ಸುಪ್ರೀಂಕೋರ್ಟ್​ ಅಂಗಳವನ್ನು ತಲುಪಿದೆ. ಚುನಾವಣಾ ಆಯೋಗ ಮಾತ್ರ ಇವಿಎಂ ಕಾರ್ಯನಿರ್ವಹಣೆ ಸರಿಯಾಗಿದೆ ಎಂದು ಹೇಳುತ್ತಲೇ ಬಂದಿದೆ. ಈ ಬಗ್ಗೆ ಯಾವುದೇ ಪಕ್ಷ ಅಗತ್ಯ ದಾಖಲೆಗಳೊಂದಿಗೆ ಸಾಬೀತು ಮಾಡುವಂತೆಯೂ ಬಹಿರಂಗ ಆಹ್ವಾನವನ್ನೂ ನೀಡಿದೆ.

ಇದನ್ನು ಓದಿ:ಲೋಕಸಭೆ ಚುನಾವಣೆ: ಕರ್ನಾಟಕ, ತೆಲಂಗಾಣದಲ್ಲಿ 'ಬಲ' ಹೆಚ್ಚಿಸಿಕೊಳ್ಳಲು ಕಾಂಗ್ರೆಸ್​ ಕಾರ್ಯತಂತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.