ETV Bharat / bharat

ಮದುವೆ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ.. WhatsApp ಮೂಲಕವೇ ನಡೀತು ತುರ್ತು ವಿಚಾರಣೆ! - ವಾಟ್ಸಾಪ್ ಮೂಲಕ ತುರ್ತು ವಿಚಾರಣೆ

ಮದ್ರಾಸ್ ಹೈಕೋರ್ಟ್ ಇತಿಹಾಸದಲ್ಲೇ ವಿಭಿನ್ನವಾದ ರೀತಿಯಲ್ಲಿ ಅರ್ಜಿ ವಿಚಾರಣೆ ನಡೆಸಲಾಗಿದ್ದು, ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನ್ಯಾಯಮೂರ್ತಿಯೊಬ್ಬರು ವಾಟ್ಸಾಪ್ ಮೂಲಕವೇ ತುರ್ತು ವಿಚಾರಣೆ ನಡೆಸಿ, ಪ್ರಕರಣವನ್ನು ಇತ್ಯರ್ಥ ಪಡಿಸಿದ್ದಾರೆ.

High Court hears case through Whatsapp
High Court hears case through Whatsapp
author img

By

Published : May 16, 2022, 9:55 PM IST

ಚೆನ್ನೈ(ತಮಿಳುನಾಡು): ಸಾಮಾಜಿಕ ಜಾಲತಾಣ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲ ವಿಷಯಗಳಲ್ಲೂ ಬಳಕೆಯಾಗ್ತಿದ್ದು, ಇದೀಗ ಕೋರ್ಟ್​​ಗೂ ಲಗ್ಗೆ ಇಟ್ಟಿದೆ. ಅಂತಹ ಅಪರೂಪದ ಪ್ರಕರಣವೊಂದು ತಮಿಳುನಾಡಿನ ಮದ್ರಾಸ್ ಹೈಕೋರ್ಟ್​​​ನಲ್ಲಿ ನಡೆದಿದೆ. ವಾಟ್ಸಾಪ್​ ಮೂಲಕವೇ ನ್ಯಾಯಮೂರ್ತಿಗಳು ಪ್ರಕರಣ ಇತ್ಯರ್ಥ ಪಡಿಸಿದ್ದಾರೆ. ಮದ್ರಾಸ್​ ಹೈಕೋರ್ಟ್ ಇತಿಹಾಸದಲ್ಲೇ ಮೊದಲ ಸಲ ಇಂತಹದೊಂದು ಪ್ರಕರಣ ನಡೆದಿದ್ದು, ನ್ಯಾಯಮೂರ್ತಿಗಳು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾರಣ ವಾಟ್ಸಾಪ್ ಮೂಲಕ ಪ್ರಕರಣ ತುರ್ತು ವಿಚಾರಣೆ ನಡೆಸಿ, ಇತ್ಯರ್ಥಗೊಳಿಸಿದ್ದಾರೆ.

ಏನಿದು ಪ್ರಕರಣ?: ನ್ಯಾಯಮೂರ್ತಿ ಜೆ. ಆರ್​​ ಸ್ವಾಮಿನಾಥನ್​ ಅವರು ನಾಗರ್​ಕೋಯಿಲ್​​ನಲ್ಲಿ ಆಯೋಜನೆಗೊಂಡಿದ್ದ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಧರ್ಮಪುರಿ ಜಿಲ್ಲೆಯ ಶ್ರೀ ಅಭೀಷ್ಟ ವರದರಾಜ ಸ್ವಾಮಿ ದೇಗುಲದ ರಥೋತ್ಸವಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಎಂದು ಇನ್ಸ್​​ಪೆಕ್ಟರ್​​ ರಥೋತ್ಸವ ನಿಲ್ಲಿಸುವಂತೆ ಆದೇಶ ಹೊರಡಿಸಿದ್ದರು. ಹೀಗಾಗಿ, ದೇಗುಲದ ಟ್ರಸ್ಟಿ ಪರ ವಕೀಲರು ರಿಟ್​ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಉತ್ಸವ ನಡೆಯದಿದ್ದರೆ ಗ್ರಾಮಸ್ಥರು ದೇವರ ಕೋಪಕ್ಕೆ ಗುರಿಯಾಗುತ್ತಾರೆಂದು ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿತ್ತು.

High Court hears case through Whatsapp
ಮದ್ರಾಸ್ ಹೈಕೋರ್ಟ್ ಇತಿಹಾಸದಲ್ಲೊಂದು ವಿಭಿನ್ನ ಪ್ರಕರಣ

ಹೀಗಾಗಿ, ಅಲ್ಲಿಂದಲೇ ವಾಟ್ಸಾಪ್ ಮೂಲಕ ಪ್ರಕರಣ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳು, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಸಂಬಂಧಿಸಿದ ರಥೋತ್ಸವ ನಿಲ್ಲಿಸುವಂತೆ ಆದೇಶ ಹೊರಡಿಸಲು ಇನ್ಸ್​ಪೆಕ್ಟರ್​ಗೆ ಅಧಿಕಾರವಿಲ್ಲ ಎಂದು ತೀರ್ಪು ಪ್ರಕಟಿಸಿದ್ದಾರೆ. ವಾಟ್ಸಪ್ ಮೂಲಕ ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲ ಹಾಗೂ ಅಡ್ವೋಕೇಟ್​ ಜನರಲ್​​ ವಾಟ್ಸಪ್​ ಮೂಲಕವೇ ವಾದ-ಪ್ರತಿವಾದ ಮಂಡಿಸಿದರು.

ಇದನ್ನೂ ಓದಿ: ಸಾಕಿದ್ದ ಕೋಳಿಗಳಿಗೆ ಕಾಳು, ನೀರು ಹಾಕಲಿಲ್ವಂತೆ.. ಹೆತ್ತ ಮಗಳನ್ನೇ ಹೊಡೆದು ಕೊಂದ ತಂದೆ

ಸರ್ಕಾರದ ಪರ ಅಡ್ವೋಕೆಟ್​ ಜನರಲ್​ ವಾದ ಮಂಡಿಸಿ, ರಥೋತ್ಸವ ತಡೆಯಬೇಕೆಂಬುದು ಸರ್ಕಾರದ ಉದ್ದೇಶವಲ್ಲ. ಜನರ ಸುರಕ್ಷತೆಯ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು. ತಂಜಾವೂರಿನಲ್ಲಿ ಉತ್ಸವದ ವೇಳೆ ದುರಂತವೊಂದು ಸಂಭವಿಸಿದ್ದು, ವಿದ್ಯುತ್​ ಶಾಕ್​​ನಿಂದಾಗಿ 11 ಜನರು ಸಾವನ್ನಪ್ಪಿರುವ ವಿಷಯ ಗಮನಕ್ಕೆ ತಂದರು. ಈ ವೇಳೆ ನ್ಯಾಯಮೂರ್ತಿಗಳು ಮೆರವಣಿಗೆ ವೇಳೆ ವಿದ್ಯುತ್ ಕಡಿತಗೊಳಿಸುವಂತೆ ಸೂಚನೆ ನೀಡಿದರು.

ಚೆನ್ನೈ(ತಮಿಳುನಾಡು): ಸಾಮಾಜಿಕ ಜಾಲತಾಣ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲ ವಿಷಯಗಳಲ್ಲೂ ಬಳಕೆಯಾಗ್ತಿದ್ದು, ಇದೀಗ ಕೋರ್ಟ್​​ಗೂ ಲಗ್ಗೆ ಇಟ್ಟಿದೆ. ಅಂತಹ ಅಪರೂಪದ ಪ್ರಕರಣವೊಂದು ತಮಿಳುನಾಡಿನ ಮದ್ರಾಸ್ ಹೈಕೋರ್ಟ್​​​ನಲ್ಲಿ ನಡೆದಿದೆ. ವಾಟ್ಸಾಪ್​ ಮೂಲಕವೇ ನ್ಯಾಯಮೂರ್ತಿಗಳು ಪ್ರಕರಣ ಇತ್ಯರ್ಥ ಪಡಿಸಿದ್ದಾರೆ. ಮದ್ರಾಸ್​ ಹೈಕೋರ್ಟ್ ಇತಿಹಾಸದಲ್ಲೇ ಮೊದಲ ಸಲ ಇಂತಹದೊಂದು ಪ್ರಕರಣ ನಡೆದಿದ್ದು, ನ್ಯಾಯಮೂರ್ತಿಗಳು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾರಣ ವಾಟ್ಸಾಪ್ ಮೂಲಕ ಪ್ರಕರಣ ತುರ್ತು ವಿಚಾರಣೆ ನಡೆಸಿ, ಇತ್ಯರ್ಥಗೊಳಿಸಿದ್ದಾರೆ.

ಏನಿದು ಪ್ರಕರಣ?: ನ್ಯಾಯಮೂರ್ತಿ ಜೆ. ಆರ್​​ ಸ್ವಾಮಿನಾಥನ್​ ಅವರು ನಾಗರ್​ಕೋಯಿಲ್​​ನಲ್ಲಿ ಆಯೋಜನೆಗೊಂಡಿದ್ದ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಧರ್ಮಪುರಿ ಜಿಲ್ಲೆಯ ಶ್ರೀ ಅಭೀಷ್ಟ ವರದರಾಜ ಸ್ವಾಮಿ ದೇಗುಲದ ರಥೋತ್ಸವಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಎಂದು ಇನ್ಸ್​​ಪೆಕ್ಟರ್​​ ರಥೋತ್ಸವ ನಿಲ್ಲಿಸುವಂತೆ ಆದೇಶ ಹೊರಡಿಸಿದ್ದರು. ಹೀಗಾಗಿ, ದೇಗುಲದ ಟ್ರಸ್ಟಿ ಪರ ವಕೀಲರು ರಿಟ್​ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಉತ್ಸವ ನಡೆಯದಿದ್ದರೆ ಗ್ರಾಮಸ್ಥರು ದೇವರ ಕೋಪಕ್ಕೆ ಗುರಿಯಾಗುತ್ತಾರೆಂದು ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿತ್ತು.

High Court hears case through Whatsapp
ಮದ್ರಾಸ್ ಹೈಕೋರ್ಟ್ ಇತಿಹಾಸದಲ್ಲೊಂದು ವಿಭಿನ್ನ ಪ್ರಕರಣ

ಹೀಗಾಗಿ, ಅಲ್ಲಿಂದಲೇ ವಾಟ್ಸಾಪ್ ಮೂಲಕ ಪ್ರಕರಣ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳು, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಸಂಬಂಧಿಸಿದ ರಥೋತ್ಸವ ನಿಲ್ಲಿಸುವಂತೆ ಆದೇಶ ಹೊರಡಿಸಲು ಇನ್ಸ್​ಪೆಕ್ಟರ್​ಗೆ ಅಧಿಕಾರವಿಲ್ಲ ಎಂದು ತೀರ್ಪು ಪ್ರಕಟಿಸಿದ್ದಾರೆ. ವಾಟ್ಸಪ್ ಮೂಲಕ ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲ ಹಾಗೂ ಅಡ್ವೋಕೇಟ್​ ಜನರಲ್​​ ವಾಟ್ಸಪ್​ ಮೂಲಕವೇ ವಾದ-ಪ್ರತಿವಾದ ಮಂಡಿಸಿದರು.

ಇದನ್ನೂ ಓದಿ: ಸಾಕಿದ್ದ ಕೋಳಿಗಳಿಗೆ ಕಾಳು, ನೀರು ಹಾಕಲಿಲ್ವಂತೆ.. ಹೆತ್ತ ಮಗಳನ್ನೇ ಹೊಡೆದು ಕೊಂದ ತಂದೆ

ಸರ್ಕಾರದ ಪರ ಅಡ್ವೋಕೆಟ್​ ಜನರಲ್​ ವಾದ ಮಂಡಿಸಿ, ರಥೋತ್ಸವ ತಡೆಯಬೇಕೆಂಬುದು ಸರ್ಕಾರದ ಉದ್ದೇಶವಲ್ಲ. ಜನರ ಸುರಕ್ಷತೆಯ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು. ತಂಜಾವೂರಿನಲ್ಲಿ ಉತ್ಸವದ ವೇಳೆ ದುರಂತವೊಂದು ಸಂಭವಿಸಿದ್ದು, ವಿದ್ಯುತ್​ ಶಾಕ್​​ನಿಂದಾಗಿ 11 ಜನರು ಸಾವನ್ನಪ್ಪಿರುವ ವಿಷಯ ಗಮನಕ್ಕೆ ತಂದರು. ಈ ವೇಳೆ ನ್ಯಾಯಮೂರ್ತಿಗಳು ಮೆರವಣಿಗೆ ವೇಳೆ ವಿದ್ಯುತ್ ಕಡಿತಗೊಳಿಸುವಂತೆ ಸೂಚನೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.