ETV Bharat / bharat

ಅಂಡಮಾನ್​ - ನಿಕೋಬಾರ್​ ಪ್ರವೇಶಿಸಿದ ನೈರುತ್ಯ ಮಾನ್ಸೂನ್​​: ಹಲವು ರಾಜ್ಯಗಳಲ್ಲಿ ತಾಪಮಾನ ಕುಸಿತ

ನೈರುತ್ಯ ಮಾನ್ಸೂನ್​​​​​ ಅಂಡಮಾನ್​ - ನಿಕೋಬಾರ್​​ಗೆ ಪ್ರವೇಶ ಮಾಡಿದೆ. ಇನ್ನು ಬಂಗಾಳ ಕೊಲ್ಲಿಯ ದಕ್ಷಿಣ ಭಾಗವನ್ನು ತಲುಪಲಿದ್ದು, ಅಲ್ಲಿ ತಾಪಮಾನ ಕುಸಿತ ಕಂಡಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ.

author img

By

Published : May 16, 2022, 5:52 PM IST

IMD announces Southwest monsoon's entry in Andaman sea, temperature falls in Delhi
ಅಂಡಮಾನ್​ -ನಿಕೋಬಾರ್​ ಪ್ರವೇಶಿಸಿದ ನೈರುತ್ಯ ಮಾನ್ಸೂನ್​​: ಹಲವು ರಾಜ್ಯಗಳಲ್ಲಿ ತಾಪಮಾನ ಕುಸಿತ

ನವದೆಹಲಿ: ಅಂಡಮಾನ - ನಿಕೋಬಾರ್​​​​​​​​ಗೆ ನೈರುತ್ಯ ಮಾನ್ಸೂನ್​​ ಕಾಲಿಟ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ ( ಐಎಂಡಿ) ಹೇಳಿದೆ. ದೇಶಾದ್ಯಂತ ಹಲವು ರಾಜ್ಯಗಳಲ್ಲಿ ತಾಪಮಾನ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಕಡಿಮೆ ಉಷ್ಟವಲಯದ ಅಂಡಮಾನ್​- ನಿಕೋಬಾರ್ ದ್ವೀಪಗಳ ಅಕ್ಕ- ಪಕ್ಕದಲ್ಲಿ ನೈರುತ್ಯ ಮಾನ್ಸೂನ್​ ಮಾರುತಗಳು ಬಲಗೊಳ್ಳುತ್ತಿರುವುದರಿಂದ ದ್ವೀಪಗಳಿಗೆ ಮಾನ್ಸೂನ್​ ಕಾಲಿಟ್ಟಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಎರಡ್ಮೂರು ದಿನಗಳಲ್ಲಿ ನೈಋತ್ಯ ಮಾನ್ಸೂನ್, ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ಸಂಪೂರ್ಣ ಅಂಡಮಾನ್ ಮತ್ತು ಅಂಡಮಾನ್ ದ್ವೀಪಗಳು ಮತ್ತು ಪೂರ್ವ - ಮಧ್ಯ ಬಂಗಾಳ ಕೊಲ್ಲಿಯನ್ನು ಪ್ರವೇಶಿಸಲಿದ್ದು ಮಳೆಯನ್ನು ಸುರಿಸಲಿವೆ ಎಂದು ಹವಾಮಾನ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಾನ್ಸೂನ್ ಪದಾರ್ಪಣೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ ಕುಸಿತ ಕಂಡಿದೆ. 49 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾದ ಒಂದು ದಿನದ ಬಳಿಕ ದೆಹಲಿಯಲ್ಲಿ 2-3 ಡಿಗ್ರಿ ಸೆಲ್ಸಿಯಸ್​ ಕುಸಿತ ಕಂಡು ಬಂದಿದೆ. ದೆಹಲಿಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ರಾಷ್ಟ್ರ ರಾಜಧಾನಿ ಈ ವರ್ಷ ದಾಖಲೆ ತಾಪಮಾನಕ್ಕೆ ಸಾಕ್ಷಿಯಾಗಿದೆ ಎಂದು ಐಎಂಡಿಯ ಹಿರಿಯ ಹವಾಮಾನ ತಜ್ಞ ಜೆನಮಣಿ ಹೇಳಿದ್ದಾರೆ.

ಮಾರ್ಚ್​ ತಿಂಗಳಲ್ಲಿ ದೇಶದಲ್ಲಿ 122 ವರ್ಷಗಳಲ್ಲೇ ಅತಿ ಹೆಚ್ಚು ತಾಪಮಾನ ದಾಖಲಾಗಿತ್ತು ಎಂಬುದನ್ನು ಜೆನಮಣಿ ತಿಳಿಸಿದರು.

ಇದನ್ನು ಓದಿ: ಹರಿದ್ವಾರ : ಬುದ್ಧ ಪೂರ್ಣಿಮೆ ಹಿನ್ನೆಲೆ ಪವಿತ್ರ ಸ್ನಾನ ಮಾಡಿದ 4 ಲಕ್ಷ ಭಕ್ತರು

ನವದೆಹಲಿ: ಅಂಡಮಾನ - ನಿಕೋಬಾರ್​​​​​​​​ಗೆ ನೈರುತ್ಯ ಮಾನ್ಸೂನ್​​ ಕಾಲಿಟ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ ( ಐಎಂಡಿ) ಹೇಳಿದೆ. ದೇಶಾದ್ಯಂತ ಹಲವು ರಾಜ್ಯಗಳಲ್ಲಿ ತಾಪಮಾನ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಕಡಿಮೆ ಉಷ್ಟವಲಯದ ಅಂಡಮಾನ್​- ನಿಕೋಬಾರ್ ದ್ವೀಪಗಳ ಅಕ್ಕ- ಪಕ್ಕದಲ್ಲಿ ನೈರುತ್ಯ ಮಾನ್ಸೂನ್​ ಮಾರುತಗಳು ಬಲಗೊಳ್ಳುತ್ತಿರುವುದರಿಂದ ದ್ವೀಪಗಳಿಗೆ ಮಾನ್ಸೂನ್​ ಕಾಲಿಟ್ಟಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಎರಡ್ಮೂರು ದಿನಗಳಲ್ಲಿ ನೈಋತ್ಯ ಮಾನ್ಸೂನ್, ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ಸಂಪೂರ್ಣ ಅಂಡಮಾನ್ ಮತ್ತು ಅಂಡಮಾನ್ ದ್ವೀಪಗಳು ಮತ್ತು ಪೂರ್ವ - ಮಧ್ಯ ಬಂಗಾಳ ಕೊಲ್ಲಿಯನ್ನು ಪ್ರವೇಶಿಸಲಿದ್ದು ಮಳೆಯನ್ನು ಸುರಿಸಲಿವೆ ಎಂದು ಹವಾಮಾನ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಾನ್ಸೂನ್ ಪದಾರ್ಪಣೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ ಕುಸಿತ ಕಂಡಿದೆ. 49 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾದ ಒಂದು ದಿನದ ಬಳಿಕ ದೆಹಲಿಯಲ್ಲಿ 2-3 ಡಿಗ್ರಿ ಸೆಲ್ಸಿಯಸ್​ ಕುಸಿತ ಕಂಡು ಬಂದಿದೆ. ದೆಹಲಿಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ರಾಷ್ಟ್ರ ರಾಜಧಾನಿ ಈ ವರ್ಷ ದಾಖಲೆ ತಾಪಮಾನಕ್ಕೆ ಸಾಕ್ಷಿಯಾಗಿದೆ ಎಂದು ಐಎಂಡಿಯ ಹಿರಿಯ ಹವಾಮಾನ ತಜ್ಞ ಜೆನಮಣಿ ಹೇಳಿದ್ದಾರೆ.

ಮಾರ್ಚ್​ ತಿಂಗಳಲ್ಲಿ ದೇಶದಲ್ಲಿ 122 ವರ್ಷಗಳಲ್ಲೇ ಅತಿ ಹೆಚ್ಚು ತಾಪಮಾನ ದಾಖಲಾಗಿತ್ತು ಎಂಬುದನ್ನು ಜೆನಮಣಿ ತಿಳಿಸಿದರು.

ಇದನ್ನು ಓದಿ: ಹರಿದ್ವಾರ : ಬುದ್ಧ ಪೂರ್ಣಿಮೆ ಹಿನ್ನೆಲೆ ಪವಿತ್ರ ಸ್ನಾನ ಮಾಡಿದ 4 ಲಕ್ಷ ಭಕ್ತರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.