ETV Bharat / bharat

ಐಪಿಎಲ್ ಕ್ರಿಕೆಟ್​: ಆರ್​ಸಿಬಿ ನಾಯಕತ್ವ ತ್ಯಜಿಸಿದ ವಿರಾಟ್​ ಕೊಹ್ಲಿ..!

author img

By

Published : Mar 16, 2023, 9:06 PM IST

2021ರ ಸೀಸನ್​ ನಂತರ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಅಧಿಕಾರ ವಹಿಸಿಕೊಂಡ ನಂತರ, ವಿರಾಟ್​ ಕೊಹ್ಲಿ ಆರ್​ಸಿಬಿ ನಾಯಕತ್ವ ತ್ಯಜಿಸಿದ್ದಾರೆ.

Virat Kohli on IPL captaincy
ವಿರಾಟ್ ಕೊಹ್ಲಿ

ನವದೆಹಲಿ: ಸ್ಟಾರ್ ಇಂಡಿಯಾ ಬ್ಯಾಟ್ಸಮನ್​ ವಿರಾಟ್ ಕೊಹ್ಲಿ 2021ರ ಸೀಸನ್​ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಕೈಗೊಂಡಿದ್ದಾರೆ. ''ನನಗೆ ಯಾವುದೇ ನಂಬಿಕೆ ಇಲ್ಲ ಹಾಗೂ ನನ್ನ ಬತ್ತಳಿಕೆಗೆ ಸಂಪೂರ್ಣವಾಗಿ ಬರಿದಾಗಿದೆ'' ಎಂದು ಅವರ ಐಪಿಎಲ್ ನಾಯಕತ್ವ ಅವಧಿಯ ಅಂತ್ಯದ ವೇಳೆಯಲ್ಲಿ ಈ ರೀತಿ ಹೇಳಿದ್ದಾರೆ. ಆರ್​ಸಿಬಿ 2019ರಲ್ಲಿ ಭಯಾನಕ ಪ್ರದರ್ಶನ ನೀಡಿತ್ತು. ಆದರೆ, ಸತತವಾಗಿ ಆರು ಪಂದ್ಯಗಳನ್ನು ಸೋಲುವ ಮೂಲಕ ಅಂತಿಮವಾಗಿ ಐಪಿಎಲ್​ನಲ್ಲಿ ಮುಗ್ಗರಿಸಿತ್ತು.

ಡು ಪ್ಲೆಸಿಸ್ ಅಧಿಕಾರವಹಿಸಿದ ನಂತರ ಆಗಿದ್ದೇನು?: ಇನ್ನೂ 2021ರ ಸೀಸನ್​ ನಂತರ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಅಧಿಕಾರವನ್ನು ವಹಿಸಿಕೊಂಡ ನಂತರ, ಕೊಹ್ಲಿ ಆರ್​ಸಿಬಿ ನಾಯಕತ್ವವನ್ನು ತ್ಯಜಿಸಿದರು. "ನನ್ನ ನಾಯಕತ್ವದ ಅಧಿಕಾರಾವಧಿಯು ಇಲ್ಲಿಗೆ ಕೊನೆಗೊಳ್ಳುತ್ತಿರುವ ಸಮಯ, ನನಗೆ ಯಾವುದೇ ನಂಬಿಕೆಯಿಲ್ಲ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನ್ನ ಬತ್ತಳಿಕೆ ಸಂಪೂರ್ಣವಾಗಿ ಬರಿದಾಗಿದೆ'' ಎಂದು ಆರ್‌ಸಿಬಿ ಮಹಿಳಾ ತಂಡಕ್ಕೆ ಪ್ರೇರಕ ಭಾಷಣದಲ್ಲಿ ವಿರಾಟ್​ ಕೊಹ್ಲಿ ಹೇಳಿದ್ದಾರೆ.

"ಆದರೆ, ಅದು ನನ್ನ ಸ್ವಂತ ದೃಷ್ಟಿಕೋನವಾಗಿತ್ತು. ಇದು ನಾನು ಕೇವಲ ಒಬ್ಬ ವ್ಯಕ್ತಿಯಾಗಿದ್ದು, ನಾನು ಸೋಲು - ಗೆಲವುಗಳನ್ನು ತುಂಬಾ ನೋಡಿದ್ದೇನೆ. ಹೀಗಾಗಿ ನಾನು ತಂಡವನ್ನು ನಿರ್ವಹಿಸಲು ಸಾಧ್ಯವಿಲ್ಲ. ಇನ್ನು ಮುಂದೆ ತಂಡವನ್ನು ನಿಭಾಯಿಸಲು ಸಾಧ್ಯವಿಲ್ಲ" ಎಂದು ಅವರು ತಿಳಿಸಿದರು. ಆರ್​ಸಿಬಿ 2016ರ ಸೀಸನ್​ ನಂತರ, ಮೊದಲ ಬಾರಿಗೆ 2020ರ ಆವೃತ್ತಿಯಲ್ಲಿ ಪ್ಲೇಆಫ್‌ಗೆ ಪ್ರವೇಶಿಸಿತ್ತು. ಅದರ ಮುಂದಿನ ಎರಡು ಆವೃತ್ತಿಗಳಲ್ಲಿ ನಾಕೌಟ್‌ ಹಂತಕ್ಕೆ ತಲುಪಿತ್ತು.

ಸತತ ಮೂರು ವರ್ಷಗಳವರೆಗೆ ಪ್ಲೇಆಫ್‌ ಪ್ರವೇಶಿಸಿದ್ದ ಆರ್​ಸಿಬಿ: ''ನಂತರದ ಐಪಿಎಲ್​ ಸೀಸನ್​ನಲ್ಲಿ ಹೊಸಬರು ಬಂದರು. ಅವರು ಹೊಸ ಆಲೋಚನೆಗಳನ್ನು ಹೊಂದಿದ್ದರು. ಇದರಿಂದ ಮತ್ತೊಂದು ಆಶಾಭಾವ ಮೂಡಿತ್ತು. ಹೊಸ ಆಟಗಾರರು ಉತ್ಸುಕರಾಗಿದ್ದರು. ಒಬ್ಬ ವ್ಯಕ್ತಿಯಾಗಿ ನಾನು ಉತ್ಸುಕನಾಗಿರಲಿಲ್ಲ. ಆದರೆ, ಅವರು ಶಕ್ತಿಯನ್ನು ಹೊಸ ಸೃಷ್ಟಿಸಿದರು. ಇದರಿಂದ ನಾವು ಸತತ ಮೂರು ವರ್ಷಗಳವರೆಗೆ ಪ್ಲೇ - ಆಫ್‌ಗಳನ್ನು ತಲುಪಲು ಸಾಧ್ಯವಾಯಿತು'' ಎಂದು ಕೊಹ್ಲಿ ಹೇಳಿದರು.

"ನಾವು ಪ್ರತಿ ಐಪಿಎಲ್​ ಸೀಸನ್​ಗಳನ್ನು ಉತ್ಸಾಹದಿಂದ ಪ್ರಾರಂಭಿಸುತ್ತೇವೆ. ನಾನು ಈಗಲೂ ಉತ್ಸುಕನಾಗಿದ್ದೇನೆ. ಸದ್ಯ ಗುರುತು ಹಿಡಿಯದ ವ್ಯಕ್ತಿಯಾಗಿದ್ದೇನೆ. ಈಗ ತಂಡ ಸಾಮೂಹಿಕ ಜವಾಬ್ದಾರಿಯಾಗಿದೆ. ಯಾರಾದರೂ ಖಿನ್ನತೆಗೆ ಒಳಗಾಗಿದರೆ, ಇತರರು ನಾಯಕನಿಗೆ ಬೆನ್ನೆಲುಬಾಗಿ ನಿಲ್ಲಬೇಕು'' ಎಂದು ಅವರು ತಿಳಿಸಿದರು.

ಸದ್ಯ ಯಾವುದಕ್ಕೂ ಕ್ಯಾಪ್ಟನ್​ ಕೊಹ್ಲಿ: 2021ರ ಟಿ-20 ವಿಶ್ವಕಪ್ ನಂತರ, ಭಾರತದ ಟಿ-20 ನಾಯಕತ್ವದಿಂದ ಕೆಳಗಿಳಿಯಲು ಅವರು ಮನಸ್ಸು ಮಾಡಿದರು. ಆರ್​ಸಿಬಿ ನಾಯಕತ್ವವನ್ನು ತ್ಯಜಿಸುವ ನಿರ್ಧಾರವನ್ನೂ ಕೊಹ್ಲಿ ತೆಗೆದುಕೊಂಡಿದ್ದಾರೆ. ನಂತರ ಅವರನ್ನು ಏಕದಿನ ನಾಯಕತ್ವದಿಂದ ತೆಗೆದು ಹಾಕಲಾಯಿತು ಮತ್ತು ಜೊತೆಗೆ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದರು. ಕೊಹ್ಲಿ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಡ್ರಾ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಅತ್ಯುತ್ತಮವಾಗಿ 186 ರನ್ ಗಳಿಸಿದರು. ಮೂರು ವರ್ಷಗಳ ನಂತರ, ತಮ್ಮ 28ನೇ ಟೆಸ್ಟ್ ಶತಕವನ್ನು ಗಳಿಸಿದರು.

ಇದನ್ನೂ ಓದಿ: ಡೇವಿಡ್ ವಾರ್ನರ್ ಅರಸಿ ಬಂದ ಅದೃಷ್ಟ! ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ಮಹತ್ವದ ಬದಲಾವಣೆ

ನವದೆಹಲಿ: ಸ್ಟಾರ್ ಇಂಡಿಯಾ ಬ್ಯಾಟ್ಸಮನ್​ ವಿರಾಟ್ ಕೊಹ್ಲಿ 2021ರ ಸೀಸನ್​ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಕೈಗೊಂಡಿದ್ದಾರೆ. ''ನನಗೆ ಯಾವುದೇ ನಂಬಿಕೆ ಇಲ್ಲ ಹಾಗೂ ನನ್ನ ಬತ್ತಳಿಕೆಗೆ ಸಂಪೂರ್ಣವಾಗಿ ಬರಿದಾಗಿದೆ'' ಎಂದು ಅವರ ಐಪಿಎಲ್ ನಾಯಕತ್ವ ಅವಧಿಯ ಅಂತ್ಯದ ವೇಳೆಯಲ್ಲಿ ಈ ರೀತಿ ಹೇಳಿದ್ದಾರೆ. ಆರ್​ಸಿಬಿ 2019ರಲ್ಲಿ ಭಯಾನಕ ಪ್ರದರ್ಶನ ನೀಡಿತ್ತು. ಆದರೆ, ಸತತವಾಗಿ ಆರು ಪಂದ್ಯಗಳನ್ನು ಸೋಲುವ ಮೂಲಕ ಅಂತಿಮವಾಗಿ ಐಪಿಎಲ್​ನಲ್ಲಿ ಮುಗ್ಗರಿಸಿತ್ತು.

ಡು ಪ್ಲೆಸಿಸ್ ಅಧಿಕಾರವಹಿಸಿದ ನಂತರ ಆಗಿದ್ದೇನು?: ಇನ್ನೂ 2021ರ ಸೀಸನ್​ ನಂತರ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಅಧಿಕಾರವನ್ನು ವಹಿಸಿಕೊಂಡ ನಂತರ, ಕೊಹ್ಲಿ ಆರ್​ಸಿಬಿ ನಾಯಕತ್ವವನ್ನು ತ್ಯಜಿಸಿದರು. "ನನ್ನ ನಾಯಕತ್ವದ ಅಧಿಕಾರಾವಧಿಯು ಇಲ್ಲಿಗೆ ಕೊನೆಗೊಳ್ಳುತ್ತಿರುವ ಸಮಯ, ನನಗೆ ಯಾವುದೇ ನಂಬಿಕೆಯಿಲ್ಲ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನ್ನ ಬತ್ತಳಿಕೆ ಸಂಪೂರ್ಣವಾಗಿ ಬರಿದಾಗಿದೆ'' ಎಂದು ಆರ್‌ಸಿಬಿ ಮಹಿಳಾ ತಂಡಕ್ಕೆ ಪ್ರೇರಕ ಭಾಷಣದಲ್ಲಿ ವಿರಾಟ್​ ಕೊಹ್ಲಿ ಹೇಳಿದ್ದಾರೆ.

"ಆದರೆ, ಅದು ನನ್ನ ಸ್ವಂತ ದೃಷ್ಟಿಕೋನವಾಗಿತ್ತು. ಇದು ನಾನು ಕೇವಲ ಒಬ್ಬ ವ್ಯಕ್ತಿಯಾಗಿದ್ದು, ನಾನು ಸೋಲು - ಗೆಲವುಗಳನ್ನು ತುಂಬಾ ನೋಡಿದ್ದೇನೆ. ಹೀಗಾಗಿ ನಾನು ತಂಡವನ್ನು ನಿರ್ವಹಿಸಲು ಸಾಧ್ಯವಿಲ್ಲ. ಇನ್ನು ಮುಂದೆ ತಂಡವನ್ನು ನಿಭಾಯಿಸಲು ಸಾಧ್ಯವಿಲ್ಲ" ಎಂದು ಅವರು ತಿಳಿಸಿದರು. ಆರ್​ಸಿಬಿ 2016ರ ಸೀಸನ್​ ನಂತರ, ಮೊದಲ ಬಾರಿಗೆ 2020ರ ಆವೃತ್ತಿಯಲ್ಲಿ ಪ್ಲೇಆಫ್‌ಗೆ ಪ್ರವೇಶಿಸಿತ್ತು. ಅದರ ಮುಂದಿನ ಎರಡು ಆವೃತ್ತಿಗಳಲ್ಲಿ ನಾಕೌಟ್‌ ಹಂತಕ್ಕೆ ತಲುಪಿತ್ತು.

ಸತತ ಮೂರು ವರ್ಷಗಳವರೆಗೆ ಪ್ಲೇಆಫ್‌ ಪ್ರವೇಶಿಸಿದ್ದ ಆರ್​ಸಿಬಿ: ''ನಂತರದ ಐಪಿಎಲ್​ ಸೀಸನ್​ನಲ್ಲಿ ಹೊಸಬರು ಬಂದರು. ಅವರು ಹೊಸ ಆಲೋಚನೆಗಳನ್ನು ಹೊಂದಿದ್ದರು. ಇದರಿಂದ ಮತ್ತೊಂದು ಆಶಾಭಾವ ಮೂಡಿತ್ತು. ಹೊಸ ಆಟಗಾರರು ಉತ್ಸುಕರಾಗಿದ್ದರು. ಒಬ್ಬ ವ್ಯಕ್ತಿಯಾಗಿ ನಾನು ಉತ್ಸುಕನಾಗಿರಲಿಲ್ಲ. ಆದರೆ, ಅವರು ಶಕ್ತಿಯನ್ನು ಹೊಸ ಸೃಷ್ಟಿಸಿದರು. ಇದರಿಂದ ನಾವು ಸತತ ಮೂರು ವರ್ಷಗಳವರೆಗೆ ಪ್ಲೇ - ಆಫ್‌ಗಳನ್ನು ತಲುಪಲು ಸಾಧ್ಯವಾಯಿತು'' ಎಂದು ಕೊಹ್ಲಿ ಹೇಳಿದರು.

"ನಾವು ಪ್ರತಿ ಐಪಿಎಲ್​ ಸೀಸನ್​ಗಳನ್ನು ಉತ್ಸಾಹದಿಂದ ಪ್ರಾರಂಭಿಸುತ್ತೇವೆ. ನಾನು ಈಗಲೂ ಉತ್ಸುಕನಾಗಿದ್ದೇನೆ. ಸದ್ಯ ಗುರುತು ಹಿಡಿಯದ ವ್ಯಕ್ತಿಯಾಗಿದ್ದೇನೆ. ಈಗ ತಂಡ ಸಾಮೂಹಿಕ ಜವಾಬ್ದಾರಿಯಾಗಿದೆ. ಯಾರಾದರೂ ಖಿನ್ನತೆಗೆ ಒಳಗಾಗಿದರೆ, ಇತರರು ನಾಯಕನಿಗೆ ಬೆನ್ನೆಲುಬಾಗಿ ನಿಲ್ಲಬೇಕು'' ಎಂದು ಅವರು ತಿಳಿಸಿದರು.

ಸದ್ಯ ಯಾವುದಕ್ಕೂ ಕ್ಯಾಪ್ಟನ್​ ಕೊಹ್ಲಿ: 2021ರ ಟಿ-20 ವಿಶ್ವಕಪ್ ನಂತರ, ಭಾರತದ ಟಿ-20 ನಾಯಕತ್ವದಿಂದ ಕೆಳಗಿಳಿಯಲು ಅವರು ಮನಸ್ಸು ಮಾಡಿದರು. ಆರ್​ಸಿಬಿ ನಾಯಕತ್ವವನ್ನು ತ್ಯಜಿಸುವ ನಿರ್ಧಾರವನ್ನೂ ಕೊಹ್ಲಿ ತೆಗೆದುಕೊಂಡಿದ್ದಾರೆ. ನಂತರ ಅವರನ್ನು ಏಕದಿನ ನಾಯಕತ್ವದಿಂದ ತೆಗೆದು ಹಾಕಲಾಯಿತು ಮತ್ತು ಜೊತೆಗೆ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದರು. ಕೊಹ್ಲಿ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಡ್ರಾ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಅತ್ಯುತ್ತಮವಾಗಿ 186 ರನ್ ಗಳಿಸಿದರು. ಮೂರು ವರ್ಷಗಳ ನಂತರ, ತಮ್ಮ 28ನೇ ಟೆಸ್ಟ್ ಶತಕವನ್ನು ಗಳಿಸಿದರು.

ಇದನ್ನೂ ಓದಿ: ಡೇವಿಡ್ ವಾರ್ನರ್ ಅರಸಿ ಬಂದ ಅದೃಷ್ಟ! ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ಮಹತ್ವದ ಬದಲಾವಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.