ETV Bharat / bharat

ಕಾಬೂಲ್ ವಿಶ್ವವಿದ್ಯಾಲಯದಲ್ಲಿ ಸಿಲುಕಿಕೊಂಡ ಭಾರತೀಯ ಶಿಕ್ಷಕರು.. ಸ್ಥಳಾಂತರಕ್ಕಾಗಿ ಸರ್ಕಾರದ ಮೊರೆ

author img

By

Published : Aug 18, 2021, 8:53 PM IST

ಯುದ್ಧದಿಂದ ಹಾನಿಗೊಳಗಾದ ಅಫ್ಘಾನಿಸ್ತಾನದಲ್ಲಿರುವ ನಾಲ್ಕು ಭಾರತೀಯ ಶಿಕ್ಷಕರು, ತಮ್ಮನ್ನು ತಕ್ಷಣ ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ. ಮೂವರೂ ಕಾಬೂಲ್‌ನ ಬಖ್ತರ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿದ್ದರು. ಕಾಶ್ಮೀರದ ನಿವಾಸಿ ಮತ್ತು ನಾಲ್ಕು ವರ್ಷಗಳಿಂದ ಕಾಬೂಲ್ ಮೂಲದ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಬೋಧಿಸುತ್ತಿರುವ ಶಾ, ತಮ್ಮ ಸಹೋದ್ಯೋಗಿಗಳು ಅನಿರೀಕ್ಷಿತ ಘಟನೆಗಳ ನಂತರ ಇಂತಹ ವಾತಾವರಣದಲ್ಲಿ ಬದುಕಲು ಭಯಪಡುತ್ತಾರೆ ಎಂದು ಹೇಳಿದ್ದಾರೆ.

ಕಾಬೂಲ್ ವಿಶ್ವವಿದ್ಯಾಲಯದಲ್ಲಿ ಸಿಲುಕಿಕೊಂಡ ಭಾರತೀಯ ಶಿಕ್ಷಕರು
ಕಾಬೂಲ್ ವಿಶ್ವವಿದ್ಯಾಲಯದಲ್ಲಿ ಸಿಲುಕಿಕೊಂಡ ಭಾರತೀಯ ಶಿಕ್ಷಕರು

ನವದೆಹಲಿ: ತಾಲಿಬಾನ್ ಕಾಬೂಲ್ ಮೇಲೆ ಹಿಡಿತ ಸಾಧಿಸಿದ ನಂತರ ಯಾವುದೇ ಗುಂಡಿನ ಸದ್ದು ಕೇಳಿಲ್ಲ. ಆದರೆ, ಪ್ರತಿ ಗಂಟೆಗೊಮ್ಮೆ ಪರಿಸ್ಥಿತಿ ಕೈ ಮೀರುವ ಹಂತದತ್ತ ಸಾಗುತ್ತಿದೆ. ಅನೇಕ ಜನ ತಾಲಿಬಾನ್​ ಆಡಳಿತದ ಭಯದಲ್ಲಿ ತಮ್ಮ ತಮ್ಮ ದೇಶಗಳಿಗೆ ಮರಳಲು ಹವಣಿಸುತ್ತಿದ್ದಾರೆ. ಅಲ್ಲದೇ, ಯುದ್ಧದಿಂದ ಹಾನಿಗೊಳಗಾದ ಅಫ್ಘಾನಿಸ್ತಾನದಲ್ಲಿರುವ ನಾಲ್ಕು ಭಾರತೀಯ ಶಿಕ್ಷಕರು ತಕ್ಷಣ ಸ್ಥಳಾಂತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮೂವರೂ ಕಾಬೂಲ್‌ನ ಬಖ್ತರ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿದ್ದರು. 'ನಾವು ಭಾರತದ ಪ್ರತಿಯೊಂದು ಸಂಭವನೀಯ ವೇದಿಕೆಗಳನ್ನು ತಲುಪಿದ್ದೇವೆ ಮತ್ತು ನಮ್ಮ ತಕ್ಷಣದ ಸ್ಥಳಾಂತರವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಏನನ್ನಾದರೂ ಮಾಡುತ್ತದೆ ಎಂದು ನಿರೀಕ್ಷಿಸುತ್ತಿದ್ದೇವೆ. ಎರಡು ದಿನಗಳಲ್ಲಿ ಕ್ಯಾಂಪಸ್‌ನಿಂದ ಹೊರಬಂದಿಲ್ಲ ಮತ್ತು ಪ್ರತಿ ಬಾರಿ ಹೊರಗೆ ಗಲಾಟೆ ನಡೆದಾಗ, ಭಯವಾಗುತ್ತದೆ' ಎಂದು ಮೊಹಮ್ಮದ್ ಆಸಿಫ್ ಶಾ ತಿಳಿಸಿದ್ದಾರೆ.

ಓದಿ: ಅಫ್ಘಾನ್‌ನಲ್ಲಿ ತಾಲಿಬಾನ್‌ 2.0 ಅರಾಜಕತೆ ಶುರು ; ಹಜಾರಾ ನಾಯಕನ ಪ್ರತಿಮೆ ಧ್ವಂಸ

ಕಾಶ್ಮೀರದ ನಿವಾಸಿ ಮತ್ತು ನಾಲ್ಕು ವರ್ಷಗಳಿಂದ ಕಾಬೂಲ್ ಮೂಲದ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಬೋಧಿಸುತ್ತಿರುವ ಶಾ, ತಮ್ಮ ಸಹೋದ್ಯೋಗಿಗಳು ಅನಿರೀಕ್ಷಿತ ಘಟನೆಗಳ ನಂತರ ಪ್ರಸ್ತುತ ವಾತಾವರಣದಲ್ಲಿ ಬದುಕಲು ಭಯಪಡುತ್ತಿದ್ದಾರೆ ಎಂದು ಹೇಳಿದ್ದಾರೆ.

ನಾನು ಸೋಮವಾರ ಹಿಂತಿರುಗುವ ಯೋಜನೆ ಹೊಂದಿದ್ದೆ. ನನ್ನ ಟಿಕೆಟ್ ಬುಕ್ ಸಹ ಮಾಡಿದ್ದೆ. ಆದರೆ, ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಹೋಗಲು ನನಗೆ ಗಂಟೆಗಳು ಬೇಕಾಯಿತು. ಮತ್ತು ವಿಮಾನ ನಿಲ್ದಾಣದಲ್ಲಿ ಇಡೀ ಕಾಬೂಲ್ ಜನ ಜಮಾಯಿಸಿದಂತಿದೆ. ವಿಮಾನ ರದ್ದಾಯಿತು ಮತ್ತು ನನಗೆ ಬೇರೆ ದಾರಿಯಿಲ್ಲದೇ ವಿಶ್ವವಿದ್ಯಾಲಯದ ಹಾಸ್ಟೆಲ್‌ಗೆ ಹಿಂತಿರುಗಿದೆ ಎಂದು ಹೇಳಿಕೊಂಡಿದ್ದಾರೆ.

ಆಫ್‌ಲೈನ್ ಪರೀಕ್ಷೆಗಳನ್ನು ನಡೆಸಲು ಸರ್ಕಾರ ನಿರ್ಧರಿಸಿದ ನಂತರ ಶಾ ಎರಡು ತಿಂಗಳ ಹಿಂದೆ ಅಫ್ಘಾನಿಸ್ತಾನಕ್ಕೆ ಮರಳಿದ್ದರು.

ಓದಿ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ.. ಈವರೆಗೂ 40 ಮಂದಿಯ ಹತ್ಯೆ..

ನವದೆಹಲಿ: ತಾಲಿಬಾನ್ ಕಾಬೂಲ್ ಮೇಲೆ ಹಿಡಿತ ಸಾಧಿಸಿದ ನಂತರ ಯಾವುದೇ ಗುಂಡಿನ ಸದ್ದು ಕೇಳಿಲ್ಲ. ಆದರೆ, ಪ್ರತಿ ಗಂಟೆಗೊಮ್ಮೆ ಪರಿಸ್ಥಿತಿ ಕೈ ಮೀರುವ ಹಂತದತ್ತ ಸಾಗುತ್ತಿದೆ. ಅನೇಕ ಜನ ತಾಲಿಬಾನ್​ ಆಡಳಿತದ ಭಯದಲ್ಲಿ ತಮ್ಮ ತಮ್ಮ ದೇಶಗಳಿಗೆ ಮರಳಲು ಹವಣಿಸುತ್ತಿದ್ದಾರೆ. ಅಲ್ಲದೇ, ಯುದ್ಧದಿಂದ ಹಾನಿಗೊಳಗಾದ ಅಫ್ಘಾನಿಸ್ತಾನದಲ್ಲಿರುವ ನಾಲ್ಕು ಭಾರತೀಯ ಶಿಕ್ಷಕರು ತಕ್ಷಣ ಸ್ಥಳಾಂತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮೂವರೂ ಕಾಬೂಲ್‌ನ ಬಖ್ತರ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿದ್ದರು. 'ನಾವು ಭಾರತದ ಪ್ರತಿಯೊಂದು ಸಂಭವನೀಯ ವೇದಿಕೆಗಳನ್ನು ತಲುಪಿದ್ದೇವೆ ಮತ್ತು ನಮ್ಮ ತಕ್ಷಣದ ಸ್ಥಳಾಂತರವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಏನನ್ನಾದರೂ ಮಾಡುತ್ತದೆ ಎಂದು ನಿರೀಕ್ಷಿಸುತ್ತಿದ್ದೇವೆ. ಎರಡು ದಿನಗಳಲ್ಲಿ ಕ್ಯಾಂಪಸ್‌ನಿಂದ ಹೊರಬಂದಿಲ್ಲ ಮತ್ತು ಪ್ರತಿ ಬಾರಿ ಹೊರಗೆ ಗಲಾಟೆ ನಡೆದಾಗ, ಭಯವಾಗುತ್ತದೆ' ಎಂದು ಮೊಹಮ್ಮದ್ ಆಸಿಫ್ ಶಾ ತಿಳಿಸಿದ್ದಾರೆ.

ಓದಿ: ಅಫ್ಘಾನ್‌ನಲ್ಲಿ ತಾಲಿಬಾನ್‌ 2.0 ಅರಾಜಕತೆ ಶುರು ; ಹಜಾರಾ ನಾಯಕನ ಪ್ರತಿಮೆ ಧ್ವಂಸ

ಕಾಶ್ಮೀರದ ನಿವಾಸಿ ಮತ್ತು ನಾಲ್ಕು ವರ್ಷಗಳಿಂದ ಕಾಬೂಲ್ ಮೂಲದ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಬೋಧಿಸುತ್ತಿರುವ ಶಾ, ತಮ್ಮ ಸಹೋದ್ಯೋಗಿಗಳು ಅನಿರೀಕ್ಷಿತ ಘಟನೆಗಳ ನಂತರ ಪ್ರಸ್ತುತ ವಾತಾವರಣದಲ್ಲಿ ಬದುಕಲು ಭಯಪಡುತ್ತಿದ್ದಾರೆ ಎಂದು ಹೇಳಿದ್ದಾರೆ.

ನಾನು ಸೋಮವಾರ ಹಿಂತಿರುಗುವ ಯೋಜನೆ ಹೊಂದಿದ್ದೆ. ನನ್ನ ಟಿಕೆಟ್ ಬುಕ್ ಸಹ ಮಾಡಿದ್ದೆ. ಆದರೆ, ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಹೋಗಲು ನನಗೆ ಗಂಟೆಗಳು ಬೇಕಾಯಿತು. ಮತ್ತು ವಿಮಾನ ನಿಲ್ದಾಣದಲ್ಲಿ ಇಡೀ ಕಾಬೂಲ್ ಜನ ಜಮಾಯಿಸಿದಂತಿದೆ. ವಿಮಾನ ರದ್ದಾಯಿತು ಮತ್ತು ನನಗೆ ಬೇರೆ ದಾರಿಯಿಲ್ಲದೇ ವಿಶ್ವವಿದ್ಯಾಲಯದ ಹಾಸ್ಟೆಲ್‌ಗೆ ಹಿಂತಿರುಗಿದೆ ಎಂದು ಹೇಳಿಕೊಂಡಿದ್ದಾರೆ.

ಆಫ್‌ಲೈನ್ ಪರೀಕ್ಷೆಗಳನ್ನು ನಡೆಸಲು ಸರ್ಕಾರ ನಿರ್ಧರಿಸಿದ ನಂತರ ಶಾ ಎರಡು ತಿಂಗಳ ಹಿಂದೆ ಅಫ್ಘಾನಿಸ್ತಾನಕ್ಕೆ ಮರಳಿದ್ದರು.

ಓದಿ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ.. ಈವರೆಗೂ 40 ಮಂದಿಯ ಹತ್ಯೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.