ETV Bharat / bharat

ಹಿಟ್ ಅಂಡ್​​ ಡ್ರ್ಯಾಗ್ ಪ್ರಕರಣ : ಬ್ಯಾನೆಟ್​ಗೆ ಸಿಲುಕಿದ ರಿಕ್ಷಾ ಚಾಲಕ 200 ಮೀಟರ್​ ವರೆಗೆ ಎಳೆದೊಯ್ದ ಕಾರ್​​

author img

By

Published : Apr 26, 2023, 9:56 AM IST

ಅಪಘಾತದಲ್ಲಿ ಕಾರಿನ ಬ್ಯಾನೆಟ್​ಗೆ ಸಿಲುಕಿದ್ದ ರಿಕ್ಷಾ ಚಾಲಕನನ್ನು 200 ಮೀ ದೂರದವರೆಗೆ ಎಳೆದೊಯ್ದಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

ಹಿಟ್ ಆ್ಯಂಡ್ ಡ್ರ್ಯಾಗ್ ಪ್ರಕರಣ
ಹಿಟ್ ಆ್ಯಂಡ್ ಡ್ರ್ಯಾಗ್ ಪ್ರಕರಣ

ನವದೆಹಲಿ: ದೆಹಲಿಯ ಫಿರೋಜ್‌ ಶಾ ರಸ್ತೆಯಲ್ಲಿ ಮಂಗಳವಾರ ಮತ್ತೊಂದು ಹಿಟ್ ಅಂಡ್​ ಡ್ರ್ಯಾಗ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ವೇಗವಾಗಿ ಬಂದ ಕಾರೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಚಾಲಕ ಕಾರಿಗೆ ಸಿಲುಕಿದ್ದು, ಸುಮಾರು 200 ಮೀಟರ್ ವರೆಗೆ ರಿಕ್ಷಾಚಾಲಕನನ್ನು ಕಾರು ಎಳೆದೊಯ್ದಿರುವ ಘಟನೆ ನಡೆದಿದೆ. ಘಟನೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಅಪಘಾತದ ಮಾಹಿತಿ ಪಡೆದು ಕಾರು ಚಾಲಕ ಫರ್ಮಾನ್​ನನ್ನ ಬಂಧಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ರಿಕ್ಷಾ ಚಾಲಕ ಮನೋಜ್​ನನ್ನು ಕೂಡಲೇ ಸ್ಥಳೀಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಕುರಿತು ಉಪ ಪೊಲೀಸ್ ಆಯುಕ್ತ ಪ್ರಣವ್ ತಯಾಲ್ ಮಾಹಿತಿ ನೀಡಿದ್ದು, "ಮಂಗಳವಾರ ತಡರಾತ್ರಿ ಫಿರೋಜ್‌ ಶಾ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ರಿಕ್ಷಾ ಚಾಲಕ ಕಾರಿನ ಬ್ಯಾನೆಟ್‌ಗೆ ಸಿಲುಕಿದ್ದು, ಕಾರು ಚಾಲಕ ಸುಮಾರು 200 ಮೀಟರ್ ದೂರ ಎಳೆದೊಯ್ದಿದ್ದಾನೆ. ಇದನ್ನು ಕಂಡ ಜನರು ಕಾರನ್ನು ತಡೆದಿದ್ದಾರೆ. ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕಾರು ಚಾಲಕ ಗಾಜಿಯಾಬಾದ್​ನ ಮುರಾದ್ ನಗರದ ನಿವಾಸಿ ಫರ್ಮಾನ್ ನನ್ನು ಬಂಧಿಸಲಾಗಿದ್ದು, ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಅಪಘಾತ ಮಾಡಲಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹಾಗೆಯೇ ಆರೋಪಿತನನ್ನು ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಘಟನೆಯಲ್ಲಿ ಗಾಯಗೊಂಡಿರುವ ಮನೋಜ್​ ಹೌಸ್ ಕೀಪಿಂಗ್ ಕೆಲಸದ ಜೊತೆ ರಿಕ್ಷಾ ಓಡಿಸುತ್ತಿದ್ದರು. ಆಸ್ಪತ್ರೆಯಲ್ಲಿ ಮನೋಜ್​ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

"ಅಲ್ಲದೆ ಅಪಘಾತವಾದ ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಫರ್ಮಾನ್ ವಿರುದ್ಧ ನಿರ್ಲಕ್ಷ್ಯದ ವಾಹನ ಚಲಾವಣೆಯಡಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸ್​ ಸಿಬ್ಬಂದಿ ತನಿಖೆ ನಡೆಸುತ್ತಿದ್ದು, ಸಮೀಪ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಇದರಿಂದ ಅಪಘಾತದ ಸಂಪೂರ್ಣ ಮಾಹಿತಿ ಸಿಗಲಿದೆ" ಎಂದು ಪ್ರಣವ್ ತಯಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೀದಿ ನಾಯಿಗೆ ಆಹಾರ ಹಾಕುತ್ತಿದ್ದ ಯುವತಿಗೆ ಗುದ್ದಿದ ಎಸ್​ಯುವಿ: ಕಾಂಜಾವಾಲಾ ಪ್ರಕರಣ ನೆನಪಿಸಿದ ಘಟನೆ

ವರ್ಷದ ಆರಂಭದಲ್ಲೂ ನಡೆದಿದ್ದ ಇಂತಹದ್ದೇ ಪ್ರಕರಣ: ಜನವರಿ 1 ರಂದು ದೆಹಲಿಯ ಸುಲ್ತಾನ್‌ಪುರಿಯಲ್ಲಿ ಹಿಟ್​ ಅಂಡ್​​​ ಡ್ರ್ಯಾಗ್​ ಪ್ರಕರಣ ನಡೆದಿತ್ತು. ಆ ಘಟನೆಯ 23 ವರ್ಷದ ಅಂಜಲಿ ಎಂಬುವವರು ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಅಂಜಲಿ ಕಾರಿನ ಬ್ಯಾನೆಟ್​ಗೆ ಸಿಲುಕಿದ್ದು, ಕಾರು ನಿಲ್ಲಿಸದೇ ಚಾಲಕ ಸುಮಾರು 12 ಕಿಮೀವರೆಗೂ ಅಂಜಲಿಯನ್ನ ಎಳೆದೊಯ್ದಿದ್ದ. ಚಾಲಕನ ದುಷ್ಕೃ​ತ್ಯದಿಂದ ಘಟನೆಯಲ್ಲಿ ಅಂಜಲಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ವೇಳ ಕಾರಿನಲ್ಲಿ 5 ಜನರ ಪ್ರಯಾಣಿಸುತ್ತಿದ್ದರು. ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಬಳಿಕ ಮತ್ತಿಬ್ಬರು ಆರೋಪಿಗಳ ಹೆಸರು ಬಯಲಾಗಿತ್ತು ಅವರನ್ನು ಪೊಲೀಸರು ಆರೋಪಿಗಳನ್ನಾಗಿ ಬಂಧಿಸಿದ್ದರು.

ಇದನ್ನೂ ಓದಿ: ಬೈಕ್ ಸವಾರನಿಗೆ ಗುದ್ದಿ ಒಂದು ಕಿಮೀ ಎಳೆದೊಯ್ದ ಆಟೋ ಚಾಲಕ.. ಯುವಕನ ಸ್ಥಿತಿ ಗಂಭೀರ

ನವದೆಹಲಿ: ದೆಹಲಿಯ ಫಿರೋಜ್‌ ಶಾ ರಸ್ತೆಯಲ್ಲಿ ಮಂಗಳವಾರ ಮತ್ತೊಂದು ಹಿಟ್ ಅಂಡ್​ ಡ್ರ್ಯಾಗ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ವೇಗವಾಗಿ ಬಂದ ಕಾರೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಚಾಲಕ ಕಾರಿಗೆ ಸಿಲುಕಿದ್ದು, ಸುಮಾರು 200 ಮೀಟರ್ ವರೆಗೆ ರಿಕ್ಷಾಚಾಲಕನನ್ನು ಕಾರು ಎಳೆದೊಯ್ದಿರುವ ಘಟನೆ ನಡೆದಿದೆ. ಘಟನೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಅಪಘಾತದ ಮಾಹಿತಿ ಪಡೆದು ಕಾರು ಚಾಲಕ ಫರ್ಮಾನ್​ನನ್ನ ಬಂಧಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ರಿಕ್ಷಾ ಚಾಲಕ ಮನೋಜ್​ನನ್ನು ಕೂಡಲೇ ಸ್ಥಳೀಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಕುರಿತು ಉಪ ಪೊಲೀಸ್ ಆಯುಕ್ತ ಪ್ರಣವ್ ತಯಾಲ್ ಮಾಹಿತಿ ನೀಡಿದ್ದು, "ಮಂಗಳವಾರ ತಡರಾತ್ರಿ ಫಿರೋಜ್‌ ಶಾ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ರಿಕ್ಷಾ ಚಾಲಕ ಕಾರಿನ ಬ್ಯಾನೆಟ್‌ಗೆ ಸಿಲುಕಿದ್ದು, ಕಾರು ಚಾಲಕ ಸುಮಾರು 200 ಮೀಟರ್ ದೂರ ಎಳೆದೊಯ್ದಿದ್ದಾನೆ. ಇದನ್ನು ಕಂಡ ಜನರು ಕಾರನ್ನು ತಡೆದಿದ್ದಾರೆ. ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕಾರು ಚಾಲಕ ಗಾಜಿಯಾಬಾದ್​ನ ಮುರಾದ್ ನಗರದ ನಿವಾಸಿ ಫರ್ಮಾನ್ ನನ್ನು ಬಂಧಿಸಲಾಗಿದ್ದು, ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಅಪಘಾತ ಮಾಡಲಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹಾಗೆಯೇ ಆರೋಪಿತನನ್ನು ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಘಟನೆಯಲ್ಲಿ ಗಾಯಗೊಂಡಿರುವ ಮನೋಜ್​ ಹೌಸ್ ಕೀಪಿಂಗ್ ಕೆಲಸದ ಜೊತೆ ರಿಕ್ಷಾ ಓಡಿಸುತ್ತಿದ್ದರು. ಆಸ್ಪತ್ರೆಯಲ್ಲಿ ಮನೋಜ್​ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

"ಅಲ್ಲದೆ ಅಪಘಾತವಾದ ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಫರ್ಮಾನ್ ವಿರುದ್ಧ ನಿರ್ಲಕ್ಷ್ಯದ ವಾಹನ ಚಲಾವಣೆಯಡಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸ್​ ಸಿಬ್ಬಂದಿ ತನಿಖೆ ನಡೆಸುತ್ತಿದ್ದು, ಸಮೀಪ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಇದರಿಂದ ಅಪಘಾತದ ಸಂಪೂರ್ಣ ಮಾಹಿತಿ ಸಿಗಲಿದೆ" ಎಂದು ಪ್ರಣವ್ ತಯಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೀದಿ ನಾಯಿಗೆ ಆಹಾರ ಹಾಕುತ್ತಿದ್ದ ಯುವತಿಗೆ ಗುದ್ದಿದ ಎಸ್​ಯುವಿ: ಕಾಂಜಾವಾಲಾ ಪ್ರಕರಣ ನೆನಪಿಸಿದ ಘಟನೆ

ವರ್ಷದ ಆರಂಭದಲ್ಲೂ ನಡೆದಿದ್ದ ಇಂತಹದ್ದೇ ಪ್ರಕರಣ: ಜನವರಿ 1 ರಂದು ದೆಹಲಿಯ ಸುಲ್ತಾನ್‌ಪುರಿಯಲ್ಲಿ ಹಿಟ್​ ಅಂಡ್​​​ ಡ್ರ್ಯಾಗ್​ ಪ್ರಕರಣ ನಡೆದಿತ್ತು. ಆ ಘಟನೆಯ 23 ವರ್ಷದ ಅಂಜಲಿ ಎಂಬುವವರು ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಅಂಜಲಿ ಕಾರಿನ ಬ್ಯಾನೆಟ್​ಗೆ ಸಿಲುಕಿದ್ದು, ಕಾರು ನಿಲ್ಲಿಸದೇ ಚಾಲಕ ಸುಮಾರು 12 ಕಿಮೀವರೆಗೂ ಅಂಜಲಿಯನ್ನ ಎಳೆದೊಯ್ದಿದ್ದ. ಚಾಲಕನ ದುಷ್ಕೃ​ತ್ಯದಿಂದ ಘಟನೆಯಲ್ಲಿ ಅಂಜಲಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ವೇಳ ಕಾರಿನಲ್ಲಿ 5 ಜನರ ಪ್ರಯಾಣಿಸುತ್ತಿದ್ದರು. ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಬಳಿಕ ಮತ್ತಿಬ್ಬರು ಆರೋಪಿಗಳ ಹೆಸರು ಬಯಲಾಗಿತ್ತು ಅವರನ್ನು ಪೊಲೀಸರು ಆರೋಪಿಗಳನ್ನಾಗಿ ಬಂಧಿಸಿದ್ದರು.

ಇದನ್ನೂ ಓದಿ: ಬೈಕ್ ಸವಾರನಿಗೆ ಗುದ್ದಿ ಒಂದು ಕಿಮೀ ಎಳೆದೊಯ್ದ ಆಟೋ ಚಾಲಕ.. ಯುವಕನ ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.