ETV Bharat / bharat

ಪಂಚರಾಜ್ಯ ಚುನಾವಣೆ : ಜನ ಕೊಟ್ಟರು ಚಾರಿತ್ರಿಕ ತೀರ್ಪು

author img

By

Published : May 24, 2021, 10:49 PM IST

ಕೇಂದ್ರ ಗೃಹ ಸಚಿವ ಅಮಿತ್‌ ಶಾ “ ಬಿಜೆಪಿ 200 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ “ ಎಂದು ಹೇಳಿದ್ದರು. ಆದರೂ ಬಂಗಾಳದ ಮತದಾರ ಮಮತಾ ಪರ ಒಲವು ತೋರಿ ಕಳೆದ ಬಾರಿ ಗಳಿಸಿದ್ದ 211 ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನವನ್ನು ಅವರಿಗೆ ತಂದುಕೊಟ್ಟರು.

Historic Verdict
ಚಾರಿತ್ರಿಕ ತೀರ್ಪು

ದಶಕದ ಮೊದಲ ಮತ್ತು ಕೋವಿಡ್‌ ಸಾಂಕ್ರಾಮಿಕ ರೋಗದ ಬಳಿಕ ನಡೆಯುತ್ತಿರುವ 2ನೇ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ (ತಮಿಳುನಾಡು) ಮತ್ತು ತೃಣಮೂಲ ಕಾಂಗ್ರೆಸ್ ( ಪಶ್ಚಿಮ ಬಂಗಾಳ ) ಸತತ ಮೂರನೇ ಬಾರಿಗೆ ಕಣಕ್ಕೆ ಇಳಿದಿದ್ದವು. ಎಡಪಂಥೀಯರು ಕೇರಳವನ್ನು ಉಳಿಸಿಕೊಳ್ಳಲು ಬಯಸಿದ್ದರೆ ಬಿಜೆಪಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಎರಡನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸಿತ್ತು. ಒಟ್ಟು ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ 824 ವಿಧಾನಸಭಾ ಕ್ಷೇತ್ರಗಳಲ್ಲಿ ಹಣಾಹಣಿ ಏರ್ಪಾಡಾಗಿತ್ತು .

2016 ರಲ್ಲಿ ನಡೆದ ಚುನಾವಣೆ ವೇಳೆ 824 ಸ್ಥಾನಗಳಲ್ಲಿ ಬಿಜೆಪಿ ಕೇವಲ 64 ಸ್ಥಾನಗಳನ್ನು ಗೆದ್ದಿತ್ತು. ದೇಶದ ಎಲ್ಲೆಡೆ ತನ್ನ ಪ್ರಭಾವ ವಿಸ್ತರಿಸುವ ಉದ್ದೇಶದೊಂದಿಗೆ ಇತ್ತೀಚೆಗಷ್ಟೇ ಮುಕ್ತಾಯ ಕಂಡ ಚುನಾವಣೆಯಲ್ಲಿ ಅದು ಅಖಾಡಕ್ಕೆ ಇಳಿದಿತ್ತು. ರಂಗಸ್ವಾಮಿ ಅವರ ಪಕ್ಷದೊಂದಿಗೆ ಪಾಂಡಿಚೇರಿಯಲ್ಲಿ ಅದೃಷ್ಟ ಪರೀಕ್ಷೆ ನಡೆಸಿತು. ಆದರೆ ಎಂದಿನಂತೆ ಚುನಾವಣಾ ಪಂಡಿತರು ಮತದಾರರ ನಾಡಿ ಮಿಡಿತವನ್ನು ಅರಿಯಲು ವಿಫಲರಾಗಿದ್ದಾರೆ.

ತಮ್ಮ ಮಗ ಎಂ. ಕೆ ಸ್ಟಾಲಿನ್‌ ಅವರ ಬೆನ್ನು ತಟ್ಟುತ್ತಾ ಎಂ. ಕೆ ಕರುಣಾನಿಧಿ 1975 ರಲ್ಲಿ ಒಂದು ಮಾತು ಹೇಳಿದ್ದರು, “ಇಂದಿರಾ ಗಾಂಧಿ ನಿನ್ನನ್ನು ದೊಡ್ಡ ನಾಯಕನನ್ನಾಗಿ ಮಾಡಲು ಬಯಸಿದ್ದಾರೆ. ಕಷ್ಟಗಳನ್ನು ಎದುರಿಸಲು ಆರಂಭಿಸು" ಎಂದು ಅದರಂತೆ ಸ್ಟಾಲಿನ್ ಹಲವಾರು ಕಷ್ಟಗಳನ್ನು ಎದುರಿಸಿದರು. ಆದರೆ, ತಮಿಳುನಾಡಿನಾದ್ಯಂತ ನಡೆದ ʼ ನಮಕ್ಕು ನಾಮೆ ʼ ಹೆಸರಿನ ಪಾದಯಾತ್ರೆ ಮೂಲಕ ಅವರು ಪಟ್ಟ ಶ್ರಮ ಈ ಚುನಾವಣೆಯಲ್ಲಿ ಫಲ ನೀಡಿದೆ. ಡಿ ಎಂ ಕೆ ಪರವಾಗಿ ಶೇ 37ರಷ್ಟು ಮತ ಚಲಾಯಿಸುವ ಮೂಲಕ ತಮಿಳು ಮತದಾರರು ತೀರ್ಪು ನೀಡಿದರು. ಇಷ್ಟಾದರೂ ಎಐಎಡಿಎಂಕೆ ಪಕ್ಷವನ್ನು ಅವರು ಸಂಪೂರ್ಣವಾಗಿ ಕಡೆಗಣಿಸಲಿಲ್ಲ. ಆ ಪಕ್ಷದ ಪರವಾಗಿ ಶೇ 33 ರಷ್ಟು ಮತ ಚಲಾಯಿಸುವ ಜೊತೆಗೆ 77 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಜಯ ತಂದುಕೊಟ್ಟಿದ್ದಾರೆ.

ಪಿಣರಾಯಿ ವಿಜಯನ್‌ಗೆ ಕೇರಳಿಗರು ಜೈ

ಕೋವಿಡ್‌ ಸಾಂಕ್ರಾಮಿಕದ ದುಷ್ಟ ಹಿಡಿತದಿಂದ ಕೇರಳದ ಜನರನ್ನು ರಕ್ಷಿಸಲು ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಯೋಜಿತ ಮತ್ತು ಸಂಘಟನಾತ್ಮಕ ಬೆಂಬಲ ನೀಡಿದರು. ಕೇರಳದ ಜನತೆ ಈ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ನಿರ್ಣಾಯಕ ಜಯ ನೀಡಿತು. ಕಳೆದ ಚುನಾವಣೆ ವೇಳೆ ಕೇರಳದಲ್ಲಿ ಒಂದು ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಖಾತೆ ತೆರೆದಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಆ ಖಾತೆಯೂ ಮುಚ್ಚಿ ಹೋಯಿತು. ಕೇಸರಿ ಪಕ್ಷ ಒಂದು ಸ್ಥಾನವನ್ನು ಕೂಡ ಅಲ್ಲಿ ಗೆಲ್ಲಲು ಸಾಧ್ಯ ಆಗಲಿಲ್ಲ. ಈ ಬಗೆಯ ಅನೇಕ ಕಾರಣಗಳಿಗೆ ಕೇರಳದಲ್ಲಿ ದೊರೆತ ಜನತಾ ತೀರ್ಪು ವಿಶೇಷವಾಗಿ ಕಂಡು ಬರುತ್ತದೆ.

ಮತ್ತೆ ಮಮತಾಗೇ ಒಲಿದ ಬಂಗಾಳ.. ಮೋದಿ ಶಾಗೆ ಬರೀ ನಿರಾಸೆ

ಮಮತಾ ಬ್ಯಾನರ್ಜಿ ಅವರ ಸುದೀರ್ಘ ಹತ್ತು ವರ್ಷಗಳ ಆಡಳಿತವನ್ನು ಕಿತ್ತೊಗೆಯಲು ಬಿಜೆಪಿ ತನ್ನ ಎಲ್ಲಾ ಬಲ ಪ್ರಯೋಗಿಸಿದ ಕಾರಣಕ್ಕೆ ಪಶ್ಚಿಮ ಬಂಗಾಳದ ಚುನಾವಣಾ ಅಖಾಡ ರಾಷ್ಟ್ರದ ಗಮನ ಸೆಳೆಯಿತು. ಈ ಬಾರಿ ಚುನಾವಣೆ ನಡೆದ ಐದು ಪ್ರದೇಶಗಳಲ್ಲಿ ಪಶ್ಚಿಮ ಬಂಗಾಳ ಅತಿ ದೊಡ್ಡದಾಗಿತ್ತು . ವಿಧಾನ ಸಭೆ ಚುನಾವಣೆಯನ್ನು ರಾಜ್ಯದಲ್ಲಿ 8 ಹಂತಗಳಲ್ಲಿ ನಡೆಸುವ ನಿರ್ಧಾರ ಇರಲಿ ಅಥವಾ ಮತಗಟ್ಟೆ ಏಜೆಂಟರ ನೇಮಕಾತಿ ಮೇಲಿನ ನಿಯಮಗಳ ಸಡಿಲಿಕೆಯೇ ಇರಲಿ ಇಲ್ಲವೇ ಸಿ ಆರ್‌ ಪಿ ಎಫ್‌ ತುಕಡಿಯನ್ನು ಭಾರಿ ಗಾತ್ರದಲ್ಲಿ ನಿಯೋಜಿಸಿದ ಸಂಗತಿಯೇ ಇರಲಿ ಇಂತಹ ಅನೇಕ ಕಾರಣಗಳಿಗೆ ಟಿ ಎಂ ಸಿ ಚುನಾವಣಾ ಆಯೋಗದೊಂದಿಗೆ ಹೆಜ್ಜೆ ಹೆಜ್ಜೆಗೂ ಹೋರಾಡಬೇಕಾಯಿತು.

ಅರಳದ ಕಮಲ... ಆದರೂ ಪ್ರತಿಪಕ್ಷ ಸ್ಥಾನಕ್ಕೆ ಲಗ್ಗೆ

ಕೇಂದ್ರ ಗೃಹ ಸಚಿವ ಅಮಿತ್‌ ಶಾ “ ಬಿಜೆಪಿ 200 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ “ ಎಂದು ಹೇಳಿದ್ದರು. ಆದರೂ ಬಂಗಾಳದ ಮತದಾರ ಮಮತಾ ಪರ ಒಲವು ತೋರಿ ಕಳೆದ ಬಾರಿ ಗಳಿಸಿದ್ದ 211 ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನವನ್ನು ಅವರಿಗೆ ತಂದುಕೊಟ್ಟರು. 2016 ರಲ್ಲಿ ಕೇವಲ ಶೇ 10. 2 ಮತಗಳನ್ನು ಗಳಿಸುವ ಮೂಲಕ ಬಿಜೆಪಿ ಕೇವಲ ಮೂರು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. 2019 ರಲ್ಲಿ ಯಾವಾಗ 18 ಲೋಕಸಭಾ ಸ್ಥಾನಗಳನ್ನು ಗೆದ್ದಿತೋ ಆಗ ಪಕ್ಷದ ಭವಿಷ್ಯ ಬದಲಾಯಿತು.

121 ಕ್ಕಿಂತ ಹೆಚ್ಚು ಸ್ಥಾನಗಳ ಮೇಲೆ ಪಕ್ಷ ಹಿಡಿತ ಹೊಂದಿರುವುದಕ್ಕೆ ಈ ಗೆಲುವು ಒಂದು ಸೂಚನೆ ಎಂದು ಭಾವಿಸಲಾಗಿತ್ತು. ಮತ್ತೊಂದಷ್ಟು ಪ್ರಯತ್ನಪಟ್ಟರೆ ಅಧಿಕಾರ ದೊರೆಯಲಿದೆ ಎಂಬ ನಿರೀಕ್ಷೆಯೊಂದಿಗೆ ರಾಜ್ಯ ಬಿಜೆಪಿ ತನ್ನೆಲ್ಲಾ ಶಕ್ತಿ ಬಳಸಿ ಕಣಕ್ಕೆ ಧುಮುಕಿತು. ಜೊತೆಗೆ ಟಿ ಎಂ ಸಿ ತೊರೆದ ಅಪಾರ ಮಂದಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಅನೂಚಾನವಾಗಿ ಎಡ ಪಕ್ಷಗಳನ್ನು ಬೆಂಬಲಿಸುತ್ತಿದ್ದವರು ಕೂಡ ಬಿಜೆಪಿಯ ಪರವಾಗಿ ನಿಂತರು. ಆರೋಪ ಪ್ರತ್ಯಾರೋಪಗಳಿಂದಾಗಿ ಬಂಗಾಳ ರಣರಂಗವಾಗಿ ಪರಿಣಮಿಸಿದ್ದಕ್ಕೆ ಅಬ್ಬರದ ಚುನಾವಣಾ ಪ್ರಚಾರ ಸಾಕ್ಷಿ ಆಗಿತ್ತು.

ನೆಲಕಚ್ಚಿದ ಎಡರಂಗ ತಳ ಸೇರಿದ ಕಾಂಗ್ರೆಸ್​

ಕಳೆದ ಬಾರಿ ಎಡರಂಗ 32 ಸ್ಥಾನ ಗಳಿಸಿತ್ತು . ಕಾಂಗ್ರೆಸ್‌ 44 ಸ್ಥಾನಗಳನ್ನು ಗೆದ್ದಿತ್ತು . ಆದರೆ ಈ ಬಾರಿ ಈ ಎರಡೂ ಪಕ್ಷಗಳು ಅಲ್ಲಿ ತಮ್ಮ ಒಂದು ಖಾತೆಯನ್ನೂ ತೆರೆಯಲು ಸಾಧ್ಯ ಆಗಲಿಲ್ಲ. ಟಿಎಂಸಿ ಮತ್ತು ಬಿಜೆಪಿ ಪಕ್ಷಗಳು ಮಾತ್ರ ಅಸ್ತಿತ್ವದಲ್ಲಿವೆಯೇನೋ ಎಂಬಂತೆ ಬಂಗಾಳದ ಚುನಾವಣಾ ಸಮರ ನಡೆದಿತ್ತು . ಈ ಚುನಾವಣೆಯ ದುರಂತ ವ್ಯಂಗ್ಯ ಎಂದರೆ ಮಮತಾ ಅವರು ನಂದಿಗ್ರಾಮದಲ್ಲಿ ತನ್ನ ಹಳೆಯ ಶಿಷ್ಯ ಸುವೇಂದು ಅಧಿಕಾರಿ ಎದುರು ಮಂಡಿಯೂರಿದ್ದು.

ಅಸ್ಸೋಂನಲ್ಲಿ ಮತ್ತೆ ಗದ್ದುಗೆ ಏರಿದ ಕಮಲ

ಈಶಾನ್ಯ ರಾಜ್ಯಗಳಲ್ಲಿ ಮಹತ್ವದ್ದೆನಿಸಿದ ಅಸ್ಸೋಂನಲ್ಲಿ 2016 ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಅಚ್ಚರಿಯ ಗೆಲುವು ಸಾಧಿಸಿತ್ತು. ಈ ಬಾರಿಯೂ ಹೆಚ್ಚು ತೊಂದರೆ ಇಲ್ಲದೆ ಅನಾಯಾಸವಾಗಿ ಅದು ರಾಜ್ಯವನ್ನು ಗೆದ್ದಿದೆ. ಎಐಯುಡಿಎಫ್‌ ಜೊತೆ ಒಪ್ಪಂದ ಮಾಡಿಕೊಳ್ಳುವುದರೊಂದಿಗೆ ಶೇ 34 ರಷ್ಟು ಮುಸ್ಲಿಂ ಮತಗಳನ್ನು ಪಡೆಯುವ ಆಶಯ ಕಾಂಗ್ರೆಸ್‌ನದ್ದಾಗಿತ್ತು. ಆದರೆ ಅದಕ್ಕೆ ಬದಲಾಗಿ ಬಿಜೆಪಿ ನೇತೃತ್ವದ ಮೈತ್ರಿಕೂಟ ರಾಜ್ಯದಲ್ಲಿ 72 ಸ್ಥಾನಗಳನ್ನು ಗೆದ್ದಿತು. ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಆಧರಿಸಿ ಅಸ್ಸೋಂ ಮತದಾರರು ಪ್ರಬುದ್ಧ ಮತ್ತು ಐತಿಹಾಸಿಕ ತೀರ್ಪು ನೀಡಿದ್ದಾರೆ.

ಓದಿ: ಕೋವಿಡ್ ಸುನಾಮಿ ಕಟ್ಟಿ ಹಾಕುವ ತಂತ್ರ

ದಶಕದ ಮೊದಲ ಮತ್ತು ಕೋವಿಡ್‌ ಸಾಂಕ್ರಾಮಿಕ ರೋಗದ ಬಳಿಕ ನಡೆಯುತ್ತಿರುವ 2ನೇ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ (ತಮಿಳುನಾಡು) ಮತ್ತು ತೃಣಮೂಲ ಕಾಂಗ್ರೆಸ್ ( ಪಶ್ಚಿಮ ಬಂಗಾಳ ) ಸತತ ಮೂರನೇ ಬಾರಿಗೆ ಕಣಕ್ಕೆ ಇಳಿದಿದ್ದವು. ಎಡಪಂಥೀಯರು ಕೇರಳವನ್ನು ಉಳಿಸಿಕೊಳ್ಳಲು ಬಯಸಿದ್ದರೆ ಬಿಜೆಪಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಎರಡನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸಿತ್ತು. ಒಟ್ಟು ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ 824 ವಿಧಾನಸಭಾ ಕ್ಷೇತ್ರಗಳಲ್ಲಿ ಹಣಾಹಣಿ ಏರ್ಪಾಡಾಗಿತ್ತು .

2016 ರಲ್ಲಿ ನಡೆದ ಚುನಾವಣೆ ವೇಳೆ 824 ಸ್ಥಾನಗಳಲ್ಲಿ ಬಿಜೆಪಿ ಕೇವಲ 64 ಸ್ಥಾನಗಳನ್ನು ಗೆದ್ದಿತ್ತು. ದೇಶದ ಎಲ್ಲೆಡೆ ತನ್ನ ಪ್ರಭಾವ ವಿಸ್ತರಿಸುವ ಉದ್ದೇಶದೊಂದಿಗೆ ಇತ್ತೀಚೆಗಷ್ಟೇ ಮುಕ್ತಾಯ ಕಂಡ ಚುನಾವಣೆಯಲ್ಲಿ ಅದು ಅಖಾಡಕ್ಕೆ ಇಳಿದಿತ್ತು. ರಂಗಸ್ವಾಮಿ ಅವರ ಪಕ್ಷದೊಂದಿಗೆ ಪಾಂಡಿಚೇರಿಯಲ್ಲಿ ಅದೃಷ್ಟ ಪರೀಕ್ಷೆ ನಡೆಸಿತು. ಆದರೆ ಎಂದಿನಂತೆ ಚುನಾವಣಾ ಪಂಡಿತರು ಮತದಾರರ ನಾಡಿ ಮಿಡಿತವನ್ನು ಅರಿಯಲು ವಿಫಲರಾಗಿದ್ದಾರೆ.

ತಮ್ಮ ಮಗ ಎಂ. ಕೆ ಸ್ಟಾಲಿನ್‌ ಅವರ ಬೆನ್ನು ತಟ್ಟುತ್ತಾ ಎಂ. ಕೆ ಕರುಣಾನಿಧಿ 1975 ರಲ್ಲಿ ಒಂದು ಮಾತು ಹೇಳಿದ್ದರು, “ಇಂದಿರಾ ಗಾಂಧಿ ನಿನ್ನನ್ನು ದೊಡ್ಡ ನಾಯಕನನ್ನಾಗಿ ಮಾಡಲು ಬಯಸಿದ್ದಾರೆ. ಕಷ್ಟಗಳನ್ನು ಎದುರಿಸಲು ಆರಂಭಿಸು" ಎಂದು ಅದರಂತೆ ಸ್ಟಾಲಿನ್ ಹಲವಾರು ಕಷ್ಟಗಳನ್ನು ಎದುರಿಸಿದರು. ಆದರೆ, ತಮಿಳುನಾಡಿನಾದ್ಯಂತ ನಡೆದ ʼ ನಮಕ್ಕು ನಾಮೆ ʼ ಹೆಸರಿನ ಪಾದಯಾತ್ರೆ ಮೂಲಕ ಅವರು ಪಟ್ಟ ಶ್ರಮ ಈ ಚುನಾವಣೆಯಲ್ಲಿ ಫಲ ನೀಡಿದೆ. ಡಿ ಎಂ ಕೆ ಪರವಾಗಿ ಶೇ 37ರಷ್ಟು ಮತ ಚಲಾಯಿಸುವ ಮೂಲಕ ತಮಿಳು ಮತದಾರರು ತೀರ್ಪು ನೀಡಿದರು. ಇಷ್ಟಾದರೂ ಎಐಎಡಿಎಂಕೆ ಪಕ್ಷವನ್ನು ಅವರು ಸಂಪೂರ್ಣವಾಗಿ ಕಡೆಗಣಿಸಲಿಲ್ಲ. ಆ ಪಕ್ಷದ ಪರವಾಗಿ ಶೇ 33 ರಷ್ಟು ಮತ ಚಲಾಯಿಸುವ ಜೊತೆಗೆ 77 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಜಯ ತಂದುಕೊಟ್ಟಿದ್ದಾರೆ.

ಪಿಣರಾಯಿ ವಿಜಯನ್‌ಗೆ ಕೇರಳಿಗರು ಜೈ

ಕೋವಿಡ್‌ ಸಾಂಕ್ರಾಮಿಕದ ದುಷ್ಟ ಹಿಡಿತದಿಂದ ಕೇರಳದ ಜನರನ್ನು ರಕ್ಷಿಸಲು ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಯೋಜಿತ ಮತ್ತು ಸಂಘಟನಾತ್ಮಕ ಬೆಂಬಲ ನೀಡಿದರು. ಕೇರಳದ ಜನತೆ ಈ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ನಿರ್ಣಾಯಕ ಜಯ ನೀಡಿತು. ಕಳೆದ ಚುನಾವಣೆ ವೇಳೆ ಕೇರಳದಲ್ಲಿ ಒಂದು ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಖಾತೆ ತೆರೆದಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಆ ಖಾತೆಯೂ ಮುಚ್ಚಿ ಹೋಯಿತು. ಕೇಸರಿ ಪಕ್ಷ ಒಂದು ಸ್ಥಾನವನ್ನು ಕೂಡ ಅಲ್ಲಿ ಗೆಲ್ಲಲು ಸಾಧ್ಯ ಆಗಲಿಲ್ಲ. ಈ ಬಗೆಯ ಅನೇಕ ಕಾರಣಗಳಿಗೆ ಕೇರಳದಲ್ಲಿ ದೊರೆತ ಜನತಾ ತೀರ್ಪು ವಿಶೇಷವಾಗಿ ಕಂಡು ಬರುತ್ತದೆ.

ಮತ್ತೆ ಮಮತಾಗೇ ಒಲಿದ ಬಂಗಾಳ.. ಮೋದಿ ಶಾಗೆ ಬರೀ ನಿರಾಸೆ

ಮಮತಾ ಬ್ಯಾನರ್ಜಿ ಅವರ ಸುದೀರ್ಘ ಹತ್ತು ವರ್ಷಗಳ ಆಡಳಿತವನ್ನು ಕಿತ್ತೊಗೆಯಲು ಬಿಜೆಪಿ ತನ್ನ ಎಲ್ಲಾ ಬಲ ಪ್ರಯೋಗಿಸಿದ ಕಾರಣಕ್ಕೆ ಪಶ್ಚಿಮ ಬಂಗಾಳದ ಚುನಾವಣಾ ಅಖಾಡ ರಾಷ್ಟ್ರದ ಗಮನ ಸೆಳೆಯಿತು. ಈ ಬಾರಿ ಚುನಾವಣೆ ನಡೆದ ಐದು ಪ್ರದೇಶಗಳಲ್ಲಿ ಪಶ್ಚಿಮ ಬಂಗಾಳ ಅತಿ ದೊಡ್ಡದಾಗಿತ್ತು . ವಿಧಾನ ಸಭೆ ಚುನಾವಣೆಯನ್ನು ರಾಜ್ಯದಲ್ಲಿ 8 ಹಂತಗಳಲ್ಲಿ ನಡೆಸುವ ನಿರ್ಧಾರ ಇರಲಿ ಅಥವಾ ಮತಗಟ್ಟೆ ಏಜೆಂಟರ ನೇಮಕಾತಿ ಮೇಲಿನ ನಿಯಮಗಳ ಸಡಿಲಿಕೆಯೇ ಇರಲಿ ಇಲ್ಲವೇ ಸಿ ಆರ್‌ ಪಿ ಎಫ್‌ ತುಕಡಿಯನ್ನು ಭಾರಿ ಗಾತ್ರದಲ್ಲಿ ನಿಯೋಜಿಸಿದ ಸಂಗತಿಯೇ ಇರಲಿ ಇಂತಹ ಅನೇಕ ಕಾರಣಗಳಿಗೆ ಟಿ ಎಂ ಸಿ ಚುನಾವಣಾ ಆಯೋಗದೊಂದಿಗೆ ಹೆಜ್ಜೆ ಹೆಜ್ಜೆಗೂ ಹೋರಾಡಬೇಕಾಯಿತು.

ಅರಳದ ಕಮಲ... ಆದರೂ ಪ್ರತಿಪಕ್ಷ ಸ್ಥಾನಕ್ಕೆ ಲಗ್ಗೆ

ಕೇಂದ್ರ ಗೃಹ ಸಚಿವ ಅಮಿತ್‌ ಶಾ “ ಬಿಜೆಪಿ 200 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ “ ಎಂದು ಹೇಳಿದ್ದರು. ಆದರೂ ಬಂಗಾಳದ ಮತದಾರ ಮಮತಾ ಪರ ಒಲವು ತೋರಿ ಕಳೆದ ಬಾರಿ ಗಳಿಸಿದ್ದ 211 ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನವನ್ನು ಅವರಿಗೆ ತಂದುಕೊಟ್ಟರು. 2016 ರಲ್ಲಿ ಕೇವಲ ಶೇ 10. 2 ಮತಗಳನ್ನು ಗಳಿಸುವ ಮೂಲಕ ಬಿಜೆಪಿ ಕೇವಲ ಮೂರು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. 2019 ರಲ್ಲಿ ಯಾವಾಗ 18 ಲೋಕಸಭಾ ಸ್ಥಾನಗಳನ್ನು ಗೆದ್ದಿತೋ ಆಗ ಪಕ್ಷದ ಭವಿಷ್ಯ ಬದಲಾಯಿತು.

121 ಕ್ಕಿಂತ ಹೆಚ್ಚು ಸ್ಥಾನಗಳ ಮೇಲೆ ಪಕ್ಷ ಹಿಡಿತ ಹೊಂದಿರುವುದಕ್ಕೆ ಈ ಗೆಲುವು ಒಂದು ಸೂಚನೆ ಎಂದು ಭಾವಿಸಲಾಗಿತ್ತು. ಮತ್ತೊಂದಷ್ಟು ಪ್ರಯತ್ನಪಟ್ಟರೆ ಅಧಿಕಾರ ದೊರೆಯಲಿದೆ ಎಂಬ ನಿರೀಕ್ಷೆಯೊಂದಿಗೆ ರಾಜ್ಯ ಬಿಜೆಪಿ ತನ್ನೆಲ್ಲಾ ಶಕ್ತಿ ಬಳಸಿ ಕಣಕ್ಕೆ ಧುಮುಕಿತು. ಜೊತೆಗೆ ಟಿ ಎಂ ಸಿ ತೊರೆದ ಅಪಾರ ಮಂದಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಅನೂಚಾನವಾಗಿ ಎಡ ಪಕ್ಷಗಳನ್ನು ಬೆಂಬಲಿಸುತ್ತಿದ್ದವರು ಕೂಡ ಬಿಜೆಪಿಯ ಪರವಾಗಿ ನಿಂತರು. ಆರೋಪ ಪ್ರತ್ಯಾರೋಪಗಳಿಂದಾಗಿ ಬಂಗಾಳ ರಣರಂಗವಾಗಿ ಪರಿಣಮಿಸಿದ್ದಕ್ಕೆ ಅಬ್ಬರದ ಚುನಾವಣಾ ಪ್ರಚಾರ ಸಾಕ್ಷಿ ಆಗಿತ್ತು.

ನೆಲಕಚ್ಚಿದ ಎಡರಂಗ ತಳ ಸೇರಿದ ಕಾಂಗ್ರೆಸ್​

ಕಳೆದ ಬಾರಿ ಎಡರಂಗ 32 ಸ್ಥಾನ ಗಳಿಸಿತ್ತು . ಕಾಂಗ್ರೆಸ್‌ 44 ಸ್ಥಾನಗಳನ್ನು ಗೆದ್ದಿತ್ತು . ಆದರೆ ಈ ಬಾರಿ ಈ ಎರಡೂ ಪಕ್ಷಗಳು ಅಲ್ಲಿ ತಮ್ಮ ಒಂದು ಖಾತೆಯನ್ನೂ ತೆರೆಯಲು ಸಾಧ್ಯ ಆಗಲಿಲ್ಲ. ಟಿಎಂಸಿ ಮತ್ತು ಬಿಜೆಪಿ ಪಕ್ಷಗಳು ಮಾತ್ರ ಅಸ್ತಿತ್ವದಲ್ಲಿವೆಯೇನೋ ಎಂಬಂತೆ ಬಂಗಾಳದ ಚುನಾವಣಾ ಸಮರ ನಡೆದಿತ್ತು . ಈ ಚುನಾವಣೆಯ ದುರಂತ ವ್ಯಂಗ್ಯ ಎಂದರೆ ಮಮತಾ ಅವರು ನಂದಿಗ್ರಾಮದಲ್ಲಿ ತನ್ನ ಹಳೆಯ ಶಿಷ್ಯ ಸುವೇಂದು ಅಧಿಕಾರಿ ಎದುರು ಮಂಡಿಯೂರಿದ್ದು.

ಅಸ್ಸೋಂನಲ್ಲಿ ಮತ್ತೆ ಗದ್ದುಗೆ ಏರಿದ ಕಮಲ

ಈಶಾನ್ಯ ರಾಜ್ಯಗಳಲ್ಲಿ ಮಹತ್ವದ್ದೆನಿಸಿದ ಅಸ್ಸೋಂನಲ್ಲಿ 2016 ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಅಚ್ಚರಿಯ ಗೆಲುವು ಸಾಧಿಸಿತ್ತು. ಈ ಬಾರಿಯೂ ಹೆಚ್ಚು ತೊಂದರೆ ಇಲ್ಲದೆ ಅನಾಯಾಸವಾಗಿ ಅದು ರಾಜ್ಯವನ್ನು ಗೆದ್ದಿದೆ. ಎಐಯುಡಿಎಫ್‌ ಜೊತೆ ಒಪ್ಪಂದ ಮಾಡಿಕೊಳ್ಳುವುದರೊಂದಿಗೆ ಶೇ 34 ರಷ್ಟು ಮುಸ್ಲಿಂ ಮತಗಳನ್ನು ಪಡೆಯುವ ಆಶಯ ಕಾಂಗ್ರೆಸ್‌ನದ್ದಾಗಿತ್ತು. ಆದರೆ ಅದಕ್ಕೆ ಬದಲಾಗಿ ಬಿಜೆಪಿ ನೇತೃತ್ವದ ಮೈತ್ರಿಕೂಟ ರಾಜ್ಯದಲ್ಲಿ 72 ಸ್ಥಾನಗಳನ್ನು ಗೆದ್ದಿತು. ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಆಧರಿಸಿ ಅಸ್ಸೋಂ ಮತದಾರರು ಪ್ರಬುದ್ಧ ಮತ್ತು ಐತಿಹಾಸಿಕ ತೀರ್ಪು ನೀಡಿದ್ದಾರೆ.

ಓದಿ: ಕೋವಿಡ್ ಸುನಾಮಿ ಕಟ್ಟಿ ಹಾಕುವ ತಂತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.