ETV Bharat / bharat

ಶಿಂದೆಗೆ ಸ್ವಕ್ಷೇತ್ರದಲ್ಲಿ ಭಾರಿ ಬೆಂಬಲ.. ಏಕನಾಥರನ್ನು ಸಿಎಂ ಆಗಿ ನೋಡಲು ಬಯಸುತ್ತಿರುವ ಜನ - ಏಕನಾಥ್​ ಶಿಂದೆಗೆ ಜನರ ಬೆಂಬಲ

ಸಿಎಂ ಉದ್ಧವ್​ ಠಾಕ್ರೆ ಮತ್ತು ಶಿವಸೇನೆ ಪಕ್ಷದ ವಿರುದ್ಧವೇ ಬಂಡೆದ್ದಿರುವ ರೆಬೆಲ್​ ನಾಯಕ ಏಕನಾಥ್​ ಶಿಂದೆಗೆ ಸ್ವಕ್ಷೇತ್ರದ ಜನರು ಭಾರಿ ಬೆಂಬಲ ನೀಡಿದ್ದಾರೆ. ನಿಜವಾದ ಜನನಾಯಕ ಎಂದು ಬಣ್ಣಿಸಿದ್ದಲ್ಲದೇ, ಶಿಂದೆ ಅವರನ್ನು ಸಿಎಂ ಆಗಿ ನೋಡಲು ಬಯಸುತ್ತೇವೆ ಎಂದಿದ್ದಾರೆ.

ಸಿಎಂ ಆಗಿ ನೋಡಲು ಬಯಸುತ್ತೇವೆ ಎಂದ ಜನರು
ಸಿಎಂ ಆಗಿ ನೋಡಲು ಬಯಸುತ್ತೇವೆ ಎಂದ ಜನರು
author img

By

Published : Jun 25, 2022, 7:01 PM IST

ಸತಾರಾ: ಮಹಾರಾಷ್ಟ್ರ ರಾಜಕೀಯ ಪ್ರಕ್ಷುಬ್ಧತೆಯ ಕೇಂದ್ರಬಿಂದುವಾಗಿರುವ ಬಂಡಾಯ ನಾಯಕ ಏಕನಾಥ್ ಶಿಂದೆಗೆ ಸ್ವಕ್ಷೇತ್ರದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ಶಿಂದೆಯನ್ನು 'ಜನನಾಯಕ' ಎಂದು ಬಣ್ಣಿಸಿರುವ ಅಲ್ಲಿನ ಜನರು, ಅವರ ನಿರ್ಧಾರಗಳು ಎಂದಿಗೂ ಸರಿಯಾಗಿರುತ್ತವೆ. ಏಕನಾಥ್​ ಶಿಂದೆ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ನೋಡಲು ಬಯಸುತ್ತೇವೆ ಎಂದಿದ್ದಾರೆ.

ಏಕನಾಥ್​ ಶಿಂದೆ ಅವರ ಸ್ವಗ್ರಾಮವಾದ ಡೇರ್​ನ ಜನರು ಶಿಂಧೆ ಅವರ ನಿರ್ಧಾರದ ಹಿಂದೆ ಬಲವಾಗಿ ನಿಂತಿದ್ದಾರೆ. ಅವರು ಶೀಘ್ರದಲ್ಲೇ ರಾಜ್ಯದ ಮುಖ್ಯಮಂತ್ರಿಯಾಗುವುದನ್ನು ನೋಡಲು ಬಯಸಿದ್ದಾರೆ. 58 ವರ್ಷದ ಶಿಂದೆ ಅವರು ಸತಾರಾ ಮೂಲದವರಾಗಿದ್ದರೂ, ಮುಂಬೈಗೆ ಹೊಂದಿಕೊಂಡಿರುವ ಥಾಣೆ-ಪಾಲ್ಘರ್​ನ ಪ್ರಮುಖ ಶಿವಸೇನಾ ನಾಯಕರಾಗಿದ್ದಾರೆ. ಥಾಣೆಯ ಕೊಪ್ರಿ-ಪಚ್ಪಖಾಡಿಯ ಶಾಸಕರಾಗಿರುವ ಶಿಂದೆ ಅವರ ಆಕ್ರಮಣಕಾರಿ ಧೋರಣೆಯಿಂದಲೇ ಹೆಸರುವಾಸಿಯಾಗಿದ್ದಾರೆ.

ಶಿಂದೆ ನಿರ್ಧಾರಕ್ಕೆ ಬದ್ಧ: ಶಿಂದೆ ಸಾಹೇಬರು ತೆಗೆದುಕೊಂಡ ಯಾವುದೇ ನಿರ್ಧಾರಗಳು ಸರಿಯಾಗಿರುತ್ತವೆ. ನಾವು ಅವರೊಂದಿಗೆ ಗಟ್ಟಿಯಾಗಿ ನಿಂತಿದ್ದೇವೆ. ಅವರಂತಹ ಜನನಾಯಕ ವ್ಯಕ್ತಿ ಮತ್ತೊಬ್ಬರಿಲ್ಲ. ಬಡವರು ಮತ್ತು ನಿರ್ಗತಿಕರ ಪರವಾಗಿದ್ದಾರೆ ಎಂದು ರೂಪೇಶ್ ಶಿಂಧೆ ಎಂಬುವವರು ಹೇಳಿದ್ದಾರೆ.

ಶಿವಸೇನೆಯ 38 ಮತ್ತು ಪಕ್ಷೇತರರು ಸೇರಿ 50 ಕ್ಕೂ ಹೆಚ್ಚು ಶಾಸಕರು ಏಕನಾಥ್​ ಶಿಂದೆ ನೇತೃತ್ವದಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡೆದ್ದು ಅಸ್ಸೋಂನ ಗುವಾಹಟಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.

ಓದಿ: Maharashtra Political Crisis: ಮುಂಬೈ, ಥಾಣೆಯಲ್ಲಿ ನಿಷೇಧಾಜ್ಞೆ ಜಾರಿ

ಸತಾರಾ: ಮಹಾರಾಷ್ಟ್ರ ರಾಜಕೀಯ ಪ್ರಕ್ಷುಬ್ಧತೆಯ ಕೇಂದ್ರಬಿಂದುವಾಗಿರುವ ಬಂಡಾಯ ನಾಯಕ ಏಕನಾಥ್ ಶಿಂದೆಗೆ ಸ್ವಕ್ಷೇತ್ರದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ಶಿಂದೆಯನ್ನು 'ಜನನಾಯಕ' ಎಂದು ಬಣ್ಣಿಸಿರುವ ಅಲ್ಲಿನ ಜನರು, ಅವರ ನಿರ್ಧಾರಗಳು ಎಂದಿಗೂ ಸರಿಯಾಗಿರುತ್ತವೆ. ಏಕನಾಥ್​ ಶಿಂದೆ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ನೋಡಲು ಬಯಸುತ್ತೇವೆ ಎಂದಿದ್ದಾರೆ.

ಏಕನಾಥ್​ ಶಿಂದೆ ಅವರ ಸ್ವಗ್ರಾಮವಾದ ಡೇರ್​ನ ಜನರು ಶಿಂಧೆ ಅವರ ನಿರ್ಧಾರದ ಹಿಂದೆ ಬಲವಾಗಿ ನಿಂತಿದ್ದಾರೆ. ಅವರು ಶೀಘ್ರದಲ್ಲೇ ರಾಜ್ಯದ ಮುಖ್ಯಮಂತ್ರಿಯಾಗುವುದನ್ನು ನೋಡಲು ಬಯಸಿದ್ದಾರೆ. 58 ವರ್ಷದ ಶಿಂದೆ ಅವರು ಸತಾರಾ ಮೂಲದವರಾಗಿದ್ದರೂ, ಮುಂಬೈಗೆ ಹೊಂದಿಕೊಂಡಿರುವ ಥಾಣೆ-ಪಾಲ್ಘರ್​ನ ಪ್ರಮುಖ ಶಿವಸೇನಾ ನಾಯಕರಾಗಿದ್ದಾರೆ. ಥಾಣೆಯ ಕೊಪ್ರಿ-ಪಚ್ಪಖಾಡಿಯ ಶಾಸಕರಾಗಿರುವ ಶಿಂದೆ ಅವರ ಆಕ್ರಮಣಕಾರಿ ಧೋರಣೆಯಿಂದಲೇ ಹೆಸರುವಾಸಿಯಾಗಿದ್ದಾರೆ.

ಶಿಂದೆ ನಿರ್ಧಾರಕ್ಕೆ ಬದ್ಧ: ಶಿಂದೆ ಸಾಹೇಬರು ತೆಗೆದುಕೊಂಡ ಯಾವುದೇ ನಿರ್ಧಾರಗಳು ಸರಿಯಾಗಿರುತ್ತವೆ. ನಾವು ಅವರೊಂದಿಗೆ ಗಟ್ಟಿಯಾಗಿ ನಿಂತಿದ್ದೇವೆ. ಅವರಂತಹ ಜನನಾಯಕ ವ್ಯಕ್ತಿ ಮತ್ತೊಬ್ಬರಿಲ್ಲ. ಬಡವರು ಮತ್ತು ನಿರ್ಗತಿಕರ ಪರವಾಗಿದ್ದಾರೆ ಎಂದು ರೂಪೇಶ್ ಶಿಂಧೆ ಎಂಬುವವರು ಹೇಳಿದ್ದಾರೆ.

ಶಿವಸೇನೆಯ 38 ಮತ್ತು ಪಕ್ಷೇತರರು ಸೇರಿ 50 ಕ್ಕೂ ಹೆಚ್ಚು ಶಾಸಕರು ಏಕನಾಥ್​ ಶಿಂದೆ ನೇತೃತ್ವದಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡೆದ್ದು ಅಸ್ಸೋಂನ ಗುವಾಹಟಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.

ಓದಿ: Maharashtra Political Crisis: ಮುಂಬೈ, ಥಾಣೆಯಲ್ಲಿ ನಿಷೇಧಾಜ್ಞೆ ಜಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.