ಹರಿದ್ವಾರ(ಉತ್ತರಾಖಂಡ) : ರೈಲು ಮಾರ್ಗದಲ್ಲಿ ಡಬಲ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಯ ವೇಳೆ ಪರೀಕ್ಷಾರ್ಥವಾಗಿ ಓಡಾಡುತ್ತಿದ್ದ ರೈಲು ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿರುವ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.
ಜ್ವಾಲಾಪುರ ಕೊತ್ವಾಲಿ ಪ್ರದೇಶದ ಜಮಾಲ್ಪುರದಲ್ಲಿ ಘಟನೆ ಸಂಭವಿಸಿದ್ದು, ಹರಿದ್ವಾರ-ಲಕ್ಸಾರ್ ರೈಲ್ವೆ ಹಳಿಯ ಕಾಮಗಾರಿ ನಡೆಯುತ್ತಿದ್ದ ವೇಳೆ ಪರೀಕ್ಷಾರ್ಥವಾಗಿ ಓಡಾಡುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ. ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ನಿಂತಿದ್ದ ಟ್ರಕ್ಗೆ ಗುದ್ದಿದ ಕಾರು: ತಿರುಪತಿಯಿಂದ ಮರಳುತ್ತಿದ್ದ ಐವರ ದುರ್ಮರಣ
ಸ್ಥಳೀಯ ಶಾಸಕ ಯತಿಶ್ವರಾನಂದ್ ಕೂಡಾ ಸ್ಥಳಕ್ಕೆ ಧಾವಿಸಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಪ್ರಕರಣವನ್ನು ನ್ಯಾಯಾಂಗೀಯ ತನಿಖೆಗೆ ವಹಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಸೂಚಿಸಿದ್ದಾರೆ
ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಸೂಚನೆ ನೀಡಿದ್ದಾರೆ.