ಮುಂಬೈ: ನೆರೆಯ ಮಹಾರಾಷ್ಟ್ರದಲ್ಲಿ ವರುಣ ಅವಾಂತರವನ್ನೇ ಸೃಷ್ಟಿಸಿದ್ದು, ರಾಯಗಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 42 ತಲುಪಿದೆ. ಕಳೆದ 48 ಗಂಟೆಗಳಿಂದ ರತ್ನಗಿರಿ ಜಿಲ್ಲಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಸತಾರ, ಕೋಲ್ಹಾಪುರ್, ಸಾಂಗ್ಲಿ ಹಾಗೂ ಕೊಂಕಣ್ ಜಿಲ್ಲೆಯ ಕರಾವಳಿಯಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
![Heavy rain in Maharashtra; Normal life disturb](https://etvbharatimages.akamaized.net/etvbharat/prod-images/12551347_mhh1.jpg)
ಮುಂಜಾಗ್ರತಾ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಿಗೆ ದೌಡಾಯಿಸಿರುವ ಎನ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿವೆ. ಎಡಬಿಡದೆ ಮಳೆಯಾಗುತ್ತಿರುವ ಸತಾರ ಜಿಲ್ಲೆಯ ಪಟಾನ್ನ ಮಿರ್ಗಾಂವ್ ಗ್ರಾಮದಲ್ಲಿ 221 ಮಂದಿಯನ್ನು ಈಗಾಗಲೇ ಎನ್ಡಿಆರ್ಎಫ್ ರಕ್ಷಿಸಿದೆ.
![Heavy rain in Maharashtra; Normal life disturb](https://etvbharatimages.akamaized.net/etvbharat/prod-images/12551347_mh3.jpg)
ರಾಜ್ಯದಲ್ಲಿ ಮಳೆಯಿಂದ ಸಾವನ್ನಪ್ಪಿದವರ ಬಗ್ಗೆ ಕಂಬನಿ ಮಿಡಿದಿರುವ ಸಿಎಂ ಉದ್ಧವ್ ಠಾಕ್ರೆ, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ಕಚೇರಿ ತಿಳಿಸಿದೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮೃತರಿಗೆ ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ್ದರು.
![Heavy rain in Maharashtra; Normal life disturb](https://etvbharatimages.akamaized.net/etvbharat/prod-images/12551347_hm2.jpg)
ಇದನ್ನೂ ಓದಿ: Maharashtra ಮಳೆಗೆ ತತ್ತರ: ಪರಿಸ್ಥಿತಿ ಬಗ್ಗೆ ಸಿಎಂ ಠಾಕ್ರೆ ಜೊತೆ ಪ್ರಧಾನಿ ಮೋದಿ ಚರ್ಚೆ
ರೈಲು ಸಂಚಾರ ರದ್ದು
ಮುಂಬೈ, ಕೊಂಕಣ್ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ 30 ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. 12 ರೈಲುಗಳ ಮಾರ್ಗ ಬದಾಲವಣೆ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಮಾಹಿತಿ ನೀಡಿದೆ.
![Heavy rain in Maharashtra; Normal life disturb](https://etvbharatimages.akamaized.net/etvbharat/prod-images/12551347_mh1.jpg)
6 ಜಿಲ್ಲೆಗಳಲ್ಲಿ ಹೈ ಅಲರ್ಟ್
ರತ್ನಗಿರಿ ಹಾಗೂ ಪುಣೆ ಸೇರಿದಂತೆ 6 ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಿದೆ.
ಇದನ್ನೂ ಓದಿ: ಮಹಾಮಳೆಗೆ ರೈಲ್ವೆ ಸಂಚಾರ ಅಸ್ತವ್ಯಸ್ತ: ರೈಲುಗಳಲ್ಲೇ ಸಿಲುಕಿಕೊಂಡಿರುವ 6 ಸಾವಿರ ಪ್ರಯಾಣಿಕರು