ETV Bharat / bharat

ಇವಿಎಂ ಮೇಲೆ ನಂಬಿಕೆಯಿದೆ, ಬ್ಯಾಲೆಟ್​ ಪೇಪರ್​ಗೆ ಹಿಂದಿರುಗಲ್ಲ : ಅಜಿತ್​ ಪವಾರ್​ - ಬ್ಯಾಲೆಟ್​ ಪೇಪರ್​ ಬಳಕೆ ಬಗ್ಗೆ ಅಜಿತ್​ ಪವಾರ್​ ಹೇಳಿಕೆ

ಎವಿಎಂ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅವರು (ಇತರ ಪಕ್ಷಗಳು) ಸೋಲುವ ಭೀತಿಯಿಂದ ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಡಿಸಿಎಂ ಎನ್​ಸಿಪಿ ಮುಖಂಡ ಅಜಿತ್​ ಪವಾರ್​ ಹೇಳಿದ್ದಾರೆ.

author img

By

Published : Feb 11, 2021, 7:59 PM IST

ಮುಂಬೈ : ಇವಿಎಂ ಮೇಲೆ ಸಂಪೂರ್ಣ ನಂಬಿಕೆಯಿದ್ದು, ರಾಜ್ಯ ಸರ್ಕಾರ ಬ್ಯಾಲೆಟ್​ ಪೇಪರ್​ ಬಳಸಲು ಮುಂದಾಗುವುದಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್​ ಪವಾರ್​ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ, ಕಾಂಗ್ರೆಸ್, ಎನ್‌ಸಿಪಿ ಸೇರಿದಂತೆ ಹಲವು ಬಿಜೆಪಿಯೇತರ ಪ್ರತಿಪಕ್ಷಗಳು ಇವಿಎಂನ ವಿಶ್ವಾಸಾರ್ಹತೆ ಕುರಿತು ಅನುಮಾನ ವ್ಯಕ್ತಪಡಿಸಿದ್ದವು. ಆದರೆ, ಎನ್​ಸಿಪಿ ಮುಖಂಡ ಅಜಿತ್​ ಪವಾರ್, ಎವಿಎಂ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅವರು (ಇತರ ಪಕ್ಷಗಳು) ಸೋಲುವ ಭೀತಿಯಿಂದ ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಓದಿ : ರಾಜ್ಯಪಾಲರಿಗೆ ವಿಮಾನ ಹತ್ತಲು ಬಿಡದ ಅಧಿಕಾರಿಗಳು..!

ಇತ್ತೀಚೆಗೆ ಸ್ಪೀಕರ್​ ಸ್ಥಾನಕ್ಕೆ ರಾಜೀನಾಮೆ ನೀಡಿದ, ಪ್ರಸ್ತುತ ರಾಜ್ಯ ಕಾಂಗ್ರೆಸ್​ ಅಧ್ಯಕ್ಷರಾಗಿರುವ ನಾನಾ ಪಟೋಲೆ ಅವರು, ಸ್ಥಳೀಯ ಸಂಸ್ಥೆಗಳು ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಇವಿಎಂಗಳ ಹೊರತಾಗಿ ಮತದಾರರಿಗೆ ಮತಪತ್ರಗಳನ್ನು ಬಳಸುವ ಆಯ್ಕೆಯನ್ನು ನೀಡುವ ಕಾನೂನು ರೂಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.

ಇವಿಎಂ ವಿಶ್ವಾಸಾರ್ಹತೆಯ ಕುರಿತು ಹಲವು ದೂರುಗಳು ಕೇಳಿ ಬಂದ ಹಿನ್ನೆಲೆ, ಈ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಸ್ಪೀಕರ್​ ಆಗಿದ್ದ ವೇಳೆ ಪಟೋಲೆ ಸೂಚನೆ ನೀಡಿದ್ದರು. ಪಟೋಲೆ​ ಸೂಚನೆಯ ಕುರಿತು ಕೇಳಿದಾಗ ಪ್ರತಿಕ್ರಿಯಿಸಿದ ಪವಾರ್​, ಪ್ರತಿಯೊಬ್ಬ ವ್ಯಕ್ತಿಗೂ ಅವರದೇ ಆದ ಸ್ವಂತ ಅಭಿಪ್ರಾಯಗಳಿರುತ್ತವೆ. ಪಟೋಲೆ ಅವರು ಅವರ ಅಭಿಪ್ರಾಯ ಹೇಳಿದ್ದಾರೆ. ಇದು ನನ್ನ ಅಭಿಪ್ರಾಯ ಎಂದಿದ್ದಾರೆ.

ಮುಂಬೈ : ಇವಿಎಂ ಮೇಲೆ ಸಂಪೂರ್ಣ ನಂಬಿಕೆಯಿದ್ದು, ರಾಜ್ಯ ಸರ್ಕಾರ ಬ್ಯಾಲೆಟ್​ ಪೇಪರ್​ ಬಳಸಲು ಮುಂದಾಗುವುದಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್​ ಪವಾರ್​ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ, ಕಾಂಗ್ರೆಸ್, ಎನ್‌ಸಿಪಿ ಸೇರಿದಂತೆ ಹಲವು ಬಿಜೆಪಿಯೇತರ ಪ್ರತಿಪಕ್ಷಗಳು ಇವಿಎಂನ ವಿಶ್ವಾಸಾರ್ಹತೆ ಕುರಿತು ಅನುಮಾನ ವ್ಯಕ್ತಪಡಿಸಿದ್ದವು. ಆದರೆ, ಎನ್​ಸಿಪಿ ಮುಖಂಡ ಅಜಿತ್​ ಪವಾರ್, ಎವಿಎಂ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅವರು (ಇತರ ಪಕ್ಷಗಳು) ಸೋಲುವ ಭೀತಿಯಿಂದ ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಓದಿ : ರಾಜ್ಯಪಾಲರಿಗೆ ವಿಮಾನ ಹತ್ತಲು ಬಿಡದ ಅಧಿಕಾರಿಗಳು..!

ಇತ್ತೀಚೆಗೆ ಸ್ಪೀಕರ್​ ಸ್ಥಾನಕ್ಕೆ ರಾಜೀನಾಮೆ ನೀಡಿದ, ಪ್ರಸ್ತುತ ರಾಜ್ಯ ಕಾಂಗ್ರೆಸ್​ ಅಧ್ಯಕ್ಷರಾಗಿರುವ ನಾನಾ ಪಟೋಲೆ ಅವರು, ಸ್ಥಳೀಯ ಸಂಸ್ಥೆಗಳು ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಇವಿಎಂಗಳ ಹೊರತಾಗಿ ಮತದಾರರಿಗೆ ಮತಪತ್ರಗಳನ್ನು ಬಳಸುವ ಆಯ್ಕೆಯನ್ನು ನೀಡುವ ಕಾನೂನು ರೂಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.

ಇವಿಎಂ ವಿಶ್ವಾಸಾರ್ಹತೆಯ ಕುರಿತು ಹಲವು ದೂರುಗಳು ಕೇಳಿ ಬಂದ ಹಿನ್ನೆಲೆ, ಈ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಸ್ಪೀಕರ್​ ಆಗಿದ್ದ ವೇಳೆ ಪಟೋಲೆ ಸೂಚನೆ ನೀಡಿದ್ದರು. ಪಟೋಲೆ​ ಸೂಚನೆಯ ಕುರಿತು ಕೇಳಿದಾಗ ಪ್ರತಿಕ್ರಿಯಿಸಿದ ಪವಾರ್​, ಪ್ರತಿಯೊಬ್ಬ ವ್ಯಕ್ತಿಗೂ ಅವರದೇ ಆದ ಸ್ವಂತ ಅಭಿಪ್ರಾಯಗಳಿರುತ್ತವೆ. ಪಟೋಲೆ ಅವರು ಅವರ ಅಭಿಪ್ರಾಯ ಹೇಳಿದ್ದಾರೆ. ಇದು ನನ್ನ ಅಭಿಪ್ರಾಯ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.