ETV Bharat / bharat

ಕಾಂಗ್ರೆಸ್​ ಚಿಂತನ ಶಿಬಿರ: ಇಂದು ಗುಜರಾತ್​ಗೆ ರಾಹುಲ್ ಗಾಂಧಿ ಭೇಟಿ

author img

By

Published : Feb 26, 2022, 10:02 AM IST

ದೇವಭೂಮಿ ದ್ವಾರಕಾದಲ್ಲಿ ನಡೆಯುತ್ತಿರುವ ಚಿಂತನ ಶಿಬಿರದಲ್ಲಿ ಭಾಗವಹಿಸಲು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಇಂದು ಗುಜರಾತ್​ಗೆ ಭೇಟಿ ನೀಡಲಿದ್ದಾರೆ.

ಕಾಂಗ್ರೆಸ್​ ಚಿಂತನ ಶಿಬಿರ ಕಾರ್ಯಕ್ರಮ
ಕಾಂಗ್ರೆಸ್​ ಚಿಂತನ ಶಿಬಿರ ಕಾರ್ಯಕ್ರಮ

ದೇವಭೂಮಿ ದ್ವಾರಕಾ: ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯು ಮೂರು ದಿನಗಳ 'ಚಿಂತನ ಶಿಬಿರ'ವನ್ನು ದ್ವಾರಕಾದಲ್ಲಿ ಆಯೋಜಿಸಿದ್ದು, ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಗುಜರಾತ್​ಗೆ ಆಗಮಿಸುತ್ತಿದ್ದಾರೆ.

ರಾಜ್ಯಕ್ಕೆ ಭೇಟಿ ನೀಡಿದ ನಂತರ ಬೆಳಗ್ಗೆ 11:30 ಕ್ಕೆ ದ್ವಾರಕಾಧೀಶ ದೇವರಿಗೆ ಪೂಜೆ ಸಲ್ಲಿಸಿ, ಮಧ್ಯಾಹ್ನ 1ರಿಂದ 4ರವರೆಗೆ ಚಿಂತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ.27ರಂದು ಚಿಂತನ ಶಿಬಿರ ಮುಕ್ತಾಯವಾಗಲಿದ್ದು, ಏರಡನೇ ದಿನವಾದ ಇಂದು ಜನರ ನ್ಯಾಯ ಮತ್ತು ಹಕ್ಕುಗಳ ಹೋರಾಟದ ಕುರಿತಾದ ಪ್ರಣಾಳಿಕೆ ಮಂಡಿಸಲಾಗುವುದು.

ಕಾಂಗ್ರೆಸ್​ ಚಿಂತನ ಶಿಬಿರ ಕಾರ್ಯಕ್ರಮ
ಕಾಂಗ್ರೆಸ್​ ಚಿಂತನ ಶಿಬಿರ ಕಾರ್ಯಕ್ರಮ

ಫೆಬ್ರವರಿ 25 ರಿಂದ ದ್ವಾರಕಾದಲ್ಲಿ ಪ್ರಾರಂಭವಾದ ರಾಜ್ಯ ಕಾಂಗ್ರೆಸ್ ಚಿಂತನ ಶಿಬಿರ, ರಾಜ್ಯ ಉಸ್ತುವಾರಿ ಸಚಿವ ರಘು ಶರ್ಮಾ ಹಾಗೂ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಜಗದೀಶ್ ಠಾಕೂರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸುಖರಾಮ್ ರಥ್ವಾ ನೇತೃತ್ವದಲ್ಲಿ ನಡೆಯುತ್ತಿದ್ದು, ಇಂದು ಕಾಂಗ್ರೆಸ್ ಯುವ ಮುಖಂಡ ರಾಹುಲ್ ಗಾಂಧಿ ಉಪಸ್ಥಿತರಿರುವರು.

ಕಾಂಗ್ರೆಸ್​ ಚಿಂತನ ಶಿಬಿರ ಕಾರ್ಯಕ್ರಮ
ಕಾಂಗ್ರೆಸ್​ ಚಿಂತನ ಶಿಬಿರ ಕಾರ್ಯಕ್ರಮ

ಇದನ್ನೂ ಓದಿ: ಉಕ್ರೇನ್​​​​ನ ಚೆರ್ನೊಬಿಲ್​ ಬಳಿ ವಿಕಿರಣ ಹೊರಸೂಸುವಿಕೆ ಹೆಚ್ಚಳ: ವರದಿ

ಮುಂಬರುವ ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್, ಮುಂದಿನ ಚುನಾವಣೆಯಲ್ಲಿ 125 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ರಾಜ್ಯ ಕಾಂಗ್ರೆಸ್​ ಘಟಕವು ಪ್ರಯತ್ನ ನಡೆಸುತ್ತಿದೆ. 2017ರಲ್ಲಿ ಒಟ್ಟು 182 ಸ್ಥಾನಗಳಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದಿತ್ತು ಎಂದರು.

ದೇವಭೂಮಿ ದ್ವಾರಕಾ: ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯು ಮೂರು ದಿನಗಳ 'ಚಿಂತನ ಶಿಬಿರ'ವನ್ನು ದ್ವಾರಕಾದಲ್ಲಿ ಆಯೋಜಿಸಿದ್ದು, ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಗುಜರಾತ್​ಗೆ ಆಗಮಿಸುತ್ತಿದ್ದಾರೆ.

ರಾಜ್ಯಕ್ಕೆ ಭೇಟಿ ನೀಡಿದ ನಂತರ ಬೆಳಗ್ಗೆ 11:30 ಕ್ಕೆ ದ್ವಾರಕಾಧೀಶ ದೇವರಿಗೆ ಪೂಜೆ ಸಲ್ಲಿಸಿ, ಮಧ್ಯಾಹ್ನ 1ರಿಂದ 4ರವರೆಗೆ ಚಿಂತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ.27ರಂದು ಚಿಂತನ ಶಿಬಿರ ಮುಕ್ತಾಯವಾಗಲಿದ್ದು, ಏರಡನೇ ದಿನವಾದ ಇಂದು ಜನರ ನ್ಯಾಯ ಮತ್ತು ಹಕ್ಕುಗಳ ಹೋರಾಟದ ಕುರಿತಾದ ಪ್ರಣಾಳಿಕೆ ಮಂಡಿಸಲಾಗುವುದು.

ಕಾಂಗ್ರೆಸ್​ ಚಿಂತನ ಶಿಬಿರ ಕಾರ್ಯಕ್ರಮ
ಕಾಂಗ್ರೆಸ್​ ಚಿಂತನ ಶಿಬಿರ ಕಾರ್ಯಕ್ರಮ

ಫೆಬ್ರವರಿ 25 ರಿಂದ ದ್ವಾರಕಾದಲ್ಲಿ ಪ್ರಾರಂಭವಾದ ರಾಜ್ಯ ಕಾಂಗ್ರೆಸ್ ಚಿಂತನ ಶಿಬಿರ, ರಾಜ್ಯ ಉಸ್ತುವಾರಿ ಸಚಿವ ರಘು ಶರ್ಮಾ ಹಾಗೂ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಜಗದೀಶ್ ಠಾಕೂರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸುಖರಾಮ್ ರಥ್ವಾ ನೇತೃತ್ವದಲ್ಲಿ ನಡೆಯುತ್ತಿದ್ದು, ಇಂದು ಕಾಂಗ್ರೆಸ್ ಯುವ ಮುಖಂಡ ರಾಹುಲ್ ಗಾಂಧಿ ಉಪಸ್ಥಿತರಿರುವರು.

ಕಾಂಗ್ರೆಸ್​ ಚಿಂತನ ಶಿಬಿರ ಕಾರ್ಯಕ್ರಮ
ಕಾಂಗ್ರೆಸ್​ ಚಿಂತನ ಶಿಬಿರ ಕಾರ್ಯಕ್ರಮ

ಇದನ್ನೂ ಓದಿ: ಉಕ್ರೇನ್​​​​ನ ಚೆರ್ನೊಬಿಲ್​ ಬಳಿ ವಿಕಿರಣ ಹೊರಸೂಸುವಿಕೆ ಹೆಚ್ಚಳ: ವರದಿ

ಮುಂಬರುವ ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್, ಮುಂದಿನ ಚುನಾವಣೆಯಲ್ಲಿ 125 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ರಾಜ್ಯ ಕಾಂಗ್ರೆಸ್​ ಘಟಕವು ಪ್ರಯತ್ನ ನಡೆಸುತ್ತಿದೆ. 2017ರಲ್ಲಿ ಒಟ್ಟು 182 ಸ್ಥಾನಗಳಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದಿತ್ತು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.