ETV Bharat / bharat

ಕಬ್ಬಿನ ರಸದಿಂದ ಎಥೆನಾಲ್ ಉತ್ಪಾದಿಸದಂತೆ ಕಾರ್ಖಾನೆಗಳಿಗೆ ಕೇಂದ್ರದ ನಿರ್ದೇಶನ; ಸಕ್ಕರೆ ಬೆಲೆ ಇಳಿಕೆ ಸಾಧ್ಯತೆ

author img

By ETV Bharat Karnataka Team

Published : Dec 7, 2023, 5:22 PM IST

Govt direction to sugar mills: ಕಬ್ಬಿನ ರಸದಿಂದ ಎಥೆನಾಲ್ ತಯಾರಿಸದಂತೆ ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ನಿರ್ದೇಶನ ನೀಡಿದೆ.

Govt bars sugar mills from using sugarcane for ethanol production
Govt bars sugar mills from using sugarcane for ethanol production

ನವದೆಹಲಿ: 2023-2024ರಲ್ಲಿ ಎಥೆನಾಲ್ ಉತ್ಪಾದಿಸಲು ಕಬ್ಬಿನ ರಸ ಬಳಸದಂತೆ ಕೇಂದ್ರ ಸರಕಾರ ಸಕ್ಕರೆ ಕಾರ್ಖಾನೆಗಳಿಗೆ ಗುರುವಾರ ನಿರ್ದೇಶನ ನೀಡಿದೆ. ದೇಶದ ಸಕ್ಕರೆ ಉತ್ಪಾದನೆಯಲ್ಲಿ ಸಂಭವನೀಯ ಕುಸಿತ ತಡೆಗೆ ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಪೆಟ್ರೋಲ್​ನೊಂದಿಗೆ ಮಿಶ್ರಣ ಮಾಡುವ ಅಗತ್ಯವನ್ನು ಪೂರೈಸಲು ಸಕ್ಕರೆ ಕಾರ್ಖಾನೆಗಳು ಸಕ್ಕರೆ ಉತ್ಪಾದನೆಯ ಉಪ ಉತ್ಪನ್ನವಾದ ಬಿ-ಹೆವಿ ಮೊಲಾಸಿಸ್​ನಿಂದ ಎಥೆನಾಲ್ ಉತ್ಪಾದಿಸುವುದನ್ನು ಮುಂದುವರಿಸಬಹುದು ಎಂದು ಸರ್ಕಾರದ ಅಧಿಸೂಚನೆ ಹೇಳಿದೆ.

ಪೆಟ್ರೋಲ್​ನೊಂದಿಗೆ ಬೆರೆಸಲು ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ತೈಲ ಕಂಪನಿಗಳಿಗೆ ಎಥೆನಾಲ್ ಪೂರೈಸಲಾಗುತ್ತದೆ. ಸಕ್ಕರೆ (ನಿಯಂತ್ರಣ) ಆದೇಶ 1966ರ ಕಲಂ 4 ಮತ್ತು 5ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, 2023-24 ರ ಇಎಸ್​ವೈ (ಎಥೆನಾಲ್ ಸರಬರಾಜು ವರ್ಷ) ನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಎಥೆನಾಲ್ ತಯಾರಿಕೆಗಾಗಿ ಕಬ್ಬಿನ ರಸ / ಸಕ್ಕರೆ ಸಿರಪ್ ಅನ್ನು ಬಳಸದಂತೆ ಎಲ್ಲಾ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

"ತೈಲ ಮಾರುಕಟ್ಟೆ ಕಂಪನಿಗಳಿಗೆ (ಒಎಂಸಿಗಳು) ಬಿ-ಹೆವಿ ಮೊಲಾಸಿಸ್​ನಿಂದ ತಯಾರಿಸಲಾಗುವ ಎಥೆನಾಲ್ ಪೂರೈಕೆ ಮುಂದುವರಿಯುತ್ತದೆ" ಎಂದು ಆಹಾರ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಕ್ಟೋಬರ್​ನಲ್ಲಿ ಪ್ರಾರಂಭವಾದ 2023-24ರ ಋತುವಿನಲ್ಲಿ ರೈತರ ಆದಾಯ ಹೆಚ್ಚಿಸಲು ಕೇಂದ್ರವು ಕಬ್ಬಿನ ಕನಿಷ್ಠ ಬೆಲೆಯನ್ನು ಕ್ವಿಂಟಾಲ್​ಗೆ 10 ರೂ ಹೆಚ್ಚಿಸಿ 315 ರೂ.ಗೆ ಏರಿಕೆ ಮಾಡಿತ್ತು.

ಮಳೆ ಕೊರತೆಯಿಂದ ಈ ವರ್ಷ ಭಾರತದಲ್ಲಿ ಕಬ್ಬಿನ ಬೆಳೆ ಇಳುವರಿ ತೀರಾ ಕಡಿಮೆಯಾಗಿದೆ. ಹೀಗಾಗಿ ವಿಶ್ವದ ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವಾಗಿರುವ ಭಾರತ ಸಕ್ಕರೆ ರಫ್ತಿನ ಮೇಲೆ ನಿರ್ಬಂಧ ಹೇರಿದೆ. ಈ ನಿರ್ಬಂಧಗಳು ಅಕ್ಟೋಬರ್ 31 ರ ನಂತರವೂ ಮುಂದುವರಿದಿವೆ. ಎಥೆನಾಲ್ ಉತ್ಪಾದನೆಯನ್ನು ಸೀಮಿತಗೊಳಿಸುವುದರಿಂದ ಭಾರತದಲ್ಲಿ ಸಕ್ಕರೆ ದಾಸ್ತಾನು ಕುಸಿಯದಂತೆ ತಡೆಯಬಹುದಾಗಿದೆ.

ಭಾರತ ಸರ್ಕಾರವು ಸಕ್ಕರೆಯಿಂದ ಎಥೆನಾಲ್ ತಯಾರಿಸುವುದನ್ನು ನಿಲ್ಲಿಸಬಹುದು ಎಂಬ ಮಾಹಿತಿ ಬರಲು ಪ್ರಾರಂಭಿಸಿದ ಕೂಡಲೇ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಫ್ಯೂಚರ್ಸ್​ ದರ ನ್ಯೂಯಾರ್ಕ್ ವಿನಿಮಯ ಕೇಂದ್ರದಲ್ಲಿ ಸುಮಾರು 8 ಪ್ರತಿಶತದಷ್ಟು ಕುಸಿದಿದೆ. ಅದೇ ಸಮಯದಲ್ಲಿ ಈ ನಿರ್ಧಾರದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿಯೂ ಕಾಣಿಸಲಿದೆ. ಅಲ್ಲದೆ ಬರುವ ದಿನಗಳಲ್ಲಿ ಸಕ್ಕರೆ ಬೆಲೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

(ಐಎಎನ್ಎಸ್​)

ಇದನ್ನೂ ಓದಿ: ತಮಿಳುನಾಡಿಗೆ 2ನೇ ಕಂತಿನ 450 ಕೋಟಿ ರೂ. ಪರಿಹಾರ ಬಿಡುಗಡೆ: ಸಚಿವ ರಾಜನಾಥ್ ಸಿಂಗ್

ನವದೆಹಲಿ: 2023-2024ರಲ್ಲಿ ಎಥೆನಾಲ್ ಉತ್ಪಾದಿಸಲು ಕಬ್ಬಿನ ರಸ ಬಳಸದಂತೆ ಕೇಂದ್ರ ಸರಕಾರ ಸಕ್ಕರೆ ಕಾರ್ಖಾನೆಗಳಿಗೆ ಗುರುವಾರ ನಿರ್ದೇಶನ ನೀಡಿದೆ. ದೇಶದ ಸಕ್ಕರೆ ಉತ್ಪಾದನೆಯಲ್ಲಿ ಸಂಭವನೀಯ ಕುಸಿತ ತಡೆಗೆ ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಪೆಟ್ರೋಲ್​ನೊಂದಿಗೆ ಮಿಶ್ರಣ ಮಾಡುವ ಅಗತ್ಯವನ್ನು ಪೂರೈಸಲು ಸಕ್ಕರೆ ಕಾರ್ಖಾನೆಗಳು ಸಕ್ಕರೆ ಉತ್ಪಾದನೆಯ ಉಪ ಉತ್ಪನ್ನವಾದ ಬಿ-ಹೆವಿ ಮೊಲಾಸಿಸ್​ನಿಂದ ಎಥೆನಾಲ್ ಉತ್ಪಾದಿಸುವುದನ್ನು ಮುಂದುವರಿಸಬಹುದು ಎಂದು ಸರ್ಕಾರದ ಅಧಿಸೂಚನೆ ಹೇಳಿದೆ.

ಪೆಟ್ರೋಲ್​ನೊಂದಿಗೆ ಬೆರೆಸಲು ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ತೈಲ ಕಂಪನಿಗಳಿಗೆ ಎಥೆನಾಲ್ ಪೂರೈಸಲಾಗುತ್ತದೆ. ಸಕ್ಕರೆ (ನಿಯಂತ್ರಣ) ಆದೇಶ 1966ರ ಕಲಂ 4 ಮತ್ತು 5ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, 2023-24 ರ ಇಎಸ್​ವೈ (ಎಥೆನಾಲ್ ಸರಬರಾಜು ವರ್ಷ) ನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಎಥೆನಾಲ್ ತಯಾರಿಕೆಗಾಗಿ ಕಬ್ಬಿನ ರಸ / ಸಕ್ಕರೆ ಸಿರಪ್ ಅನ್ನು ಬಳಸದಂತೆ ಎಲ್ಲಾ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

"ತೈಲ ಮಾರುಕಟ್ಟೆ ಕಂಪನಿಗಳಿಗೆ (ಒಎಂಸಿಗಳು) ಬಿ-ಹೆವಿ ಮೊಲಾಸಿಸ್​ನಿಂದ ತಯಾರಿಸಲಾಗುವ ಎಥೆನಾಲ್ ಪೂರೈಕೆ ಮುಂದುವರಿಯುತ್ತದೆ" ಎಂದು ಆಹಾರ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಕ್ಟೋಬರ್​ನಲ್ಲಿ ಪ್ರಾರಂಭವಾದ 2023-24ರ ಋತುವಿನಲ್ಲಿ ರೈತರ ಆದಾಯ ಹೆಚ್ಚಿಸಲು ಕೇಂದ್ರವು ಕಬ್ಬಿನ ಕನಿಷ್ಠ ಬೆಲೆಯನ್ನು ಕ್ವಿಂಟಾಲ್​ಗೆ 10 ರೂ ಹೆಚ್ಚಿಸಿ 315 ರೂ.ಗೆ ಏರಿಕೆ ಮಾಡಿತ್ತು.

ಮಳೆ ಕೊರತೆಯಿಂದ ಈ ವರ್ಷ ಭಾರತದಲ್ಲಿ ಕಬ್ಬಿನ ಬೆಳೆ ಇಳುವರಿ ತೀರಾ ಕಡಿಮೆಯಾಗಿದೆ. ಹೀಗಾಗಿ ವಿಶ್ವದ ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವಾಗಿರುವ ಭಾರತ ಸಕ್ಕರೆ ರಫ್ತಿನ ಮೇಲೆ ನಿರ್ಬಂಧ ಹೇರಿದೆ. ಈ ನಿರ್ಬಂಧಗಳು ಅಕ್ಟೋಬರ್ 31 ರ ನಂತರವೂ ಮುಂದುವರಿದಿವೆ. ಎಥೆನಾಲ್ ಉತ್ಪಾದನೆಯನ್ನು ಸೀಮಿತಗೊಳಿಸುವುದರಿಂದ ಭಾರತದಲ್ಲಿ ಸಕ್ಕರೆ ದಾಸ್ತಾನು ಕುಸಿಯದಂತೆ ತಡೆಯಬಹುದಾಗಿದೆ.

ಭಾರತ ಸರ್ಕಾರವು ಸಕ್ಕರೆಯಿಂದ ಎಥೆನಾಲ್ ತಯಾರಿಸುವುದನ್ನು ನಿಲ್ಲಿಸಬಹುದು ಎಂಬ ಮಾಹಿತಿ ಬರಲು ಪ್ರಾರಂಭಿಸಿದ ಕೂಡಲೇ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಫ್ಯೂಚರ್ಸ್​ ದರ ನ್ಯೂಯಾರ್ಕ್ ವಿನಿಮಯ ಕೇಂದ್ರದಲ್ಲಿ ಸುಮಾರು 8 ಪ್ರತಿಶತದಷ್ಟು ಕುಸಿದಿದೆ. ಅದೇ ಸಮಯದಲ್ಲಿ ಈ ನಿರ್ಧಾರದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿಯೂ ಕಾಣಿಸಲಿದೆ. ಅಲ್ಲದೆ ಬರುವ ದಿನಗಳಲ್ಲಿ ಸಕ್ಕರೆ ಬೆಲೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

(ಐಎಎನ್ಎಸ್​)

ಇದನ್ನೂ ಓದಿ: ತಮಿಳುನಾಡಿಗೆ 2ನೇ ಕಂತಿನ 450 ಕೋಟಿ ರೂ. ಪರಿಹಾರ ಬಿಡುಗಡೆ: ಸಚಿವ ರಾಜನಾಥ್ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.