ETV Bharat / bharat

ದೀದಿ ನಾಡಿಗೆ ತಡವಾಗಿ ಎಂಟ್ರಿ ಕೊಟ್ಟ ಗಾಂಧಿ.. ಅನೇಕ ಪ್ರಶ್ನೆ ಹುಟ್ಟು ಹಾಕಿದ ರಾಹುಲ್​ ನಡೆ!

author img

By

Published : Apr 15, 2021, 8:48 PM IST

ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಅರ್ಧ ಕ್ಷೇತ್ರಗಳಿಗೆ ಚುನಾವಣೆ ಮುಗಿದು ಹೋಗಿದ್ದು, ಇದೀಗ ಕಾಂಗ್ರೆಸ್ ಮುಖಂಡ ರಾಹುಲ್​ ಗಾಂಧಿ ದೀದಿ ನಾಡಿಗೆ ಲಗ್ಗೆ ಹಾಕಿದ್ದಾರೆ.

Rahul Gandhi
Rahul Gandhi

ನವದೆಹಲಿ: ಪಶ್ಚಿಮ ಬಂಗಾಳದ 294 ವಿಧಾನಸಭೆ ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಈಗಾಗಲೇ 4 ಹಂತದ ಮತದಾನ ಮುಕ್ತಾಯಗೊಂಡಿದೆ. ದೀದಿ ನಾಡಲ್ಲಿ ತೃಣಮೂಲ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಈಗಾಗಲೇ ಅನೇಕ ಆರೋಪ - ಪ್ರತ್ಯಾರೋಪಗಳಿಗೂ ಕಾರಣವಾಗಿದೆ.

ಇಷ್ಟು ದಿನ ಸೈಲೆಂಟ್​​ ಆಗಿದ್ದ ಕಾಂಗ್ರೆಸ್​ ಇದೀಗ ಚುನಾವಣಾ ಕಣಕ್ಕಿಳಿದಿದ್ದು, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಇಂದು ಎರಡು ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದರು. ಇದು ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ. ಇದೇ ಮೊದಲ ಸಲ ಮಮತಾ ನಾಡಿಗೆ ಲಗ್ಗೆ ಹಾಕಿರುವ ರಾಹುಲ್​ ಗಾಂಧಿ ಪ್ರಚಾರ ಸಭೆ ನಡೆಸಿದ್ದು, ಕಾಂಗ್ರೆಸ್​ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿದರು. ಉತ್ತರ ದಿನಾಜ್​ಪುರದ ಗೋಲ್​ಪೋಖರ್​ ಮತ್ತು ಡಾರ್ಜಲಿಂಗ್​ನ ಶಿವಮಂದಿರ್​ ಬಜಾರ್​​​ನಲ್ಲಿ ಅವರು ಪ್ರಚಾರ ನಡೆಸಿದರು.

ಇದರ ಬಗ್ಗೆ ಮಾತನಾಡಿರುವ ಹಿರಿಯ ಪತ್ರಕರ್ತ ರಶೀದ್​ ಕಿಡ್ವಾಯ್​, ಪಂಚರಾಜ್ಯ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್​ ತನ್ನದೇ ಆದ ತಂತ್ರ ಹೊಂದಿದೆ. ಕೇರಳದಲ್ಲಿ ಎಡಪಂಥೀಯರ ವಿರುದ್ಧ ಹೋರಾಡುತ್ತಿದ್ದರೆ, ಪಶ್ಚಿಮ ಬಂಗಾಳದಲ್ಲಿ ಅದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಹೀಗಾಗಿ ಕೇರಳ ಚುನಾವಣೆ ಮುಕ್ತಾಯವಾಗುವವರೆಗೆ ಅದು ತಮಿಳುನಾಡಿನಲ್ಲಿ ಪ್ರಚಾರ ನಡೆಸಿಲ್ಲ ಎಂದಿದ್ದಾರೆ.

ಪಂಚರಾಜ್ಯ ಚುನಾವಣೆಯ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಸೋಲಿಸುವುದು ಕಾಂಗ್ರೆಸ್​​ನ ಏಕೈಕ ಗುರಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಅನೇಕ ಹೇಳಿಕೆ ನೀಡಿದ್ದರೂ, ಅವರ ಮುಖ್ಯ ಟಾರ್ಗೆಟ್​ ಬಿಜೆಪಿ ಹಾಗೂ ಆರ್​​ಎಸ್​ಎಸ್​ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಹುಲ್​ ಗಾಂಧಿ ಪಶ್ಚಿಮ ಬಂಗಾಳದಲ್ಲಿ ಮಮತಾ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೇಂದ್ರದಲ್ಲಿ ಮೋದಿ ಏನು ಮಾಡ್ತಿದ್ದಾರೋ ಅದೇ ಕೆಲಸವನ್ನ ಮಮತಾ ರಾಜ್ಯದಲ್ಲಿ ಮಾಡುತ್ತಿದ್ದಾರೆ.

ನವದೆಹಲಿ: ಪಶ್ಚಿಮ ಬಂಗಾಳದ 294 ವಿಧಾನಸಭೆ ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಈಗಾಗಲೇ 4 ಹಂತದ ಮತದಾನ ಮುಕ್ತಾಯಗೊಂಡಿದೆ. ದೀದಿ ನಾಡಲ್ಲಿ ತೃಣಮೂಲ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಈಗಾಗಲೇ ಅನೇಕ ಆರೋಪ - ಪ್ರತ್ಯಾರೋಪಗಳಿಗೂ ಕಾರಣವಾಗಿದೆ.

ಇಷ್ಟು ದಿನ ಸೈಲೆಂಟ್​​ ಆಗಿದ್ದ ಕಾಂಗ್ರೆಸ್​ ಇದೀಗ ಚುನಾವಣಾ ಕಣಕ್ಕಿಳಿದಿದ್ದು, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಇಂದು ಎರಡು ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದರು. ಇದು ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ. ಇದೇ ಮೊದಲ ಸಲ ಮಮತಾ ನಾಡಿಗೆ ಲಗ್ಗೆ ಹಾಕಿರುವ ರಾಹುಲ್​ ಗಾಂಧಿ ಪ್ರಚಾರ ಸಭೆ ನಡೆಸಿದ್ದು, ಕಾಂಗ್ರೆಸ್​ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿದರು. ಉತ್ತರ ದಿನಾಜ್​ಪುರದ ಗೋಲ್​ಪೋಖರ್​ ಮತ್ತು ಡಾರ್ಜಲಿಂಗ್​ನ ಶಿವಮಂದಿರ್​ ಬಜಾರ್​​​ನಲ್ಲಿ ಅವರು ಪ್ರಚಾರ ನಡೆಸಿದರು.

ಇದರ ಬಗ್ಗೆ ಮಾತನಾಡಿರುವ ಹಿರಿಯ ಪತ್ರಕರ್ತ ರಶೀದ್​ ಕಿಡ್ವಾಯ್​, ಪಂಚರಾಜ್ಯ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್​ ತನ್ನದೇ ಆದ ತಂತ್ರ ಹೊಂದಿದೆ. ಕೇರಳದಲ್ಲಿ ಎಡಪಂಥೀಯರ ವಿರುದ್ಧ ಹೋರಾಡುತ್ತಿದ್ದರೆ, ಪಶ್ಚಿಮ ಬಂಗಾಳದಲ್ಲಿ ಅದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಹೀಗಾಗಿ ಕೇರಳ ಚುನಾವಣೆ ಮುಕ್ತಾಯವಾಗುವವರೆಗೆ ಅದು ತಮಿಳುನಾಡಿನಲ್ಲಿ ಪ್ರಚಾರ ನಡೆಸಿಲ್ಲ ಎಂದಿದ್ದಾರೆ.

ಪಂಚರಾಜ್ಯ ಚುನಾವಣೆಯ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಸೋಲಿಸುವುದು ಕಾಂಗ್ರೆಸ್​​ನ ಏಕೈಕ ಗುರಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಅನೇಕ ಹೇಳಿಕೆ ನೀಡಿದ್ದರೂ, ಅವರ ಮುಖ್ಯ ಟಾರ್ಗೆಟ್​ ಬಿಜೆಪಿ ಹಾಗೂ ಆರ್​​ಎಸ್​ಎಸ್​ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಹುಲ್​ ಗಾಂಧಿ ಪಶ್ಚಿಮ ಬಂಗಾಳದಲ್ಲಿ ಮಮತಾ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೇಂದ್ರದಲ್ಲಿ ಮೋದಿ ಏನು ಮಾಡ್ತಿದ್ದಾರೋ ಅದೇ ಕೆಲಸವನ್ನ ಮಮತಾ ರಾಜ್ಯದಲ್ಲಿ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.