ETV Bharat / bharat

ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಭರ್ಜರಿ ಗೆಲುವು: ಜಯಭೇರಿ ಬಾರಿಸಿದ ಎಂಪಿ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​

author img

By ETV Bharat Karnataka Team

Published : Dec 3, 2023, 10:11 AM IST

Updated : Dec 3, 2023, 5:25 PM IST

Four states Assembly Election Result: ನಾಲ್ಕು ರಾಜ್ಯಗಳ ಪ್ರಮುಖ ನಾಯಕರ ಚುನಾವಣಾ ಫಲಿತಾಂಶದ ಟ್ರೆಂಡ್​ ಇಲ್ಲಿದೆ. ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆ ಸಿಂದಿಯಾ 38 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಭೇರಿ ಬಾರಿಸಿದ್ದಾರೆ.

VIP Candidates
ನಾಲ್ಕು ಪ್ರಮುಖ ರಾಜಕೀಯ ನಾಯಕರು

ಹೈದರಾಬಾದ್​: ಕೋಡಂಗಲ್​ ಕ್ಷೇತ್ರದಲ್ಲಿ ಬಿಆರ್​ಎಸ್​ ಅಭ್ಯರ್ಥಿ ಪಟ್ನಾಮ್​ ನರೇಂದ್ರ ರೆಡ್ಡಿ ಜೊತೆಗೆ ನೇರ ಹಣಾಹಣಿಯೊಂದಿಗೆ ಸ್ಪರ್ಧಿಸಿರುವ ಪ್ರದೇಶ ಕಾಂಗ್ರೆಸ್​ ಅಧ್ಯಕ್ಷ ಎ. ರೇವಂತ್​​ ರೆಡ್ಡಿ ಭರ್ಜರಿ ಜಯಗಳಿಸಿದ್ದಾರೆ. ಸುಮಾರು 30,000 ಮತಗಳ ಅಂತರದಿಂದ ನರೇಂದ್ರ ರೆಡ್ಡಿ ವಿರುದ್ಧ ಜಯ ಸಾಧಿಸಿದ್ದಾರೆ.

ತೆಲಂಗಾಣದಲ್ಲಿ ಮುಖ್ಯಮಂತ್ರಿ ಹಾಗೂ ಬಿಆರ್​ಎಸ್​ ನಾಯಕ ಕೆ. ಚಂದ್ರಶೇಖರ್​ ರಾವ್​ ಕಾಮರೆಡ್ಡಿ ಕ್ಷೇತ್ರದಲ್ಲಿ ಸೋಲನಭವಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್​ ನಾಯಕ ರೇವಂತ್​ ರೆಡ್ಡಿ ಸೋಲನಭವಿಸಿದ್ದು, ಬಿಜೆಪಿ ಅಭ್ಯರ್ಥಿ ಕೆ ವೆಂಕಟ ರಮಣ ರೆಡ್ಡಿ 3,514 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಇದೇ ವೇಳೆ ಮತ್ತೊಂದು ಕ್ಷೇತ್ರ ಗಜ್ವಾಲ್​ನಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಕೆಸಿಆರ್, ಆ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಮುಖ್ಯಮಂತ್ರಿ ಕೆಸಿಆರ್​ ಪುತ್ರ ಕೆ ಟಿ ರಾಮರಾವ್​ ಸಿರ್ಸಿಲಾ ಕ್ಷೇತ್ರದಲ್ಲಿ 29,687 ಮತಗಳ ಅಂತರದಿಂದ ಜಯ ಗಳಿಸಿದ್ದರೆ, ಕಾಂಗ್ರೆಸ್​ ನಾಯಕ ಭಟ್ಟಿ ವಿಕ್ರಮಾರ್ಕ ಮಲ್ಲು ಅವರು ಮಧಿರ ಕ್ಷೇತ್ರದಲ್ಲಿ 34,779 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಹುಝೂರ್​ನಗರ ಕ್ಷೇತ್ರದಲ್ಲಿ ಕಾಂಗ್ರೆಸ್​ ನಾಯಕ ಉತ್ತಮ್​ ಕುಮಾರ್​ ರೆಡ್ಡಿ 44,888 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.

ಬಿಜೆಪಿ ಪ್ರಮುಖ ನಾಯಕ ಬಂಡಿ ಸಂಜಯ್ ಅವರು​ ಕರೀಂನಗರ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದಾರೆ.

ಸಿದ್ದಿಪೇಟ್​ ಕ್ಷೇತ್ರದಲ್ಲಿ ಬಿಆರ್​ಎಸ್​ನ ಹರೀಶ್​ ರಾವ್​ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಹುಝೂರಾಬಾದ್​ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಈಟಲ ರಾಜೇಂದರ್​ ಹಿನ್ನಡೆ ಸಾಧಿಸಿದ್ದಾರೆ. ಮತ್ತೊಂದೆಡೆ ಸ್ಪರ್ಧಿಸಿರುವ ಗಜ್ವಾಲ್​ ಕ್ಷೇತ್ರದಲ್ಲಿಯೂ ಹಿನ್ನಡೆ ಸಾಧಿಸಿದ್ದಾರೆ.

ಜುಬ್ಲಿಹಿಲ್ಸ್​ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಹಾಗೂ ಮಾಜಿ ಕ್ರಿಕೆಟಿಗ ಮಹಮ್ಮದ್​ ಅಜರುದ್ದೀನ್​​​​​ ​ಈಗ ಹಿನ್ನಡೆ ಸಾಧಿಸಿದ್ದಾರೆ.

ರಾಜಸ್ಥಾನ:

ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಬಿಜೆಪಿ ಅಭ್ಯರ್ಥಿ ಮಹೇಂದ್ರ ಸಿಂಗ್​ ರಾಠೋಡ್​ ವಿರುದ್ಧ 18,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಅದ್ಧೂರಿ ಜಯಗಳಿಸಿದ್ದಾರೆ. ಝಾಲರ್​ಪಾಠನ್​​ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಕಾಂಗ್ರೆಸ್ ಅಭ್ಯರ್ಥಿ ರಾಮ್​ ಲಾಲ್​ ಚೌಹಾಣ್​ ವಿರುದ್ಧ 48,489 ಮತಗಳನ್ನು ಪಡೆದು ಭರ್ಜರಿ ಜಯ ಗಳಿಸಿದ್ದಾರೆ.

ಕಾಂಗ್ರೆಸ್​ ಹಿರಿಯ ನಾಯಕ ಸಚಿನ್​ ಪೈಲಟ್​ ಟೋಂಕ್​ ಕ್ಷೇತ್ರದಲ್ಲಿ 29,475 ಮತಗಳ ಅಂತರದಿಂದ ಜಯ ಗಳಿಸಿದ್ದು, ಬಿಜೆಪಿ ನಾಯಕ ರಾಜ್ಯವರ್ಧನ್​ ರಾಥೋಡ್​ ಝೋತ್​ವಾರ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಅಭಿಷೇಕ್​ ಛೌಧರಿ ವಿರುದ್ಧ 50,167 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಮಧ್ಯಪ್ರದೇಶ:

ಮಧ್ಯಪ್ರದೇಶದಲ್ಲಿ ಮಾಮಾ ಎಂದೇ ಪ್ರಸಿದ್ಧಿಯಾಗಿರುವ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್ ತಮ್ಮ ಭದ್ರಕೋಟೆ​ ಬುಧಾನಿ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಬಾಲಿವುಡ್​ ನಟ ವಿಕ್ರಮ್​ ಮಸ್ತಲ್​ ಹಾಗೂ ಸಮಾಜವಾದಿ ಪಕ್ಷದ ಅಭ್ಯರ್ಥಿ ಮಿರ್ಚಿ ಬಾಬಾ ಎಂದೇ ಖ್ಯಾತರಾಗಿರುವ ವೈರಾಗ್ಯಾನಂದ್​ ವಿರುದ್ಧ ಭರ್ಜರಿ ಗೆಲವು ಸಾಧಿಸಿದ್ದಾರೆ.

ಇಂದೋರ್​ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಕೈಲಾಶ್​ ವಿಜಯ್​ ವರ್ಗೀಯಾ ಕಾಂಗ್ರೆಸ್​ ಅಭ್ಯರ್ಥಿ ಸಂಜಯ್​ ಶುಕ್ಲಾ ವಿರುದ್ಧ 44127 ಮತಗಳ ಅಂತರದಿಂದ ಗೆದ್ದಿದ್ದಾರೆ.

ಕಾಂಗ್ರೆಸ್​ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಕಮಲ್​ನಾಥ್​ ಚಿಂದ್ವಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿವೇಕ್​ ಬುಂಟಿ ಸಾಹು ವಿರುದ್ಧ 31,610 ಮತಗಳ ಅಂತರದಿಂದ ಗೆದ್ದಿದ್ದಾರೆ.

ಛತ್ತೀಸ್​ಗಢ:

ಛತ್ತೀಸ್​ಗಢ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನೇತಾರ ರಮಣ್ ಸಿಂಗ್​ ಅವರು ಕಾಂಗ್ರೆಸ್​ ಅಭ್ಯರ್ಥಿ ಗಿರೀಶ್ ದೇವಾಂಗನ್​ ವಿರುದ್ಧ 35,000ಕ್ಕೂ ಹೆಚ್ಚು ಮತಗಳ ಅಂತರದಿಂದ ರಾಜನಂದಗಾಂವ್​ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ.

ಛತ್ತೀಸ್​ಗಢದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್​​ ಪಾಠನ್​​ ಕ್ಷೇತ್ರದಲ್ಲಿ, ಪ್ರತಿಸ್ಪರ್ಧಿಗಿಂತ ಮತ್ತೆ ಮುನ್ನಡೆ ಸಾಧಿಸುವಲ್ಲಿ ಸಫಲರಾಗಿದ್ದಾರೆ.

ಉಪಮುಖ್ಯಮಂತ್ರಿ ಟಿ.ಎಸ್.​ ಸಿಂಘ್​​ ದೇವ್​ ಅಂಬಿಕಾಪುರ ಕ್ಷೇತ್ರದಲ್ಲಿ ಹಿನ್ನಡೆ ಕಂಡಿದ್ದಾರೆ.

ಹೈದರಾಬಾದ್​: ಕೋಡಂಗಲ್​ ಕ್ಷೇತ್ರದಲ್ಲಿ ಬಿಆರ್​ಎಸ್​ ಅಭ್ಯರ್ಥಿ ಪಟ್ನಾಮ್​ ನರೇಂದ್ರ ರೆಡ್ಡಿ ಜೊತೆಗೆ ನೇರ ಹಣಾಹಣಿಯೊಂದಿಗೆ ಸ್ಪರ್ಧಿಸಿರುವ ಪ್ರದೇಶ ಕಾಂಗ್ರೆಸ್​ ಅಧ್ಯಕ್ಷ ಎ. ರೇವಂತ್​​ ರೆಡ್ಡಿ ಭರ್ಜರಿ ಜಯಗಳಿಸಿದ್ದಾರೆ. ಸುಮಾರು 30,000 ಮತಗಳ ಅಂತರದಿಂದ ನರೇಂದ್ರ ರೆಡ್ಡಿ ವಿರುದ್ಧ ಜಯ ಸಾಧಿಸಿದ್ದಾರೆ.

ತೆಲಂಗಾಣದಲ್ಲಿ ಮುಖ್ಯಮಂತ್ರಿ ಹಾಗೂ ಬಿಆರ್​ಎಸ್​ ನಾಯಕ ಕೆ. ಚಂದ್ರಶೇಖರ್​ ರಾವ್​ ಕಾಮರೆಡ್ಡಿ ಕ್ಷೇತ್ರದಲ್ಲಿ ಸೋಲನಭವಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್​ ನಾಯಕ ರೇವಂತ್​ ರೆಡ್ಡಿ ಸೋಲನಭವಿಸಿದ್ದು, ಬಿಜೆಪಿ ಅಭ್ಯರ್ಥಿ ಕೆ ವೆಂಕಟ ರಮಣ ರೆಡ್ಡಿ 3,514 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಇದೇ ವೇಳೆ ಮತ್ತೊಂದು ಕ್ಷೇತ್ರ ಗಜ್ವಾಲ್​ನಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಕೆಸಿಆರ್, ಆ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಮುಖ್ಯಮಂತ್ರಿ ಕೆಸಿಆರ್​ ಪುತ್ರ ಕೆ ಟಿ ರಾಮರಾವ್​ ಸಿರ್ಸಿಲಾ ಕ್ಷೇತ್ರದಲ್ಲಿ 29,687 ಮತಗಳ ಅಂತರದಿಂದ ಜಯ ಗಳಿಸಿದ್ದರೆ, ಕಾಂಗ್ರೆಸ್​ ನಾಯಕ ಭಟ್ಟಿ ವಿಕ್ರಮಾರ್ಕ ಮಲ್ಲು ಅವರು ಮಧಿರ ಕ್ಷೇತ್ರದಲ್ಲಿ 34,779 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಹುಝೂರ್​ನಗರ ಕ್ಷೇತ್ರದಲ್ಲಿ ಕಾಂಗ್ರೆಸ್​ ನಾಯಕ ಉತ್ತಮ್​ ಕುಮಾರ್​ ರೆಡ್ಡಿ 44,888 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.

ಬಿಜೆಪಿ ಪ್ರಮುಖ ನಾಯಕ ಬಂಡಿ ಸಂಜಯ್ ಅವರು​ ಕರೀಂನಗರ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದಾರೆ.

ಸಿದ್ದಿಪೇಟ್​ ಕ್ಷೇತ್ರದಲ್ಲಿ ಬಿಆರ್​ಎಸ್​ನ ಹರೀಶ್​ ರಾವ್​ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಹುಝೂರಾಬಾದ್​ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಈಟಲ ರಾಜೇಂದರ್​ ಹಿನ್ನಡೆ ಸಾಧಿಸಿದ್ದಾರೆ. ಮತ್ತೊಂದೆಡೆ ಸ್ಪರ್ಧಿಸಿರುವ ಗಜ್ವಾಲ್​ ಕ್ಷೇತ್ರದಲ್ಲಿಯೂ ಹಿನ್ನಡೆ ಸಾಧಿಸಿದ್ದಾರೆ.

ಜುಬ್ಲಿಹಿಲ್ಸ್​ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಹಾಗೂ ಮಾಜಿ ಕ್ರಿಕೆಟಿಗ ಮಹಮ್ಮದ್​ ಅಜರುದ್ದೀನ್​​​​​ ​ಈಗ ಹಿನ್ನಡೆ ಸಾಧಿಸಿದ್ದಾರೆ.

ರಾಜಸ್ಥಾನ:

ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಬಿಜೆಪಿ ಅಭ್ಯರ್ಥಿ ಮಹೇಂದ್ರ ಸಿಂಗ್​ ರಾಠೋಡ್​ ವಿರುದ್ಧ 18,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಅದ್ಧೂರಿ ಜಯಗಳಿಸಿದ್ದಾರೆ. ಝಾಲರ್​ಪಾಠನ್​​ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಕಾಂಗ್ರೆಸ್ ಅಭ್ಯರ್ಥಿ ರಾಮ್​ ಲಾಲ್​ ಚೌಹಾಣ್​ ವಿರುದ್ಧ 48,489 ಮತಗಳನ್ನು ಪಡೆದು ಭರ್ಜರಿ ಜಯ ಗಳಿಸಿದ್ದಾರೆ.

ಕಾಂಗ್ರೆಸ್​ ಹಿರಿಯ ನಾಯಕ ಸಚಿನ್​ ಪೈಲಟ್​ ಟೋಂಕ್​ ಕ್ಷೇತ್ರದಲ್ಲಿ 29,475 ಮತಗಳ ಅಂತರದಿಂದ ಜಯ ಗಳಿಸಿದ್ದು, ಬಿಜೆಪಿ ನಾಯಕ ರಾಜ್ಯವರ್ಧನ್​ ರಾಥೋಡ್​ ಝೋತ್​ವಾರ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಅಭಿಷೇಕ್​ ಛೌಧರಿ ವಿರುದ್ಧ 50,167 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಮಧ್ಯಪ್ರದೇಶ:

ಮಧ್ಯಪ್ರದೇಶದಲ್ಲಿ ಮಾಮಾ ಎಂದೇ ಪ್ರಸಿದ್ಧಿಯಾಗಿರುವ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್ ತಮ್ಮ ಭದ್ರಕೋಟೆ​ ಬುಧಾನಿ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಬಾಲಿವುಡ್​ ನಟ ವಿಕ್ರಮ್​ ಮಸ್ತಲ್​ ಹಾಗೂ ಸಮಾಜವಾದಿ ಪಕ್ಷದ ಅಭ್ಯರ್ಥಿ ಮಿರ್ಚಿ ಬಾಬಾ ಎಂದೇ ಖ್ಯಾತರಾಗಿರುವ ವೈರಾಗ್ಯಾನಂದ್​ ವಿರುದ್ಧ ಭರ್ಜರಿ ಗೆಲವು ಸಾಧಿಸಿದ್ದಾರೆ.

ಇಂದೋರ್​ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಕೈಲಾಶ್​ ವಿಜಯ್​ ವರ್ಗೀಯಾ ಕಾಂಗ್ರೆಸ್​ ಅಭ್ಯರ್ಥಿ ಸಂಜಯ್​ ಶುಕ್ಲಾ ವಿರುದ್ಧ 44127 ಮತಗಳ ಅಂತರದಿಂದ ಗೆದ್ದಿದ್ದಾರೆ.

ಕಾಂಗ್ರೆಸ್​ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಕಮಲ್​ನಾಥ್​ ಚಿಂದ್ವಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿವೇಕ್​ ಬುಂಟಿ ಸಾಹು ವಿರುದ್ಧ 31,610 ಮತಗಳ ಅಂತರದಿಂದ ಗೆದ್ದಿದ್ದಾರೆ.

ಛತ್ತೀಸ್​ಗಢ:

ಛತ್ತೀಸ್​ಗಢ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನೇತಾರ ರಮಣ್ ಸಿಂಗ್​ ಅವರು ಕಾಂಗ್ರೆಸ್​ ಅಭ್ಯರ್ಥಿ ಗಿರೀಶ್ ದೇವಾಂಗನ್​ ವಿರುದ್ಧ 35,000ಕ್ಕೂ ಹೆಚ್ಚು ಮತಗಳ ಅಂತರದಿಂದ ರಾಜನಂದಗಾಂವ್​ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ.

ಛತ್ತೀಸ್​ಗಢದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್​​ ಪಾಠನ್​​ ಕ್ಷೇತ್ರದಲ್ಲಿ, ಪ್ರತಿಸ್ಪರ್ಧಿಗಿಂತ ಮತ್ತೆ ಮುನ್ನಡೆ ಸಾಧಿಸುವಲ್ಲಿ ಸಫಲರಾಗಿದ್ದಾರೆ.

ಉಪಮುಖ್ಯಮಂತ್ರಿ ಟಿ.ಎಸ್.​ ಸಿಂಘ್​​ ದೇವ್​ ಅಂಬಿಕಾಪುರ ಕ್ಷೇತ್ರದಲ್ಲಿ ಹಿನ್ನಡೆ ಕಂಡಿದ್ದಾರೆ.

Last Updated : Dec 3, 2023, 5:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.