ETV Bharat / bharat

ಮದುವೆಗೆ ಹೊರಟವರು ಮಸಣಕ್ಕೆ.. ಚಲಿಸುತ್ತಿದ್ದ ಆಟೋದಿಂದ ಬಿದ್ದು ನಾಲ್ವರ ಸಾವು

ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಮಿನಿ ಆಟೋವೊಂದರಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿರುವ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

author img

By

Published : Aug 25, 2021, 5:19 PM IST

Updated : Aug 25, 2021, 5:27 PM IST

accident
accident

ಪ್ರಕಾಶಂ (ಆಂಧ್ರಪ್ರದೇಶ): ಮದುವೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿರುವ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪ್ರಕಾಶಂನಲ್ಲಿ ನಡೆದಿದೆ. ದುರ್ಘಟನೆ ವೇಳೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಪ್ರಕಾಶಂನಲ್ಲಿ ಈ ಅವಘಡ ಸಂಭವಿಸಿದೆ.

ಚಲಿಸುತ್ತಿದ್ದ ಆಟೋದಿಂದ ಬಿದ್ದು ನಾಲ್ವರ ಸಾವು

ಘಟನೆಯಲ್ಲಿ ಸಾವನ್ನಪ್ಪಿದವರು ವಧುವಿನ ಕಡೆಯವರೆಂದು ತಿಳಿದು ಬಂದಿದ್ದು, ಪೊಡಿಲಿ - ಮಾರ್ಕಾಪುರ್ ಎಕ್ಸ್​ಪ್ರೆಸ್​​ವೇನಲ್ಲಿ ಈ ಭೀಕರ ರಸ್ತೆ ಅಪಘಾತ ನಡೆದಿದೆ. ಮದುವೆ ಸಮಾರಂಭದಲ್ಲಿ ಭಾಗಿಯಾಗಲು ವಧುವಿನೊಂದಿಗೆ ಎಲ್ಲರೂ ಪ್ರಯಾಣ ಬೆಳೆಸಿದ್ದರು. ರಭಸವಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಕೆಲವರು ಆಟೋದಿಂದ ಕೆಳಗೆ ಬಿದ್ದಿರುವ ಪರಿಣಾಮ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ.

ಆಟೋದಲ್ಲಿ ವಧು ಸೇರಿದಂತೆ 10 ಜನರು ಪ್ರಯಾಣ ಬೆಳೆಸಿದ್ದರು. ಸಾವನ್ನಪ್ಪಿದವರನ್ನ ಶ್ರೀನಿವಾಸ್​(55), ವೆಂಕಟಸುಬ್ಬ ರಾವ್​(45), ಕಾರ್ತಿಕ್​(13) ಹಾಗೂ ಅನಿಲ್​(11) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಇಬ್ಬರನ್ನ ಮರ್ಕಪುರ್​ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿರಿ: One district, One product' ಅಜೆಂಡಾ: ರಾಜ್ಯಗಳೊಂದಿಗೆ ಕೈಜೋಡಿಸಲು ಬ್ಯಾಂಕ್​ಗಳಿಗೆ ವಿತ್ತ ಸಚಿವೆ ಮನವಿ

ಪ್ರಕಾಶಂ (ಆಂಧ್ರಪ್ರದೇಶ): ಮದುವೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿರುವ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪ್ರಕಾಶಂನಲ್ಲಿ ನಡೆದಿದೆ. ದುರ್ಘಟನೆ ವೇಳೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಪ್ರಕಾಶಂನಲ್ಲಿ ಈ ಅವಘಡ ಸಂಭವಿಸಿದೆ.

ಚಲಿಸುತ್ತಿದ್ದ ಆಟೋದಿಂದ ಬಿದ್ದು ನಾಲ್ವರ ಸಾವು

ಘಟನೆಯಲ್ಲಿ ಸಾವನ್ನಪ್ಪಿದವರು ವಧುವಿನ ಕಡೆಯವರೆಂದು ತಿಳಿದು ಬಂದಿದ್ದು, ಪೊಡಿಲಿ - ಮಾರ್ಕಾಪುರ್ ಎಕ್ಸ್​ಪ್ರೆಸ್​​ವೇನಲ್ಲಿ ಈ ಭೀಕರ ರಸ್ತೆ ಅಪಘಾತ ನಡೆದಿದೆ. ಮದುವೆ ಸಮಾರಂಭದಲ್ಲಿ ಭಾಗಿಯಾಗಲು ವಧುವಿನೊಂದಿಗೆ ಎಲ್ಲರೂ ಪ್ರಯಾಣ ಬೆಳೆಸಿದ್ದರು. ರಭಸವಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಕೆಲವರು ಆಟೋದಿಂದ ಕೆಳಗೆ ಬಿದ್ದಿರುವ ಪರಿಣಾಮ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ.

ಆಟೋದಲ್ಲಿ ವಧು ಸೇರಿದಂತೆ 10 ಜನರು ಪ್ರಯಾಣ ಬೆಳೆಸಿದ್ದರು. ಸಾವನ್ನಪ್ಪಿದವರನ್ನ ಶ್ರೀನಿವಾಸ್​(55), ವೆಂಕಟಸುಬ್ಬ ರಾವ್​(45), ಕಾರ್ತಿಕ್​(13) ಹಾಗೂ ಅನಿಲ್​(11) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಇಬ್ಬರನ್ನ ಮರ್ಕಪುರ್​ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿರಿ: One district, One product' ಅಜೆಂಡಾ: ರಾಜ್ಯಗಳೊಂದಿಗೆ ಕೈಜೋಡಿಸಲು ಬ್ಯಾಂಕ್​ಗಳಿಗೆ ವಿತ್ತ ಸಚಿವೆ ಮನವಿ

Last Updated : Aug 25, 2021, 5:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.