ETV Bharat / bharat

ಇಬ್ಬರಿಗೆ ಮದುವೆ, ಇನ್ನಿಬ್ಬರು ಪೋಷಕರಿಗೆ ಒಬ್ಬರೇ ಮಕ್ಕಳು: ಅಪಘಾತದಲ್ಲಿ ಸ್ನೇಹಿತರ ದುರ್ಮರಣ - ರೇವಾಡಿ ಸುದ್ದಿ

ಮದುವೆ ಮನೆಯಿಂದ ವಾಪಸ್ಸಾಗುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅವಘಡದಲ್ಲಿ ನಾಲ್ವರು ಸ್ನೇಹಿತರು ಒಟ್ಟಿಗೆ ಪ್ರಾಣ ಕಳೆದುಕೊಂಡಿದ್ದಾರೆ.

rewari accidental death  accident death rewari  4 friend die in accident rewari  mahendragarh rewari road accident  ನಾಲ್ವರು ಸ್ನೇಹಿತರು ಸಾವು  ರೇವಾಡಿಯಲ್ಲಿ ನಾಲ್ವರು ಸ್ನೇಹಿತರು ಸಾವು  ಭೀಕರ ಅಪಘಾತದಲ್ಲಿ ನಾಲ್ವರು ಸ್ನೇಹಿತರು ಸಾವು  ರೇವಾಡಿ ಸುದ್ದಿ  ರೇವಾಡಿ ಅಪಘಾತ ಸುದ್ದಿ
ಇಬ್ಬರಿಗೆ ಮದುವೆ, ಇನ್ನಿಬ್ಬರು ತಮ್ಮ ಪೋಷಕರಿಗೆ ಒಬ್ಬರೇ ಮಕ್ಕಳು
author img

By

Published : May 7, 2021, 9:45 AM IST

ರೇವಾಡಿ(ಹರಿಯಾಣ): ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ನೇಹಿತರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಜಿಲ್ಲೆಯ ನಾರ್ನೌಲ್​ ರಸ್ತೆಯಲ್ಲಿ ಸಂಭವಿಸಿದೆ.

ಘಟನೆಯ ವಿವರ

ಮಹೇಂದ್ರಗಡ್​ ಜಿಲ್ಲೆಯ ಖೆರಾಲಿ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ವಾಪಸ್​ ಆಗುತ್ತಿದ್ದ ವೇಳೆ i-10 ಕಾರ್​ಗೆ ಡಂಪರ್​ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ನಾಲ್ವರು ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಸ್ನೇಹಿತನಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ದಿವಾಕರ್​ ಮತ್ತು ತರುಣ್​ ಇಬ್ಬರು ತಮ್ಮ ತಂದೆ-ತಾಯಿಗಳಿಗೆ ಒಬ್ಬೊಬ್ಬರೇ ಮಕ್ಕಳು. ಇವರಿಬ್ಬರು ದೆಹಲಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮದುವೆ ಹಿನ್ನೆಲೆಯಲ್ಲಿ ಮತ್ತು ಲಾಕ್​ಡೌನ್​ ಕಾರಣ ಗ್ರಾಮದಲ್ಲೇ ತಂಗಿದ್ದರು. ಆದ್ರೆ ಅಪಘಾತದಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಇನ್ನಿಬ್ಬರು ಯುವಕರಿಗೆ ಇತ್ತೀಚೆಗೆ ಮದುವೆಯಾಗಿತ್ತು. ಖಾಸಗಿ ಕಂಪನಿಯೊಂದರಲ್ಲಿ ಇವರು ಕೆಲಸ ಮಾಡುತ್ತಾ ಕುಟುಂಬ ಸಾಗಿಸುತ್ತಿದ್ದರು. ಈಗ ನಡೆದ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಈ ಬಗ್ಗೆ ಗಾಯಾಳು ದೀಪಕ್​ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರೇವಾಡಿ(ಹರಿಯಾಣ): ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ನೇಹಿತರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಜಿಲ್ಲೆಯ ನಾರ್ನೌಲ್​ ರಸ್ತೆಯಲ್ಲಿ ಸಂಭವಿಸಿದೆ.

ಘಟನೆಯ ವಿವರ

ಮಹೇಂದ್ರಗಡ್​ ಜಿಲ್ಲೆಯ ಖೆರಾಲಿ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ವಾಪಸ್​ ಆಗುತ್ತಿದ್ದ ವೇಳೆ i-10 ಕಾರ್​ಗೆ ಡಂಪರ್​ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ನಾಲ್ವರು ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಸ್ನೇಹಿತನಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ದಿವಾಕರ್​ ಮತ್ತು ತರುಣ್​ ಇಬ್ಬರು ತಮ್ಮ ತಂದೆ-ತಾಯಿಗಳಿಗೆ ಒಬ್ಬೊಬ್ಬರೇ ಮಕ್ಕಳು. ಇವರಿಬ್ಬರು ದೆಹಲಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮದುವೆ ಹಿನ್ನೆಲೆಯಲ್ಲಿ ಮತ್ತು ಲಾಕ್​ಡೌನ್​ ಕಾರಣ ಗ್ರಾಮದಲ್ಲೇ ತಂಗಿದ್ದರು. ಆದ್ರೆ ಅಪಘಾತದಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಇನ್ನಿಬ್ಬರು ಯುವಕರಿಗೆ ಇತ್ತೀಚೆಗೆ ಮದುವೆಯಾಗಿತ್ತು. ಖಾಸಗಿ ಕಂಪನಿಯೊಂದರಲ್ಲಿ ಇವರು ಕೆಲಸ ಮಾಡುತ್ತಾ ಕುಟುಂಬ ಸಾಗಿಸುತ್ತಿದ್ದರು. ಈಗ ನಡೆದ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಈ ಬಗ್ಗೆ ಗಾಯಾಳು ದೀಪಕ್​ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.