ಹೈದರಾಬಾದ್ (ತೆಲಂಗಾಣ): ರಾಜ್ಯದಲ್ಲಿ ನಿನ್ನೆ ನಡೆದ ಹೈಕೋರ್ಟ್ ವಕೀಲ ದಂಪತಿಯ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದು, ಈ ಕುರಿತು ಎಫ್ಐಆರ್ ದಾಖಲಿಸಲಾಗಿದೆ.
![FIR registered](https://etvbharatimages.akamaized.net/etvbharat/prod-images/fir_1802newsroom_1613635163_611.jpg)
ಮೃತ ವಾಮನ್ ರಾವ್ ಅವರ ತಂದೆ ಕಿಶನ್ ರಾವ್ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮೂವರ ವಿರುದ್ಧ ಪಿತೂರಿ ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
![FIR registered](https://etvbharatimages.akamaized.net/etvbharat/prod-images/fir-2_1802newsroom_1613635163_233.jpg)
ವೆಲ್ಡಿ ವಸಂತ ರಾವ್, ಕುಂಟಾ ಶ್ರೀನಿವಾಸ್ ಮತ್ತು ಅಕ್ಕಪಾಕ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 302, 341 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
![FIR registered](https://etvbharatimages.akamaized.net/etvbharat/prod-images/_1802newsroom_1613635163_511.jpg)
ಪೆದ್ದಪಳ್ಳಿ ಜಿಲ್ಲೆಯ ರಾಮಗಿರಿ ವಲಯದ ಕಲ್ವಾಚಾರ್ಲದಲ್ಲಿ ನಿನ್ನೆ ವಾಮನ್ ರಾವ್ ಮತ್ತು ಅವರ ಪತ್ನಿಯನ್ನು ಅಪರಿಚಿತ ಹಲ್ಲೆಕೋರರು ನಡುರಸ್ತೆಯಲ್ಲಿಯೇ ಹತ್ಯೆಗೈದಿದ್ದರು.