ETV Bharat / bharat

ವೆಬ್​ ಸಿರೀಸ್ ಮಿರ್ಜಾಪುರ್, ಅಮೆಜಾನ್ ಪ್ರೈಮ್ ವಿರುದ್ಧ ಮಿರ್ಜಾಪುರದಲ್ಲಿ ಎಫ್​ಐಆರ್! - ಮಿರ್ಜಾಪುರ ವೆಬ್ ಸಿರೀಸ್ ಲೇಟೆಸ್ಟ್ ನ್ಯೂಸ್

ಅಮೆಜಾನ್ ಪ್ರೈಮ್​ನಲ್ಲಿ ಪ್ರಸಾರವಾಗುತ್ತಿರುವ ತಾಂಡವ್ ವೆಬ್​ ಸಿರೀಸ್ ವಿರುದ್ಧ ಕೇಂದ್ರ ಸರ್ಕಾರ ಸಮನ್ಸ್ ಜಾರಿ ಮಾಡಿದ ಬೆನ್ನಲ್ಲೇ ಮಿರ್ಜಾಪುರ್ ವೆಬ್ ಸಿರೀಸ್​ ವಿರುದ್ಧ ಎಫ್​ಐಆರ್ ದಾಖಲಾಗಿದೆ.

web series 'Mirzapur'
ವೆಬ್​ ಸಿರೀಸ್ ಮಿರ್ಜಾಪುರ್
author img

By

Published : Jan 18, 2021, 5:05 PM IST

ಮುಂಬೈ: ಒಂದು ವರ್ಷದ ಹಿಂದೆ ಬಿಡುಗಡೆಯಾದ ಮಿರ್ಜಾಪುರ್ ವೆಬ್​ ಸಿರೀಸ್​ನ ನಿರ್ಮಾಪಕ ಹಾಗೂ ಆ ವೆಬ್ ಸಿರೀಸ್ ಪ್ರಸಾರ ಮಾಡುತ್ತಿರುವ ಅಮೆಜಾನ್ ಪ್ರೈಮ್ ವಿರುದ್ಧ ದೂರು ದಾಖಲಾಗಿದೆ.

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಜಿಲ್ಲೆಯಲ್ಲಿ ದೂರು ದಾಖಲಾಗಿದ್ದು, ಈ ವೆಬ್​ ಸಿರೀಸ್​ನಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಪ್ರಾದೇಶಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಇದರ ಜೊತೆಗೆ ಸಾಮಾಜಿಕ ಸಾಮರಸ್ಯದ ಕದಡುವ ಅಂಶಗಳಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದರ ಜೊತೆಗೆ ಮಿರ್ಜಾಪುರ್​​ ವೆನ್ ಸಿರೀಸ್​ನಲ್ಲಿ ಧಾರ್ಮಿಕ ಭಾವನೆಗಳಿಗೆ ಹಾಗೂ ನಂಬಿಕೆಗಳನ್ನು ಹೀಯಾಳಿಸಲಾಗಿದೆ. ಸಂಬಂಧಗಳನ್ನು ಹೀನಾಯವಾಗಿ ತೋರಿಸಲಾಗಿದೆ ಎಂಬ ಆಧಾರದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: 'ತಾಂಡವ್​'ನಲ್ಲಿ ಹಿಂದೂ ದೇವತೆಗಳಿಗೆ ಅವಮಾನ: ವೆಬ್​ಸಿರೀಸ್​ ಬ್ಯಾನ್​ಗೆ ಪತ್ರ ಬರೆದ ಸಂಸದ

ಇದಕ್ಕೂ ಮೊದಲು ಮಿರ್ಜಾಪುರ್ ವೆಬ್ ಸಿರೀಸ್ ಹಲವಾರು ವಿವಾದಗಳಿಗೆ ಸಿಲುಕಿತ್ತು. ಈ ವೆಬ್ ಸಿರೀಸ್ ಬಿಡುಗಡೆ ವೇಳೆಯೇ ಹಲವಾರು ನಾಯಕರು ಇದನ್ನು ವಿರೋಧಿಸಿದ್ದರು. ಮಿರ್ಜಾಪುರದ ಸಂಸದ ಮತ್ತು ಅಪ್ನಾ ದಳ ಪಕ್ಷ(ಎಸ್​​) ನಾಯಕಿ ಅನುಪ್ರಿಯಾ ಪಟೇಲ್ ಈ ವೆಬ್​ ಸಿರೀಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಕುರಿತು ಟ್ವೀಟ್ ಮಾಡಿದ್ದ ಅನುಪ್ರಿಯಾ ಪಟೇಲ್ ಈ ವೆಬ್ ಸಿರೀಸ್​ನಿಂದ ಮಿರ್ಜಾಪುರ ಜಿಲ್ಲೆಯನ್ನು ಹಿಂಸಾತ್ಮಕ ಪ್ರದೇಶ ಎಂದು ಜನರು ಪರಿಗಣಿಸುತ್ತಾರೆ. ಅಷ್ಟು ಮಾತ್ರವಲ್ಲದೇ ಈ ವೆಬ್​ಸಿರೀಸ್​ನಲ್ಲಿ ಸಾಮಾಜಿಕ ಸ್ವಾಸ್ಥ್ಯ ಕದಡುವ ವಿಚಾರಗಳಿವೆ ಎಂದು ಆರೋಪಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿದ್ದರು.

ಇತ್ತೀಚೆಗೆ ಅಮೆಜಾನ್ ಪ್ರೈಮ್​ನಲ್ಲಿ ಪ್ರಸಾರವಾಗುತ್ತಿರುವ ತಾಂಡವ್ ವೆಬ್​ ಸಿರೀಸ್ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆಯ ಆರೋಪದಡಿಯಲ್ಲಿ ದೂರು ನೀಡಲಾಗಿದ್ದು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಅಮೆಜಾನ್ ಪ್ರೈಮ್​ಗೆ ಸಮನ್ಸ್​ ನೀಡಿದೆ.

ಮುಂಬೈ: ಒಂದು ವರ್ಷದ ಹಿಂದೆ ಬಿಡುಗಡೆಯಾದ ಮಿರ್ಜಾಪುರ್ ವೆಬ್​ ಸಿರೀಸ್​ನ ನಿರ್ಮಾಪಕ ಹಾಗೂ ಆ ವೆಬ್ ಸಿರೀಸ್ ಪ್ರಸಾರ ಮಾಡುತ್ತಿರುವ ಅಮೆಜಾನ್ ಪ್ರೈಮ್ ವಿರುದ್ಧ ದೂರು ದಾಖಲಾಗಿದೆ.

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಜಿಲ್ಲೆಯಲ್ಲಿ ದೂರು ದಾಖಲಾಗಿದ್ದು, ಈ ವೆಬ್​ ಸಿರೀಸ್​ನಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಪ್ರಾದೇಶಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಇದರ ಜೊತೆಗೆ ಸಾಮಾಜಿಕ ಸಾಮರಸ್ಯದ ಕದಡುವ ಅಂಶಗಳಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದರ ಜೊತೆಗೆ ಮಿರ್ಜಾಪುರ್​​ ವೆನ್ ಸಿರೀಸ್​ನಲ್ಲಿ ಧಾರ್ಮಿಕ ಭಾವನೆಗಳಿಗೆ ಹಾಗೂ ನಂಬಿಕೆಗಳನ್ನು ಹೀಯಾಳಿಸಲಾಗಿದೆ. ಸಂಬಂಧಗಳನ್ನು ಹೀನಾಯವಾಗಿ ತೋರಿಸಲಾಗಿದೆ ಎಂಬ ಆಧಾರದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: 'ತಾಂಡವ್​'ನಲ್ಲಿ ಹಿಂದೂ ದೇವತೆಗಳಿಗೆ ಅವಮಾನ: ವೆಬ್​ಸಿರೀಸ್​ ಬ್ಯಾನ್​ಗೆ ಪತ್ರ ಬರೆದ ಸಂಸದ

ಇದಕ್ಕೂ ಮೊದಲು ಮಿರ್ಜಾಪುರ್ ವೆಬ್ ಸಿರೀಸ್ ಹಲವಾರು ವಿವಾದಗಳಿಗೆ ಸಿಲುಕಿತ್ತು. ಈ ವೆಬ್ ಸಿರೀಸ್ ಬಿಡುಗಡೆ ವೇಳೆಯೇ ಹಲವಾರು ನಾಯಕರು ಇದನ್ನು ವಿರೋಧಿಸಿದ್ದರು. ಮಿರ್ಜಾಪುರದ ಸಂಸದ ಮತ್ತು ಅಪ್ನಾ ದಳ ಪಕ್ಷ(ಎಸ್​​) ನಾಯಕಿ ಅನುಪ್ರಿಯಾ ಪಟೇಲ್ ಈ ವೆಬ್​ ಸಿರೀಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಕುರಿತು ಟ್ವೀಟ್ ಮಾಡಿದ್ದ ಅನುಪ್ರಿಯಾ ಪಟೇಲ್ ಈ ವೆಬ್ ಸಿರೀಸ್​ನಿಂದ ಮಿರ್ಜಾಪುರ ಜಿಲ್ಲೆಯನ್ನು ಹಿಂಸಾತ್ಮಕ ಪ್ರದೇಶ ಎಂದು ಜನರು ಪರಿಗಣಿಸುತ್ತಾರೆ. ಅಷ್ಟು ಮಾತ್ರವಲ್ಲದೇ ಈ ವೆಬ್​ಸಿರೀಸ್​ನಲ್ಲಿ ಸಾಮಾಜಿಕ ಸ್ವಾಸ್ಥ್ಯ ಕದಡುವ ವಿಚಾರಗಳಿವೆ ಎಂದು ಆರೋಪಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿದ್ದರು.

ಇತ್ತೀಚೆಗೆ ಅಮೆಜಾನ್ ಪ್ರೈಮ್​ನಲ್ಲಿ ಪ್ರಸಾರವಾಗುತ್ತಿರುವ ತಾಂಡವ್ ವೆಬ್​ ಸಿರೀಸ್ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆಯ ಆರೋಪದಡಿಯಲ್ಲಿ ದೂರು ನೀಡಲಾಗಿದ್ದು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಅಮೆಜಾನ್ ಪ್ರೈಮ್​ಗೆ ಸಮನ್ಸ್​ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.