ETV Bharat / bharat

ಎನ್​ಎಸ್​ಯುಐ ಎಬಿವಿಪಿ ಹೊಡೆದಾಟ ಪ್ರಕರಣ.  ಎಫ್​​ಐಆರ್​​ ದಾಖಲಿಸಿದ ಗುಜರಾತ್​​ ಪೊಲೀಸರು - ಎನ್​ಎಸ್​ಯುಐ-ಎಬಿವಿಪಿ ಮೇಲೆ ಎಫ್​​ಐಆರ್​​ ದಾಖಲಿಸಿದ ಗುಜರಾತ್​​ ಪೊಲೀಸರು

ನಿನ್ನೆ ಗುಜರಾತಿನಲ್ಲಿ ಎಬಿವಿಪಿ ಹಾಗೂ ಎನ್​ಎಸ್​ಯುಐ ನಡುವೆ ಉಂಟಾದ ಸಂಘರ್ಷದಿಂದ 10 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಇಂದು ಈ ಎರಡು ಸಂಘಟನೆಯ ಮೇಲೆ ಪೊಲೀಸರು ಎಫ್​​ಐಆರ್​​ ದಾಖಲಿಸಿಕೊಂಡಿದ್ದಾರೆ.

FIR against NSUI and ABVP
ಎನ್​ಎಸ್​ಯುಐ-ಎಬಿವಿಪಿ ಮೇಲೆ ಎಫ್​​ಐಆರ್
author img

By

Published : Jan 8, 2020, 2:29 PM IST

Updated : Oct 18, 2022, 2:52 PM IST

ಅಹಮದಾಬಾದ್​(ಗುಜರಾತ್​): ನಿನ್ನೆ ನಡೆದ ಎಬಿವಿಪಿ ಹಾಗೂ ಎನ್​​ಎಸ್​​ಯುಐ ನಡುವಿನ ಸಂಘರ್ಷದಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಇಂದು ಈ ಎರಡೂ ಸಂಘಟನೆಗಳ ಮೇಲೆ ಅಹಮದಾಬಾದ್​​ ಪೊಲೀಸರು ಎಫ್ಐಆರ್​​ ದಾಖಲಿಸಿಕೊಂಡಿದ್ದಾರೆ.

ನಿನ್ನೆ ಬೆಳಗ್ಗೆ ಎನ್​ಎಸ್​ಯುಐ ಸಂಘಟನೆಯು ಜೆಎನ್​ಯು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಖಂಡಿಸಿ ಪ್ರತಿಭಟನೆ ನಡೆಸಲೆಂದು ಎಬಿವಿಪಿ ಕಚೇರಿ ಎದುರು ಜಮಾಯಿಸಿತ್ತು. ಈ ವೇಳೆ, ಎಬಿವಿಪಿ ಕಾರ್ಯಕರ್ತರಿಗೂ ಹಾಗೂ ಎನ್​​ಎಸ್​​ಯುಐ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಉಂಟಾಗಿ ಪ್ರತಿಭಟನೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು.

ಎರಡು ಸಂಘಟನೆಗಳ ನಡುವಿನ ಸಂಘರ್ಷ ತೀವ್ರವಾಗುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಪೊಲೀಸರು, ಗುಂಪು ಚದುರಿಸಲು ಲಾಠಿ ಚಾರ್ಜ ನಡೆಸಿದ್ದು, ಅಷ್ಟೊತ್ತಿಗಾಗಲೇ 10ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿದ್ದರು.

ಎಬಿವಿಪಿ ಎನ್​ಎಸ್​​ಯುಐ ನಡುವೆ ಮಾರಾಮಾರಿ: 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಇನ್ನು ಈ ಬಗ್ಗೆ ನಿನ್ನೆ ಕಾಂಗ್ರೆಸ್​ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿತ್ತು.

ಪೊಲೀಸ್​ ಇಲಾಖೆ ಈ ಬಗ್ಗೆ ನಿನ್ನೆಯೇ ಸ್ಪಷ್ಟಪಡಿಸಿದ್ದು, ಈ ಗಲಾಟೆಯಲ್ಲಿ ತೊಡಗಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದು, ಇಂದು ಎರಡು ಸಂಘಟನೆಗಳ ಮೇಲೆ ಎಫ್​ಐಆರ್​​ ದಾಖಲಿಸಿಕೊಂಡು ತನಿಖೆ ಮುಂದುವರೆಸಿದೆ.

ಅಹಮದಾಬಾದ್​(ಗುಜರಾತ್​): ನಿನ್ನೆ ನಡೆದ ಎಬಿವಿಪಿ ಹಾಗೂ ಎನ್​​ಎಸ್​​ಯುಐ ನಡುವಿನ ಸಂಘರ್ಷದಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಇಂದು ಈ ಎರಡೂ ಸಂಘಟನೆಗಳ ಮೇಲೆ ಅಹಮದಾಬಾದ್​​ ಪೊಲೀಸರು ಎಫ್ಐಆರ್​​ ದಾಖಲಿಸಿಕೊಂಡಿದ್ದಾರೆ.

ನಿನ್ನೆ ಬೆಳಗ್ಗೆ ಎನ್​ಎಸ್​ಯುಐ ಸಂಘಟನೆಯು ಜೆಎನ್​ಯು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಖಂಡಿಸಿ ಪ್ರತಿಭಟನೆ ನಡೆಸಲೆಂದು ಎಬಿವಿಪಿ ಕಚೇರಿ ಎದುರು ಜಮಾಯಿಸಿತ್ತು. ಈ ವೇಳೆ, ಎಬಿವಿಪಿ ಕಾರ್ಯಕರ್ತರಿಗೂ ಹಾಗೂ ಎನ್​​ಎಸ್​​ಯುಐ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಉಂಟಾಗಿ ಪ್ರತಿಭಟನೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು.

ಎರಡು ಸಂಘಟನೆಗಳ ನಡುವಿನ ಸಂಘರ್ಷ ತೀವ್ರವಾಗುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಪೊಲೀಸರು, ಗುಂಪು ಚದುರಿಸಲು ಲಾಠಿ ಚಾರ್ಜ ನಡೆಸಿದ್ದು, ಅಷ್ಟೊತ್ತಿಗಾಗಲೇ 10ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿದ್ದರು.

ಎಬಿವಿಪಿ ಎನ್​ಎಸ್​​ಯುಐ ನಡುವೆ ಮಾರಾಮಾರಿ: 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಇನ್ನು ಈ ಬಗ್ಗೆ ನಿನ್ನೆ ಕಾಂಗ್ರೆಸ್​ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿತ್ತು.

ಪೊಲೀಸ್​ ಇಲಾಖೆ ಈ ಬಗ್ಗೆ ನಿನ್ನೆಯೇ ಸ್ಪಷ್ಟಪಡಿಸಿದ್ದು, ಈ ಗಲಾಟೆಯಲ್ಲಿ ತೊಡಗಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದು, ಇಂದು ಎರಡು ಸಂಘಟನೆಗಳ ಮೇಲೆ ಎಫ್​ಐಆರ್​​ ದಾಖಲಿಸಿಕೊಂಡು ತನಿಖೆ ಮುಂದುವರೆಸಿದೆ.

Last Updated : Oct 18, 2022, 2:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.