ETV Bharat / bharat

ಬಿಜೆಪಿ ಜತೆಗಿನ ನಿತೀಶ್​ ಮುನಿಸಿಗೆ ಕಾರಣ ಏನು?: ಇಲ್ಲಿದೆ ಇಂಟ್ರೆಸ್ಟಿಂಗ್​ ಫ್ಯಾಕ್ಟ್​!

author img

By

Published : Aug 9, 2022, 7:27 AM IST

ನಿತೀಶ್​ ಕುಮಾರ್​ ಅವರನ್ನು ವಿರೋಧಿಸುತ್ತಿರುವ ರಾಮ್​ ವಿಲಾಸ್​ ಪಾಸ್ವಾನ ಅವರ ಪುತ್ರ ಚಿರಾಗ್​ ಪಾಸ್ವಾನ್​, ಕಳೆದ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿ ಜೆಡಿಯುಗೆ ಹೊಡೆತ ನೀಡಿದ್ದರು. ಇದಕ್ಕೆ ಬಿಜೆಪಿಯ ಪರೋಕ್ಷ ಬೆಂಬಲ ಇತ್ತು. ಇದು ನಿತೀಶ್​ ಅವರ ಮುನಿಸಿಗೆ ಕಾರಣ.

Explainer: What led to breakup in JDU-BJP bonhomie?
ಮೋದಿ ಜತೆ ಜಿದ್ದಿಗೆ ಬಿದ್ದಿದ್ದ ನಿತೀಶ್ ಕುಮಾರ್​​

ಪಾಟ್ನಾ: ಮೋದಿ ಜತೆ ಜಿದ್ದಿಗೆ ಬಿದ್ದಿದ್ದ ನಿತೀಶ್ ಕುಮಾರ್​​ ಬಿಹಾರದಲ್ಲಿನ ರಾಜಕೀಯ ಅನಿವಾರ್ಯತೆಗೆ ಆರ್​ಜೆಡಿ ಸಖ್ಯೆ ತೊರೆದು ಮತ್ತೆ ಬಿಜೆಪಿ ಮೈತ್ರಿಗೆ ಬಂದಿತ್ತು. ಇನ್ನು 2020 ರಲ್ಲಿ ಜೆಡಿಯು- ಬಿಜೆಪಿ ಮೈತ್ರಿಕೂಟ ಸರ್ಕಾರದ ನೇತೃತ್ವ ವಹಿಸಿರುವ ನಿತೀಶ್​ - ಬಿಜೆಪಿ ಸಂಬಂಧ ಹಾಗೂ ಸ್ನೇಹ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 77 ಸ್ಥಾನ ಪಡೆದು ಜೆಡಿಯುಗಿಂತ ಹೆಚ್ಚು ಸ್ಥಾನ ಪಡೆದರೂ ನಿತೀಶ್ ಕುಮಾರ್ ಅವರನ್ನೇ ಸಿಎಂ ಎಂದು ಘೋಷಣೆ ಮಾಡಿತ್ತು. ಅದರಂತೆ ಅವರೇ ಸಿಎಂ ಆಗಿ ಕಳೆದ ಮೂರುವರ್ಷಗಳಿಂದ ಅಧಿಕಾರ ನಡೆಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಯು ಗೆದ್ದಿದ್ದು ಕೇವಲ 44 ಸ್ಥಾನಗಳನ್ನು ಮಾತ್ರ.

ಹೀಗಾಗಿ 2020 ರ ಹಿಂದಿನ ಅವಧಿಯಲ್ಲಿ ನಿತೀಶ್​ ಕುಮಾರ್​ ನೇತೃತ್ವದ ಜೆಡಿಯು ಅತಿ ಹೆಚ್ಚು ಸ್ಥಾನ ಗೆದ್ದು ಬೀಗಿತ್ತು. ಆಗ ಬಿಜೆಪಿ - ಜೆಡಿಯು, ಆರ್​ಜೆಡಿ ಮೈತ್ರಿಕೂಟದ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಿತ್ತು. ಆದರೆ, 2020 ರಲ್ಲಿ ಮತ್ತೆ ನಿತೀಶ್​ ಕುಮಾರ್​ ಅವರ ನೇತೃತ್ವದಲ್ಲಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿತ್ತು. ಹಿಂದಿಗಿಂತ ಕಡಿಮೆ ಸ್ಥಾನ ಪಡೆದಿರುವುದರಿಂದ ನಿತೀಶ್ ಕುಮಾರ್​ ಸಿಎಂ ಆಗಿದ್ದರೂ ಅವರ ಪಕ್ಷದ ಸದ್ಯಸ್ಯರು ಕಡಿಮೆ ಇರುವುದರಿಂದ ಕ್ಯಾಬಿನೆಟ್​ನಲ್ಲಿ ಕಡಿಮೆ ಸ್ಥಾನ ಪಡೆದುಕೊಂಡಿದ್ದು, ಬಿಜೆಪಿಗೆ ಹೆಚ್ಚಿನ ಸಚಿವ ಸ್ಥಾನಗಳನ್ನು ಬಿಟ್ಟುಕೊಟ್ಟಿದೆ.

ಬಿಹಾರ ರಾಜಕೀಯ ಇತಿಹಾಸದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳ ಹೊರತಾಗಿ ಬಿಜೆಪಿಗೆ ಮೊದಲ ಬಾರಿಗೆ ಸ್ಪೀಕರ್ ಕುರ್ಚಿಯೂ ಸಿಕ್ಕಿದೆ. ಇಂತಹ ಪರಿಸ್ಥಿತಿಯಲ್ಲಿ ಜೆಡಿಯು ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ.

ಅಹಿತಕರ ಮೈತ್ರಿ ಬಗ್ಗೆ ಜೆಡಿಯು ನಾಯಕರ​​ ಬೇಸರ: ನಿತೀಶ್​ ಕುಮಾರ್​ ಅವರನ್ನು ವಿರೋಧಿಸುತ್ತಿರುವ ರಾಮ್​ ವಿಲಾಸ್​ ಪಾಸ್ವಾನ ಅವರ ಪುತ್ರ ಚಿರಾಗ್​ ಪಾಸ್ವಾನ್​, ಕಳೆದ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿ ಜೆಡಿಯುಗೆ ಹೊಡೆತ ನೀಡಿದ್ದರು. ಇದಕ್ಕೆ ಬಿಜೆಪಿಯ ಪರೋಕ್ಷ ಬೆಂಬಲ ಇತ್ತು. ಇದು ನಿತೀಶ್​ ಅವರ ಮುನಿಸಿಗೆ ಕಾರಣ.

ಈ ಬಗ್ಗೆ ಮಾತನಾಡಿರುವ ಜೆಡಿಯು ನಾಯಕರೊಬ್ಬರು, ಎಲ್‌ಜೆಪಿಯ ಚಿರಾಗ್ ಪಾಸ್ವಾನ್ ಅವರಿಗೆ ಕುಮ್ಮಕ್ಕು ಕೊಟ್ಟಿದ್ದೇ ಬಿಜೆಪಿ, ಹೀಗಾಗಿಯೇ ಜೆಡಿಯುಗೆ ಕಡಿಮೆ ಸ್ಥಾನ ಬರುವಂತಾಯಿತು. ಇದು ನಮ್ಮ ನಾಯಕರಿಗೆ ಎಲ್ಲಕ್ಕಿಂತ ಹೆಚ್ಚು ಕಿರಿಕಿರಿ ಉಂಟುಮಾಡಿದೆ. ಏಕೆಂದರೆ ಚಿರಾಗ್‌ನಿಂದಾಗಿ ನಾವು ಬಿಹಾರದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದೇವೆ. ಇದೇ ಕಾರಣ ಜೆಡಿಯು - ಬಿಜೆಪಿ ಮೈತ್ರಿಯಲ್ಲಿ ಬಿರುಕಿಗೆ ಕಾರಣವಾಗಿದೆ. ಹೀಗಾಗಿ ಮತ್ತೊಮ್ಮೆ ಎನ್​ಡಿಎದಿಂದ ಹೊರ ಬೀಳುವ ಬಗ್ಗೆ ಯೋಚಿಸಬೇಕಾದ ಪರಿಸ್ಥಿತಿಗೆ ಪಕ್ಷ ತಲುಪಿದೆ ಎಂದು ಹೆಸರು ಹೇಳಲಿಚ್ಚಿಸದ ಜೆಡಿಯು ನಾಯಕರೊಬ್ಬರು ಹೇಳಿದ್ದಾರೆ.

ನಿತೀಶ್​ ದುರ್ಬಲಗೊಳಿಸಲು ಷಡ್ಯಂತ್ರ: ಬಿಹಾರದಲ್ಲಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಮಾತನಾಡಿರುವ ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಅಲಿಯಾಸ್ ಲಲನ್ ಸಿಂಗ್, ನಿತೀಶ್ ಮತ್ತು ಪಕ್ಷವನ್ನು ಹಾಳುಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸುಳಿವು ನೀಡಿದರು. ಮಿತ್ರ ಪಕ್ಷ ಬಿಜೆಪಿ ಹೆಸರು ಹೇಳದೇ ಈ ಬಾರಿಯೂ 'ಚಿರಾಗ್ ಮಾದರಿ' ಅನುಸರಿಸಲಾಗುತ್ತಿದೆ ಎಂಬ ಅಂಶದತ್ತ ಅವರು ಬೆರಳು ತೋರಿಸಿದರು. ಜೆಡಿಯು ತೊರೆದಿರುವ ಆರ್‌ಸಿಪಿ ಸಿಂಗ್, ಮತ್ತೊಬ್ಬ ಚಿರಾಗ್ ಎಂದು ಬಣ್ಣಿಸಿದರು. ಇದೇ ವೇಳೆ ಮಾತು ಮುಂದುವರೆಸಿದ ಅವರು, ನಿತೀಶ್ ಅವರನ್ನು ದುರ್ಬಲಗೊಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬಿಜೆಪಿ ಗೇಮ್​ ಪ್ಲಾನ್​ ಅರಿತಿರುವ ನಿತೀಶ್: ಸದ್ಯದ ಸನ್ನಿವೇಶವನ್ನು ಗಮನಿಸಿದರೆ ನಿತೀಶ್ ಬಿಜೆಪಿಯ ಗೇಮ್ ಪ್ಲಾನ್ ಬಗ್ಗೆ ಅರಿತುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ನಿತೀಶ್ ಈಗ ವಿಭಿನ್ನ ಬಿಜೆಪಿ ನಿಭಾಯಿಸುತ್ತಿದ್ದಾರೆ ಮತ್ತು ಸಿಎಂ ಕುರ್ಚಿ ಉಳಿಸಿಕೊಳ್ಳಲು ಅವರು ಮಾಡಬೇಕಾದ ಎಲ್ಲ ತಂತ್ರಗಳನ್ನು ಕಾರ್ಯ ರೂಪಕ್ಕೆ ತರುತ್ತಿದ್ದಾರೆ. ಈ ಹಿಂದೆ ನಿತೀಶ್​ ಏನು ಮಾಡಿದ್ದರು, ಎಂಬುದನ್ನು ನೆನಪಿಸಿಕೊಂಡರೆ ನಿತೀಶ್​ ಬಿಜೆಪಿಯ ಪಟ್ಟುಗಳಿಗೆ ಅಷ್ಟು ಸುಲಭವಾಗಿ ಮಣಿಯುವುದಿಲ್ಲ ಎಂಬ ಅಂಶಗಳು ಇಲ್ಲಿ ಸ್ಪಷ್ಟವಾಗುತ್ತವೆ ಎಂದು ಮೂಲಗಳು ಮಾಹಿತಿ ನೀಡುತ್ತಿವೆ.

ಅಂದುಕೊಂಡಂತಿಲ್ಲ ಮೈತ್ರಿ: ಅವರ ಮೊದಲ ಮತ್ತು ಎರಡನೆಯ ಅವಧಿಗಿಂತ ಈಗ ಪರಿಸ್ಥಿತಿ ಭಿನ್ನವಾಗಿದೆ. ಈ ಮೊದಲು ನಿತೀಶ್ ಕುಮಾರ್ ಅವರು ಅರುಣ್ ಜೇಟ್ಲಿ, ನಂದ್ ಕಿಶೋರ್ ಯಾದವ್ ಮತ್ತು ಸುಶೀಲ್ ಮೋದಿಯಂತಹ ಉತ್ತಮ ನಾಯಕರ ಜತೆ ಮೈತ್ರಿ ಹೊಂದಿದ್ದರು. ಮೊದಲ ಮತ್ತು ಎರಡನೇ ಅವಧಿಯಲ್ಲಿ ಮೈತ್ರಿಯ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಮಾತುಕತೆ ನಡೆಸಿ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿತ್ತು.

ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ. ಇದು ಬಿಜೆಪಿ ಮತ್ತು ಜೆಡಿಯು ನಾಯಕರ ಬಿರುಕುಗಳಿಗೆ ಕಾರಣವಾಗುತ್ತದೆ. ಜೇಟ್ಲಿ, ನಂದ ಕಿಶೋರ್ ಹಾಗೂ ಸುಶಿಲ್​ ಮೋದಿ ಕೂಡ ಈಗ ಇಲ್ಲ. ಹೀಗಾಗಿಯೇ ನಿತೀಶ್​ ಅವರ ಮೂರನೇ ಅವಧಿ, ಜೆಡಿಯು ಮತ್ತು ಬಿಜೆಪಿ ನಡುವಿನ ಸಂಬಂಧ ಯಾವಾಗಲೂ ಹದಗೆಡುವಂತೆ ಮಾಡಿದೆ.

ರಾಜಕೀಯ ವಿಶ್ಲೇಷಕರು ಹೇಳುವುದೇನು? ಪಾಟ್ನಾ ಮೂಲದ ರಾಜಕೀಯ ತಜ್ಞ ಡಾ. ಸಂಜಯ್ ಕುಮಾರ್ ಹೇಳುವ ಪ್ರಕಾರ, ಇದು ನಂಬಿಕೆಯ ಕೊರತೆಯೇ ಇಂದಿನ ಬಿಕ್ಕಟ್ಟಿಗೆ ಕಾರಣ. ಎನ್‌ಡಿಎ ವಿಭಜನೆಯ ಹಿಂದಿನ ಪ್ರಮುಖ ಕಾರಣ ಕಳ್ಳಬೇಟೆ. ಮೈತ್ರಿಕೂಟದ ಪಾಲುದಾರರಾಗಿದ್ದರೂ ಬಿಜೆಪಿ ತಮ್ಮ ಶಾಸಕರನ್ನು ಬೇಟೆಯಾಡಲು ಪ್ರಯತ್ನಿಸುತ್ತಿದೆ ಎಂದು ಜೆಡಿಯು ಗ್ರಹಿಸಿದೆ.

ಮತ್ತೊಬ್ಬ ನಾಯಕನನ್ನು ಮುಂದಿಟ್ಟುಕೊಂಡು ನಿತೀಶ್‌ರನ್ನು ಅವಮಾನಿಸಿ ಅಧಿಕಾರ ಹಿಡಿಯಲು ಬಿಜೆಪಿ ಬಯಸಿತ್ತು. ಅರುಣಾಚಲ ಪ್ರದೇಶದಲ್ಲಿ ಏಳು ಶಾಸಕರ ಪೈಕಿ ಆರು ಶಾಸಕರನ್ನು ಬೇಟೆಯಾಡುವ ಮೂಲಕ ಬಿಜೆಪಿ ಇದನ್ನು ಮಾಡಿದೆ. ಆ ಸಂಚೇ ಬಿಜೆಪಿ ಮತ್ತು ಜೆಡಿಯು ನಡುವೆ ವಿಶ್ವಾಸದ ಕೊರತೆಯನ್ನು ಸೃಷ್ಟಿಸಿದೆ. ನಿತೀಶ್ ಆ ಸಂಚನ್ನು ಮೌನವಾಗಿ ವೀಕ್ಷಿಸಿದರು. ಬಿಹಾರದಲ್ಲಿ ಬಿಜೆಪಿಯೊಂದಿಗೆ ಸರ್ಕಾರ ನಡೆಸುತ್ತಿರುವ ಕಾರಣ ನಿತೀಶ್​ ಕುಮಾರ್​ ಒಂದೂ ಮಾತು ಆಡದೇ ಎಲ್ಲವನ್ನೂ ಮೌನವಾಗಿಯೇ ಸಹಿಸಿಕೊಂಡಿದ್ದಾರೆ ಕೂಡಾ.

ಬಿಜೆಪಿಯ ಕಳ್ಳಬೇಟೆಯೇ ಇದೀಗ ನಿತೀಶ್ ಮತ್ತು ಬಿಜೆಪಿ ನಡುವಣ ಬಿರುಕಿಗೆ ಕಾರಣವಾಗಿದೆ. ಇದೇ ಪರಿಣಾಮ ಮೈತ್ರಿ ಮತ್ತೊಮ್ಮೆ ಪತನದ ಅಂಚಿಗೆ ತಲುಪಿದೆ. ಇನ್ನು ಸಿಎಂ ನಿತೀಶ್ ಕುಮಾರ್​ ಅವರು, ಪಿಎಂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೊಂದಿಗಿನ ಸಭೆಗಳಿಗೆ ಸತತವಾಗಿ ಗೈರಾಗುವ ಮೂಲಕ ಮೈತ್ರಿ ಮುರಿದುಕೊಳ್ಳುವ ಬಗ್ಗೆ ಸಾಕಷ್ಟು ಸೂಚನೆ ನೀಡಿದ್ದಾರೆ.

ಸಮಾರಂಭವೊಂದರಲ್ಲಿ ಉಪ ಮುಖ್ಯಮಂತ್ರಿ ತಾರ್​​ ಕಿಶೋರ್​ ಪ್ರಸಾದ್ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ನಿತೀಶ್ ಅವರು ಸಂತೋಷ ವಿನಿಮಯ ಮಾಡಿಕೊಳ್ಳಲಿಲ್ಲ. ಇದೊಂದೇ ಘಟನೆ ಬಿಜೆಪಿ - ಜೆಡಿಯು ಮೈತ್ರಿ ಎಷ್ಟು ಚಂದ ಇದೇ ಎಂಬುದನ್ನ ತೋರಿದಂತಿತ್ತು.

ಇದನ್ನು ಓದಿ:ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಯಲ್ಲಿ ಬಿರುಕು: ಮಹತ್ವದ ಸಭೆ ಕರೆದ ಸಿಎಂ ನಿತೀಶ್ ಕುಮಾರ್​

ಪಾಟ್ನಾ: ಮೋದಿ ಜತೆ ಜಿದ್ದಿಗೆ ಬಿದ್ದಿದ್ದ ನಿತೀಶ್ ಕುಮಾರ್​​ ಬಿಹಾರದಲ್ಲಿನ ರಾಜಕೀಯ ಅನಿವಾರ್ಯತೆಗೆ ಆರ್​ಜೆಡಿ ಸಖ್ಯೆ ತೊರೆದು ಮತ್ತೆ ಬಿಜೆಪಿ ಮೈತ್ರಿಗೆ ಬಂದಿತ್ತು. ಇನ್ನು 2020 ರಲ್ಲಿ ಜೆಡಿಯು- ಬಿಜೆಪಿ ಮೈತ್ರಿಕೂಟ ಸರ್ಕಾರದ ನೇತೃತ್ವ ವಹಿಸಿರುವ ನಿತೀಶ್​ - ಬಿಜೆಪಿ ಸಂಬಂಧ ಹಾಗೂ ಸ್ನೇಹ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 77 ಸ್ಥಾನ ಪಡೆದು ಜೆಡಿಯುಗಿಂತ ಹೆಚ್ಚು ಸ್ಥಾನ ಪಡೆದರೂ ನಿತೀಶ್ ಕುಮಾರ್ ಅವರನ್ನೇ ಸಿಎಂ ಎಂದು ಘೋಷಣೆ ಮಾಡಿತ್ತು. ಅದರಂತೆ ಅವರೇ ಸಿಎಂ ಆಗಿ ಕಳೆದ ಮೂರುವರ್ಷಗಳಿಂದ ಅಧಿಕಾರ ನಡೆಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಯು ಗೆದ್ದಿದ್ದು ಕೇವಲ 44 ಸ್ಥಾನಗಳನ್ನು ಮಾತ್ರ.

ಹೀಗಾಗಿ 2020 ರ ಹಿಂದಿನ ಅವಧಿಯಲ್ಲಿ ನಿತೀಶ್​ ಕುಮಾರ್​ ನೇತೃತ್ವದ ಜೆಡಿಯು ಅತಿ ಹೆಚ್ಚು ಸ್ಥಾನ ಗೆದ್ದು ಬೀಗಿತ್ತು. ಆಗ ಬಿಜೆಪಿ - ಜೆಡಿಯು, ಆರ್​ಜೆಡಿ ಮೈತ್ರಿಕೂಟದ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಿತ್ತು. ಆದರೆ, 2020 ರಲ್ಲಿ ಮತ್ತೆ ನಿತೀಶ್​ ಕುಮಾರ್​ ಅವರ ನೇತೃತ್ವದಲ್ಲಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿತ್ತು. ಹಿಂದಿಗಿಂತ ಕಡಿಮೆ ಸ್ಥಾನ ಪಡೆದಿರುವುದರಿಂದ ನಿತೀಶ್ ಕುಮಾರ್​ ಸಿಎಂ ಆಗಿದ್ದರೂ ಅವರ ಪಕ್ಷದ ಸದ್ಯಸ್ಯರು ಕಡಿಮೆ ಇರುವುದರಿಂದ ಕ್ಯಾಬಿನೆಟ್​ನಲ್ಲಿ ಕಡಿಮೆ ಸ್ಥಾನ ಪಡೆದುಕೊಂಡಿದ್ದು, ಬಿಜೆಪಿಗೆ ಹೆಚ್ಚಿನ ಸಚಿವ ಸ್ಥಾನಗಳನ್ನು ಬಿಟ್ಟುಕೊಟ್ಟಿದೆ.

ಬಿಹಾರ ರಾಜಕೀಯ ಇತಿಹಾಸದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳ ಹೊರತಾಗಿ ಬಿಜೆಪಿಗೆ ಮೊದಲ ಬಾರಿಗೆ ಸ್ಪೀಕರ್ ಕುರ್ಚಿಯೂ ಸಿಕ್ಕಿದೆ. ಇಂತಹ ಪರಿಸ್ಥಿತಿಯಲ್ಲಿ ಜೆಡಿಯು ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ.

ಅಹಿತಕರ ಮೈತ್ರಿ ಬಗ್ಗೆ ಜೆಡಿಯು ನಾಯಕರ​​ ಬೇಸರ: ನಿತೀಶ್​ ಕುಮಾರ್​ ಅವರನ್ನು ವಿರೋಧಿಸುತ್ತಿರುವ ರಾಮ್​ ವಿಲಾಸ್​ ಪಾಸ್ವಾನ ಅವರ ಪುತ್ರ ಚಿರಾಗ್​ ಪಾಸ್ವಾನ್​, ಕಳೆದ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿ ಜೆಡಿಯುಗೆ ಹೊಡೆತ ನೀಡಿದ್ದರು. ಇದಕ್ಕೆ ಬಿಜೆಪಿಯ ಪರೋಕ್ಷ ಬೆಂಬಲ ಇತ್ತು. ಇದು ನಿತೀಶ್​ ಅವರ ಮುನಿಸಿಗೆ ಕಾರಣ.

ಈ ಬಗ್ಗೆ ಮಾತನಾಡಿರುವ ಜೆಡಿಯು ನಾಯಕರೊಬ್ಬರು, ಎಲ್‌ಜೆಪಿಯ ಚಿರಾಗ್ ಪಾಸ್ವಾನ್ ಅವರಿಗೆ ಕುಮ್ಮಕ್ಕು ಕೊಟ್ಟಿದ್ದೇ ಬಿಜೆಪಿ, ಹೀಗಾಗಿಯೇ ಜೆಡಿಯುಗೆ ಕಡಿಮೆ ಸ್ಥಾನ ಬರುವಂತಾಯಿತು. ಇದು ನಮ್ಮ ನಾಯಕರಿಗೆ ಎಲ್ಲಕ್ಕಿಂತ ಹೆಚ್ಚು ಕಿರಿಕಿರಿ ಉಂಟುಮಾಡಿದೆ. ಏಕೆಂದರೆ ಚಿರಾಗ್‌ನಿಂದಾಗಿ ನಾವು ಬಿಹಾರದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದೇವೆ. ಇದೇ ಕಾರಣ ಜೆಡಿಯು - ಬಿಜೆಪಿ ಮೈತ್ರಿಯಲ್ಲಿ ಬಿರುಕಿಗೆ ಕಾರಣವಾಗಿದೆ. ಹೀಗಾಗಿ ಮತ್ತೊಮ್ಮೆ ಎನ್​ಡಿಎದಿಂದ ಹೊರ ಬೀಳುವ ಬಗ್ಗೆ ಯೋಚಿಸಬೇಕಾದ ಪರಿಸ್ಥಿತಿಗೆ ಪಕ್ಷ ತಲುಪಿದೆ ಎಂದು ಹೆಸರು ಹೇಳಲಿಚ್ಚಿಸದ ಜೆಡಿಯು ನಾಯಕರೊಬ್ಬರು ಹೇಳಿದ್ದಾರೆ.

ನಿತೀಶ್​ ದುರ್ಬಲಗೊಳಿಸಲು ಷಡ್ಯಂತ್ರ: ಬಿಹಾರದಲ್ಲಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಮಾತನಾಡಿರುವ ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಅಲಿಯಾಸ್ ಲಲನ್ ಸಿಂಗ್, ನಿತೀಶ್ ಮತ್ತು ಪಕ್ಷವನ್ನು ಹಾಳುಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸುಳಿವು ನೀಡಿದರು. ಮಿತ್ರ ಪಕ್ಷ ಬಿಜೆಪಿ ಹೆಸರು ಹೇಳದೇ ಈ ಬಾರಿಯೂ 'ಚಿರಾಗ್ ಮಾದರಿ' ಅನುಸರಿಸಲಾಗುತ್ತಿದೆ ಎಂಬ ಅಂಶದತ್ತ ಅವರು ಬೆರಳು ತೋರಿಸಿದರು. ಜೆಡಿಯು ತೊರೆದಿರುವ ಆರ್‌ಸಿಪಿ ಸಿಂಗ್, ಮತ್ತೊಬ್ಬ ಚಿರಾಗ್ ಎಂದು ಬಣ್ಣಿಸಿದರು. ಇದೇ ವೇಳೆ ಮಾತು ಮುಂದುವರೆಸಿದ ಅವರು, ನಿತೀಶ್ ಅವರನ್ನು ದುರ್ಬಲಗೊಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬಿಜೆಪಿ ಗೇಮ್​ ಪ್ಲಾನ್​ ಅರಿತಿರುವ ನಿತೀಶ್: ಸದ್ಯದ ಸನ್ನಿವೇಶವನ್ನು ಗಮನಿಸಿದರೆ ನಿತೀಶ್ ಬಿಜೆಪಿಯ ಗೇಮ್ ಪ್ಲಾನ್ ಬಗ್ಗೆ ಅರಿತುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ನಿತೀಶ್ ಈಗ ವಿಭಿನ್ನ ಬಿಜೆಪಿ ನಿಭಾಯಿಸುತ್ತಿದ್ದಾರೆ ಮತ್ತು ಸಿಎಂ ಕುರ್ಚಿ ಉಳಿಸಿಕೊಳ್ಳಲು ಅವರು ಮಾಡಬೇಕಾದ ಎಲ್ಲ ತಂತ್ರಗಳನ್ನು ಕಾರ್ಯ ರೂಪಕ್ಕೆ ತರುತ್ತಿದ್ದಾರೆ. ಈ ಹಿಂದೆ ನಿತೀಶ್​ ಏನು ಮಾಡಿದ್ದರು, ಎಂಬುದನ್ನು ನೆನಪಿಸಿಕೊಂಡರೆ ನಿತೀಶ್​ ಬಿಜೆಪಿಯ ಪಟ್ಟುಗಳಿಗೆ ಅಷ್ಟು ಸುಲಭವಾಗಿ ಮಣಿಯುವುದಿಲ್ಲ ಎಂಬ ಅಂಶಗಳು ಇಲ್ಲಿ ಸ್ಪಷ್ಟವಾಗುತ್ತವೆ ಎಂದು ಮೂಲಗಳು ಮಾಹಿತಿ ನೀಡುತ್ತಿವೆ.

ಅಂದುಕೊಂಡಂತಿಲ್ಲ ಮೈತ್ರಿ: ಅವರ ಮೊದಲ ಮತ್ತು ಎರಡನೆಯ ಅವಧಿಗಿಂತ ಈಗ ಪರಿಸ್ಥಿತಿ ಭಿನ್ನವಾಗಿದೆ. ಈ ಮೊದಲು ನಿತೀಶ್ ಕುಮಾರ್ ಅವರು ಅರುಣ್ ಜೇಟ್ಲಿ, ನಂದ್ ಕಿಶೋರ್ ಯಾದವ್ ಮತ್ತು ಸುಶೀಲ್ ಮೋದಿಯಂತಹ ಉತ್ತಮ ನಾಯಕರ ಜತೆ ಮೈತ್ರಿ ಹೊಂದಿದ್ದರು. ಮೊದಲ ಮತ್ತು ಎರಡನೇ ಅವಧಿಯಲ್ಲಿ ಮೈತ್ರಿಯ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಮಾತುಕತೆ ನಡೆಸಿ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿತ್ತು.

ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ. ಇದು ಬಿಜೆಪಿ ಮತ್ತು ಜೆಡಿಯು ನಾಯಕರ ಬಿರುಕುಗಳಿಗೆ ಕಾರಣವಾಗುತ್ತದೆ. ಜೇಟ್ಲಿ, ನಂದ ಕಿಶೋರ್ ಹಾಗೂ ಸುಶಿಲ್​ ಮೋದಿ ಕೂಡ ಈಗ ಇಲ್ಲ. ಹೀಗಾಗಿಯೇ ನಿತೀಶ್​ ಅವರ ಮೂರನೇ ಅವಧಿ, ಜೆಡಿಯು ಮತ್ತು ಬಿಜೆಪಿ ನಡುವಿನ ಸಂಬಂಧ ಯಾವಾಗಲೂ ಹದಗೆಡುವಂತೆ ಮಾಡಿದೆ.

ರಾಜಕೀಯ ವಿಶ್ಲೇಷಕರು ಹೇಳುವುದೇನು? ಪಾಟ್ನಾ ಮೂಲದ ರಾಜಕೀಯ ತಜ್ಞ ಡಾ. ಸಂಜಯ್ ಕುಮಾರ್ ಹೇಳುವ ಪ್ರಕಾರ, ಇದು ನಂಬಿಕೆಯ ಕೊರತೆಯೇ ಇಂದಿನ ಬಿಕ್ಕಟ್ಟಿಗೆ ಕಾರಣ. ಎನ್‌ಡಿಎ ವಿಭಜನೆಯ ಹಿಂದಿನ ಪ್ರಮುಖ ಕಾರಣ ಕಳ್ಳಬೇಟೆ. ಮೈತ್ರಿಕೂಟದ ಪಾಲುದಾರರಾಗಿದ್ದರೂ ಬಿಜೆಪಿ ತಮ್ಮ ಶಾಸಕರನ್ನು ಬೇಟೆಯಾಡಲು ಪ್ರಯತ್ನಿಸುತ್ತಿದೆ ಎಂದು ಜೆಡಿಯು ಗ್ರಹಿಸಿದೆ.

ಮತ್ತೊಬ್ಬ ನಾಯಕನನ್ನು ಮುಂದಿಟ್ಟುಕೊಂಡು ನಿತೀಶ್‌ರನ್ನು ಅವಮಾನಿಸಿ ಅಧಿಕಾರ ಹಿಡಿಯಲು ಬಿಜೆಪಿ ಬಯಸಿತ್ತು. ಅರುಣಾಚಲ ಪ್ರದೇಶದಲ್ಲಿ ಏಳು ಶಾಸಕರ ಪೈಕಿ ಆರು ಶಾಸಕರನ್ನು ಬೇಟೆಯಾಡುವ ಮೂಲಕ ಬಿಜೆಪಿ ಇದನ್ನು ಮಾಡಿದೆ. ಆ ಸಂಚೇ ಬಿಜೆಪಿ ಮತ್ತು ಜೆಡಿಯು ನಡುವೆ ವಿಶ್ವಾಸದ ಕೊರತೆಯನ್ನು ಸೃಷ್ಟಿಸಿದೆ. ನಿತೀಶ್ ಆ ಸಂಚನ್ನು ಮೌನವಾಗಿ ವೀಕ್ಷಿಸಿದರು. ಬಿಹಾರದಲ್ಲಿ ಬಿಜೆಪಿಯೊಂದಿಗೆ ಸರ್ಕಾರ ನಡೆಸುತ್ತಿರುವ ಕಾರಣ ನಿತೀಶ್​ ಕುಮಾರ್​ ಒಂದೂ ಮಾತು ಆಡದೇ ಎಲ್ಲವನ್ನೂ ಮೌನವಾಗಿಯೇ ಸಹಿಸಿಕೊಂಡಿದ್ದಾರೆ ಕೂಡಾ.

ಬಿಜೆಪಿಯ ಕಳ್ಳಬೇಟೆಯೇ ಇದೀಗ ನಿತೀಶ್ ಮತ್ತು ಬಿಜೆಪಿ ನಡುವಣ ಬಿರುಕಿಗೆ ಕಾರಣವಾಗಿದೆ. ಇದೇ ಪರಿಣಾಮ ಮೈತ್ರಿ ಮತ್ತೊಮ್ಮೆ ಪತನದ ಅಂಚಿಗೆ ತಲುಪಿದೆ. ಇನ್ನು ಸಿಎಂ ನಿತೀಶ್ ಕುಮಾರ್​ ಅವರು, ಪಿಎಂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೊಂದಿಗಿನ ಸಭೆಗಳಿಗೆ ಸತತವಾಗಿ ಗೈರಾಗುವ ಮೂಲಕ ಮೈತ್ರಿ ಮುರಿದುಕೊಳ್ಳುವ ಬಗ್ಗೆ ಸಾಕಷ್ಟು ಸೂಚನೆ ನೀಡಿದ್ದಾರೆ.

ಸಮಾರಂಭವೊಂದರಲ್ಲಿ ಉಪ ಮುಖ್ಯಮಂತ್ರಿ ತಾರ್​​ ಕಿಶೋರ್​ ಪ್ರಸಾದ್ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ನಿತೀಶ್ ಅವರು ಸಂತೋಷ ವಿನಿಮಯ ಮಾಡಿಕೊಳ್ಳಲಿಲ್ಲ. ಇದೊಂದೇ ಘಟನೆ ಬಿಜೆಪಿ - ಜೆಡಿಯು ಮೈತ್ರಿ ಎಷ್ಟು ಚಂದ ಇದೇ ಎಂಬುದನ್ನ ತೋರಿದಂತಿತ್ತು.

ಇದನ್ನು ಓದಿ:ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಯಲ್ಲಿ ಬಿರುಕು: ಮಹತ್ವದ ಸಭೆ ಕರೆದ ಸಿಎಂ ನಿತೀಶ್ ಕುಮಾರ್​

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.