ಬಾರ್ಪೇಟಾ(ಅಸ್ಸೋಂ): ಭಾರತೀಯ ಸೇನೆಯಿಂದ ಜೂನಿಯರ್ ಕಮಿಷನರ್ ಅಧಿಕಾರಿಯಾಗಿ ನಿವೃತ್ತಿ ಹೊಂದಿ 28 ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ್ದ ಅಬ್ದುಲ್ ಹಲೀಮ್ ಅವರ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಬಾರ್ಪೇಟಾದ ವಿದೇಶಿಯರ ನ್ಯಾಯಮಂಡಳಿ ನೋಟಿಸ್ ನೀಡಿರುವ ವಿಚಾರ ಗೊತ್ತೇ ಇದೆ. ಈ ನೋಟಿಸ್ಗೆ ನಿವೃತ್ತ ಅಧಿಕಾರಿ ಉತ್ತರವೇನು ಎಂಬುದು ಕೇಳೋಣಾ ಬನ್ನಿ..
'ನನ್ನ ಹೆಸರು ಅಬ್ದುಲ್ ಹಲೀಮ್.. ಬಾರ್ಪೇಟದ ಸರುಸದರಿ ಗ್ರಾಮದ ನಿವಾಸಿ.. ನಾನು 1992 ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದೆ. 1999 ರ ಕಾರ್ಗಿಲ್ ಯುದ್ಧದಲ್ಲಿಯೂ ಹೋರಾಡಿದ್ದೇನೆ. ನೋಟಿಸ್ ಬಂದ ತಕ್ಷಣ ಆಶ್ಚರ್ಯವಾಯಿತು. 2003 ರಲ್ಲಿ ಬಾರ್ಪೇಟಾ ಬಾರ್ಡರ್ ಪೋಲಿಸ್ ದಾಖಲಿಸಿದ ಪ್ರಕರಣದ ಸಂಬಂಧ ಫಾರಿನರ್ಸ್ ಟ್ರಿಬ್ಯೂನಲ್ ನನ್ನ ಪೌರತ್ವವನ್ನು ಸಾಬೀತುಪಡಿಸುವಂತೆ ಕೇಳಿದೆ. ನನಗೆ ವಿದೇಶಿ ನ್ಯಾಯಮಂಡಳಿಯಿಂದ ವಿವಿಧ ರೀತಿಯ ಪ್ರಮಾಣಪತ್ರಗಳನ್ನು ನೀಡುವಂತೆ ಹೇಳಿ ಕಿರುಕುಳ ನೀಡುತ್ತಿದ್ದಾರೆ. ನಾನು ಭಾರತೀಯ ಎಂಬುದು ಸಾಭೀತುಪಡಿಸಲು ವಿದೇಶಿ ನ್ಯಾಯಮಂಡಳಿಗೆ ಖಚಿತ ಪಡಿಸುವ ಅವಶ್ಯಕತೆಯಿಲ್ಲ. ವಿದೇಶಿ ನ್ಯಾಯಮಂಡಳಿಯ ಮೊರೆ ಹೋಗದಿರಲು ನಿರ್ಧರಿಸಿದ್ದೇನೆ ಎಂದು ಅಬ್ದುಲ್ ಹಲೀಂ ಈಟಿವಿ ಭಾರತ'ಗೆ ತಿಳಿಸಿದ್ದಾರೆ.
![Ex Indian army man in Assam fought Kargil asked to prove citizenship Indian army man in Assam ಭಾರತೀಯನೆಂದು ಸಾಬೀತು ಪಡಿಸಲು ವಿದೇಶಿ ನ್ಯಾಯಮಂಡಳಿ ಮೊರೆ ಪೌರತ್ವ ಸಾಬೀತು ಪಡಿಸಲು ಕಾರ್ಗಿಲ್ ಯೋಧನಿಗೆ ನೋಟಿಸ್ ಜಾರಿ ಕೋವಿಡ್ನಂತರ ಹೋರಾಟ ಶಾಂತಿ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪೌರತ್ವ ಸಾಬೀತು ಪಡಿಸುವಂತೆ ಸೂಚನೆ](https://etvbharatimages.akamaized.net/etvbharat/prod-images/kalgachiadiubtfulcitizennoticeretiredarmy_06012023171247_0601f_1673005367_846_0601newsroom_1673010712_71.jpg)
ಏನಿದು ಪ್ರಕರಣ: ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಕಾಯ್ದೆಯು ಸಾಕಷ್ಟು ಚರ್ಚೆ ಮತ್ತು ವಿವಾದಕ್ಕೂ ಕಾರಣವಾಗಿತ್ತು. ಎರಡು ವರ್ಷಗಳ ಹಿಂದೆ ಈ ಕಾಯ್ದೆಗಳ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳು ಮತ್ತು ಹೋರಾಟಗಳು ನಡೆದಿದ್ದವು. ಇದೇ ವೇಳೆ, ಈ ಕಾಯ್ದೆಗಳು ಪರವಾಗಿಯೂ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು. ಇದರಲ್ಲೂ ರಾಷ್ಟ್ರೀಯ ಪೌರತ್ವ ಕಾಯ್ದೆ (ಎನ್ಆರ್ಸಿ)ಯು ಈಶಾನ್ಯ ರಾಜ್ಯವಾದ ಅಸ್ಸೋಂನಲ್ಲಿ ಮೊದಲಿಗೆ ಜಾರಿಯಾಗಿದ್ದು, ಅನೇಕ ಜನರಿಗೆ ತಮ್ಮ ಪೌರತ್ವ ಸಾಬೀತು ಪಡಿಸುವಂತೆ ಸೂಚನೆ ನೀಡಲಾಗಿದೆ. ಇದೀಗ ಮತ್ತೊಬ್ಬ ಭಾರತೀಯ ಸೇನೆಯ ನಿವೃತ್ತ ಅಧಿಕಾರಿಗೂ ತಮ್ಮ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಆದೇಶಿಸಲಾಗಿದೆ.
![Ex Indian army man in Assam fought Kargil asked to prove citizenship Indian army man in Assam ಭಾರತೀಯನೆಂದು ಸಾಬೀತು ಪಡಿಸಲು ವಿದೇಶಿ ನ್ಯಾಯಮಂಡಳಿ ಮೊರೆ ಪೌರತ್ವ ಸಾಬೀತು ಪಡಿಸಲು ಕಾರ್ಗಿಲ್ ಯೋಧನಿಗೆ ನೋಟಿಸ್ ಜಾರಿ ಕೋವಿಡ್ನಂತರ ಹೋರಾಟ ಶಾಂತಿ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪೌರತ್ವ ಸಾಬೀತು ಪಡಿಸುವಂತೆ ಸೂಚನೆ](https://etvbharatimages.akamaized.net/etvbharat/prod-images/17418256_award.png)
![Ex Indian army man in Assam fought Kargil asked to prove citizenship Indian army man in Assam ಭಾರತೀಯನೆಂದು ಸಾಬೀತು ಪಡಿಸಲು ವಿದೇಶಿ ನ್ಯಾಯಮಂಡಳಿ ಮೊರೆ ಪೌರತ್ವ ಸಾಬೀತು ಪಡಿಸಲು ಕಾರ್ಗಿಲ್ ಯೋಧನಿಗೆ ನೋಟಿಸ್ ಜಾರಿ ಕೋವಿಡ್ನಂತರ ಹೋರಾಟ ಶಾಂತಿ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪೌರತ್ವ ಸಾಬೀತು ಪಡಿಸುವಂತೆ ಸೂಚನೆ](https://etvbharatimages.akamaized.net/etvbharat/prod-images/17418256_sefeefe.png)
ಅಸ್ಸೋಂದ ಬಾರ್ಪೇಟಾ ಜಿಲ್ಲೆಯಲ್ಲಿ ನಿವೃತ್ತ ಸೇನಾಧಿಕಾರಿಯಾದ ಅಬ್ದುಲ್ ಹಮೀದ್ ಅವರಿಗೆ 'ಸಂಶಯಾಸ್ಪದ ನಾಗರಿಕ' ಎಂದು ಗುರುತನ್ನು ಟ್ಯಾಗ್ ಮಾಡಲಾಗಿದೆ. ಇದರಿಂದ 28 ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ್ದ ಅವರು ಅವಮಾನಕ್ಕೆ ಒಳಗಾಗುವಂತೆ ಆಗಿದೆ. ಭಾರತೀಯ ಪೌರತ್ವವನ್ನು ಸಾಬೀತುಪಡಿಸುವಂತೆ ತಮಗೆ ನೋಟಿಸ್ ಬಂದ ತಕ್ಷಣ ಅವರು ಆಶ್ಚರ್ಯಕ್ಕೂ ಒಳಗಾಗಿದ್ದಾರೆ. ಅಲ್ಲದೇ, ಈ ವಿಷಯವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸದಂತೆಯೂ ಮಾಜಿ ಸೇನಾಧಿಕಾರಿಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
![Ex Indian army man in Assam fought Kargil asked to prove citizenship Indian army man in Assam ಭಾರತೀಯನೆಂದು ಸಾಬೀತು ಪಡಿಸಲು ವಿದೇಶಿ ನ್ಯಾಯಮಂಡಳಿ ಮೊರೆ ಪೌರತ್ವ ಸಾಬೀತು ಪಡಿಸಲು ಕಾರ್ಗಿಲ್ ಯೋಧನಿಗೆ ನೋಟಿಸ್ ಜಾರಿ ಕೋವಿಡ್ನಂತರ ಹೋರಾಟ ಶಾಂತಿ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪೌರತ್ವ ಸಾಬೀತು ಪಡಿಸುವಂತೆ ಸೂಚನೆ](https://etvbharatimages.akamaized.net/etvbharat/prod-images/17418256_photo.png)
![Ex Indian army man in Assam fought Kargil asked to prove citizenship Indian army man in Assam ಭಾರತೀಯನೆಂದು ಸಾಬೀತು ಪಡಿಸಲು ವಿದೇಶಿ ನ್ಯಾಯಮಂಡಳಿ ಮೊರೆ ಪೌರತ್ವ ಸಾಬೀತು ಪಡಿಸಲು ಕಾರ್ಗಿಲ್ ಯೋಧನಿಗೆ ನೋಟಿಸ್ ಜಾರಿ ಕೋವಿಡ್ನಂತರ ಹೋರಾಟ ಶಾಂತಿ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪೌರತ್ವ ಸಾಬೀತು ಪಡಿಸುವಂತೆ ಸೂಚನೆ](https://etvbharatimages.akamaized.net/etvbharat/prod-images/17418256_awarsdfwer.png)
ಯಾರು ಈ ಅಬ್ದುಲ್ ಹಮೀದ್?: ಭಾರತೀಯ ಸೇನೆಯಲ್ಲಿ ಸುದೀರ್ಘವಾದ 28 ವರ್ಷಗಳ ಕಾಲ ಸೇವೆಯನ್ನು ಬಾರ್ಪೇಟಾ ಜಿಲ್ಲೆಯ ಅಬ್ದುಲ್ ಹಮೀದ್ ಸಲ್ಲಿಸಿದ್ದಾರೆ. 1992ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದ ಇವರು, 1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ಯುದ್ಧದಲ್ಲಿಯೂ ಹೋರಾಡಿದ್ದಾರೆ. ಸದ್ಯ ಸೇನೆಯಿಂದ ಅಬ್ದುಲ್ ಹಮೀದ್ ನಿವೃತ್ತಿ ಹೊಂದಿದ್ದಾರೆ. ಇದೀಗ ಅಬ್ದುಲ್ ಹಮೀದ್ ಅವರಿಗೆ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಬಾರ್ಪೇಟಾದ ವಿದೇಶಿ ನ್ಯಾಯಮಂಡಳಿ ನೋಟಿಸ್ ನೀಡಿದೆ. 2003ರಲ್ಲಿ ಬಾರ್ಪೇಟಾ ಗಡಿ ಪೊಲೀಸರು ದಾಖಲಿಸಿದ ಪ್ರಕರಣದ ಆಧಾರದ ಮೇಲೆ ಈ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ನೋಟಿಸ್ಗೆ ಉತ್ತರಿಸಿದ ಅವರು, ನಾನು ಭಾರತೀಯ.. ಇದನ್ನು ಸಾಬೀತು ಪಡಿಸಲು ವಿದೇಶಿ ನ್ಯಾಯಮಂಡಳಿಗೆ ಮೊರೆ ಹೋಗುವುದಿಲ್ಲ ಎಂದು ನಿವೃತ್ತ ಕಾರ್ಗಿಲ್ ಯೋಧ ಹೇಳಿದ್ದಾರೆ.
![Ex Indian army man in Assam fought Kargil asked to prove citizenship Indian army man in Assam ಭಾರತೀಯನೆಂದು ಸಾಬೀತು ಪಡಿಸಲು ವಿದೇಶಿ ನ್ಯಾಯಮಂಡಳಿ ಮೊರೆ ಪೌರತ್ವ ಸಾಬೀತು ಪಡಿಸಲು ಕಾರ್ಗಿಲ್ ಯೋಧನಿಗೆ ನೋಟಿಸ್ ಜಾರಿ ಕೋವಿಡ್ನಂತರ ಹೋರಾಟ ಶಾಂತಿ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪೌರತ್ವ ಸಾಬೀತು ಪಡಿಸುವಂತೆ ಸೂಚನೆ](https://etvbharatimages.akamaized.net/etvbharat/prod-images/17418256_sefedddfed.png)
![Ex Indian army man in Assam fought Kargil asked to prove citizenship Indian army man in Assam ಭಾರತೀಯನೆಂದು ಸಾಬೀತು ಪಡಿಸಲು ವಿದೇಶಿ ನ್ಯಾಯಮಂಡಳಿ ಮೊರೆ ಪೌರತ್ವ ಸಾಬೀತು ಪಡಿಸಲು ಕಾರ್ಗಿಲ್ ಯೋಧನಿಗೆ ನೋಟಿಸ್ ಜಾರಿ ಕೋವಿಡ್ನಂತರ ಹೋರಾಟ ಶಾಂತಿ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪೌರತ್ವ ಸಾಬೀತು ಪಡಿಸುವಂತೆ ಸೂಚನೆ](https://etvbharatimages.akamaized.net/etvbharat/prod-images/17418256_sefeddd.png)
ಕೋವಿಡ್ ನಂತರ ಹೋರಾಟ : ದೇಶ ವ್ಯಾಪ್ತಿ ಸಿಎಎ ಮತ್ತು ಎನ್ಆರ್ಸಿ ವಿರುದ್ಧ ನಡೆಯುತ್ತಿದ್ದ ಹೋರಾಟ ಕೋವಿಡ್ ಹಾವಳಿ ಶುರುವಾದ ನಂತರದಲ್ಲಿ ಶಾಂತವಾಗಿತ್ತು. ಇದರ ನಡುವೆ ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಗೃಹ ಸಚಿವ ಅಮಿತ್ ಶಾ, ಕೋವಿಡ್ ಲಸಿಕೆ ಕಾರ್ಯ ಸಂಪೂರ್ಣವಾದ ಬಳಿಕ ಪೌರತ್ವ ಕಾಯ್ದೆದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದಿದ್ದರು. ಅಲ್ಲದೇ, ಕಳೆದ ನವೆಂಬರ್ನಲ್ಲಿ ನಡೆದ ಗುಜರಾತ್ ಚುನಾವಣೆ ಸಂದರ್ಭದಲ್ಲೂ ಪೌರತ್ವದ ವಿಷಯ ಮುನ್ನಲೆಗೆ ಬಂದಿತ್ತು.
ಓದಿ: ಭಾರತೀಯ ಪೌರತ್ವ ಸಾಬೀತು ಪಡಿಸಲು ಕಾರ್ಗಿಲ್ ಯೋಧನಿಗೆ ನೋಟಿಸ್ ಜಾರಿ!..