ETV Bharat / bharat

130 ಕೋಟಿ ರೂ.ಮೌಲ್ಯದ ಅಕ್ರಮ ಆಸ್ತಿ ಗಳಿಕೆ.. ಇಡಿ ಕ್ರಮ.. - 130 ಕೋಟಿ ರೂ.ಮೌಲ್ಯದ ಅಕ್ರಮ ಆಸ್ತಿ ಗಳಿಕೆ

ಕೈಲಾಶ್ ಚಂದ್ ಗುಪ್ತಾ ಮತ್ತು ಅವರ ಪುತ್ರರು (ಮುಸದ್ದಿಲಾಲ್ ಜೇಮ್ಸ್ ನ ಮಾಲೀಕರು) ಅವರ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಸಂಜಯ್ ಸರ್ದಾ ಅವರ ಆದಾಯದ ಮೂಲಗಳನ್ನು ಮತ್ತು ದೊಡ್ಡ ದೊಡ್ಡ ನಗದು ಠೇವಣಿಗಳನ್ನು ಸಮರ್ಥಿಸಲು ಇನ್​ವಾಯ್ಸ್​ಗಳನ್ನು ತಯಾರಿಸಿದ್ದಾರೆ ಎಂದು ಇಡಿ ತಿಳಿಸಿದೆ..

ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ
author img

By

Published : Feb 2, 2021, 5:51 PM IST

ನವದೆಹಲಿ : ಹೈದರಾಬಾದ್ ಮೂಲದ ವಿವಿಧ ಆಭರಣ ಮಳಿಗೆಗಳ ₹130 ಕೋಟಿ ಮೌಲ್ಯದ ಅಕ್ರಮ ಆಸ್ತಿ ಗಳಿಕೆಯ ದಾಖಲೆಯನ್ನು ಸಂಗ್ರಹಿಸಿ ಇಡಿ (ಜಾರಿ ನಿರ್ದೇಶನಾಲಯ) ಕ್ರಮ ಕೈಗೊಂಡಿದೆ. ಅಲ್ಲದೆ ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ನಡೆಸುತ್ತಿದೆ.

2016ರ ನವೆಂಬರ್​ 8ರಂದು ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣಗೊಳಿಸಿದ ಬೆನ್ನಲ್ಲೇ ಮುಸದ್ದಿಲಾಲ್ ಜೇಮ್ಸ್, ಜ್ಯುವೆಲ್ಸ್ ಪ್ರೈವೇಟ್ ಲಿಮಿಟೆಡ್, ವೈಷ್ಣವಿ ಬುಲಿಯನ್ ಪ್ರೈವೇಟ್ ಲಿಮಿಟೆಡ್ ಮತ್ತು ಮುಸದ್ದಿಲಾಲ್ ಜ್ಯುವೆಲ್ಲರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ತಮ್ಮಲ್ಲಿದ್ದ ಕೋಟ್ಯಂತರ ರೂಪಾಯಿ ಹಣವನ್ನು ಅಕ್ರಮವಾಗಿ ಪರಿವರ್ತಿಸಿಕೊಂಡಿವೆ ಎಂದು ಇಡಿ ತಿಳಿಸಿದೆ.

ಲಗತ್ತಿಸಲಾದ ಸ್ವತ್ತುಗಳಲ್ಲಿ 41 ಸ್ಥಿರಾಸ್ತಿಗಳು, ಷೇರುಗಳು ಮತ್ತು ಆಭರಣಗಳ ಮೇಲಿನ ಹೂಡಿಕೆಗಳು ಮತ್ತು ಕೆಲವು ವರ್ಷಗಳ ಹಿಂದೆ ನಡೆಸಿದ ದಾಳಿಗಳಲ್ಲಿ ವಶಪಡಿಸಿಕೊಂಡ 83.30 ಕೋಟಿ ರೂಪಾಯಿ. ಈ ಎಲ್ಲಾ ಆಸ್ತಿಗಳ ಒಟ್ಟು ಮೌಲ್ಯ 130.57 ಕೋಟಿ ರೂಪಾಯಿಯಾಗಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಹಾಗೂ ಆಭರಣ ಮಳಿಗೆಗಳ ವಿರುದ್ಧ ತೆಲಂಗಾಣ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.

2016ರ ನವೆಂಬರ್​ 8ರಂದು ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣಗೊಳಿಸಿದ ಬಳಿಕ ಈ ಮೂರು ಆಭರಣ ಮಳಿಗೆಗಳು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ 111 ಕೋಟಿ ರೂ. ಠೇವಣಿ ಇಟ್ಟಿರುವುದು ಪತ್ತೆಯಾಗಿದೆ.

ಅಲ್ಲದೆ, 8.11.2016ರ ರಾತ್ರಿ ಸಮಯದಲ್ಲಿ ಸುಮಾರು 6 ಸಾವಿರ ಗ್ರಾಹಕರು ಚಿನ್ನಾಭರಣ ಖರೀದಿಸಲು ತಮ್ಮ ಮಳಿಗೆಗಳಿಗೆ ಬಂದಿದ್ದಾರೆಂದು ಮಳಿಗೆ ಮಾಲೀಕರು ಹೇಳಿಕೊಂಡಿದ್ದಾರೆ.

ಕೈಲಾಶ್ ಚಂದ್ ಗುಪ್ತಾ ಮತ್ತು ಅವರ ಪುತ್ರರು (ಮುಸದ್ದಿಲಾಲ್ ಜೇಮ್ಸ್ ನ ಮಾಲೀಕರು) ಅವರ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಸಂಜಯ್ ಸರ್ದಾ ಅವರ ಆದಾಯದ ಮೂಲಗಳನ್ನು ಮತ್ತು ದೊಡ್ಡ ದೊಡ್ಡ ನಗದು ಠೇವಣಿಗಳನ್ನು ಸಮರ್ಥಿಸಲು ಇನ್​ವಾಯ್ಸ್​ಗಳನ್ನು ತಯಾರಿಸಿದ್ದಾರೆ ಎಂದು ಇಡಿ ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ.

ನವದೆಹಲಿ : ಹೈದರಾಬಾದ್ ಮೂಲದ ವಿವಿಧ ಆಭರಣ ಮಳಿಗೆಗಳ ₹130 ಕೋಟಿ ಮೌಲ್ಯದ ಅಕ್ರಮ ಆಸ್ತಿ ಗಳಿಕೆಯ ದಾಖಲೆಯನ್ನು ಸಂಗ್ರಹಿಸಿ ಇಡಿ (ಜಾರಿ ನಿರ್ದೇಶನಾಲಯ) ಕ್ರಮ ಕೈಗೊಂಡಿದೆ. ಅಲ್ಲದೆ ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ನಡೆಸುತ್ತಿದೆ.

2016ರ ನವೆಂಬರ್​ 8ರಂದು ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣಗೊಳಿಸಿದ ಬೆನ್ನಲ್ಲೇ ಮುಸದ್ದಿಲಾಲ್ ಜೇಮ್ಸ್, ಜ್ಯುವೆಲ್ಸ್ ಪ್ರೈವೇಟ್ ಲಿಮಿಟೆಡ್, ವೈಷ್ಣವಿ ಬುಲಿಯನ್ ಪ್ರೈವೇಟ್ ಲಿಮಿಟೆಡ್ ಮತ್ತು ಮುಸದ್ದಿಲಾಲ್ ಜ್ಯುವೆಲ್ಲರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ತಮ್ಮಲ್ಲಿದ್ದ ಕೋಟ್ಯಂತರ ರೂಪಾಯಿ ಹಣವನ್ನು ಅಕ್ರಮವಾಗಿ ಪರಿವರ್ತಿಸಿಕೊಂಡಿವೆ ಎಂದು ಇಡಿ ತಿಳಿಸಿದೆ.

ಲಗತ್ತಿಸಲಾದ ಸ್ವತ್ತುಗಳಲ್ಲಿ 41 ಸ್ಥಿರಾಸ್ತಿಗಳು, ಷೇರುಗಳು ಮತ್ತು ಆಭರಣಗಳ ಮೇಲಿನ ಹೂಡಿಕೆಗಳು ಮತ್ತು ಕೆಲವು ವರ್ಷಗಳ ಹಿಂದೆ ನಡೆಸಿದ ದಾಳಿಗಳಲ್ಲಿ ವಶಪಡಿಸಿಕೊಂಡ 83.30 ಕೋಟಿ ರೂಪಾಯಿ. ಈ ಎಲ್ಲಾ ಆಸ್ತಿಗಳ ಒಟ್ಟು ಮೌಲ್ಯ 130.57 ಕೋಟಿ ರೂಪಾಯಿಯಾಗಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಹಾಗೂ ಆಭರಣ ಮಳಿಗೆಗಳ ವಿರುದ್ಧ ತೆಲಂಗಾಣ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.

2016ರ ನವೆಂಬರ್​ 8ರಂದು ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣಗೊಳಿಸಿದ ಬಳಿಕ ಈ ಮೂರು ಆಭರಣ ಮಳಿಗೆಗಳು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ 111 ಕೋಟಿ ರೂ. ಠೇವಣಿ ಇಟ್ಟಿರುವುದು ಪತ್ತೆಯಾಗಿದೆ.

ಅಲ್ಲದೆ, 8.11.2016ರ ರಾತ್ರಿ ಸಮಯದಲ್ಲಿ ಸುಮಾರು 6 ಸಾವಿರ ಗ್ರಾಹಕರು ಚಿನ್ನಾಭರಣ ಖರೀದಿಸಲು ತಮ್ಮ ಮಳಿಗೆಗಳಿಗೆ ಬಂದಿದ್ದಾರೆಂದು ಮಳಿಗೆ ಮಾಲೀಕರು ಹೇಳಿಕೊಂಡಿದ್ದಾರೆ.

ಕೈಲಾಶ್ ಚಂದ್ ಗುಪ್ತಾ ಮತ್ತು ಅವರ ಪುತ್ರರು (ಮುಸದ್ದಿಲಾಲ್ ಜೇಮ್ಸ್ ನ ಮಾಲೀಕರು) ಅವರ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಸಂಜಯ್ ಸರ್ದಾ ಅವರ ಆದಾಯದ ಮೂಲಗಳನ್ನು ಮತ್ತು ದೊಡ್ಡ ದೊಡ್ಡ ನಗದು ಠೇವಣಿಗಳನ್ನು ಸಮರ್ಥಿಸಲು ಇನ್​ವಾಯ್ಸ್​ಗಳನ್ನು ತಯಾರಿಸಿದ್ದಾರೆ ಎಂದು ಇಡಿ ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.