ETV Bharat / bharat

ಗುಡ್ಡ ಕುಸಿದು ಆರು ಮಂದಿ ಸಾವು.. ಹಲವರಿಗೆ ಗಾಯ, ಸ್ಥಳಕ್ಕೆ ಜಿಲ್ಲಾಡಳಿತ ದೌಡು

author img

By

Published : Oct 10, 2022, 10:13 PM IST

ಕೆಲಸ ಮಾಡಲು ಹೊಲಕ್ಕೆ ಹೋಗುತ್ತಿದ್ದಾಗ ಡಾಂಬರು ಹಾಕದ ರಸ್ತೆಯಲ್ಲಿ ಸಾಗುತ್ತಿದ್ದೆವು. ಈ ವೇಳೆ ಇದ್ದಕ್ಕಿದ್ದಂತೆ ಮಣ್ಣಿನ ಗುಡ್ಡ ಕುಸಿದು ಬಿದ್ದಿದೆ ಎಂದು ಸ್ಥಳೀಯರು ಹಾಗೂ ಗಾಯಾಳುಗಳು ಮಾಹಿತಿ ನೀಡಿದ್ದಾರೆ.

Earthen mound collapse kills six, rescue operation on
ಗುಡ್ಡ ಕುಸಿದು ಆರು ಮಂದಿ ಸಾವು.. ಹಲವರಿಗೆ ಗಾಯ, ಸ್ಥಳಕ್ಕೆ ಜಿಲ್ಲಾಡಳಿತ ದೌಡು

ಕರೌಲಿ (ರಾಜಸ್ಥಾನ): ಜಿಲ್ಲೆಯ ಸಪೋತ್ರಾ ಉಪವಿಭಾಗದ ಸಿಮಾರ್‌ನ ಮೆಂಡ್‌ಪುರ ಗ್ರಾಮದಲ್ಲಿ ಮಣ್ಣಿನ ಗುಡ್ಡ ಕುಸಿದು ಆರು ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಅಂಕಿತ್ ಕುಮಾರ್ ಸಿಂಗ್ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇದೇ ವೇಳೆ ಡಿಸಿ ಮಾಹಿತಿ ನೀಡಿದ್ದಾರೆ.

ಗುಡ್ಡ ಕುಸಿದು ಆರು ಮಂದಿ ಸಾವು.. ಹಲವರಿಗೆ ಗಾಯ, ಸ್ಥಳಕ್ಕೆ ಜಿಲ್ಲಾಡಳಿತ ದೌಡು

ತಾವು ಮೇದ್‌ಪುರ ಗ್ರಾಮದ ನಿವಾಸಿಗಳಾಗಿದ್ದು, ಕೆಲಸ ಮಾಡಲು ಹೊಲಕ್ಕೆ ಹೋಗುತ್ತಿದ್ದಾಗ ಡಾಂಬರು ಹಾಕದ ರಸ್ತೆಯಲ್ಲಿ ಸಾಗುತ್ತಿದ್ದಾಗ ಮಣ್ಣಿನ ಗುಡ್ಡ ಕುಸಿದು ಬಿದ್ದಿದೆ ಎಂದು ಗಾಯಾಳುಗಳು ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತರ ಗುರುತು ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗುಡ್ಡ ಕುಸಿದು ಆರು ಮಂದಿ ಸಾವು.. ಹಲವರಿಗೆ ಗಾಯ, ಸ್ಥಳಕ್ಕೆ ಜಿಲ್ಲಾಡಳಿತ ದೌಡು

ಇದನ್ನು ಓದಿ:ಪಿತೋರಗಢದಲ್ಲಿ ಮೇಘಸ್ಪೋಟ ನದಿಯಲ್ಲಿ ಹರಿದು ಬಂತು ಕಲ್ಲು ಮರಳು ರಾಶಿ

ಕರೌಲಿ (ರಾಜಸ್ಥಾನ): ಜಿಲ್ಲೆಯ ಸಪೋತ್ರಾ ಉಪವಿಭಾಗದ ಸಿಮಾರ್‌ನ ಮೆಂಡ್‌ಪುರ ಗ್ರಾಮದಲ್ಲಿ ಮಣ್ಣಿನ ಗುಡ್ಡ ಕುಸಿದು ಆರು ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಅಂಕಿತ್ ಕುಮಾರ್ ಸಿಂಗ್ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇದೇ ವೇಳೆ ಡಿಸಿ ಮಾಹಿತಿ ನೀಡಿದ್ದಾರೆ.

ಗುಡ್ಡ ಕುಸಿದು ಆರು ಮಂದಿ ಸಾವು.. ಹಲವರಿಗೆ ಗಾಯ, ಸ್ಥಳಕ್ಕೆ ಜಿಲ್ಲಾಡಳಿತ ದೌಡು

ತಾವು ಮೇದ್‌ಪುರ ಗ್ರಾಮದ ನಿವಾಸಿಗಳಾಗಿದ್ದು, ಕೆಲಸ ಮಾಡಲು ಹೊಲಕ್ಕೆ ಹೋಗುತ್ತಿದ್ದಾಗ ಡಾಂಬರು ಹಾಕದ ರಸ್ತೆಯಲ್ಲಿ ಸಾಗುತ್ತಿದ್ದಾಗ ಮಣ್ಣಿನ ಗುಡ್ಡ ಕುಸಿದು ಬಿದ್ದಿದೆ ಎಂದು ಗಾಯಾಳುಗಳು ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತರ ಗುರುತು ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗುಡ್ಡ ಕುಸಿದು ಆರು ಮಂದಿ ಸಾವು.. ಹಲವರಿಗೆ ಗಾಯ, ಸ್ಥಳಕ್ಕೆ ಜಿಲ್ಲಾಡಳಿತ ದೌಡು

ಇದನ್ನು ಓದಿ:ಪಿತೋರಗಢದಲ್ಲಿ ಮೇಘಸ್ಪೋಟ ನದಿಯಲ್ಲಿ ಹರಿದು ಬಂತು ಕಲ್ಲು ಮರಳು ರಾಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.