ETV Bharat / bharat

ನಿಮ್ಮ ಮನೆಯಲ್ಲಿ ಅಕ್ರಮ ಸಂಬಂಧಗಳಿವೆಯೇ?.. ಸರ್ಕಾರದಿಂದಲೇ ಹೀಗೊಂದು ಸರ್ವೇ ಕಾರ್ಯ!

author img

By

Published : Dec 22, 2022, 8:59 PM IST

'ಅಪರಾಧಕ್ಕೆ ಕಾರಣವಾಗಬಹುದಾದ ಹಳೆ ದ್ವೇಷದ ವಿವರಗಳನ್ನು ಸಂಗ್ರಹಿಸುವ' ಹೆಸರಿನಲ್ಲಿ ಆಂಧ್ರ ಪ್ರದೇಶದ ಪೊಲೀಸ್ ಇಲಾಖೆಯು ಮನೆ, ಮನೆಗೆ ತೆರಳಿ ನಿಮ್ಮ ಮನೆಯಲ್ಲಿ ವಿವಾಹೇತರ(ಅಕ್ರಮ) ಸಂಬಂಧಗಳಿವೆಯೇ ಎಂಬ ಮುಜುಗರದ ಪ್ರಶ್ನೆಗಳನ್ನು ಕೇಳುತ್ತಿದೆ.

do-you-have-extramarital-affairs-in-your-house-the-questions-in-ap-government-survey
ನಿಮ್ಮ ಮನೆಯಲ್ಲಿ ವಿವಾಹೇತರ ಸಂಬಂಧಗಳಿವೆಯೇ?... ಸರ್ಕಾರದಿಂದ ಹೀಗೊಂದು ಸರ್ವೇ ಕಾರ್ಯ!

ಅಮರಾವತಿ (ಆಂಧ್ರ ಪ್ರದೇಶ): ಸಾಮಾನ್ಯವಾಗಿ ಸರ್ಕಾರದ ಸಮೀಕ್ಷೆಗಳು ಎಂದರೆ ಮನೆಯಲ್ಲಿ ಇರುವವರ ವಿವರ ಅಥವಾ ಸರ್ಕಾರದಿಂದ ಕಲ್ಯಾಣ ಯೋಜನೆಗಳ ಲಾಭ ಪಡೆಯುತ್ತಿರುವವರ ಮಾಹಿತಿ ಸಂಗ್ರಹಿಸುವ ಅತ್ಯಂತ ಸಹಜ ಪ್ರಕ್ರಿಯೆಗಳು. ಆದರೆ, ಆಂಧ್ರ ಪ್ರದೇಶದ ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಕೆಲವು ಪ್ರಶ್ನೆಗಳು ವಿಚಿತ್ರವಾಗಿವೆ. ಅಂತಹ ಪ್ರಶ್ನೆಗಳಿಗೆ ಯಾರಾದರೂ ಉತ್ತರಿಸಬಹುದೇ ಎಂಬ ಪ್ರಶ್ನೆಯೂ ಉದ್ಭವಿಸುತ್ತಿದೆ.

ಹೌದು, ಆಂಧ್ರ ಪ್ರದೇಶದಲ್ಲಿ ಗ್ರಾಮ ಮತ್ತು ವಾರ್ಡ್‌ಗಳ ಸಚಿವಾಲಯದ ಸಿಬ್ಬಂದಿ ಮತ್ತು ಸ್ವಯಂಸೇವಕರನ್ನು ಬಳಸಿಕೊಂಡು ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು ಎಲ್ಲೆ ಮೀರುವಂತಿವೆ. ನಿಮ್ಮ ಮನೆಯಲ್ಲಿ ವಿವಾಹೇತರ ಸಂಬಂಧಗಳಿವೆಯೇ?, ಬಹು ಲೈಂಗಿಕ ಸಂಬಂಧಗಳನ್ನು ಹೊಂದಿರುವಿರಾ?, ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾಗಿದ್ದೀರಾ?, ಇದಕ್ಕೆ ಸಂಬಂಧಿಸಿದ ಹಳೆ ಪ್ರಕರಣಗಳೇನಾದರೂ ಇವೆಯೇ ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ.

ಮುಜುಗರಕ್ಕೀಡಾಗುವ ಮಹಿಳಾ ಪೊಲೀಸರು: 'ಅಪರಾಧಕ್ಕೆ ಕಾರಣವಾಗಬಹುದಾದ ಹಳೆ ದ್ವೇಷದ ವಿವರಗಳನ್ನು ಸಂಗ್ರಹಿಸುವ' ಹೆಸರಿನಲ್ಲಿ ಆಂಧ್ರ ಪ್ರದೇಶದ ಪೊಲೀಸ್ ಇಲಾಖೆಯು ಮನೆ, ಮನೆಗೆ ತೆರಳಿ ಇಂತಹ ಮುಜುಗರದ ಪ್ರಶ್ನೆಗಳನ್ನು ಕೇಳುತ್ತಿದೆ. ಮಹಿಳಾ ಪೊಲೀಸರು ಸ್ವಯಂಸೇವಕರೊಂದಿಗೆ ತಮ್ಮ ವ್ಯಾಪ್ತಿಯ ಎಲ್ಲ ಮನೆಗಳಿಗೆ ತೆರಳಿ ಈ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಜನರಿಗೆ ಇಂತಹ ಪ್ರಶ್ನೆಗಳನ್ನು ಕೇಳಲು ಸ್ವತಃ ಮಹಿಳಾ ಪೊಲೀಸರೇ ತೊಂದರೆ ಅನುಭವಿಸಿದರೆ, ಅನಿವಾರ್ಯವಾಗಿ ಪ್ರಸ್ತಾಪಿಸಿದಾಗ, ಕೆಲವೊಮ್ಮೆ ಆಯಾ ಮನೆಗಳ ಜನರಿಂದ ತೀವ್ರ ಪ್ರತಿರೋಧವನ್ನು ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಕಪ್ಪು ಸ್ಕಾರ್ಪ್​, ಮಾಸ್ಕ್​ ತೆಗೆಸಿದ ಪೊಲೀಸರು: ಸಿಎಂ ಜಗನ್​ ಕಾರ್ಯಕ್ರಮದಿಂದ ಹೊರನಡೆದ ಮಹಿಳೆಯರು

ಇದಲ್ಲದೇ ಆಸ್ತಿ, ಗಡಿ ವಿವಾದ, ಕೌಟುಂಬಿಕ ದೌರ್ಜನ್ಯ ಪ್ರಕರಣಗಳು, ಮದ್ಯ ಸೇವನೆ, ಕಿರುಕುಳ, ಬಯಲು ಮದ್ಯಪಾನ, ಜಾತಿ, ಧಾರ್ಮಿಕ ಮತ್ತು ರಾಜಕೀಯ ದ್ವೇಷಕ್ಕೆ ಸಂಬಂಧಿಸಿದ ಪ್ರಕರಣಗಳ ವಿವರಗಳನ್ನೂ ಸಂಗ್ರಹಿಸಲಾಗುತ್ತಿದೆ. ಒಟ್ಟು 12 ಬಗೆಯ ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು, ಇವೆಲ್ಲವನ್ನೂ ನಿಗದಿತ ನಮೂನೆಯಲ್ಲಿ ತುಂಬಿ ಪ್ರತಿ ಸಂಜೆ 7 ಗಂಟೆಗೆ ಸಂಬಂಧಪಟ್ಟ ಸ್ಟೇಷನ್ ಹೌಸ್ ಆಫೀಸರ್ (SHO)ಗೆ ಸಲ್ಲಿಸಲಾಗುತ್ತದೆ. ಕೆಲ ದಿನಗಳಿಂದ ಈ ಪ್ರಕ್ರಿಯೆ ನಡೆಯುತ್ತಿದೆ.

ಚುನಾವಣೆಯಲ್ಲಿ ಬೆದರಿಕೆ ಹಾಕುವ ತಂತ್ರ: ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡಲು ಪೊಲೀಸ್ ಇಲಾಖೆಯು ಜನರ ಅತ್ಯಂತ ಸೂಕ್ಷ್ಮ ಮತ್ತು ವೈಯಕ್ತಿಕ ವಿವರಗಳನ್ನು ಸಂಗ್ರಹಿಸುತ್ತಿದೆ. ಈ ಮಾಹಿತಿಯನ್ನು ಬಳಸಿಕೊಂಡು ಚುನಾವಣೆಗೆ ಬೆದರಿಕೆ ಹಾಕಲು ಸರ್ಕಾರ ಯೋಚಿಸಿದಂತಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.

ಇದನ್ನೂ ಓದಿ: YSRCP regime.. ಆಂಧ್ರಕ್ಕೆ ಬಂದ ಹೊಸ ಕೈಗಾರಿಕೆಗಳಿಂತ ಬಿಟ್ಟು ಹೋದ ಕಂಪನಿಗಳೇ ಹೆಚ್ಚು..

ಅಮರಾವತಿ (ಆಂಧ್ರ ಪ್ರದೇಶ): ಸಾಮಾನ್ಯವಾಗಿ ಸರ್ಕಾರದ ಸಮೀಕ್ಷೆಗಳು ಎಂದರೆ ಮನೆಯಲ್ಲಿ ಇರುವವರ ವಿವರ ಅಥವಾ ಸರ್ಕಾರದಿಂದ ಕಲ್ಯಾಣ ಯೋಜನೆಗಳ ಲಾಭ ಪಡೆಯುತ್ತಿರುವವರ ಮಾಹಿತಿ ಸಂಗ್ರಹಿಸುವ ಅತ್ಯಂತ ಸಹಜ ಪ್ರಕ್ರಿಯೆಗಳು. ಆದರೆ, ಆಂಧ್ರ ಪ್ರದೇಶದ ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಕೆಲವು ಪ್ರಶ್ನೆಗಳು ವಿಚಿತ್ರವಾಗಿವೆ. ಅಂತಹ ಪ್ರಶ್ನೆಗಳಿಗೆ ಯಾರಾದರೂ ಉತ್ತರಿಸಬಹುದೇ ಎಂಬ ಪ್ರಶ್ನೆಯೂ ಉದ್ಭವಿಸುತ್ತಿದೆ.

ಹೌದು, ಆಂಧ್ರ ಪ್ರದೇಶದಲ್ಲಿ ಗ್ರಾಮ ಮತ್ತು ವಾರ್ಡ್‌ಗಳ ಸಚಿವಾಲಯದ ಸಿಬ್ಬಂದಿ ಮತ್ತು ಸ್ವಯಂಸೇವಕರನ್ನು ಬಳಸಿಕೊಂಡು ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು ಎಲ್ಲೆ ಮೀರುವಂತಿವೆ. ನಿಮ್ಮ ಮನೆಯಲ್ಲಿ ವಿವಾಹೇತರ ಸಂಬಂಧಗಳಿವೆಯೇ?, ಬಹು ಲೈಂಗಿಕ ಸಂಬಂಧಗಳನ್ನು ಹೊಂದಿರುವಿರಾ?, ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾಗಿದ್ದೀರಾ?, ಇದಕ್ಕೆ ಸಂಬಂಧಿಸಿದ ಹಳೆ ಪ್ರಕರಣಗಳೇನಾದರೂ ಇವೆಯೇ ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ.

ಮುಜುಗರಕ್ಕೀಡಾಗುವ ಮಹಿಳಾ ಪೊಲೀಸರು: 'ಅಪರಾಧಕ್ಕೆ ಕಾರಣವಾಗಬಹುದಾದ ಹಳೆ ದ್ವೇಷದ ವಿವರಗಳನ್ನು ಸಂಗ್ರಹಿಸುವ' ಹೆಸರಿನಲ್ಲಿ ಆಂಧ್ರ ಪ್ರದೇಶದ ಪೊಲೀಸ್ ಇಲಾಖೆಯು ಮನೆ, ಮನೆಗೆ ತೆರಳಿ ಇಂತಹ ಮುಜುಗರದ ಪ್ರಶ್ನೆಗಳನ್ನು ಕೇಳುತ್ತಿದೆ. ಮಹಿಳಾ ಪೊಲೀಸರು ಸ್ವಯಂಸೇವಕರೊಂದಿಗೆ ತಮ್ಮ ವ್ಯಾಪ್ತಿಯ ಎಲ್ಲ ಮನೆಗಳಿಗೆ ತೆರಳಿ ಈ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಜನರಿಗೆ ಇಂತಹ ಪ್ರಶ್ನೆಗಳನ್ನು ಕೇಳಲು ಸ್ವತಃ ಮಹಿಳಾ ಪೊಲೀಸರೇ ತೊಂದರೆ ಅನುಭವಿಸಿದರೆ, ಅನಿವಾರ್ಯವಾಗಿ ಪ್ರಸ್ತಾಪಿಸಿದಾಗ, ಕೆಲವೊಮ್ಮೆ ಆಯಾ ಮನೆಗಳ ಜನರಿಂದ ತೀವ್ರ ಪ್ರತಿರೋಧವನ್ನು ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಕಪ್ಪು ಸ್ಕಾರ್ಪ್​, ಮಾಸ್ಕ್​ ತೆಗೆಸಿದ ಪೊಲೀಸರು: ಸಿಎಂ ಜಗನ್​ ಕಾರ್ಯಕ್ರಮದಿಂದ ಹೊರನಡೆದ ಮಹಿಳೆಯರು

ಇದಲ್ಲದೇ ಆಸ್ತಿ, ಗಡಿ ವಿವಾದ, ಕೌಟುಂಬಿಕ ದೌರ್ಜನ್ಯ ಪ್ರಕರಣಗಳು, ಮದ್ಯ ಸೇವನೆ, ಕಿರುಕುಳ, ಬಯಲು ಮದ್ಯಪಾನ, ಜಾತಿ, ಧಾರ್ಮಿಕ ಮತ್ತು ರಾಜಕೀಯ ದ್ವೇಷಕ್ಕೆ ಸಂಬಂಧಿಸಿದ ಪ್ರಕರಣಗಳ ವಿವರಗಳನ್ನೂ ಸಂಗ್ರಹಿಸಲಾಗುತ್ತಿದೆ. ಒಟ್ಟು 12 ಬಗೆಯ ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು, ಇವೆಲ್ಲವನ್ನೂ ನಿಗದಿತ ನಮೂನೆಯಲ್ಲಿ ತುಂಬಿ ಪ್ರತಿ ಸಂಜೆ 7 ಗಂಟೆಗೆ ಸಂಬಂಧಪಟ್ಟ ಸ್ಟೇಷನ್ ಹೌಸ್ ಆಫೀಸರ್ (SHO)ಗೆ ಸಲ್ಲಿಸಲಾಗುತ್ತದೆ. ಕೆಲ ದಿನಗಳಿಂದ ಈ ಪ್ರಕ್ರಿಯೆ ನಡೆಯುತ್ತಿದೆ.

ಚುನಾವಣೆಯಲ್ಲಿ ಬೆದರಿಕೆ ಹಾಕುವ ತಂತ್ರ: ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡಲು ಪೊಲೀಸ್ ಇಲಾಖೆಯು ಜನರ ಅತ್ಯಂತ ಸೂಕ್ಷ್ಮ ಮತ್ತು ವೈಯಕ್ತಿಕ ವಿವರಗಳನ್ನು ಸಂಗ್ರಹಿಸುತ್ತಿದೆ. ಈ ಮಾಹಿತಿಯನ್ನು ಬಳಸಿಕೊಂಡು ಚುನಾವಣೆಗೆ ಬೆದರಿಕೆ ಹಾಕಲು ಸರ್ಕಾರ ಯೋಚಿಸಿದಂತಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.

ಇದನ್ನೂ ಓದಿ: YSRCP regime.. ಆಂಧ್ರಕ್ಕೆ ಬಂದ ಹೊಸ ಕೈಗಾರಿಕೆಗಳಿಂತ ಬಿಟ್ಟು ಹೋದ ಕಂಪನಿಗಳೇ ಹೆಚ್ಚು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.