ETV Bharat / bharat

ಬಿಜೆಪಿ ಐಟಿ ಸಂಯೋಜಕ ಅಮಿತ್​ ಮಾಳವೀಯಾ ವಿರುದ್ಧ ದೂರು ಸಲ್ಲಿಸಿದ ಡಿಎಂಕೆ ಲೀಗಲ್​ ವಿಂಗ್

author img

By ETV Bharat Karnataka Team

Published : Sep 5, 2023, 8:35 PM IST

DMK filed case against Amit Malaviya : ಉದಯನಿಧಿ ಸ್ಟಾಲಿನ್​ ವಿರುದ್ಧ ಬಿಜೆಪಿ ಐಟಿ ವಿಭಾಗದ ಸಂಯೋಜಕ ಅಮಿತ್​ ಮಾಳವೀಯ ಮಾನಹಾನಿಕರ ಟ್ವೀಟ್​ ಮಾಡಿದ್ದಾರೆ ಎಂದು ಡಿಎಂಕೆ ಆರೋಪಿಸಿದ್ದು, ಈ ಸಂಬಂಧ ದೂರು ನೀಡಿದೆ.

DMK legal wing filed complaint against BJP IT coordinator Amit Malviya
ಬಿಜೆಪಿ ಐಟಿ ಸಂಯೋಜಕ ಅಮಿತ್​ ಮಾಳವೀಯ ವಿರುದ್ಧ ದೂರು ಸಲ್ಲಿಸಿದ ಡಿಎಂಕೆ ಲೀಗಲ್​ ವಿಂಗ್

ಮಧುರೈ: ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್​ ಅವರ ಪುತ್ರ ಸಚಿವ ಉದಯನಿಧಿ ಸ್ಟಾಲಿನ್​ ಅವರ ವಿರುದ್ಧ ಬಿಜೆಪಿ ಐಟಿ ಸಂಯೋಜಕ ಅಮಿತ್​ ಮಾಳವೀಯ ಮಾನಹಾನಿಕರ ಟ್ವೀಟ್​ ಮಾಡಿದ್ದಾರೆ ಎಂದು ಆರೋಪಿಸಿ, ಡಿಎಂಕೆ ಲೀಗಲ್​ ವಿಂಗ್​ ದೂರು ದಾಖಲಿಸಿದೆ.

ಮಧುರೈ ನಗರದ ಡಿಎಂಕೆ ಲೀಗಲ್​ ವಿಂಗ್​ನ ಜಿಲ್ಲಾ ಸಂಘಟಕರು ಮಧುರೈ ನಗರ ಪೊಲೀಸ್​ ಕಮಿಷನರ್​ಗೆ ಔಪಚಾರಿಕ ದೂರನ್ನು ಸಲ್ಲಿಸಿದ್ದಾರೆ. ದೂರಿನಲ್ಲಿ ಸಚಿವ ಉಧಯನಿಧಿ ಸ್ಟಾಲಿನ್​ ಅವರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಟ್ವೀಟ್​ ಮಾಡಿರುವ ಬಿಜೆಪಿ ಈಟಿ ಸಂಯೋಜಕ ಅಮಿತ್​ ಮಾಳವೀಯ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.

ಸೆಪ್ಟೆಂಬರ್​ 3 ರಂದು ಸಚಿವ ಉದಯನಿಧಿ ಅವರ ವಿಡಿಯೋವನ್ನು ಹಂಚಿಕೊಂಡ ಅಮಿತ್​ ಮಾಳವೀಯ ಅವರು, ಉದಯನಿಧಿ ಸ್ಟಾಲಿನ್​ ಅವರು ಸನಾತನ ಧರ್ಮವನ್ನು ಅನುಸರಿಸುವ ಭಾರತದ ಶೇ 80ರಷ್ಟು ಜನರ ನರಮೇಧಕ್ಕೆ ಕರೆ ನೀಡಿದ್ದಾರೆ ಎಂದು ಆರೋಪಿಸಿ ಟ್ವೀಟ್​ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸೆಪ್ಟೆಂಬರ್​ 2 ರಂದು ಸಚಿವ ಉದಯನಿಧಿ ಸ್ಟಾಲಿನ್​ ಪ್ರಗತಿಪರ ಲೇಖಕರ ಸಮಾರಂಭವೊಂದರಲ್ಲಿ ಭಾಷಣ ಮಾಡುವ ವೇಳೆ, ಸನಾತನ ಧರ್ಮವನ್ನು ಸಾಮಾಜಿಕ ಅನಿಷ್ಟ ಎಂದು ಉಲ್ಲೇಖಿಸಿ, ಅದನ್ನು ಕೋವಿಡ್​ -19, ಡೆಂಘೀ ಹಾಗೂ ಮಲೇರಿಯಾದಂತಹ ಕಾಯಿಲೆಗಳಿಗೆ ಹೋಲಿಸಿ, ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿದಲ್ಲಿಂದ ಈ ವಿವಾದ ಪ್ರಾರಂಭವಾಗಿದೆ. ಉದಯನಿಧಿ ಭಾಷಣದ ವಿಡಿಯೋವನ್ನು ಅಮಿತ್​ ಮಾಳವೀಯ ಅವರು ಹಂಚಿಕೊಂಡು ಸಚಿವರು ಸನಾತನ ಧರ್ಮದ ಅನುಯಾಯಿಗಳ ನರಮೇಧವನ್ನು ಸಮರ್ಥಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಮಾಳವೀಯ ಟ್ವೀಟ್​ಗೆ ಪ್ರತಿಕ್ರಿಯಿಸಿದ ಸಚಿವ ಉದಯನಿಧಿ, ನಾನು ಎಂದಿಗೂ ನರಮೇಧಕ್ಕೆ ಕರೆ ನೀಡಿಲ್ಲ. ಸನಾತನ ಧರ್ಮ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಜನರನ್ನು ವಿಭಜನೆ ಮಾಡುತ್ತದೆ ಎಂದ ಒತ್ತಿ ಹೇಳಿದ್ದರು. ತಂತೈ ಪೆರಿಯಾರ್​ ಹಾಗೂ ಡಾ. ಅಂಬೇಡ್ಕರ್​ ಅವರ ಬರಹಗಳ ಆಧಾರದ ಮೇಲೆ ಆಳವಾದ ಸಂಶೋಧನೆಗೆ ಒತ್ತಾಯಿಸಿ, ಮಾನವೀಯತೆ ಹಾಗೂ ಮಾನವ ಸಮಾನತೆಯ ಪರವಾಗಿ ಅದನ್ನು ಬೇರು ಸಹಿತ ಕಿತ್ತು ಹಾಕಲು ಕರೆ ನೀಡಿದ್ದರು.

ತಮ್ಮ ಹೇಳಿಕೆಯ ಬಗ್ಗೆ ಉದಯನಿಧಿ ಸ್ಟಾಲಿನ್​ ಅವರು ಸ್ಪಷ್ಟನೆ ನೀಡಿದರೂ ಅಮಿತ್​ ಮಾಳವೀಯ ಅವರು ಮಾತ್ರ ಕ್ಷಮೆ ಯಾಚನೆ ಅಥವಾ ತಮ್ಮ ಹೇಳಿಕೆಯನ್ನು ಹಿಂಪಡೆಯಲಿಲ್ಲ. ಹಾಗಾಗಿ ಡಿಎಂಕೆ ಲೀಗಲ್​ ವಿಂಗ್​ ಮಾಳವೀಯ ಅವರ ಹೇಳಿಕೆಯು ಸಮಾಜದೊಳಗೆ ದ್ವೇಷ ಹಾಗೂ ಕೋಮು ಸೌಹಾರ್ದತೆ ಕೆಡಿಸಲು ಪ್ರಚೋದನೆ ನೀಡುವ ಉದ್ದೇಶದಿಂದ ಮಾಡಲ್ಪಟ್ಟಿದೆ ಎಂದು ದೂರಿದೆ.

ಇದನ್ನೂ ಓದಿ: 'ಎಲ್ಲಿ ಬೇಕಾದರೂ ಅದನ್ನೇ ಹೇಳುವೆ'.. ಸನಾತನ ಧರ್ಮ ವಿವಾದಿತ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡ ಉದಯನಿಧಿ ಸ್ಟಾಲಿನ್​

ಮಧುರೈ: ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್​ ಅವರ ಪುತ್ರ ಸಚಿವ ಉದಯನಿಧಿ ಸ್ಟಾಲಿನ್​ ಅವರ ವಿರುದ್ಧ ಬಿಜೆಪಿ ಐಟಿ ಸಂಯೋಜಕ ಅಮಿತ್​ ಮಾಳವೀಯ ಮಾನಹಾನಿಕರ ಟ್ವೀಟ್​ ಮಾಡಿದ್ದಾರೆ ಎಂದು ಆರೋಪಿಸಿ, ಡಿಎಂಕೆ ಲೀಗಲ್​ ವಿಂಗ್​ ದೂರು ದಾಖಲಿಸಿದೆ.

ಮಧುರೈ ನಗರದ ಡಿಎಂಕೆ ಲೀಗಲ್​ ವಿಂಗ್​ನ ಜಿಲ್ಲಾ ಸಂಘಟಕರು ಮಧುರೈ ನಗರ ಪೊಲೀಸ್​ ಕಮಿಷನರ್​ಗೆ ಔಪಚಾರಿಕ ದೂರನ್ನು ಸಲ್ಲಿಸಿದ್ದಾರೆ. ದೂರಿನಲ್ಲಿ ಸಚಿವ ಉಧಯನಿಧಿ ಸ್ಟಾಲಿನ್​ ಅವರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಟ್ವೀಟ್​ ಮಾಡಿರುವ ಬಿಜೆಪಿ ಈಟಿ ಸಂಯೋಜಕ ಅಮಿತ್​ ಮಾಳವೀಯ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.

ಸೆಪ್ಟೆಂಬರ್​ 3 ರಂದು ಸಚಿವ ಉದಯನಿಧಿ ಅವರ ವಿಡಿಯೋವನ್ನು ಹಂಚಿಕೊಂಡ ಅಮಿತ್​ ಮಾಳವೀಯ ಅವರು, ಉದಯನಿಧಿ ಸ್ಟಾಲಿನ್​ ಅವರು ಸನಾತನ ಧರ್ಮವನ್ನು ಅನುಸರಿಸುವ ಭಾರತದ ಶೇ 80ರಷ್ಟು ಜನರ ನರಮೇಧಕ್ಕೆ ಕರೆ ನೀಡಿದ್ದಾರೆ ಎಂದು ಆರೋಪಿಸಿ ಟ್ವೀಟ್​ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸೆಪ್ಟೆಂಬರ್​ 2 ರಂದು ಸಚಿವ ಉದಯನಿಧಿ ಸ್ಟಾಲಿನ್​ ಪ್ರಗತಿಪರ ಲೇಖಕರ ಸಮಾರಂಭವೊಂದರಲ್ಲಿ ಭಾಷಣ ಮಾಡುವ ವೇಳೆ, ಸನಾತನ ಧರ್ಮವನ್ನು ಸಾಮಾಜಿಕ ಅನಿಷ್ಟ ಎಂದು ಉಲ್ಲೇಖಿಸಿ, ಅದನ್ನು ಕೋವಿಡ್​ -19, ಡೆಂಘೀ ಹಾಗೂ ಮಲೇರಿಯಾದಂತಹ ಕಾಯಿಲೆಗಳಿಗೆ ಹೋಲಿಸಿ, ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿದಲ್ಲಿಂದ ಈ ವಿವಾದ ಪ್ರಾರಂಭವಾಗಿದೆ. ಉದಯನಿಧಿ ಭಾಷಣದ ವಿಡಿಯೋವನ್ನು ಅಮಿತ್​ ಮಾಳವೀಯ ಅವರು ಹಂಚಿಕೊಂಡು ಸಚಿವರು ಸನಾತನ ಧರ್ಮದ ಅನುಯಾಯಿಗಳ ನರಮೇಧವನ್ನು ಸಮರ್ಥಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಮಾಳವೀಯ ಟ್ವೀಟ್​ಗೆ ಪ್ರತಿಕ್ರಿಯಿಸಿದ ಸಚಿವ ಉದಯನಿಧಿ, ನಾನು ಎಂದಿಗೂ ನರಮೇಧಕ್ಕೆ ಕರೆ ನೀಡಿಲ್ಲ. ಸನಾತನ ಧರ್ಮ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಜನರನ್ನು ವಿಭಜನೆ ಮಾಡುತ್ತದೆ ಎಂದ ಒತ್ತಿ ಹೇಳಿದ್ದರು. ತಂತೈ ಪೆರಿಯಾರ್​ ಹಾಗೂ ಡಾ. ಅಂಬೇಡ್ಕರ್​ ಅವರ ಬರಹಗಳ ಆಧಾರದ ಮೇಲೆ ಆಳವಾದ ಸಂಶೋಧನೆಗೆ ಒತ್ತಾಯಿಸಿ, ಮಾನವೀಯತೆ ಹಾಗೂ ಮಾನವ ಸಮಾನತೆಯ ಪರವಾಗಿ ಅದನ್ನು ಬೇರು ಸಹಿತ ಕಿತ್ತು ಹಾಕಲು ಕರೆ ನೀಡಿದ್ದರು.

ತಮ್ಮ ಹೇಳಿಕೆಯ ಬಗ್ಗೆ ಉದಯನಿಧಿ ಸ್ಟಾಲಿನ್​ ಅವರು ಸ್ಪಷ್ಟನೆ ನೀಡಿದರೂ ಅಮಿತ್​ ಮಾಳವೀಯ ಅವರು ಮಾತ್ರ ಕ್ಷಮೆ ಯಾಚನೆ ಅಥವಾ ತಮ್ಮ ಹೇಳಿಕೆಯನ್ನು ಹಿಂಪಡೆಯಲಿಲ್ಲ. ಹಾಗಾಗಿ ಡಿಎಂಕೆ ಲೀಗಲ್​ ವಿಂಗ್​ ಮಾಳವೀಯ ಅವರ ಹೇಳಿಕೆಯು ಸಮಾಜದೊಳಗೆ ದ್ವೇಷ ಹಾಗೂ ಕೋಮು ಸೌಹಾರ್ದತೆ ಕೆಡಿಸಲು ಪ್ರಚೋದನೆ ನೀಡುವ ಉದ್ದೇಶದಿಂದ ಮಾಡಲ್ಪಟ್ಟಿದೆ ಎಂದು ದೂರಿದೆ.

ಇದನ್ನೂ ಓದಿ: 'ಎಲ್ಲಿ ಬೇಕಾದರೂ ಅದನ್ನೇ ಹೇಳುವೆ'.. ಸನಾತನ ಧರ್ಮ ವಿವಾದಿತ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡ ಉದಯನಿಧಿ ಸ್ಟಾಲಿನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.