ETV Bharat / bharat

ಶಿರಡಿ ಸಾಯಿಬಾಬಾ: 15 ದಿನದಲ್ಲಿ ಹರಿದು ಬಂತು ಕೋಟಿ ಕೋಟಿ ರೂಪಾಯಿ ದೇಣಿಗೆ

author img

By

Published : Nov 10, 2022, 7:22 PM IST

ಹದಿನೈದು ದಿನಗಳಲ್ಲಿ ಭಕ್ತರು ಶಿರಡಿ ಸಾಯಿಬಾಬಾಗೆ 17 ಕೋಟಿ 77 ಲಕ್ಷ 53 ಸಾವಿರ ದೇಣಿಗೆ ನೀಡಿದ್ದಾರೆ ಎಂದು ಸಂಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಗ್ಯಶ್ರೀ ಬನಾಯತ್ ಮಾಹಿತಿ ನೀಡಿದ್ದಾರೆ.

ಶಿರಡಿ ಸಾಯಿಬಾಬಾ
ಶಿರಡಿ ಸಾಯಿಬಾಬಾ

ಶಿರಡಿ (ಮಹಾರಾಷ್ಟ್ರ): ಪ್ರತಿ ವರ್ಷ ಎರಡೂವರೆ ಕೋಟಿಗೂ ಹೆಚ್ಚು ಭಕ್ತರು ಸಾಯಿಬಾಬಾ ದರ್ಶನ ಪಡೆಯಲು ಆಗಮಿಸುತ್ತಾರೆ. ದೀಪಾವಳಿ ಮತ್ತು ರಜಾ ದಿನಗಳಲ್ಲಿ ದಾಖಲೆಯ ಜನಸಂದಣಿ ಇರುತ್ತದೆ. ಈ ವರ್ಷ ಅಕ್ಟೋಬರ್ 20 ರಿಂದ ನವೆಂಬರ್ 5 ರವರೆಗೆ ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಬಂದಿದ್ದಾರೆ.

ಈ ಹದಿನೈದು ದಿನಗಳಲ್ಲಿ ಭಕ್ತರು ಸಾಯಿಬಾಬಾಗೆ 17 ಕೋಟಿ 77 ಲಕ್ಷ 53 ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಸಂಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಗ್ಯಶ್ರೀ ಬನಾಯತ್ ಮಾಹಿತಿ ನೀಡಿದ್ದಾರೆ.

ದೀಪಾವಳಿಯ ಸಂದರ್ಭದಲ್ಲಿ ಅನಂತ್ ಅಂಬಾನಿ ಶಿರಡಿಯಲ್ಲಿರುವ ಸಾಯಿಬಾಬಾರವರ ಸಮಾಧಿಗೆ ಭೇಟಿ ನೀಡಿದ್ದರು. ಈ ವೇಳೆ, ಅನಂತ್ ಅಂಬಾನಿ ಸಾಯಿಬಾಬಾ ಸಂಸ್ಥಾನಕ್ಕೆ 1 ಕೋಟಿ 51 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಸಾಯಿ ಸಂಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಬನಾಯತ್ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: 100ಕ್ಕೂ ಹೆಚ್ಚು ಕಾರ್ಮಿಕರ ಕರೆದೊಯ್ಯುತ್ತಿದ್ದ ಟ್ರಕ್ ಸೀಜ್: ಹಸಿವೆಯಿಂದ ಬಳಲಿದ ಮಕ್ಕಳು, ಮಹಿಳೆಯರು

ಶಿರಡಿ (ಮಹಾರಾಷ್ಟ್ರ): ಪ್ರತಿ ವರ್ಷ ಎರಡೂವರೆ ಕೋಟಿಗೂ ಹೆಚ್ಚು ಭಕ್ತರು ಸಾಯಿಬಾಬಾ ದರ್ಶನ ಪಡೆಯಲು ಆಗಮಿಸುತ್ತಾರೆ. ದೀಪಾವಳಿ ಮತ್ತು ರಜಾ ದಿನಗಳಲ್ಲಿ ದಾಖಲೆಯ ಜನಸಂದಣಿ ಇರುತ್ತದೆ. ಈ ವರ್ಷ ಅಕ್ಟೋಬರ್ 20 ರಿಂದ ನವೆಂಬರ್ 5 ರವರೆಗೆ ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಬಂದಿದ್ದಾರೆ.

ಈ ಹದಿನೈದು ದಿನಗಳಲ್ಲಿ ಭಕ್ತರು ಸಾಯಿಬಾಬಾಗೆ 17 ಕೋಟಿ 77 ಲಕ್ಷ 53 ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಸಂಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಗ್ಯಶ್ರೀ ಬನಾಯತ್ ಮಾಹಿತಿ ನೀಡಿದ್ದಾರೆ.

ದೀಪಾವಳಿಯ ಸಂದರ್ಭದಲ್ಲಿ ಅನಂತ್ ಅಂಬಾನಿ ಶಿರಡಿಯಲ್ಲಿರುವ ಸಾಯಿಬಾಬಾರವರ ಸಮಾಧಿಗೆ ಭೇಟಿ ನೀಡಿದ್ದರು. ಈ ವೇಳೆ, ಅನಂತ್ ಅಂಬಾನಿ ಸಾಯಿಬಾಬಾ ಸಂಸ್ಥಾನಕ್ಕೆ 1 ಕೋಟಿ 51 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಸಾಯಿ ಸಂಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಬನಾಯತ್ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: 100ಕ್ಕೂ ಹೆಚ್ಚು ಕಾರ್ಮಿಕರ ಕರೆದೊಯ್ಯುತ್ತಿದ್ದ ಟ್ರಕ್ ಸೀಜ್: ಹಸಿವೆಯಿಂದ ಬಳಲಿದ ಮಕ್ಕಳು, ಮಹಿಳೆಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.