ETV Bharat / bharat

ಕೋವಿಡ್ ಲಸಿಕೆ ಪಡೆದ 2 ವಾರಗಳಲ್ಲಿ ಶರೀರದಲ್ಲಿ ಪ್ರತಿರೋಧಕ ಶಕ್ತಿ ಬೆಳವಣಿಗೆ

author img

By

Published : May 20, 2021, 8:54 PM IST

ಲಸಿಕೆಗಳು ಮಾನವನ ದೇಹದಲ್ಲಿ ಪ್ರತಿಕಾಯಗಳನ್ನು ರಚಿಸಲು ಪ್ರಾರಂಭಿಸಲು ಕನಿಷ್ಠ ಎರಡು ಮೂರು ವಾರಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುವುದು ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆಯನ್ನು ಅವಲಂಬಿಸಿರುತ್ತದೆ.

developing-antibodies-also-depend-on-immune-system-of-an-individual-expert
developing-antibodies-also-depend-on-immune-system-of-an-individual-expert

ನವದೆಹಲಿ: ಭಾರತದಲ್ಲಿ ಲಸಿಕಾ ಪ್ರಯೋಗದ ನಂತರವೂ ಕೊರೊನಾ ಸೋಂಕಿಗೆ ಜನರು ಒಳಗಾಗುತ್ತಿದ್ದಾರೆ ಎಂಬ ವರದಿಗಳು ಬರುತ್ತಿದ್ದು, ಇದು ರಾಷ್ಟ್ರದ ಆರೋಗ್ಯ ವ್ಯವಸ್ಥೆಗೆ ಪ್ರಮುಖ ಕಳವಳಕಾರಿ ವಿಷಯವಾಗಿ ಪರಿಣಮಿಸಿದೆ.

ತಜ್ಞರ ಗುಂಪುಗಳ ಅಧ್ಯಯನ ಮತ್ತು ಪರೀಕ್ಷೆಯ ನಂತರ ಭಾರತದ ಅತ್ಯುನ್ನತ ಔಷಧ ನಿಯಂತ್ರಕ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಕೋವಾಕ್ಸಿನ್ (ಭಾರತ್ ಬಯೋಟೆಕ್) ಮತ್ತು ಕೋವಿಶೀಲ್ಡ್ (ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ) ಎರಡೂ ಲಸಿಕೆಗಳಿಗೆ ತುರ್ತು ಬಳಕೆಯ ಅಧಿಕಾರವನ್ನು ನೀಡಿದೆ. ಎರಡನೇ ಡೋಸ್ ಪಡೆದ ಎರಡು ವಾರಗಳ ನಂತರ ಸಾಮಾನ್ಯವಾಗಿ ಪ್ರತಿಕಾಯಗಳ ರಕ್ಷಣಾತ್ಮಕ ಮಟ್ಟಗಳು ಬೆಳೆಯುತ್ತವೆ ಎಂದು ಆರೋಗ್ಯ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ, ಲಸಿಕೆಗಳು ಮೊದಲ ಡೋಸ್ ತೆಗೆದುಕೊಂಡ ನಂತರ ಮಾನವ ದೇಹದಲ್ಲಿ ಪ್ರತಿಕಾಯಗಳನ್ನು ರಚಿಸಲು ಪ್ರಾರಂಭಿಸಲು ಕನಿಷ್ಠ ಎರಡು ಮೂರು ವಾರಗಳನ್ನು ತೆಗೆದುಕೊಳ್ಳುತ್ತದೆಯಂತೆ. ಅದರ ನಂತರ, ಇದು ಪ್ರತಿಕಾಯಗಳನ್ನು ರಚಿಸುತ್ತಲೇ ಇರುತ್ತದೆ. ಇನ್ನು ಈ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುವುದು ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಅವಲಂಬಿಸಿರುತ್ತದೆ ಎಂದು ಐಸಿಎಂಆರ್ ಸಲಹೆಗಾರ ಡಾ. ಸುನೀಲಾ ಗರ್ಗ್ ತಿಳಿಸಿದ್ದಾರೆ.

ಕೊವಾಕ್ಸಿನ್‌ನ ಎರಡು ಪ್ರಮಾಣಗಳ ನಡುವಿನ ಅಂತರವು ಆರು ವಾರಗಳಾಗಿದ್ದು, ಆದರೆ, ಸರ್ಕಾರವು ಇತ್ತೀಚೆಗೆ ಎರಡು ಡೋಸ್ ಕೋವಿಶೀಲ್ಡ್ ಅವಧಿಯನ್ನು 12 ವಾರಗಳವರೆಗೆ ವಿಸ್ತರಿಸಿದೆ. ಇತ್ತೀಚಿನ ಅಭಿವೃದ್ಧಿ ಮತ್ತು ಅಧ್ಯಯನಗಳ ನಂತರ ಕೋವಿಶೀಲ್ಡ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಡಾ. ಗರ್ಗ್​ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ನೈಜ ಸಾಕ್ಷ್ಯಗಳ ಆಧಾರದ ಮೇಲೆ ವಿಶೇಷವಾಗಿ ಯುಕೆಯ ಅಭಿಪ್ರಾಯಂತೆ, ಎರಡು ಡೋಸ್ ಕೋವಿಶೀಲ್ಡ್ ಲಸಿಕೆಗಳ ನಡುವೆ ಡೋಸಿಂಗ್ ಮಧ್ಯಂತರವನ್ನು 12-16 ವಾರಗಳಿಗೆ ಹೆಚ್ಚಿಸಲು ಕೋವಿಡ್​ ವರ್ಕಿಂಗ್​ ಗ್ರೂಪ್​ ಒಪ್ಪಿಕೊಂಡಿತ್ತು. ಕೊವಾಕ್ಸಿನ್ ಲಸಿಕೆ ಪ್ರಮಾಣಗಳ ಮಧ್ಯಂತರದಲ್ಲಿ ಯಾವುದೇ ಬದಲಾವಣೆಯನ್ನು ಶಿಫಾರಸು ಮಾಡಲಾಗಿಲ್ಲ ಎಂದು ಅವರು ಹೇಳಿದರು.

ಎರಡೂ ಲಸಿಕೆಗಳು SARS-CoV-2 ವಿರುದ್ಧ ಹೋರಾಡುವ ಪರಿಣಾಮಕಾರಿತ್ವವನ್ನು ಹೊಂದಿವೆ. ಹಾಗೆ ಎರಡು ಲಸಿಕೆಗಳೂ 70-81 ಪ್ರತಿಶತದಷ್ಟು ಪರಿಣಾಮಕಾರಿತ್ವವನ್ನು ಹೊಂದಿವೆ ಎಂದಿದ್ದಾರೆ.

80 ಪ್ರತಿಶತದಷ್ಟು ಹೆಚ್ಚಿನ ಪರಿಣಾಮಕಾರಿ:

ಅಂಕಿ ಅಂಶವನ್ನು ಉಲ್ಲೇಖಿಸಿದ ಡಾ. ಗರ್ಗ್, ಅಸ್ಟ್ರಾಜೆನೆಕಾದ ಲಸಿಕೆ, ವ್ಯಾಕ್ಸ್‌ಜೆವ್ರಿಯಾ 12 ವಾರಗಳ ಅಥವಾ ಅದಕ್ಕಿಂತ ಹೆಚ್ಚಿನ ಮಧ್ಯಂತರಕ್ಕೆ 80 ಪ್ರತಿಶತದಷ್ಟು ಹೆಚ್ಚಿನ ಪರಿಣಾಮಕಾರಿ ದರವನ್ನು ತೋರಿಸುತ್ತದೆ. ಎರಡು ಪ್ರಮಾಣದ ಲಸಿಕೆಗಳನ್ನು ಪಡೆದ ನಂತರವೂ ಜನರು ಸೋಂಕಿಗೆ ಒಳಗಾಗುವ ಹಲವಾರು ವರದಿಗಳು ಮುಂಚೂಣಿಗೆ ಬರುತ್ತಿವೆ. ಕೆಲವು ಸಂದರ್ಭಗಳಲ್ಲಿ, ಸಾವು ಸಹ ಸಂಭವಿಸಿದೆ ಎಂದು ಮಾಹಿತಿ ನೀಡಿದರು.

ಇತ್ತೀಚೆಗೆ ಹೃದ್ರೋಗ ತಜ್ಞ ಡಾ.ಕೆ.ಕೆ. ಅಗ್ರವಾಲ್ ಅವರು ಕೂಡ ಕೋವಿಡ್ -19 ಸೋಂಕಿಗೆ ಒಳಗಾಗಿ ನಿಧನರಾದರು. ಅವರು ಕೂಡ ಎರಡೂ ಲಸಿಕೆಗಳನ್ನು ತೆಗೆದುಕೊಂಡಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ, ಡಾ. ಅಗ್ರವಾಲ್ ಅವರು ಶ್ವಾಸಕೋಶದ ಎಂಬಾಲಿಸಮ್ ಸಮಸ್ಯೆ ಹೊಂದಿದ್ದರು. ಆದಾಗ್ಯೂ, ಅವರ ಡೇಟಾದ ವೈಜ್ಞಾನಿಕ ವಿಶ್ಲೇಷಣೆಯು ಸಾವಿಗೆ ನಿಖರವಾಗಿ ಕಾರಣವನ್ನು ತಿಳಿಸಲು ಸಾಧ್ಯವಾಯಿತು ಎಂದು ಡಾ. ಗರ್ಗ್ ಹೇಳಿದರು.

ಸೋಂಕುಗಳ ಶೇಕಡಾವಾರು ಪ್ರಮಾಣವು ತುಂಬಾ ಕಡಿಮೆಯಾಗಿದೆ:

ಎರಡು ಡೋಸ್ ಲಸಿಕೆಗಳನ್ನು ತೆಗೆದುಕೊಂಡ ನಂತರವೂ ವೈದ್ಯರು ಸೋಂಕಿಗೆ ಒಳಗಾಗುವ ವಿಷಯದ ಬಗ್ಗೆ ಮಾತನಾಡಿದ ಡಾ. ಗರ್ಗ್, ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಕೋವಿಡ್ ರೋಗಿಗಳೊಂದಿಗೆ ಹೆಚ್ಚು ಒಡನಾಟ ಇರುವುದರಿಂದ ಅವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ ಅವರು, ಸಾಮಾನ್ಯ ಜನರು ಕೋವಿಡ್ ಸಂಬಂಧ ಸೂಕ್ತ ನಡವಳಿಕೆಯನ್ನು ಅನುಸರಿಸುತ್ತಿದ್ದರೆ ಅವರಿಗೆ ಸೋಂಕುಗಳು ಬರುವುದಿಲ್ಲ ಎಂದು ಹೇಳಿದರು.

ಲಸಿಕೆ ಹಾಕಿದ ನಂತರವೂ ಕೊರೊನಾ ಪಾಸಿಟಿವ್​ ಆಗುವವರ ಮಾಹಿತಿ ಸಂಗ್ರಹಿಸುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ವಿಷಯದ ಬಗ್ಗೆ ಭಾರತದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯಾದ ಐಸಿಎಂಆರ್ ಸಹ ನಿಕಟ ವೀಕ್ಷಣೆ ನಡೆಸುತ್ತಿದೆ. ಜೊತೆಗೆ ಇಂಥ ಸೋಂಕುಗಳ ಶೇಕಡಾವಾರು ಪ್ರಮಾಣವು ತುಂಬಾ ಕಡಿಮೆಯಾಗಿದೆ (0.1 ಶೇಕಡಾ) ಎಂದು ಸರ್ಕಾರವೇ ಹೇಳಿದೆ. ವ್ಯಾಕ್ಸಿನೇಷನ್ ನಂತರ ಸೋಂಕಿನ ಶೇಕಡಾವಾರು ಕಡಿಮೆಯಾಗಿದ್ದು, ನಂತರ ನಮಗೆ ಸೋಂಕು ತಗುಲಿದರೂ, ಯಾವುದೇ ತೀವ್ರತೆ ಇರುವುದಿಲ್ಲ ಎಂದು ಭಾರತದ ರಾಷ್ಟ್ರೀಯ ಕಾರ್ಯಪಡೆಯ ಅಧ್ಯಕ್ಷ ಮತ್ತು ನಿತಿ ಆಯೋಗದ ಸದಸ್ಯ ಡಾ.ವಿ.ಕೆ. ಪಾಲ್​ ಹೇಳಿದ್ದಾರೆ.

ಐಸಿಎಂಆರ್ ಅಭಿವೃದ್ಧಿಯ ಬಗ್ಗೆ ನಿಗಾ ಇಡುತ್ತಿದೆ. ಇದೊಂದು ಕ್ರಿಯಾತ್ಮಕ ಪರಿಸ್ಥಿತಿಯಾಗಿದ್ದು, ಅದನ್ನು ಎಚ್ಚರಿಕೆಯಿಂದ ನೋಡಬೇಕು ಎಂದು ಡಾ ಪಾಲ್ ತಿಳಿಸಿದ್ದಾರೆ.

ಲಸಿಕೆ ಪಡೆದರೂ ವೈದ್ಯರಿಗೆ ಕೊರೊನಾ :

ಇನ್ನು ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) 40 ವೈದ್ಯರಿಗೆ ಕೊರೊನಾ ವಕ್ಕರಿಸಿದೆ. ಹಾಗೆ ಹೆಚ್ಚಿನವರು ಲಸಿಕೆಯ ಎರಡೂ ಡೋಸ್​ನ್ನು ತೆಗೆದುಕೊಂಡರೂ ಸಹ ಕೊರೊನಾ ವಕ್ಕರಿಸಿದೆ. ನಂತರ ಬಿಹಾರದಲ್ಲಿಯೂ 26 ಕ್ಕೂ ಹೆಚ್ಚು ವೈದ್ಯರಿಗೆ ಕೊರೊನಾ ಪಾಸಿಟಿವ್​ ಬಂದಿದೆ ಎಂದು ವರದಿಯಾಗಿದೆ.

ಯಾವುದೇ ಲಸಿಕೆ ಶೇಕಡಾ 100 ರಷ್ಟು ಫಲಿತಾಂಶ ನೀಡುವುದಿಲ್ಲ. ವ್ಯಾಕ್ಸಿನೇಷನ್ ನಂತರ ಸೋಂಕು ತಗಲುವುದು ಸಾಮಾನ್ಯ. ಆದಾಗ್ಯೂ, ಲಸಿಕೆಗಳು ವ್ಯಕ್ತಿಗಳನ್ನು ರೋಗದಿಂದ ರಕ್ಷಿಸುತ್ತವೆ. ವ್ಯಾಕ್ಸಿನೇಷನ್ ನಂತರ ಯಾವುದೇ ಸೋಂಕು ಸಂಭವಿಸಿದಲ್ಲಿ, ತೀವ್ರತೆಯು ತುಂಬಾ ಕಡಿಮೆ ಇರುತ್ತದೆ ಎಂದು ಐಸಿಎಂಆರ್ ವಕ್ತಾರ ಡಾ.ಲೋಕೇಶ್ ತಿಳಿಸಿದ್ದಾರೆ.

ಪ್ರಸ್ತುತ, ಲಸಿಕೆಗಳನ್ನು ನಾವು ಏಕೈಕ ಅಸ್ತ್ರವಾಗಿ ಹೊಂದಿದ್ದೇವೆ. ನಮ್ಮ ಲಸಿಕೆಗಳ ಪರಿಣಾಮಕಾರಿತ್ವವು ತುಂಬಾ ಒಳ್ಳೆಯದು. ಈ ಲಸಿಕೆಗಳು ಸೋಂಕು ತೀವ್ರವಾಗಿರಲು ಅನುವು ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾರೆ.

ನವದೆಹಲಿ: ಭಾರತದಲ್ಲಿ ಲಸಿಕಾ ಪ್ರಯೋಗದ ನಂತರವೂ ಕೊರೊನಾ ಸೋಂಕಿಗೆ ಜನರು ಒಳಗಾಗುತ್ತಿದ್ದಾರೆ ಎಂಬ ವರದಿಗಳು ಬರುತ್ತಿದ್ದು, ಇದು ರಾಷ್ಟ್ರದ ಆರೋಗ್ಯ ವ್ಯವಸ್ಥೆಗೆ ಪ್ರಮುಖ ಕಳವಳಕಾರಿ ವಿಷಯವಾಗಿ ಪರಿಣಮಿಸಿದೆ.

ತಜ್ಞರ ಗುಂಪುಗಳ ಅಧ್ಯಯನ ಮತ್ತು ಪರೀಕ್ಷೆಯ ನಂತರ ಭಾರತದ ಅತ್ಯುನ್ನತ ಔಷಧ ನಿಯಂತ್ರಕ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಕೋವಾಕ್ಸಿನ್ (ಭಾರತ್ ಬಯೋಟೆಕ್) ಮತ್ತು ಕೋವಿಶೀಲ್ಡ್ (ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ) ಎರಡೂ ಲಸಿಕೆಗಳಿಗೆ ತುರ್ತು ಬಳಕೆಯ ಅಧಿಕಾರವನ್ನು ನೀಡಿದೆ. ಎರಡನೇ ಡೋಸ್ ಪಡೆದ ಎರಡು ವಾರಗಳ ನಂತರ ಸಾಮಾನ್ಯವಾಗಿ ಪ್ರತಿಕಾಯಗಳ ರಕ್ಷಣಾತ್ಮಕ ಮಟ್ಟಗಳು ಬೆಳೆಯುತ್ತವೆ ಎಂದು ಆರೋಗ್ಯ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ, ಲಸಿಕೆಗಳು ಮೊದಲ ಡೋಸ್ ತೆಗೆದುಕೊಂಡ ನಂತರ ಮಾನವ ದೇಹದಲ್ಲಿ ಪ್ರತಿಕಾಯಗಳನ್ನು ರಚಿಸಲು ಪ್ರಾರಂಭಿಸಲು ಕನಿಷ್ಠ ಎರಡು ಮೂರು ವಾರಗಳನ್ನು ತೆಗೆದುಕೊಳ್ಳುತ್ತದೆಯಂತೆ. ಅದರ ನಂತರ, ಇದು ಪ್ರತಿಕಾಯಗಳನ್ನು ರಚಿಸುತ್ತಲೇ ಇರುತ್ತದೆ. ಇನ್ನು ಈ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುವುದು ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಅವಲಂಬಿಸಿರುತ್ತದೆ ಎಂದು ಐಸಿಎಂಆರ್ ಸಲಹೆಗಾರ ಡಾ. ಸುನೀಲಾ ಗರ್ಗ್ ತಿಳಿಸಿದ್ದಾರೆ.

ಕೊವಾಕ್ಸಿನ್‌ನ ಎರಡು ಪ್ರಮಾಣಗಳ ನಡುವಿನ ಅಂತರವು ಆರು ವಾರಗಳಾಗಿದ್ದು, ಆದರೆ, ಸರ್ಕಾರವು ಇತ್ತೀಚೆಗೆ ಎರಡು ಡೋಸ್ ಕೋವಿಶೀಲ್ಡ್ ಅವಧಿಯನ್ನು 12 ವಾರಗಳವರೆಗೆ ವಿಸ್ತರಿಸಿದೆ. ಇತ್ತೀಚಿನ ಅಭಿವೃದ್ಧಿ ಮತ್ತು ಅಧ್ಯಯನಗಳ ನಂತರ ಕೋವಿಶೀಲ್ಡ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಡಾ. ಗರ್ಗ್​ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ನೈಜ ಸಾಕ್ಷ್ಯಗಳ ಆಧಾರದ ಮೇಲೆ ವಿಶೇಷವಾಗಿ ಯುಕೆಯ ಅಭಿಪ್ರಾಯಂತೆ, ಎರಡು ಡೋಸ್ ಕೋವಿಶೀಲ್ಡ್ ಲಸಿಕೆಗಳ ನಡುವೆ ಡೋಸಿಂಗ್ ಮಧ್ಯಂತರವನ್ನು 12-16 ವಾರಗಳಿಗೆ ಹೆಚ್ಚಿಸಲು ಕೋವಿಡ್​ ವರ್ಕಿಂಗ್​ ಗ್ರೂಪ್​ ಒಪ್ಪಿಕೊಂಡಿತ್ತು. ಕೊವಾಕ್ಸಿನ್ ಲಸಿಕೆ ಪ್ರಮಾಣಗಳ ಮಧ್ಯಂತರದಲ್ಲಿ ಯಾವುದೇ ಬದಲಾವಣೆಯನ್ನು ಶಿಫಾರಸು ಮಾಡಲಾಗಿಲ್ಲ ಎಂದು ಅವರು ಹೇಳಿದರು.

ಎರಡೂ ಲಸಿಕೆಗಳು SARS-CoV-2 ವಿರುದ್ಧ ಹೋರಾಡುವ ಪರಿಣಾಮಕಾರಿತ್ವವನ್ನು ಹೊಂದಿವೆ. ಹಾಗೆ ಎರಡು ಲಸಿಕೆಗಳೂ 70-81 ಪ್ರತಿಶತದಷ್ಟು ಪರಿಣಾಮಕಾರಿತ್ವವನ್ನು ಹೊಂದಿವೆ ಎಂದಿದ್ದಾರೆ.

80 ಪ್ರತಿಶತದಷ್ಟು ಹೆಚ್ಚಿನ ಪರಿಣಾಮಕಾರಿ:

ಅಂಕಿ ಅಂಶವನ್ನು ಉಲ್ಲೇಖಿಸಿದ ಡಾ. ಗರ್ಗ್, ಅಸ್ಟ್ರಾಜೆನೆಕಾದ ಲಸಿಕೆ, ವ್ಯಾಕ್ಸ್‌ಜೆವ್ರಿಯಾ 12 ವಾರಗಳ ಅಥವಾ ಅದಕ್ಕಿಂತ ಹೆಚ್ಚಿನ ಮಧ್ಯಂತರಕ್ಕೆ 80 ಪ್ರತಿಶತದಷ್ಟು ಹೆಚ್ಚಿನ ಪರಿಣಾಮಕಾರಿ ದರವನ್ನು ತೋರಿಸುತ್ತದೆ. ಎರಡು ಪ್ರಮಾಣದ ಲಸಿಕೆಗಳನ್ನು ಪಡೆದ ನಂತರವೂ ಜನರು ಸೋಂಕಿಗೆ ಒಳಗಾಗುವ ಹಲವಾರು ವರದಿಗಳು ಮುಂಚೂಣಿಗೆ ಬರುತ್ತಿವೆ. ಕೆಲವು ಸಂದರ್ಭಗಳಲ್ಲಿ, ಸಾವು ಸಹ ಸಂಭವಿಸಿದೆ ಎಂದು ಮಾಹಿತಿ ನೀಡಿದರು.

ಇತ್ತೀಚೆಗೆ ಹೃದ್ರೋಗ ತಜ್ಞ ಡಾ.ಕೆ.ಕೆ. ಅಗ್ರವಾಲ್ ಅವರು ಕೂಡ ಕೋವಿಡ್ -19 ಸೋಂಕಿಗೆ ಒಳಗಾಗಿ ನಿಧನರಾದರು. ಅವರು ಕೂಡ ಎರಡೂ ಲಸಿಕೆಗಳನ್ನು ತೆಗೆದುಕೊಂಡಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ, ಡಾ. ಅಗ್ರವಾಲ್ ಅವರು ಶ್ವಾಸಕೋಶದ ಎಂಬಾಲಿಸಮ್ ಸಮಸ್ಯೆ ಹೊಂದಿದ್ದರು. ಆದಾಗ್ಯೂ, ಅವರ ಡೇಟಾದ ವೈಜ್ಞಾನಿಕ ವಿಶ್ಲೇಷಣೆಯು ಸಾವಿಗೆ ನಿಖರವಾಗಿ ಕಾರಣವನ್ನು ತಿಳಿಸಲು ಸಾಧ್ಯವಾಯಿತು ಎಂದು ಡಾ. ಗರ್ಗ್ ಹೇಳಿದರು.

ಸೋಂಕುಗಳ ಶೇಕಡಾವಾರು ಪ್ರಮಾಣವು ತುಂಬಾ ಕಡಿಮೆಯಾಗಿದೆ:

ಎರಡು ಡೋಸ್ ಲಸಿಕೆಗಳನ್ನು ತೆಗೆದುಕೊಂಡ ನಂತರವೂ ವೈದ್ಯರು ಸೋಂಕಿಗೆ ಒಳಗಾಗುವ ವಿಷಯದ ಬಗ್ಗೆ ಮಾತನಾಡಿದ ಡಾ. ಗರ್ಗ್, ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಕೋವಿಡ್ ರೋಗಿಗಳೊಂದಿಗೆ ಹೆಚ್ಚು ಒಡನಾಟ ಇರುವುದರಿಂದ ಅವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ ಅವರು, ಸಾಮಾನ್ಯ ಜನರು ಕೋವಿಡ್ ಸಂಬಂಧ ಸೂಕ್ತ ನಡವಳಿಕೆಯನ್ನು ಅನುಸರಿಸುತ್ತಿದ್ದರೆ ಅವರಿಗೆ ಸೋಂಕುಗಳು ಬರುವುದಿಲ್ಲ ಎಂದು ಹೇಳಿದರು.

ಲಸಿಕೆ ಹಾಕಿದ ನಂತರವೂ ಕೊರೊನಾ ಪಾಸಿಟಿವ್​ ಆಗುವವರ ಮಾಹಿತಿ ಸಂಗ್ರಹಿಸುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ವಿಷಯದ ಬಗ್ಗೆ ಭಾರತದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯಾದ ಐಸಿಎಂಆರ್ ಸಹ ನಿಕಟ ವೀಕ್ಷಣೆ ನಡೆಸುತ್ತಿದೆ. ಜೊತೆಗೆ ಇಂಥ ಸೋಂಕುಗಳ ಶೇಕಡಾವಾರು ಪ್ರಮಾಣವು ತುಂಬಾ ಕಡಿಮೆಯಾಗಿದೆ (0.1 ಶೇಕಡಾ) ಎಂದು ಸರ್ಕಾರವೇ ಹೇಳಿದೆ. ವ್ಯಾಕ್ಸಿನೇಷನ್ ನಂತರ ಸೋಂಕಿನ ಶೇಕಡಾವಾರು ಕಡಿಮೆಯಾಗಿದ್ದು, ನಂತರ ನಮಗೆ ಸೋಂಕು ತಗುಲಿದರೂ, ಯಾವುದೇ ತೀವ್ರತೆ ಇರುವುದಿಲ್ಲ ಎಂದು ಭಾರತದ ರಾಷ್ಟ್ರೀಯ ಕಾರ್ಯಪಡೆಯ ಅಧ್ಯಕ್ಷ ಮತ್ತು ನಿತಿ ಆಯೋಗದ ಸದಸ್ಯ ಡಾ.ವಿ.ಕೆ. ಪಾಲ್​ ಹೇಳಿದ್ದಾರೆ.

ಐಸಿಎಂಆರ್ ಅಭಿವೃದ್ಧಿಯ ಬಗ್ಗೆ ನಿಗಾ ಇಡುತ್ತಿದೆ. ಇದೊಂದು ಕ್ರಿಯಾತ್ಮಕ ಪರಿಸ್ಥಿತಿಯಾಗಿದ್ದು, ಅದನ್ನು ಎಚ್ಚರಿಕೆಯಿಂದ ನೋಡಬೇಕು ಎಂದು ಡಾ ಪಾಲ್ ತಿಳಿಸಿದ್ದಾರೆ.

ಲಸಿಕೆ ಪಡೆದರೂ ವೈದ್ಯರಿಗೆ ಕೊರೊನಾ :

ಇನ್ನು ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) 40 ವೈದ್ಯರಿಗೆ ಕೊರೊನಾ ವಕ್ಕರಿಸಿದೆ. ಹಾಗೆ ಹೆಚ್ಚಿನವರು ಲಸಿಕೆಯ ಎರಡೂ ಡೋಸ್​ನ್ನು ತೆಗೆದುಕೊಂಡರೂ ಸಹ ಕೊರೊನಾ ವಕ್ಕರಿಸಿದೆ. ನಂತರ ಬಿಹಾರದಲ್ಲಿಯೂ 26 ಕ್ಕೂ ಹೆಚ್ಚು ವೈದ್ಯರಿಗೆ ಕೊರೊನಾ ಪಾಸಿಟಿವ್​ ಬಂದಿದೆ ಎಂದು ವರದಿಯಾಗಿದೆ.

ಯಾವುದೇ ಲಸಿಕೆ ಶೇಕಡಾ 100 ರಷ್ಟು ಫಲಿತಾಂಶ ನೀಡುವುದಿಲ್ಲ. ವ್ಯಾಕ್ಸಿನೇಷನ್ ನಂತರ ಸೋಂಕು ತಗಲುವುದು ಸಾಮಾನ್ಯ. ಆದಾಗ್ಯೂ, ಲಸಿಕೆಗಳು ವ್ಯಕ್ತಿಗಳನ್ನು ರೋಗದಿಂದ ರಕ್ಷಿಸುತ್ತವೆ. ವ್ಯಾಕ್ಸಿನೇಷನ್ ನಂತರ ಯಾವುದೇ ಸೋಂಕು ಸಂಭವಿಸಿದಲ್ಲಿ, ತೀವ್ರತೆಯು ತುಂಬಾ ಕಡಿಮೆ ಇರುತ್ತದೆ ಎಂದು ಐಸಿಎಂಆರ್ ವಕ್ತಾರ ಡಾ.ಲೋಕೇಶ್ ತಿಳಿಸಿದ್ದಾರೆ.

ಪ್ರಸ್ತುತ, ಲಸಿಕೆಗಳನ್ನು ನಾವು ಏಕೈಕ ಅಸ್ತ್ರವಾಗಿ ಹೊಂದಿದ್ದೇವೆ. ನಮ್ಮ ಲಸಿಕೆಗಳ ಪರಿಣಾಮಕಾರಿತ್ವವು ತುಂಬಾ ಒಳ್ಳೆಯದು. ಈ ಲಸಿಕೆಗಳು ಸೋಂಕು ತೀವ್ರವಾಗಿರಲು ಅನುವು ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.