ETV Bharat / bharat

ಹಳಿ ತಪ್ಪಿದ ರೈಲು ಮತ್ತೊಂದಕ್ಕೆ ಡಿಕ್ಕಿ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ

author img

By

Published : Nov 30, 2022, 3:27 PM IST

ಕೋಲ್ಕತ್ತಾ ಸಮೀಪದ ಸೀಲ್ದಾಹ್ ಬಳಿ ಖಾಲಿ ಮಾತೃಭೂಮಿ ಲೋಕಲ್ ರೈಲು ಹಳಿ ತಪ್ಪಿ ನಂತರ ರಣಘಾಟ್ ಲೋಕಲ್‌ ರೈಲಿಗೆ ಡಿಕ್ಕಿ ಹೊಡೆದಿದೆ.

derailed-train-hits-another-train-in-sealdah-kolkata
ಹಳಿ ತಪ್ಪಿದ ರೈಲು ಮತ್ತೊಂದಕ್ಕೆ ಡಿಕ್ಕಿ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಹಳಿ ತಪ್ಪಿದ ಲೋಕಲ್ ರೈಲೊಂದು ಮತ್ತೊಂದು ಲೋಕಲ್ ರೈಲಿಗೆ ಡಿಕ್ಕಿ ಹೊಡೆದ ಘಟನೆ ಬುಧವಾರ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಸಮೀಪದ ಸೀಲ್ದಾಹ್ ಬಳಿ ನಡೆದಿದೆ. ಈ ಘಟನೆಯಿಂದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಖಾಲಿ ಮಾತೃಭೂಮಿ ಲೋಕಲ್ ರೈಲು ಹಳಿ ತಪ್ಪಿ ನಂತರ ರಣಘಾಟ್ ಲೋಕಲ್‌ ರೈಲಿಗೆ ಡಿಕ್ಕಿ ಹೊಡೆದಿದೆ. ಆದರೆ, ಈ ಘಟನೆ ವೇಳೆ ರಣಘಾಟ್​ ರೈಲಿನಲ್ಲಿ ಸಾಕಷ್ಟು ಪ್ರಯಾಣಿಕರು ಸಂಚರಿಸುತ್ತಿದ್ದರು. ಆದರೆ, ಯಾರಿಗೂ ಯಾವುದೇ ಹಾನಿಯಾಗಿಲ್ಲ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಚಾಲಕನ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿಸಿದೆ ಎಂದು ವರದಿಯಾಗಿದೆ.

ಹಳಿ ತಪ್ಪಿದ ರೈಲು ಮತ್ತೊಂದಕ್ಕೆ ಡಿಕ್ಕಿ
ಹಳಿ ತಪ್ಪಿದ ರೈಲು ಮತ್ತೊಂದಕ್ಕೆ ಡಿಕ್ಕಿ

ಪ್ರಾಥಮಿಕ ಮಾಹಿತಿ ಪ್ರಕಾರ, ಸಿಗ್ನಲ್‌ಗಳ ಗೊಂದಲದಿಂದಾಗಿ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ, ನಿಖರ ತನಿಖೆಗೆ ತನಿಖಾ ಸಮಿತಿ ರಚಿಸಲಾಗಿದೆ. ಶೀಘ್ರವೇ ಇದರ ವರದಿ ಸಲ್ಲಿಸಲು ತಿಳಿಸಲಾಗಿದೆ ಎಂದು ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಏಕಲವ್ಯ ಚಕ್ರವರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಶೋರೂಂ​ಗೆ ಬೆಂಕಿ: ಒಂದೇ ಕುಟುಂಬದ 6 ಮಂದಿ ಸಜೀವ ದಹನ

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಹಳಿ ತಪ್ಪಿದ ಲೋಕಲ್ ರೈಲೊಂದು ಮತ್ತೊಂದು ಲೋಕಲ್ ರೈಲಿಗೆ ಡಿಕ್ಕಿ ಹೊಡೆದ ಘಟನೆ ಬುಧವಾರ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಸಮೀಪದ ಸೀಲ್ದಾಹ್ ಬಳಿ ನಡೆದಿದೆ. ಈ ಘಟನೆಯಿಂದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಖಾಲಿ ಮಾತೃಭೂಮಿ ಲೋಕಲ್ ರೈಲು ಹಳಿ ತಪ್ಪಿ ನಂತರ ರಣಘಾಟ್ ಲೋಕಲ್‌ ರೈಲಿಗೆ ಡಿಕ್ಕಿ ಹೊಡೆದಿದೆ. ಆದರೆ, ಈ ಘಟನೆ ವೇಳೆ ರಣಘಾಟ್​ ರೈಲಿನಲ್ಲಿ ಸಾಕಷ್ಟು ಪ್ರಯಾಣಿಕರು ಸಂಚರಿಸುತ್ತಿದ್ದರು. ಆದರೆ, ಯಾರಿಗೂ ಯಾವುದೇ ಹಾನಿಯಾಗಿಲ್ಲ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಚಾಲಕನ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿಸಿದೆ ಎಂದು ವರದಿಯಾಗಿದೆ.

ಹಳಿ ತಪ್ಪಿದ ರೈಲು ಮತ್ತೊಂದಕ್ಕೆ ಡಿಕ್ಕಿ
ಹಳಿ ತಪ್ಪಿದ ರೈಲು ಮತ್ತೊಂದಕ್ಕೆ ಡಿಕ್ಕಿ

ಪ್ರಾಥಮಿಕ ಮಾಹಿತಿ ಪ್ರಕಾರ, ಸಿಗ್ನಲ್‌ಗಳ ಗೊಂದಲದಿಂದಾಗಿ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ, ನಿಖರ ತನಿಖೆಗೆ ತನಿಖಾ ಸಮಿತಿ ರಚಿಸಲಾಗಿದೆ. ಶೀಘ್ರವೇ ಇದರ ವರದಿ ಸಲ್ಲಿಸಲು ತಿಳಿಸಲಾಗಿದೆ ಎಂದು ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಏಕಲವ್ಯ ಚಕ್ರವರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಶೋರೂಂ​ಗೆ ಬೆಂಕಿ: ಒಂದೇ ಕುಟುಂಬದ 6 ಮಂದಿ ಸಜೀವ ದಹನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.