ETV Bharat / bharat

ಗಣರಾಜ್ಯೋತ್ಸವ ದಿನ ರೆಡ್​ ಫೋರ್ಟ್ ಮೇಲೆ ಧ್ವಜ ಹಾರಿಸಿದ ಜಸ್ಪ್ರೀತ್​ ಸಿಂಗ್​ ಅರೆಸ್ಟ್​!

author img

By

Published : Feb 22, 2021, 7:01 PM IST

Updated : Feb 22, 2021, 7:26 PM IST

ಕಳೆದ ಜನವರಿ 26ರಂದು ದೆಹಲಿ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೋರ್ವ ಆರೋಪಿಯ ಬಂಧನ ಮಾಡುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Jaspreet Singh
Jaspreet Singh

ನವದೆಹಲಿ: ಗಣರಾಜ್ಯೋತ್ಸವ ದಿನ ಕೃಷಿ ಕಾಯ್ದೆ ವಿರೋಧಿಸಿ ನಡೆದಿದ್ದ ಪ್ರತಿಭಟನೆ ವೇಳೆ ರೆಡ್​​ಫೋರ್ಟ್​ಗೆ ಮುತ್ತಿಗೆ ಹಾಕಿದ್ದ ಕೆಲವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಇದೇ ವೇಳೆ ವ್ಯಕ್ತಿಯೊಬ್ಬ ಕೆಂಪುಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ್ದ ಘಟನೆ ಸಹ ನಡೆದಿತ್ತು.

  • Delhi Police have arrested Jaspreet Singh, a resident of Delhi, who climbed up one of the tombs located on both sides of ramparts of Red Fort during Jan 26 violence. He is seen in offensive gesture holding steel tensile installed at Red Fort: Police

    (Photo source - Delhi Police) pic.twitter.com/QFxssv0r1r

    — ANI (@ANI) February 22, 2021 " class="align-text-top noRightClick twitterSection" data=" ">

ಓದಿ: ತಾಯಿ ಹೆಮ್ಮೆ ಪಡುವಂತೆ ಮಾಡುವುದೇ ಜೀವನದ ಗುರಿ: ಸಾರಾ

ಕೆಂಪುಕೋಟೆ ಮೇಲೆ ಸಿಖ್​ ಧ್ವಜ ಹಾರಿಸಿದ್ದ ಜಸ್ಪ್ರೀತ್ ಸಿಂಗ್​ ಬಂಧನ ಮಾಡುವಲ್ಲಿ ದೆಹಲಿ ಪೊಲೀಸರು ಇಂದು ಯಶಸ್ವಿಯಾಗಿದ್ದು, ಆತ ಮೂಲತಃ ದೆಹಲಿಯವನು ಎಂದು ತಿಳಿದು ಬಂದಿದೆ. ಕಳೆದ ಎರಡು ದಿನಗಳ ಹಿಂದೆ ದೆಹಲಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದ 20 ಆರೋಪಿಗಳ ಫೋಟೋ ದೆಹಲಿ ಪೊಲೀಸರಿಂದ ರಿಲೀಸ್​ ಆಗಿದ್ದವು. ಇದರ ಬೆನ್ನಲ್ಲೇ ಸಿಖ್​ ಧ್ವಜ ಹಾರಾಟ ಮಾಡಿರುವ ವ್ಯಕ್ತಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಳೆದ ವಾರ ದೆಹಲಿ ಪೊಲೀಸರು ಮನೀಂದರ್​ ಸಿಂಗ್​ ಎಂಬ ವ್ಯಕ್ತಿಯನ್ನ ವಶಕ್ಕೆ ಪಡೆದುಕೊಂಡಿದ್ದರು. ರೈತ ಪ್ರತಿಭಟನೆ ವೇಳೆ ಕತ್ತಿ ಝಳಪಿಸಿ ಹಿಂಸೆಗೆ ಪ್ರೇರಣೆ ನೀಡಿದ್ದ ಆರೋಪಿ ಈತನ ಮೇಲಿತ್ತು.

ನವದೆಹಲಿ: ಗಣರಾಜ್ಯೋತ್ಸವ ದಿನ ಕೃಷಿ ಕಾಯ್ದೆ ವಿರೋಧಿಸಿ ನಡೆದಿದ್ದ ಪ್ರತಿಭಟನೆ ವೇಳೆ ರೆಡ್​​ಫೋರ್ಟ್​ಗೆ ಮುತ್ತಿಗೆ ಹಾಕಿದ್ದ ಕೆಲವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಇದೇ ವೇಳೆ ವ್ಯಕ್ತಿಯೊಬ್ಬ ಕೆಂಪುಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ್ದ ಘಟನೆ ಸಹ ನಡೆದಿತ್ತು.

  • Delhi Police have arrested Jaspreet Singh, a resident of Delhi, who climbed up one of the tombs located on both sides of ramparts of Red Fort during Jan 26 violence. He is seen in offensive gesture holding steel tensile installed at Red Fort: Police

    (Photo source - Delhi Police) pic.twitter.com/QFxssv0r1r

    — ANI (@ANI) February 22, 2021 " class="align-text-top noRightClick twitterSection" data=" ">

ಓದಿ: ತಾಯಿ ಹೆಮ್ಮೆ ಪಡುವಂತೆ ಮಾಡುವುದೇ ಜೀವನದ ಗುರಿ: ಸಾರಾ

ಕೆಂಪುಕೋಟೆ ಮೇಲೆ ಸಿಖ್​ ಧ್ವಜ ಹಾರಿಸಿದ್ದ ಜಸ್ಪ್ರೀತ್ ಸಿಂಗ್​ ಬಂಧನ ಮಾಡುವಲ್ಲಿ ದೆಹಲಿ ಪೊಲೀಸರು ಇಂದು ಯಶಸ್ವಿಯಾಗಿದ್ದು, ಆತ ಮೂಲತಃ ದೆಹಲಿಯವನು ಎಂದು ತಿಳಿದು ಬಂದಿದೆ. ಕಳೆದ ಎರಡು ದಿನಗಳ ಹಿಂದೆ ದೆಹಲಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದ 20 ಆರೋಪಿಗಳ ಫೋಟೋ ದೆಹಲಿ ಪೊಲೀಸರಿಂದ ರಿಲೀಸ್​ ಆಗಿದ್ದವು. ಇದರ ಬೆನ್ನಲ್ಲೇ ಸಿಖ್​ ಧ್ವಜ ಹಾರಾಟ ಮಾಡಿರುವ ವ್ಯಕ್ತಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಳೆದ ವಾರ ದೆಹಲಿ ಪೊಲೀಸರು ಮನೀಂದರ್​ ಸಿಂಗ್​ ಎಂಬ ವ್ಯಕ್ತಿಯನ್ನ ವಶಕ್ಕೆ ಪಡೆದುಕೊಂಡಿದ್ದರು. ರೈತ ಪ್ರತಿಭಟನೆ ವೇಳೆ ಕತ್ತಿ ಝಳಪಿಸಿ ಹಿಂಸೆಗೆ ಪ್ರೇರಣೆ ನೀಡಿದ್ದ ಆರೋಪಿ ಈತನ ಮೇಲಿತ್ತು.

Last Updated : Feb 22, 2021, 7:26 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.