ETV Bharat / bharat

Cyclone Yaas: ಚಂಡಮಾರುತಕ್ಕೆ ನಲುಗಿದ ಒಡಿಶಾ, ಬಂಗಾಳ.. ಅಲ್ಲಲ್ಲಿ ಭೂ ಕುಸಿತ, ನಾಲ್ವರು ಸಾವು

ಯಾಸ್ ಆರ್ಭಟ ಜೋರಾದ ಹಿನ್ನೆಲೆ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಸೈಕ್ಲೋನ್​ಗೆ ಈವರೆಗೆ ನಾಲ್ವರು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಪರಿಸ್ಥಿತಿ ನಿಭಾಯಿಸಲು ಸೇನಾ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

author img

By

Published : May 27, 2021, 5:35 PM IST

ಭೂ ಕುಸಿತ
ಭೂ ಕುಸಿತ

ಪಶ್ಚಿಮ ಬಂಗಾಳ/ ಒಡಿಶಾ: ಯಾಸ್​ ಚಂಡಮಾರುತವು ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಭೂ ಕುಸಿತವನ್ನುಂಟು ಮಾಡಿದೆ. ಬುಧವಾರ ಬೆಳಗ್ಗೆ 9 ಗಂಟೆಗೆ ಶುರುವಾದ ಭೂ ಕುಸಿತ ಮುಂದುವರಿದಿದೆ.

ಯಾಸ್​ ಚಂಡಮಾರುತದ ಅಬ್ಬರಕ್ಕೆ ಒಡಿಶಾ, ಬಂಗಾಳದಲ್ಲಿ ಭೂ ಕುಸಿತ

ಯಾಸ್ ಆರ್ಭಟ ಜೋರಾದ ಹಿನ್ನೆಲೆ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಸೈಕ್ಲೋನ್​ಗೆ ಈವರೆಗೆ ನಾಲ್ವರು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಪರಿಸ್ಥಿತಿ ನಿಭಾಯಿಸಲು ಸೇನಾ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಒಡಿಶಾದಲ್ಲಿ ಈವರೆಗೆ 5.80 ಲಕ್ಷ ಜನರನ್ನು ಹಾಗೂ ಬಂಗಾಳದಲ್ಲಿ 11 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಬಂಗಾಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ಸುಂಟರಗಾಳಿ ಎದ್ದಿದೆ. ಬಂಗಾಳದ ಅನೇಕ ಹಳ್ಳಿಗಳು ಮಳೆಯ ನೀರಿನಿಂದ ಮುಳುಗಡೆಯಾಗಿವೆ. ಆ ಗ್ರಾಮಗಳ ಜನರನ್ನು ಎನ್​ಡಿಆರ್​ಎಫ್ ಸಿಬ್ಬಂದಿ ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಒಡಿಶಾದಲ್ಲಿ ಎದ್ದಿರುವ ಚಂಡಮಾರುತದ ಅಬ್ಬರಕ್ಕೆ ನೂರಾರು ಹಡಗುಗಳು, ದೋಣಿಗಳು ಹಾನಿಗೊಳಗಾಗಿವೆ.

ನಾಳೆ ಪ್ರಧಾನಿ ಮೋದಿ, ಚಂಡಮಾರುತದಿಂದ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಲಿದ್ದು, ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಪಶ್ಚಿಮ ಬಂಗಾಳ/ ಒಡಿಶಾ: ಯಾಸ್​ ಚಂಡಮಾರುತವು ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಭೂ ಕುಸಿತವನ್ನುಂಟು ಮಾಡಿದೆ. ಬುಧವಾರ ಬೆಳಗ್ಗೆ 9 ಗಂಟೆಗೆ ಶುರುವಾದ ಭೂ ಕುಸಿತ ಮುಂದುವರಿದಿದೆ.

ಯಾಸ್​ ಚಂಡಮಾರುತದ ಅಬ್ಬರಕ್ಕೆ ಒಡಿಶಾ, ಬಂಗಾಳದಲ್ಲಿ ಭೂ ಕುಸಿತ

ಯಾಸ್ ಆರ್ಭಟ ಜೋರಾದ ಹಿನ್ನೆಲೆ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಸೈಕ್ಲೋನ್​ಗೆ ಈವರೆಗೆ ನಾಲ್ವರು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಪರಿಸ್ಥಿತಿ ನಿಭಾಯಿಸಲು ಸೇನಾ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಒಡಿಶಾದಲ್ಲಿ ಈವರೆಗೆ 5.80 ಲಕ್ಷ ಜನರನ್ನು ಹಾಗೂ ಬಂಗಾಳದಲ್ಲಿ 11 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಬಂಗಾಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ಸುಂಟರಗಾಳಿ ಎದ್ದಿದೆ. ಬಂಗಾಳದ ಅನೇಕ ಹಳ್ಳಿಗಳು ಮಳೆಯ ನೀರಿನಿಂದ ಮುಳುಗಡೆಯಾಗಿವೆ. ಆ ಗ್ರಾಮಗಳ ಜನರನ್ನು ಎನ್​ಡಿಆರ್​ಎಫ್ ಸಿಬ್ಬಂದಿ ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಒಡಿಶಾದಲ್ಲಿ ಎದ್ದಿರುವ ಚಂಡಮಾರುತದ ಅಬ್ಬರಕ್ಕೆ ನೂರಾರು ಹಡಗುಗಳು, ದೋಣಿಗಳು ಹಾನಿಗೊಳಗಾಗಿವೆ.

ನಾಳೆ ಪ್ರಧಾನಿ ಮೋದಿ, ಚಂಡಮಾರುತದಿಂದ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಲಿದ್ದು, ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.