ETV Bharat / bharat

ಮುಂಬೈ ರೇವ್​ ಪಾರ್ಟಿ ಪ್ರಕರಣ: ಶಾರುಖ್​​ ಖಾನ್​ ಪುತ್ರನ ಅ.11ರವರೆಗೆ ಕಸ್ಟಡಿಗೆ ಒಪ್ಪಿಸುವಂತೆ NCB ಮನವಿ

author img

By

Published : Oct 4, 2021, 4:47 PM IST

Updated : Oct 4, 2021, 5:00 PM IST

ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಸೇರಿದಂತೆ ಹಲವರನ್ನು ಡ್ರಗ್ಸ್​ ಸೇವನೆ ಆರೋಪದ ಮೇಲೆ ಬಂಧಿಸಿರುವ ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ ಕೋರ್ಟ್​ ಮುಂದೆ ಹಾಜರು ಪಡಿಸಿದೆ. ಇದೇ ವೇಳೆ , ಆರ್ಯನ್​ ಪರ ವಕೀಲ ಸತೀಶ್​ ಮಾನಶಿಂಧೆ ವಾದಿಸುತ್ತಿದ್ದು, ರೇವ್​ ಪಾರ್ಟಿಗೂ ಆರ್ಯನ್​ಗೂ ಯಾವುದೇ ಸಂಬಂಧವಿಲ್ಲ ಎಂದು ವಾದ ಮಾಡಿದ್ದಾರೆ.

cruise-drug-party-ncb-searches-ship-on-its-return-to-mumbai-port
ಆರ್ಯನ್​ ಖಾನ್​ ವಿಚಾರಣೆ

ಹೈದರಾಬಾದ್​: ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಬಾಲಿವುಡ್​ ನಟ ಶಾರುಖ್​​ ಖಾನ್​ ಪುತ್ರ ಆರ್ಯನ್​ ಖಾನ್ ಅವರನ್ನು ಎನ್​​ಸಿಬಿ ಕೋರ್ಟ್​ಗೆ ಹಾಜರುಪಡಿಸಲಾಗಿದ್ದು,​ ವಿಚಾರಣೆ ನಡೆಯುತ್ತಿದೆ. ಎನ್​ಸಿಬಿ ಪರ ಎಎಸ್​ಜಿ ಅನಿಲ್​ ಮತ್ತು ಆರ್ಯನ್​ ಪರ ವಕೀಲ ಸತೀಶ್​ ಮಾನಶಿಂಧೆ ವಾದ ಮಂಡಿಸುತ್ತಿದ್ದಾರೆ.

ಅಕ್ಟೋಬರ್​ 11ರವರೆಗೆ ಎನ್​ಸಿಬಿ ಕಸ್ಟಡಿಗೆ ಒಪ್ಪಿಸಿ:

ಸಾಮಾಜದಲ್ಲಿ ಮಾದಕ ವಸ್ತು ಸೇವನೆ ಎಂಬುದು ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ವಿವಿಐಪಿಗಳ ಮಕ್ಕಳು ರೋಲ್​ ಮಾಡೆಲ್​ಗಳಾಗುತ್ತಿದ್ದಾರೆ. ಮೊದಲು ನಮ್ಮ ಕಾರ್ಯಾಚರಣೆ ಕುರಿತು ಇವರುಗಳು ಅರ್ಥಮಾಡಿಕೊಳ್ಳಬೇಕು. ಮಾದಕ ವಸ್ತು ಸೇವನೆ ತಡೆಯುವುದು ನಮ್ಮ ಗುರಿ, ಹಾಗೂ ಡ್ರಗ್ಸ್​ ಪೆಡ್ಲರ್​ಗಳ ಬಂಧನ ನಮ್ಮ ಗುರಿ. ಅದಕ್ಕಾಗಿ ಅಕ್ಟೋಬರ್​ 11ರವರೆಗೆ ಆರೋಪಿಗಳನ್ನು ಕಸ್ಟಡಿಗೆ ನೀಡಬೆಕು ಎಂದು ಎನ್​ಸಿಬಿ ಪರ ವಕೀಲು ವಾದ ಮಂಡಿಸಿದರು.

ಆರ್ಯನ್ ಬಳಿ ಯಾವುದೇ ಮಾದಕ ವಸ್ತು ಇರಲಿಲ್ಲ: ವಕೀಲರ ವಾದ

ಎನ್​​ಸಿಬಿ ವಕೀಲರ ವಾದವನ್ನು ಅಲ್ಲಗಳೆದಿರುವ ಆರ್ಯನ್​ ಪರ ವಕೀಲರು, ಶಾರೂಖ್​ ಪುತ್ರ ಯಾವುದೇ ಡ್ರಗ್ಸ್​ ಪಾರ್ಟಿಯಲ್ಲಿ ಭಾಗಿಯಾಗಿಲ್ಲ. ಅವರ ಸ್ನೇಹಿತನಿಂದ 6ಗ್ರಾಂ ಚರಸ್​ ವಶಕ್ಕೆ ಪಡೆಯಲಾಗಿದೆ. ಶಿಪ್​ನಲ್ಲಿ ಹೋಗಲು ಆರ್ಯನ್​ ಒಂದು ಪೈಸೆ ಹಣವನ್ನೂ ನೀಡಿಲ್ಲ. ಬೇಕಿದ್ದರೆ ಆರ್ಯನ್​ ವಾಟ್ಸ್​ಆ್ಯಪ್​​ ಚಾಟ್​ ಪರಿಶೀಲಿಸಬಹುದು ಎಂದು ವಕೀಲ ಸತೀಶ್​ ಮಾನಶಿಂಧೆ ವಾದ ಮಂಡಿಸಿದರು.

ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ - 1985ರ (ಎನ್‌ಡಿಪಿಎಸ್‌ ಕಾಯಿದೆ) ವಿವಿಧ ಸೆಕ್ಷನ್‌ಗಳ ಅಡಿ ನಿನ್ನೆ ಬಂಧಿಸಲಾಗಿತ್ತು. ಖಾನ್ ಮತ್ತು ಇತರ 7 ಮಂದಿಯನ್ನು ಮಾದಕ ದ್ರವ್ಯ ನಿಯಂತ್ರಣ ದಳ (ಎನ್‌ಸಿಬಿ) ವಶಕ್ಕೆ ಪಡೆದು ಇಂದು ಕೋರ್ಟ್​ ಮುಂದೆ ಹಾಜರು ಪಡಿಸಿದ್ದು ಹೆಚ್ಚಿನ ವಿಚಾರಣೆಗೆ ಎನ್​​​ಸಿಬಿ ವಶಕ್ಕೆ ನೀಡುವಂತೆ ನ್ಯಾಯಾಲಯವನ್ನು ಕೋರಿದೆ.

ಈ ಬಗ್ಗೆ ನಿನ್ನೆ, ಮುಂಬೈ ನ್ಯಾಯಾಲಯ ಅಕ್ಟೋಬರ್ 4ರವರೆಗೆ (ಸೋಮವಾರ) ಆರೋಪಿಗಳನ್ನು ಎನ್‌ಸಿಬಿ ವಶಕ್ಕೆ ನೀಡಿತ್ತು. ಕೋರ್ಟ್​​ನ ಆದೇಶದಂತೆ ಇವತ್ತು ಮತ್ತೆ ಆರೋಪಿಗಳನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಹೈದರಾಬಾದ್​: ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಬಾಲಿವುಡ್​ ನಟ ಶಾರುಖ್​​ ಖಾನ್​ ಪುತ್ರ ಆರ್ಯನ್​ ಖಾನ್ ಅವರನ್ನು ಎನ್​​ಸಿಬಿ ಕೋರ್ಟ್​ಗೆ ಹಾಜರುಪಡಿಸಲಾಗಿದ್ದು,​ ವಿಚಾರಣೆ ನಡೆಯುತ್ತಿದೆ. ಎನ್​ಸಿಬಿ ಪರ ಎಎಸ್​ಜಿ ಅನಿಲ್​ ಮತ್ತು ಆರ್ಯನ್​ ಪರ ವಕೀಲ ಸತೀಶ್​ ಮಾನಶಿಂಧೆ ವಾದ ಮಂಡಿಸುತ್ತಿದ್ದಾರೆ.

ಅಕ್ಟೋಬರ್​ 11ರವರೆಗೆ ಎನ್​ಸಿಬಿ ಕಸ್ಟಡಿಗೆ ಒಪ್ಪಿಸಿ:

ಸಾಮಾಜದಲ್ಲಿ ಮಾದಕ ವಸ್ತು ಸೇವನೆ ಎಂಬುದು ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ವಿವಿಐಪಿಗಳ ಮಕ್ಕಳು ರೋಲ್​ ಮಾಡೆಲ್​ಗಳಾಗುತ್ತಿದ್ದಾರೆ. ಮೊದಲು ನಮ್ಮ ಕಾರ್ಯಾಚರಣೆ ಕುರಿತು ಇವರುಗಳು ಅರ್ಥಮಾಡಿಕೊಳ್ಳಬೇಕು. ಮಾದಕ ವಸ್ತು ಸೇವನೆ ತಡೆಯುವುದು ನಮ್ಮ ಗುರಿ, ಹಾಗೂ ಡ್ರಗ್ಸ್​ ಪೆಡ್ಲರ್​ಗಳ ಬಂಧನ ನಮ್ಮ ಗುರಿ. ಅದಕ್ಕಾಗಿ ಅಕ್ಟೋಬರ್​ 11ರವರೆಗೆ ಆರೋಪಿಗಳನ್ನು ಕಸ್ಟಡಿಗೆ ನೀಡಬೆಕು ಎಂದು ಎನ್​ಸಿಬಿ ಪರ ವಕೀಲು ವಾದ ಮಂಡಿಸಿದರು.

ಆರ್ಯನ್ ಬಳಿ ಯಾವುದೇ ಮಾದಕ ವಸ್ತು ಇರಲಿಲ್ಲ: ವಕೀಲರ ವಾದ

ಎನ್​​ಸಿಬಿ ವಕೀಲರ ವಾದವನ್ನು ಅಲ್ಲಗಳೆದಿರುವ ಆರ್ಯನ್​ ಪರ ವಕೀಲರು, ಶಾರೂಖ್​ ಪುತ್ರ ಯಾವುದೇ ಡ್ರಗ್ಸ್​ ಪಾರ್ಟಿಯಲ್ಲಿ ಭಾಗಿಯಾಗಿಲ್ಲ. ಅವರ ಸ್ನೇಹಿತನಿಂದ 6ಗ್ರಾಂ ಚರಸ್​ ವಶಕ್ಕೆ ಪಡೆಯಲಾಗಿದೆ. ಶಿಪ್​ನಲ್ಲಿ ಹೋಗಲು ಆರ್ಯನ್​ ಒಂದು ಪೈಸೆ ಹಣವನ್ನೂ ನೀಡಿಲ್ಲ. ಬೇಕಿದ್ದರೆ ಆರ್ಯನ್​ ವಾಟ್ಸ್​ಆ್ಯಪ್​​ ಚಾಟ್​ ಪರಿಶೀಲಿಸಬಹುದು ಎಂದು ವಕೀಲ ಸತೀಶ್​ ಮಾನಶಿಂಧೆ ವಾದ ಮಂಡಿಸಿದರು.

ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ - 1985ರ (ಎನ್‌ಡಿಪಿಎಸ್‌ ಕಾಯಿದೆ) ವಿವಿಧ ಸೆಕ್ಷನ್‌ಗಳ ಅಡಿ ನಿನ್ನೆ ಬಂಧಿಸಲಾಗಿತ್ತು. ಖಾನ್ ಮತ್ತು ಇತರ 7 ಮಂದಿಯನ್ನು ಮಾದಕ ದ್ರವ್ಯ ನಿಯಂತ್ರಣ ದಳ (ಎನ್‌ಸಿಬಿ) ವಶಕ್ಕೆ ಪಡೆದು ಇಂದು ಕೋರ್ಟ್​ ಮುಂದೆ ಹಾಜರು ಪಡಿಸಿದ್ದು ಹೆಚ್ಚಿನ ವಿಚಾರಣೆಗೆ ಎನ್​​​ಸಿಬಿ ವಶಕ್ಕೆ ನೀಡುವಂತೆ ನ್ಯಾಯಾಲಯವನ್ನು ಕೋರಿದೆ.

ಈ ಬಗ್ಗೆ ನಿನ್ನೆ, ಮುಂಬೈ ನ್ಯಾಯಾಲಯ ಅಕ್ಟೋಬರ್ 4ರವರೆಗೆ (ಸೋಮವಾರ) ಆರೋಪಿಗಳನ್ನು ಎನ್‌ಸಿಬಿ ವಶಕ್ಕೆ ನೀಡಿತ್ತು. ಕೋರ್ಟ್​​ನ ಆದೇಶದಂತೆ ಇವತ್ತು ಮತ್ತೆ ಆರೋಪಿಗಳನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Last Updated : Oct 4, 2021, 5:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.