ETV Bharat / bharat

Hyderabad Crime: ರಸ್ತೆಯಲ್ಲಿ ಸಂಚರಿಸುತ್ತಿದ್ದ ನೀರಿನ ಟ್ಯಾಂಕರ್‌ನಡಿ ತಳ್ಳಿ ಗೆಳತಿಯನ್ನು ಹತ್ಯೆಗೈದ ಪ್ರಿಯಕರ!

Hyderabad Crime: ಹೈದರಾಬಾದ್​ನ ಬಾಚುಪಲ್ಲಿಯಲ್ಲಿ ಪ್ರಿಯಕರನೋರ್ವ ತನ್ನ ಪ್ರಿಯತಮೆಯನ್ನು ನೀರಿನ ಟ್ಯಾಂಕರ್​ ಕೆಳಗೆ ನೂಕಿ ಹತ್ಯೆಗೈದ ಘಟನೆ ನಡೆದಿದೆ.

author img

By

Published : Aug 6, 2023, 10:10 PM IST

Updated : Aug 6, 2023, 10:57 PM IST

crime: lover pushes girlfriend in front of tanker in Hyderabad; accused absconding
ಮದುವೆಗೆ ಒತ್ತಡ.. ನೀರಿನ ಟ್ಯಾಂಕರ್​ ಕೆಳಗೆ ಪ್ರಿಯತಮೆಯನ್ನು ತಳ್ಳಿದ ಪ್ರಿಯಕರ!

ಹೈದರಾಬಾದ್​ (ತೆಲಂಗಾಣ): ಪ್ರಿಯಕರನೋರ್ವ ತನ್ನ ಗೆಳತಿಯನ್ನು ನೀರಿನ ಟ್ಯಾಂಕರ್​ ಕೆಳಗಡೆ ತಳ್ಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹೈದರಾಬಾದ್​ನಲ್ಲಿ ಇಂದು (ರವಿವಾರ) ನಡೆದಿದೆ. ಆರಂಭದಲ್ಲಿ ಇದೊಂದು ರಸ್ತೆ ಅಪಘಾತ ಎಂಬ ಶಂಕೆಯ ಮೇರೆಗೆ ಪೊಲೀಸರು ತನಿಖೆ ಕೈಗೊಂಡಾಗ ಯುವತಿ ಆಕಸ್ಮಿಕವಾಗಿ ಸಾವನ್ನಪ್ಪಿಲ್ಲ, ಆಕೆಯನ್ನು ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮೀಳಾ ಕೊಲೆಯಾದ ಯುವತಿ. ಪ್ರಿಯಕರ ತಿರುಪತಿ ಎಂಬಾತ ಆರೋಪಿ. ಸದ್ಯ ಆತ ತಲೆ ಮರೆಸಿಕೊಂಡಿದ್ದು, ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ವಿವರ: ಪ್ರಮೀಳಾ ಮೂಲತಃ ಕಾಮರೆಡ್ಡಿ ಜಿಲ್ಲೆಯ ಮಾಚರೆಡ್ಡಿ ಮಂಡಲದ ನೆಮಲಿಗುಟ್ಟು ತಾಂಡಾದ ನಿವಾಸಿ. ಹೈದರಾಬಾದ್​ನ ಬಾಚುಪಲ್ಲಿಯಲ್ಲಿ ಸೇಲ್ಸ್​ ಗರ್ಲ್​​ ಆಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಹಾಸ್ಟೆಲ್​ನಲ್ಲಿ ಈಕೆ ವಾಸವಾಗಿದ್ದರು. ಮತ್ತೊಂದೆಡೆ, ಅದೇ ಜಿಲ್ಲೆಯ ರೋಡ್​ ತಾಂಡಾದ ನಿವಾಸಿಯಾದ ತಿರುಪತಿ ಹಫೀಜ್​ಪೇಟ್​ನಲ್ಲಿ ವಾಸವಾಗಿದ್ದ. ಈತ ಕ್ಯಾಬ್​ ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದಾನೆ. ಇಬ್ಬರ ನಡುವಿನ ಪರಿಚಯದ ನಂತರ, ಕಳೆದ ಐದು ತಿಂಗಳಿಂದ ಪ್ರೀತಿಸುತ್ತಿದ್ದರು. ಇದರಿಂದ ಸಲುಗೆ ಹೆಚ್ಚಾಗಿ ಪ್ರಮೀಳಾ ವಾಸವಾಗಿದ್ದ ಹಾಸ್ಟೆಲ್​ಗೂ ತಿರುಪತಿ ಬಂದು ಹೋಗುತ್ತಿದ್ದ. ಇದರ ನಡುವೆ ತಿರುಪತಿ ಬೇರೆ ಯುವತಿಯೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಈ ವಿಷಯ ತಿಳಿದ ಪ್ರಮೀಳಾ ತನ್ನನ್ನೇ ಮದುವೆಯಾಗುವಂತೆ ಒತ್ತಡ ಹೇರಲು ಆರಂಭಿಸಿದ್ದರು.

ಇದನ್ನೂ ಓದಿ: Assam crime: ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಯುವತಿಯರ ಶವ ಪತ್ತೆ: ಅತ್ಯಾಚಾರ ಶಂಕೆ

ಇದರಿಂದ ಹೇಗಾದರೂ ಮಾಡಿ ಈಕೆಯಿಂದ ತಪ್ಪಿಸಿಕೊಳ್ಳಲೇಬೇಕೆಂದು ಸಂಚು ರೂಪಿಸಿ ಇಂದು ಭೇಟಿ ಮಾಡಬೇಕೆಂದು ಆಕೆಯನ್ನು ಕರೆಸಿಕೊಂಡಿದ್ದಾನೆ. ಬಾಚುಪಲ್ಲಿ ಸಮೀಪವೇ ಇಬ್ಬರು ಭೇಟಿಯಾಗಿದ್ದಾರೆ. ಈ ವೇಳೆ ಮದುವೆ ವಿಷಯವಾಗಿಯೇ ಇಬ್ಬರ ನಡುವೆ ಗಲಾಟೆ ನಡೆದಿದೆ. ಆಗ ರಸ್ತೆಯಲ್ಲಿ ಬರುತ್ತಿದ್ದ ನೀರಿನ ಟ್ಯಾಂಕರ್​ ಕೆಳಗಡೆ ತಿರುಪತಿಯ ಪ್ರಮೀಳಾರನ್ನು ತಳ್ಳಿದ್ದಾನೆ. ಪರಿಣಾಮ ಸ್ಥಳದಲ್ಲೇ ಆಕೆ ಸಾವನ್ನಪ್ಪಿದ್ದಾರೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರಂಭದಲ್ಲಿ ಪ್ರಮೀಳಾ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾಳೆ ಎಂದೇ ಭಾವಿಸಲಾಗಿತ್ತು. ನಂತರ ಸ್ಥಳೀಯರನ್ನು ವಿಚಾರಣೆಗೆ ಒಳಪಡಿಸಿದಾಗ ತಿರುಪತಿಯೇ ಟ್ಯಾಂಕರ್ ಕೆಳಗಡೆ ನೂಕಿ, ಸಾಯಿಸಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಇದೀಗ ಆರೋಪಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ರಿಯಕರನಿಗಾಗಿ ಪೊಲೀಸ್​ ಕಾನ್​ಸ್ಟೇಬಲ್​ ಪತಿಯನ್ನೇ ಹತ್ಯೆಗೈದ ಪತ್ನಿ!

ಹೈದರಾಬಾದ್​ (ತೆಲಂಗಾಣ): ಪ್ರಿಯಕರನೋರ್ವ ತನ್ನ ಗೆಳತಿಯನ್ನು ನೀರಿನ ಟ್ಯಾಂಕರ್​ ಕೆಳಗಡೆ ತಳ್ಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹೈದರಾಬಾದ್​ನಲ್ಲಿ ಇಂದು (ರವಿವಾರ) ನಡೆದಿದೆ. ಆರಂಭದಲ್ಲಿ ಇದೊಂದು ರಸ್ತೆ ಅಪಘಾತ ಎಂಬ ಶಂಕೆಯ ಮೇರೆಗೆ ಪೊಲೀಸರು ತನಿಖೆ ಕೈಗೊಂಡಾಗ ಯುವತಿ ಆಕಸ್ಮಿಕವಾಗಿ ಸಾವನ್ನಪ್ಪಿಲ್ಲ, ಆಕೆಯನ್ನು ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮೀಳಾ ಕೊಲೆಯಾದ ಯುವತಿ. ಪ್ರಿಯಕರ ತಿರುಪತಿ ಎಂಬಾತ ಆರೋಪಿ. ಸದ್ಯ ಆತ ತಲೆ ಮರೆಸಿಕೊಂಡಿದ್ದು, ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ವಿವರ: ಪ್ರಮೀಳಾ ಮೂಲತಃ ಕಾಮರೆಡ್ಡಿ ಜಿಲ್ಲೆಯ ಮಾಚರೆಡ್ಡಿ ಮಂಡಲದ ನೆಮಲಿಗುಟ್ಟು ತಾಂಡಾದ ನಿವಾಸಿ. ಹೈದರಾಬಾದ್​ನ ಬಾಚುಪಲ್ಲಿಯಲ್ಲಿ ಸೇಲ್ಸ್​ ಗರ್ಲ್​​ ಆಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಹಾಸ್ಟೆಲ್​ನಲ್ಲಿ ಈಕೆ ವಾಸವಾಗಿದ್ದರು. ಮತ್ತೊಂದೆಡೆ, ಅದೇ ಜಿಲ್ಲೆಯ ರೋಡ್​ ತಾಂಡಾದ ನಿವಾಸಿಯಾದ ತಿರುಪತಿ ಹಫೀಜ್​ಪೇಟ್​ನಲ್ಲಿ ವಾಸವಾಗಿದ್ದ. ಈತ ಕ್ಯಾಬ್​ ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದಾನೆ. ಇಬ್ಬರ ನಡುವಿನ ಪರಿಚಯದ ನಂತರ, ಕಳೆದ ಐದು ತಿಂಗಳಿಂದ ಪ್ರೀತಿಸುತ್ತಿದ್ದರು. ಇದರಿಂದ ಸಲುಗೆ ಹೆಚ್ಚಾಗಿ ಪ್ರಮೀಳಾ ವಾಸವಾಗಿದ್ದ ಹಾಸ್ಟೆಲ್​ಗೂ ತಿರುಪತಿ ಬಂದು ಹೋಗುತ್ತಿದ್ದ. ಇದರ ನಡುವೆ ತಿರುಪತಿ ಬೇರೆ ಯುವತಿಯೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಈ ವಿಷಯ ತಿಳಿದ ಪ್ರಮೀಳಾ ತನ್ನನ್ನೇ ಮದುವೆಯಾಗುವಂತೆ ಒತ್ತಡ ಹೇರಲು ಆರಂಭಿಸಿದ್ದರು.

ಇದನ್ನೂ ಓದಿ: Assam crime: ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಯುವತಿಯರ ಶವ ಪತ್ತೆ: ಅತ್ಯಾಚಾರ ಶಂಕೆ

ಇದರಿಂದ ಹೇಗಾದರೂ ಮಾಡಿ ಈಕೆಯಿಂದ ತಪ್ಪಿಸಿಕೊಳ್ಳಲೇಬೇಕೆಂದು ಸಂಚು ರೂಪಿಸಿ ಇಂದು ಭೇಟಿ ಮಾಡಬೇಕೆಂದು ಆಕೆಯನ್ನು ಕರೆಸಿಕೊಂಡಿದ್ದಾನೆ. ಬಾಚುಪಲ್ಲಿ ಸಮೀಪವೇ ಇಬ್ಬರು ಭೇಟಿಯಾಗಿದ್ದಾರೆ. ಈ ವೇಳೆ ಮದುವೆ ವಿಷಯವಾಗಿಯೇ ಇಬ್ಬರ ನಡುವೆ ಗಲಾಟೆ ನಡೆದಿದೆ. ಆಗ ರಸ್ತೆಯಲ್ಲಿ ಬರುತ್ತಿದ್ದ ನೀರಿನ ಟ್ಯಾಂಕರ್​ ಕೆಳಗಡೆ ತಿರುಪತಿಯ ಪ್ರಮೀಳಾರನ್ನು ತಳ್ಳಿದ್ದಾನೆ. ಪರಿಣಾಮ ಸ್ಥಳದಲ್ಲೇ ಆಕೆ ಸಾವನ್ನಪ್ಪಿದ್ದಾರೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರಂಭದಲ್ಲಿ ಪ್ರಮೀಳಾ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾಳೆ ಎಂದೇ ಭಾವಿಸಲಾಗಿತ್ತು. ನಂತರ ಸ್ಥಳೀಯರನ್ನು ವಿಚಾರಣೆಗೆ ಒಳಪಡಿಸಿದಾಗ ತಿರುಪತಿಯೇ ಟ್ಯಾಂಕರ್ ಕೆಳಗಡೆ ನೂಕಿ, ಸಾಯಿಸಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಇದೀಗ ಆರೋಪಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ರಿಯಕರನಿಗಾಗಿ ಪೊಲೀಸ್​ ಕಾನ್​ಸ್ಟೇಬಲ್​ ಪತಿಯನ್ನೇ ಹತ್ಯೆಗೈದ ಪತ್ನಿ!

Last Updated : Aug 6, 2023, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.