ಶಹಜಹಾನ್ಪುರ(ಉತ್ತರಪ್ರದೇಶ): ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಸಾವಿರಾರು ಜನರು ತೊಂದರೆಗೊಳಗಾಗುತ್ತಿದ್ದು, ಹತ್ತಾರು ಸಮಸ್ಯೆ ಎದುರಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಲಭ್ಯವಾಗದೇ ಕೆಲವರು ಉಸಿರು ಚೆಲ್ಲಿದ್ದಾರೆ. ಈ ಮಧ್ಯೆ ಕೆಲವೊಂದು ಮಾನವೀಯ ಘಟನೆಗಳು ಕಂಡುಬರುತ್ತಿವೆ. ಸದ್ಯ ಅಂತಹದೊಂದು ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹೌದು, ಶಹಜಹಾನಪುರದಲ್ಲಿ ಈ ಘಟನೆ ನಡೆದಿದ್ದು, ಕೋವಿಡ್ ಸೋಂಕಿಗೊಳಗಾಗಿ ಆಕ್ಸಿಜನ್ ಲಭ್ಯವಾಗದೇ ತೊಂದರೆಗೊಳಗಾಗಿದ್ದ ರೋಗಿಗೆ ಯುವತಿವೋರ್ವಳು ಸ್ಕೂಟಿ ಮೇಲೆ ಆಕ್ಸಿಜನ್ ಸಿಲಿಂಡರ್ ತಂದು ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ. ಶಹಜಹಾನ್ಪುರದ ಮದಾರ್ಖೆಲ್ ಪ್ರದೇಶದಲ್ಲಿ ವಾಸವಾಗಿರುವ ಅರ್ಷಿ, ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಈ ನಡುವೆ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಪೂರೈಸುವ ಕೆಲಸ ಮಾಡ್ತಿದ್ದು, ಸ್ವಂತ ಹಣದಲ್ಲೇ ಆಕ್ಸಿಜನ್ ತುಂಬಿಸುತ್ತಿದ್ದಾಳೆ.
ಇದನ್ನೂ ಓದಿ: ಮಕ್ಕಳ ಮುಂದೆ ತಾಯಿ ಮೇಲೆ ಕಾಮುಕರಿಂದ ಅತ್ಯಾಚಾರ
ಅರ್ಷಿ ತನ್ನ ಸ್ಕೂಟರ್ ಮೇಲೆ ಆಕ್ಸಿಜನ್ ತಂದು ಯುವತಿ ಪೂರೈಸಿದ್ದಾಳೆ. ಈಕೆಯ ತಂದೆ ಕೋವಿಡ್ ಸೋಂಕಿಗೊಳಗಾಗಿ ಆಮ್ಲಜನಕ ಸಿಗದೇ ತೊಂದರೆ ಅನುಭವಿಸಿದ್ದರು. ಈ ಸಮಸ್ಯೆ ಇತರರಿಗೂ ಆಗಬಾರದೆಂಬ ಉದ್ದೇಶದಿಂದ ಈ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾಳೆ.
ಯುವತಿ ಈ ಕೆಲಸ ಮಾಡಲು ಶುರು ಮಾಡಿದಾಗಿನಿಂದಲೂ ಅರ್ಷಿಯನ್ನ ಎಲ್ಲರೂ 'ಆಕ್ಸಿಜನ್ ವಾಲಿ ಭೇಟಿಯಾ' ಎಂದು ಕರೆಯಲು ಶುರು ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಸಾವಿರಾರು ಕೋವಿಡ್ ಪ್ರಕರಣ ಕಾಣಿಸಿಕೊಳ್ಳುತ್ತಿವೆ. ನಿನ್ನೆ 10,682 ಪ್ರಕರಣಗಳು ಪತ್ತೆಯಾಗಿದ್ದರೆ, 311 ಜನರು ಸಾವನ್ನಪ್ಪಿದ್ದಾರೆ.