ETV Bharat / bharat

ಆಯುಕ್ತರ ಸಾಕು ಶ್ವಾನ ನಾಪತ್ತೆ: ಪತ್ತೆ ಕಾರ್ಯ ಚುರುಕು!

ಆಯುಕ್ತೆ ಸೆಲ್ವ ಕುಮಾರಿ ಜೆ ಅವರ ಸಾಕು ನಾಯಿ ನಾಪತ್ತೆ ಆಗಿದ್ದು, ಪತ್ತೆ ಕಾರ್ಯ ಚುರುಕುಗೊಂಡಿದೆ.

author img

By

Published : Jun 27, 2023, 9:45 AM IST

commissioner dog missing in meerut
ಮೀರತ್​​ ಆಯುಕ್ತರ ಸಾಕು ಶ್ವಾನ ನಾಪತ್ತೆ

ಮೀರತ್: ಮೀರತ್​​ ಆಯುಕ್ತರ ಸಾಕು ಶ್ವಾನ ನಾಪತ್ತೆ ಆಗಿದೆ. ಭಾನುವಾರ ಸಂಜೆಯಿಂದ ಶ್ವಾನದ ಸುಳಿವಿಲ್ಲ. ಹುಡುಕಾಟ ನಡೆಸಿದರೂ ನಾಯಿ ಪತ್ತೆ ಆಗಿಲ್ಲ. ಹಿರಿಯ ಅಧಿಕಾರಿಯ ಸಾಕುನಾಯಿ ನಾಪತ್ತೆಯಾಗಿದ್ದರಿಂದ ಪೊಲೀಸ್ ಇಲಾಖೆಯ ಮಾತ್ರವಲ್ಲದೇ, ಆಯುಕ್ತರ ತಂಡ ಕೂಡ ಹುಡುಕಾಟ ನಡೆಸಿದೆ.

ನಾಪತ್ತೆ ಪ್ರಕರಣ ದಾಖಲಾಗಿಲ್ಲ: ಸ್ಥಳೀಯ ಪೊಲೀಸ್ ಆಡಳಿತ ತಂಡ ಆಯುಕ್ತರ ಸಾಕುನಾಯಿ ಪತ್ತೆ ಕಾರ್ಯದಲ್ಲಿ ತೊಡಗಿದೆ. ಆದರೆ, ಈ ಬಗ್ಗೆ ಯಾವುದೇ ನಾಪತ್ತೆ ಪ್ರಕರಣ ದಾಖಲಾಗಿಲ್ಲ. ಮೂಲಗಳ ಪ್ರಕಾರ, ಆಯುಕ್ತೆ ಸೆಲ್ವ ಕುಮಾರಿ ಜೆ ಅವರು ಬಿಳಿ ಕಪ್ಪು ಸೈಬೀರಿಯನ್ ಹಸ್ಕಿ ತಳಿಯ ನಾಯಿಯನ್ನು ಸಾಕಿದ್ದರು. ಅದರ ವಯಸ್ಸು ಎರಡೂವರೆಯಿಂದ ಮೂರು ವರ್ಷ ಎಂದು ಹೇಳಲಾಗುತ್ತಿದೆ. ಈ ವಿಚಾರದಲ್ಲಿ ಎಲ್ಲರೂ ಮೌನ ವಹಿಸಿದ್ದಾರೆ. ಆದರೆ, ಅಲ್ಲಿ ಕಮಿಷನರ್ ಅವರ ಶ್ವಾನ ಪತ್ತೆಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಅವರು ಯಾವ ವಿಚಾರವನ್ನೂ ಬಿಟ್ಟುಕೊಟ್ಟಿಲ್ಲ. ಆದರೆ, ಹುಡುಕಾಟ ಮುಂದುವರೆದಿದೆ.

commissioner dog missing in meerut
ಮೀರತ್​​ ಆಯುಕ್ತರ ಸಾಕು ಶ್ವಾನ ನಾಪತ್ತೆ

ತನಿಖೆ ನಡೆಸುತ್ತಿರುವ ಪೊಲೀಸರು: ಮೂಲಗಳ ಪ್ರಕಾರ, ಆಯುಕ್ತರ ನಿವಾಸ ಮತ್ತು ಸುತ್ತಮುತ್ತ ಎಲ್ಲಿಯೂ ಶ್ವಾನದ ಸುಳಿವು ಇಲ್ಲದಿರುವ ಹಿನ್ನೆಲೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಲಾಗುತ್ತಿದೆ. ಉದ್ಯೋಗಿಯೊಬ್ಬರು ಮಾತನಾಡಿ, ಪೊಲೀಸ್​ ತಂಡ ಮತ್ತು ಆಯುಕ್ತರು ಅನೇಕ ಮನೆಗಳಿಗೆ ಭೇಟಿ ನೀಡಿದ್ದಾರೆ ಎಂದು ಹೇಳಿದರು. ಸಾಕು ಶ್ವಾನವನ್ನು ಯಾರಾದರೂ ಎತ್ತಿಕೊಂಡು ಹೋಗಿದ್ದಾರೋ ಅಥವಾ ಬಂಗಲೆಯಿಂದ ಹೊರಗೆ ಹೋದ ನಂತರ ದಾರಿ ತಪ್ಪಿದೆಯೋ ಗೊತ್ತಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ: ಸಾಕ್ಷಿಗಳ ಹೇಳಿಕೆಗಳಲ್ಲಿ ಸಂಶಯ: ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗಳನ್ನು ಖುಲಾಸೆಗೊಳಿಸಿದ ಹೈಕೋರ್ಟ್

ಸಿವಿಲ್ ಲೈನ್ ಪೊಲೀಸ್ ಠಾಣೆ ಈ ಬಗ್ಗೆ ಏನನ್ನೂ ಹೇಳಲು ಸಿದ್ಧವಿಲ್ಲ. ಮೂಲಗಳನ್ನು ನಂಬುವುದಾದರೆ, ಆಯುಕ್ತರ ನಾಯಿ ನಿಗೂಢವಾಗಿ ನಾಪತ್ತೆಯಾದ ನಂತರ, ನಾಯಿಯ ಪತ್ತೆಗೆ ಪಾಲಿಕೆ ಆಯುಕ್ತರು ತಮ್ಮ ಅಧೀನ ಅಧಿಕಾರಿಗಳಿಗೆ ಅಗತ್ಯ ಮಾರ್ಗಸೂಚಿ ನೀಡಿದ್ದಾರೆ.

ಇದನ್ನೂ ಓದಿ: ಮನೆಯ ಮುಂಭಾಗದಿಂದಲೇ ಬಾಲಕಿಯನ್ನು 200 ಮೀ. ಎಳೆದೊಯ್ದ ಚಿರತೆ: ಜನರ ಕಿರುಚಾಟಕ್ಕೆ ಬಾಲಕಿ ಬಿಟ್ಟು ಪರಾರಿ

ಸಾಕು ಶ್ವಾನಗಳು ಮನೆ ಸದಸ್ಯರಂತೆಯೇ ಇರುತ್ತದೆ. ಅನೇಕರು ಇವನ್ನು ತಮ್ಮ ಮಕ್ಕಳಂತೆಯೇ ಸಾಕಿರುತ್ತಾರೆ. ಶ್ವಾನಪ್ರಿಯರಿಗೊಂದು ಈ ಸಾಕುನಾಯಿಗಳು ಅವರ ಜೀವನದ ಅವಿಭಾಜ್ಯ ಅಂಗವಾಗಿರುತ್ತದೆ. ಅವನ್ನು ಕಳೆದುಕೊಂಡರೆ ಅದರ ದುಃಖ ಪದಗಳಲ್ಲಿ ವಿವರಿಸಲು ಕಷ್ಟ ಸಾಧ್ಯ. ಇಂತಹ ಹೊತ್ತಿನಲ್ಲಿ ಮೀರತ್​​ ಆಯುಕ್ತರ ಸಾಕು ಶ್ವಾನ ನಾಪತ್ತೆ ಆಗಿರುವುದು ಅವರ ದುಃಖಕ್ಕೆ ಕಾರಣವಾಗಿದೆ. ಆದಷ್ಟು ಬೇಗ ಆ ಶ್ವಾನ ಸಿಗಲಿ ಎಂದು ಸ್ಥಳೀಯರು ಪ್ರಾರ್ಥಿಸಿದ್ದಾರೆ.

ಮೀರತ್: ಮೀರತ್​​ ಆಯುಕ್ತರ ಸಾಕು ಶ್ವಾನ ನಾಪತ್ತೆ ಆಗಿದೆ. ಭಾನುವಾರ ಸಂಜೆಯಿಂದ ಶ್ವಾನದ ಸುಳಿವಿಲ್ಲ. ಹುಡುಕಾಟ ನಡೆಸಿದರೂ ನಾಯಿ ಪತ್ತೆ ಆಗಿಲ್ಲ. ಹಿರಿಯ ಅಧಿಕಾರಿಯ ಸಾಕುನಾಯಿ ನಾಪತ್ತೆಯಾಗಿದ್ದರಿಂದ ಪೊಲೀಸ್ ಇಲಾಖೆಯ ಮಾತ್ರವಲ್ಲದೇ, ಆಯುಕ್ತರ ತಂಡ ಕೂಡ ಹುಡುಕಾಟ ನಡೆಸಿದೆ.

ನಾಪತ್ತೆ ಪ್ರಕರಣ ದಾಖಲಾಗಿಲ್ಲ: ಸ್ಥಳೀಯ ಪೊಲೀಸ್ ಆಡಳಿತ ತಂಡ ಆಯುಕ್ತರ ಸಾಕುನಾಯಿ ಪತ್ತೆ ಕಾರ್ಯದಲ್ಲಿ ತೊಡಗಿದೆ. ಆದರೆ, ಈ ಬಗ್ಗೆ ಯಾವುದೇ ನಾಪತ್ತೆ ಪ್ರಕರಣ ದಾಖಲಾಗಿಲ್ಲ. ಮೂಲಗಳ ಪ್ರಕಾರ, ಆಯುಕ್ತೆ ಸೆಲ್ವ ಕುಮಾರಿ ಜೆ ಅವರು ಬಿಳಿ ಕಪ್ಪು ಸೈಬೀರಿಯನ್ ಹಸ್ಕಿ ತಳಿಯ ನಾಯಿಯನ್ನು ಸಾಕಿದ್ದರು. ಅದರ ವಯಸ್ಸು ಎರಡೂವರೆಯಿಂದ ಮೂರು ವರ್ಷ ಎಂದು ಹೇಳಲಾಗುತ್ತಿದೆ. ಈ ವಿಚಾರದಲ್ಲಿ ಎಲ್ಲರೂ ಮೌನ ವಹಿಸಿದ್ದಾರೆ. ಆದರೆ, ಅಲ್ಲಿ ಕಮಿಷನರ್ ಅವರ ಶ್ವಾನ ಪತ್ತೆಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಅವರು ಯಾವ ವಿಚಾರವನ್ನೂ ಬಿಟ್ಟುಕೊಟ್ಟಿಲ್ಲ. ಆದರೆ, ಹುಡುಕಾಟ ಮುಂದುವರೆದಿದೆ.

commissioner dog missing in meerut
ಮೀರತ್​​ ಆಯುಕ್ತರ ಸಾಕು ಶ್ವಾನ ನಾಪತ್ತೆ

ತನಿಖೆ ನಡೆಸುತ್ತಿರುವ ಪೊಲೀಸರು: ಮೂಲಗಳ ಪ್ರಕಾರ, ಆಯುಕ್ತರ ನಿವಾಸ ಮತ್ತು ಸುತ್ತಮುತ್ತ ಎಲ್ಲಿಯೂ ಶ್ವಾನದ ಸುಳಿವು ಇಲ್ಲದಿರುವ ಹಿನ್ನೆಲೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಲಾಗುತ್ತಿದೆ. ಉದ್ಯೋಗಿಯೊಬ್ಬರು ಮಾತನಾಡಿ, ಪೊಲೀಸ್​ ತಂಡ ಮತ್ತು ಆಯುಕ್ತರು ಅನೇಕ ಮನೆಗಳಿಗೆ ಭೇಟಿ ನೀಡಿದ್ದಾರೆ ಎಂದು ಹೇಳಿದರು. ಸಾಕು ಶ್ವಾನವನ್ನು ಯಾರಾದರೂ ಎತ್ತಿಕೊಂಡು ಹೋಗಿದ್ದಾರೋ ಅಥವಾ ಬಂಗಲೆಯಿಂದ ಹೊರಗೆ ಹೋದ ನಂತರ ದಾರಿ ತಪ್ಪಿದೆಯೋ ಗೊತ್ತಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ: ಸಾಕ್ಷಿಗಳ ಹೇಳಿಕೆಗಳಲ್ಲಿ ಸಂಶಯ: ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗಳನ್ನು ಖುಲಾಸೆಗೊಳಿಸಿದ ಹೈಕೋರ್ಟ್

ಸಿವಿಲ್ ಲೈನ್ ಪೊಲೀಸ್ ಠಾಣೆ ಈ ಬಗ್ಗೆ ಏನನ್ನೂ ಹೇಳಲು ಸಿದ್ಧವಿಲ್ಲ. ಮೂಲಗಳನ್ನು ನಂಬುವುದಾದರೆ, ಆಯುಕ್ತರ ನಾಯಿ ನಿಗೂಢವಾಗಿ ನಾಪತ್ತೆಯಾದ ನಂತರ, ನಾಯಿಯ ಪತ್ತೆಗೆ ಪಾಲಿಕೆ ಆಯುಕ್ತರು ತಮ್ಮ ಅಧೀನ ಅಧಿಕಾರಿಗಳಿಗೆ ಅಗತ್ಯ ಮಾರ್ಗಸೂಚಿ ನೀಡಿದ್ದಾರೆ.

ಇದನ್ನೂ ಓದಿ: ಮನೆಯ ಮುಂಭಾಗದಿಂದಲೇ ಬಾಲಕಿಯನ್ನು 200 ಮೀ. ಎಳೆದೊಯ್ದ ಚಿರತೆ: ಜನರ ಕಿರುಚಾಟಕ್ಕೆ ಬಾಲಕಿ ಬಿಟ್ಟು ಪರಾರಿ

ಸಾಕು ಶ್ವಾನಗಳು ಮನೆ ಸದಸ್ಯರಂತೆಯೇ ಇರುತ್ತದೆ. ಅನೇಕರು ಇವನ್ನು ತಮ್ಮ ಮಕ್ಕಳಂತೆಯೇ ಸಾಕಿರುತ್ತಾರೆ. ಶ್ವಾನಪ್ರಿಯರಿಗೊಂದು ಈ ಸಾಕುನಾಯಿಗಳು ಅವರ ಜೀವನದ ಅವಿಭಾಜ್ಯ ಅಂಗವಾಗಿರುತ್ತದೆ. ಅವನ್ನು ಕಳೆದುಕೊಂಡರೆ ಅದರ ದುಃಖ ಪದಗಳಲ್ಲಿ ವಿವರಿಸಲು ಕಷ್ಟ ಸಾಧ್ಯ. ಇಂತಹ ಹೊತ್ತಿನಲ್ಲಿ ಮೀರತ್​​ ಆಯುಕ್ತರ ಸಾಕು ಶ್ವಾನ ನಾಪತ್ತೆ ಆಗಿರುವುದು ಅವರ ದುಃಖಕ್ಕೆ ಕಾರಣವಾಗಿದೆ. ಆದಷ್ಟು ಬೇಗ ಆ ಶ್ವಾನ ಸಿಗಲಿ ಎಂದು ಸ್ಥಳೀಯರು ಪ್ರಾರ್ಥಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.